ಒಡಿಶಾ: ಕಿಯೋಂಜಾರ್ ಜಿಲ್ಲೆಯಲ್ಲಿ ನಡೆದ ಮಾನವೀಯತೆಯನ್ನೇ ಮರೆಸುವಂತಹ ಆಘಾತಕಾರಿ ಘಟನೆಯೊಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ತನ್ನ ಸಹೋದರಿಯ ಠೇವಣಿ ಹಣಕ್ಕಾಗಿ ಅಲೆದಾಡಿ, ಕೊನೆಗೆ ಆಕೆಯ ಸಮಾಧಿಯನ್ನೇ ಅಗೆದು ಅಸ್ಥಿಪಂಜರವನ್ನು ಬ್ಯಾಂಕ್ಗೆ ತಂದಿದ್ದ ಬುಡಕಟ್ಟು ವ್ಯಕ್ತಿ ಜೀತು ಮುಂಡಾಗೆ ಕಡೆಗೂ ಬ್ಯಾಂಕ್ ಸ್ಪಂದಿಸಿದೆ. ತೀವ್ರ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಆಕ್ರೋಶದ ಬಳಿಕ, ಬ್ಯಾಂಕ್ ಅಧಿಕಾರಿಗಳು ಸಂತ್ರಸ್ತನ ಮನೆಗೆ ತೆರಳಿ ಹಣವನ್ನು ಹಸ್ತಾಂತರಿಸಿದ್ದಾರೆ.
After he showed them his sister’s corpse from the grave,
bank staff started taking photos and videos while handing him ₹19,000.
What kind of sick message is this—dig up your dead just to get your own money? https://t.co/rMxt7Jom4d pic.twitter.com/5VfdCx82Oo
— MUSAFIR. (@Peoplepower08) April 29, 2026
ಏನಿದು ಆಘಾತಕಾರಿ ಘಟನೆ?
ಒಡಿಶಾದ ಕಿಯೋಂಜಾರ್ ಜಿಲ್ಲೆಯ ಪಟಣಾ ತಾಲ್ಲೂಕಿನ ದೈನಾಳಿ ಎಂಬ ಬುಡಕಟ್ಟು ಗ್ರಾಮದ ನಿವಾಸಿ ಜೀತು ಮುಂಡಾ (50). ಅವರ ಹಿರಿಯ ಸಹೋದರಿ ಕರ್ಳಾ ಮುಂಡಾ (56) ಕಳೆದ ಜನವರಿ 26 ರಂದು ಅನಾರೋಗ್ಯದಿಂದ ಮೃತಪಟ್ಟಿದ್ದರು. ಕರ್ಳಾ ಅವರು ಹಸು ಮಾರಾಟ ಮಾಡಿ ಬಂದಿದ್ದ ₹19,000 ಹಣವನ್ನು ‘ಒಡಿಶಾ ಗ್ರಾಮೀಣ ಬ್ಯಾಂಕ್’ನ ಮಾಳಿಪೋಶಿ ಶಾಖೆಯಲ್ಲಿ ಠೇವಣಿ ಇರಿಸಿದ್ದರು.
ಸಹೋದರಿಯ ನಿಧನದ ನಂತರ ಆ ಹಣವನ್ನು ಪಡೆಯಲು ಜೀತು ಮುಂಡಾ ಬ್ಯಾಂಕ್ಗೆ ಹಲವು ಬಾರಿ ಅಲೆದಾಡಿದ್ದರು. ಆದರೆ, ಬ್ಯಾಂಕ್ ಸಿಬ್ಬಂದಿ ಸರಿಯಾದ ದಾಖಲೆಗಳನ್ನು ತರುವಂತೆ ಸೂಚಿಸಿದ್ದರು. ದಾಖಲೆಗಳನ್ನು ಒದಗಿಸಲು ಸಾಧ್ಯವಾಗದ ಅನಕ್ಷರಸ್ಥ ಜೀತು ಮುಂಡಾ, ಕೊನೆಗೆ ಹಣಕ್ಕಾಗಿ ಬ್ಯಾಂಕ್ ಸಿಬ್ಬಂದಿಯನ್ನು ಅಂಗಲಾಚಿದಾಗ, “ಅವಳು ಸತ್ತಿದ್ದಾಳೆ ಎನ್ನುವುದಕ್ಕೆ ಏನು ದಾಖಲೆ? ದಾಖಲೆ ತಂದು ತೆಗೆದುಕೊಂಡು ಹೋಗು” ಎಂದು ಗದರಿಸಲಾಗಿತ್ತು.
“ಅವಳೇ ನೋಡಿ ನನ್ನ ಅಕ್ಕ, ಸತ್ತವಳು.. ಇವಾಗಲಾದರೂ ನಿಮಗೆ ನಂಬಿಕೆ ಬಂತಾ, ಹಣ ಕೊಡಿ!” ಎಂದು ಜೀತು ಮುಂಡಾ ಸ್ಮಶಾನದಿಂದ ಅಸ್ಥಿಪಂಜರವನ್ನು ಚೀಲದಲ್ಲಿ ತಂದು ಬ್ಯಾಂಕಿನ ಮುಂದೆ ಇಟ್ಟಿದ್ದ ದೃಶ್ಯ ಎಲ್ಲರಲ್ಲೂ ಆತಂಕ ಮೂಡಿಸಿತ್ತು.
