Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​’ಇಂದೇ ರಾತ್ರಿ ನಾಗರಿಕತೆಯ ಅಂತ್ಯ’: ಇರಾನ್‌ಗೆ ಟ್ರಂಪ್ ಭೀಕರ ವಾರ್ನಿಂಗ್; ಗಡುವು ಮುಗಿಯಲು ಕ್ಷಣಗಣನೆ!

07/04/2026 7:34 PM

CRIME NEWS: ಬೆಂಗಳೂರಲ್ಲಿ ರಾಪಿಡೋ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಸುಲಿಗೆ ಮಾಡಿದ್ದ ಆರೋಪಿಯ ಬಂಧನ!

07/04/2026 7:32 PM

ಜೈಲಿನ ಕತ್ತಲಲ್ಲೇ ಕಳೆದುಹೋಯಿತು ಯೌವನ: 22 ವರ್ಷಗಳ ಬಳಿಕ ಅಮಾಯಕ ಹೊರಕ್ಕೆ; ವ್ಯವಸ್ಥೆಯ ‘ಅಂಧಾಭಿಮಾನ’ಕ್ಕೆ ಹೈಕೋರ್ಟ್ ತಪರಾಕಿ!

07/04/2026 7:24 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » CRIME NEWS: ಬೆಂಗಳೂರಲ್ಲಿ ರಾಪಿಡೋ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಸುಲಿಗೆ ಮಾಡಿದ್ದ ಆರೋಪಿಯ ಬಂಧನ!
KARNATAKA

CRIME NEWS: ಬೆಂಗಳೂರಲ್ಲಿ ರಾಪಿಡೋ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಸುಲಿಗೆ ಮಾಡಿದ್ದ ಆರೋಪಿಯ ಬಂಧನ!

By kannadanewsnow0907/04/2026 7:32 PM

ಬೆಂಗಳೂರು: ರಾಪಿಡೋ ಆ್ಯಪ್ ಮೂಲಕ ಆಟೋ ಬುಕ್ ಮಾಡಿ, ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ವಾಹನ ಹಾಗೂ ಮೊಬೈಲ್ ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಯ ಹಿನ್ನೆಲೆ:

ದಿನಾಂಕ 01/03/2026 ರಂದು ಬೆಳಿಗ್ಗೆ ದರ್ಶನ್ ಸಿ.ಆರ್ ಎಂಬುವವರು ತಮ್ಮ ಪ್ಯಾಸೇಂಜರ್ ಆಟೋ ರಿಕ್ಷಾದಲ್ಲಿ ಎಲೆಕ್ಟ್ರಾನಿಕ್ ಸಿಟಿ ಹುಸ್ಕೂರು ಬಳಿ ಇದ್ದಾಗ, ಇಬ್ಬರು ಅಪರಿಚಿತರು ರಾಪಿಡೋ ಆ್ಯಪ್ ಮೂಲಕ ಬೂದಿಗೆರೆ-ದೇವನಹಳ್ಳಿ ರಸ್ತೆಗೆ ಆಟೋ ಬುಕ್ ಮಾಡಿದ್ದರು. ದೇವನಹಳ್ಳಿ ಕಡೆಗೆ ಹೋಗುವ ಮಾರ್ಗ ಮಧ್ಯೆ ಜೊನ್ನಹಳ್ಳಿ ಗ್ರಾಮದ ಕೆ.ಐ.ಎ.ಡಿ.ಬಿ ಇಂಡಸ್ಟ್ರಿಯಲ್ ಏರಿಯಾದ ಮಿಲೇನಿಯಂ ಕಂಪನಿ ಪಕ್ಕದ ರಸ್ತೆಯಲ್ಲಿ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿತ್ತು. ಆರೋಪಿಗಳು ಚಾಲಕನಿಗೆ ಗಾಯಗೊಳಿಸಿ, ಅವರ ಬಳಿಯಿದ್ದ 02 ಮೊಬೈಲ್ ಫೋನ್‌ಗಳು, ಆಟೋ ರಿಕ್ಷಾ ಮತ್ತು ನಗದು ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಯ ಬಂಧನ ಮತ್ತು ವಶಪಡಿಸಿಕೊಂಡ ಸ್ವತ್ತುಗಳು:

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಮಾರ್ಚ್ 25 ರಂದು ಹೆಚ್.ಎಸ್.ಆರ್ ಲೇಔಟ್ ಬಳಿಯ ನ್ಯೂ ಹೋಫ್ ಪೌಂಡೇಷನ್‌ನಲ್ಲಿ ಮೊದಲ ಆರೋಪಿ (A1) ಕನಿಷ್ ಕಪಿಲ್ ಹಿರಸ್ಕರ್ (21 ವರ್ಷ) ಎಂಬಾತನನ್ನು ದಸ್ತಗಿರಿ ಮಾಡಿದ್ದಾರೆ.

ಬಂಧಿತನಿಂದ ವಶಪಡಿಸಿಕೊಳ್ಳಲಾದ ವಸ್ತುಗಳು:

  • ಸುಮಾರು 2,50,000/- ರೂ. ಬೆಲೆ ಬಾಳುವ ಒಂದು ಪ್ಯಾಸೆಂಜರ್ ಆಟೋ ವಾಹನ.

  • ಸುಮಾರು 70,000/- ರೂ. ಬೆಲೆ ಬಾಳುವ 02 ಮೊಬೈಲ್ ಫೋನ್‌ಗಳು.

  • ಕೃತ್ಯಕ್ಕೆ ಬಳಸಿದ್ದ ಒಂದು ಮೊಬೈಲ್ ಫೋನ್, ಒಂದು ಕಲ್ಲು ಮತ್ತು ಒಂದು ನೇಲ್ ಕಟರ್.

