ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ 110/33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಮೇ 17, 2026ರ ಭಾನುವಾರದಂದು ಸಾಗರ ಪಟ್ಟಣ ಸೇರಿದಂತೆ ವಿವಿಧ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ವ್ಯತ್ಯಯದ ಸಮಯ:
ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 06:00 ಗಂಟೆಯವರೆಗೆ.
ವಿದ್ಯುತ್ ವ್ಯತ್ಯಯವಾಗುವ ಪ್ರಮುಖ ಪ್ರದೇಶಗಳು:
-
ಸಾಗರ ಪಟ್ಟಣ ವ್ಯಾಪ್ತಿ: ಸಾಗರ ಟೌನ್, ಮಂಗಳಬೀಸು ಇಂಡಸ್ಟ್ರಿಯಲ್ ಏರಿಯಾ, ಮಾರಿಕಾಂಬಾ ರಸ್ತೆ, ರಾಮನಗರ ಇಂಡಸ್ಟ್ರಿಯಲ್ ಏರಿಯಾ, ಎಂ.ಸಿ.ಸಿ, ಎಫ್-17 ಎಸ್.ಎನ್.ನಗರ ಭಾಗಗಳು.
-
ಗ್ರಾಮೀಣ ವ್ಯಾಪ್ತಿ: ಮಾಳ್ಗಿ, ಹೆಗ್ಗೋಡು, ಅವಿನಹಳ್ಳಿ, ವರದಹಳ್ಳಿ, ಬೊಮ್ಮತ್ತಿ, ಮಾಸೂರು, ಹಿರೇನೆಲ್ಲೂರು ಹಾಗೂ ಲಿಂಗದಹಳ್ಳಿ ಮಾರ್ಗಗಳು.
-
ಗ್ರಾಮ ಪಂಚಾಯಿತಿಗಳು: ಭೀಮನಕೋಣೆ, ಎಡಜಿಗಳಮನೆ, ಕಲ್ಪನೆ, ಮಾಳ್ಗಿ ಭೀಮನನೇರಿ, ಕೆಳದಿ, ಮಾಸೂರು, ಹಿರೇನೆಲ್ಲೂರು, ಪದವಗೋಡು, ನಾಡಕಲಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳು.
ನಿಗದಿತ ಸಮಯದೊಳಗೆ ಕೆಲಸ ಪೂರ್ಣಗೊಂಡಲ್ಲಿ ತಕ್ಷಣವೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ವಿನಂತಿಸಿದ್ದಾರೆ.
ಸಹಾಯವಾಣಿ: ವಿದ್ಯುತ್ ವ್ಯತ್ಯಯಕ್ಕೆ ಸಂಬಂಧಿಸಿದ ದೂರುಗಳಿಗಾಗಿ ಗ್ರಾಹಕರು 08183-226098 ಅಥವಾ ಮೊಬೈಲ್ ಸಂಖ್ಯೆ 8277880742 ಅನ್ನು ಸಂಪರ್ಕಿಸಬಹುದು.