ಬ್ಯಾಂಕ್ ಅಧಿಕಾರಿಗಳ ಭೇಟಿ ಮತ್ತು ಹಣ ಮರುಪಾವತಿ
ಘಟನೆಯು ದೇಶಾದ್ಯಂತ ವೈರಲ್ ಆಗಿ ಸಾರ್ವಜನಿಕರಿಂದ ಮತ್ತು ಅಧಿಕಾರಿಗಳಿಂದ ತೀವ್ರ ಟೀಕೆಗಳು ವ್ಯಕ್ತವಾದವು. ಎಚ್ಚೆತ್ತ ಒಡಿಶಾ ಗ್ರಾಮೀಣ ಬ್ಯಾಂಕ್ನ ಉನ್ನತ ಅಧಿಕಾರಿಗಳು ಸ್ಥಳೀಯ ಆಡಳಿತದ ಸಹಾಯದೊಂದಿಗೆ ಜೀತು ಮುಂಡಾ ಅವರಿದ್ದ ಸ್ಥಳಕ್ಕೆ ತೆರಳಿದರು.
-
₹19,402 ನಗದು ಹಸ್ತಾಂತರ: ಬ್ಯಾಂಕ್ ಅಧಿಕಾರಿಗಳು ಜೀತು ಮುಂಡಾ ಹಾಗೂ ಅವರ ಕುಟುಂಬದವರ ಬಳಿ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ, ₹19,402 ನಗದು ಹಣವನ್ನು ಅವರ ಕೈಗಿತ್ತರು.
-
ಬ್ಯಾಂಕ್ನ ಸ್ಪಷ್ಟನೆ: ಮೃತಳ ಬಗ್ಗೆ ಸರಿಯಾದ ದಾಖಲೆಗಳನ್ನು ಮಾತ್ರ ಬ್ಯಾಂಕ್ ಸಿಬ್ಬಂದಿ ಕೇಳಿದ್ದರೇ ಹೊರತು, ಭೌತಿಕ ಉಪಸ್ಥಿತಿ ಇರಬೇಕೆಂದು ಯಾರೂ ಹೇಳಿರಲಿಲ್ಲ. ಸಂತ್ರಸ್ತ ಜೀತು ಮುಂಡಾ ಸಿಬ್ಬಂದಿಯ ಮಾತು ಸರಿಯಾಗಿ ಅರ್ಥೈಸಿಕೊಳ್ಳದೇ ಈ ಕೃತ್ಯ ಎಸಗಿದ್ದಾರೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದರು.
-
ಮಹಿಳೆಯರ ಹಣದ ರಕ್ಷಣೆ: ಮಹಿಳೆಯರ ಹಣವನ್ನು ರಕ್ಷಿಸುವ ಹಿತಾಸಕ್ತಿ ಹೊರತು, ಇದರಲ್ಲಿ ಯಾವುದೇ ಕಿರುಕುಳದ ಉದ್ದೇಶವಿರಲಿಲ್ಲ ಎಂದು ಬ್ಯಾಂಕ್ ಸ್ಪಷ್ಟನೆ ನೀಡಿದೆ. ಬ್ಯಾಂಕ್ ಎಲ್ಲಾ ಗ್ರಾಹಕರಿಗೆ ಸಹಾನುಭೂತಿಯ ಹಾಗೂ ಪಾರದರ್ಶಕ ಸೇವೆ ಒದಗಿಸಲು ಬದ್ಧವಾಗಿದೆ ಎಂದು ತಿಳಿಸಿದೆ.
ವ್ಯವಸ್ಥೆಗೆ ಹಿಡಿದ ಕನ್ನಡಿ
ಈ ಘಟನೆಯು ದೇಶದಲ್ಲಿರುವ ಬಡವರು ಮತ್ತು ಬುಡಕಟ್ಟು ಸಮುದಾಯಗಳು ಎದುರಿಸುತ್ತಿರುವ ಸಾಕ್ಷರತೆಯ ಕೊರತೆ ಹಾಗೂ ವ್ಯವಸ್ಥೆಯ ಸಂಕೀರ್ಣತೆಗೆ ಕನ್ನಡಿ ಹಿಡಿದಿದೆ. ಅನಕ್ಷರಸ್ಥರಿಗೆ ಬ್ಯಾಂಕ್ ಪ್ರಕ್ರಿಯೆಗಳನ್ನು ಸರಳವಾಗಿ ಅರ್ಥೈಸುವಲ್ಲಿನ ಸೂಕ್ಷ್ಮತೆ ಮತ್ತು ಮಾನವೀಯತೆಯ ಕೊರತೆಯು ಇಲ್ಲಿ ಎದ್ದು ಕಾಣುತ್ತದೆ. ಜೀತು ಮುಂಡಾಗೆ ಹಣ ಸಿಕ್ಕಿದ್ದರೂ, ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯವನ್ನು ಈ ದುರಂತವು ಸಮಾಜದ ಮುಂದಿಟ್ಟಿದೆ.
ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಆಹಾರಗಳಿವು: ಎಐಐಎಂಎಸ್ ತಜ್ಞರ ಮಾಹಿತಿ
BIG NEWS: ‘CBSE ಪಠ್ಯಕ್ರಮ’ದಲ್ಲಿ ಭಾರಿ ಬದಲಾವಣೆ: ತ್ರಿಭಾಷಾ ಸೂತ್ರ ಕಡ್ಡಾಯ, ವೃತ್ತಿಪರ ಶಿಕ್ಷಣಕ್ಕೆ ಹೊಸ ರೂಪ