  • ಒಟ್ಟು ಅಂದಾಜು 3,20,000/- ರೂ. ಮೌಲ್ಯದ ಸ್ವತ್ತುಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ.

ಪೊಲೀಸ್ ತಂಡದ ಕಾರ್ಯಾಚರಣೆ:

ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಜಿ.ಕೆ ಮಿಥುನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಸಹಾಯಕ ಪೊಲೀಸ್ ಆಯುಕ್ತರಾದ ಮುರುಗೇಂದ್ರಯ್ಯ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಬಾಗಲೂರು ಇನ್ಸ್‌ಪೆಕ್ಟರ್ ಅಶೋಕ್ ಬಿ.ಎಸ್ ಅವರ ಉಸ್ತುವಾರಿಯಲ್ಲಿ ಪಿ.ಎಸ್.ಐ ಪೂಜೇರಿ ಬಾಳಯ್ಯ ಮತ್ತು ಸಿಬ್ಬಂದಿ ತಂಡ ಹಾಗೂ ಸಿ.ಡಿ.ಆರ್ ತಾಂತ್ರಿಕ ವಿಭಾಗದ ನೆರವಿನಿಂದ ಆರೋಪಿಯನ್ನು ಬಂಧಿಸಲಾಗಿದೆ.

ಪ್ರಸ್ತುತ ಬಂಧಿತ ಆರೋಪಿ ಪೊಲೀಸ್ ಅಭಿರಕ್ಷೆಯಲ್ಲಿದ್ದು, ತಲೆಮರೆಸಿಕೊಂಡಿರುವ ಎರಡನೇ ಆರೋಪಿ (A2) ಪತ್ತೆಗಾಗಿ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾಲಕ್ಷ್ಮಿ ಮುಂದೆ ಒಂದೇ ಕರೆನ್ಸಿ ನೋಟಿನಲ್ಲಿ ಹೀಗೆ ಮಾಡಿ, ನಿಮ್ಮ ಆದಾಯವು 3 ಪಟ್ಟು ಹೆಚ್ಚುತ್ತೆ

BIG NEWS: ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರ ವಿರುದ್ಧ ಈ ಗಂಭೀರ ಆರೋಪ ಮಾಡಿದ ಕೈ ಶಾಸಕ

Share. Facebook Twitter LinkedIn WhatsApp Email

Related Posts

ಮಂಡ್ಯದಲ್ಲಿ ಕೃಷಿ ವಿಶ್ವ ವಿದ್ಯಾಲಯ ಸ್ಥಾಪನೆ; ಯುವ ರೈತರಿಗೆ ಶಕ್ತಿ – ಸಚಿವ ಎನ್.ಚಲುವರಾಯಸ್ವಾಮಿ

07/04/2026 7:23 PM3 Mins Read

BIG NEWS: ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರ ವಿರುದ್ಧ ಈ ಗಂಭೀರ ಆರೋಪ ಮಾಡಿದ ಕೈ ಶಾಸಕ

07/04/2026 7:20 PM2 Mins Read

ಮಹಾಲಕ್ಷ್ಮಿ ಮುಂದೆ ಒಂದೇ ಕರೆನ್ಸಿ ನೋಟಿನಲ್ಲಿ ಹೀಗೆ ಮಾಡಿ, ನಿಮ್ಮ ಆದಾಯವು 3 ಪಟ್ಟು ಹೆಚ್ಚುತ್ತೆ

07/04/2026 7:08 PM3 Mins Read
Recent News

​’ಇಂದೇ ರಾತ್ರಿ ನಾಗರಿಕತೆಯ ಅಂತ್ಯ’: ಇರಾನ್‌ಗೆ ಟ್ರಂಪ್ ಭೀಕರ ವಾರ್ನಿಂಗ್; ಗಡುವು ಮುಗಿಯಲು ಕ್ಷಣಗಣನೆ!

07/04/2026 7:34 PM

CRIME NEWS: ಬೆಂಗಳೂರಲ್ಲಿ ರಾಪಿಡೋ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಸುಲಿಗೆ ಮಾಡಿದ್ದ ಆರೋಪಿಯ ಬಂಧನ!

07/04/2026 7:32 PM

ಜೈಲಿನ ಕತ್ತಲಲ್ಲೇ ಕಳೆದುಹೋಯಿತು ಯೌವನ: 22 ವರ್ಷಗಳ ಬಳಿಕ ಅಮಾಯಕ ಹೊರಕ್ಕೆ; ವ್ಯವಸ್ಥೆಯ ‘ಅಂಧಾಭಿಮಾನ’ಕ್ಕೆ ಹೈಕೋರ್ಟ್ ತಪರಾಕಿ!

07/04/2026 7:24 PM

ಮಂಡ್ಯದಲ್ಲಿ ಕೃಷಿ ವಿಶ್ವ ವಿದ್ಯಾಲಯ ಸ್ಥಾಪನೆ; ಯುವ ರೈತರಿಗೆ ಶಕ್ತಿ – ಸಚಿವ ಎನ್.ಚಲುವರಾಯಸ್ವಾಮಿ

07/04/2026 7:23 PM
State News
KARNATAKA

CRIME NEWS: ಬೆಂಗಳೂರಲ್ಲಿ ರಾಪಿಡೋ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಸುಲಿಗೆ ಮಾಡಿದ್ದ ಆರೋಪಿಯ ಬಂಧನ!

By kannadanewsnow0907/04/2026 7:32 PM KARNATAKA 2 Mins Read

ಬೆಂಗಳೂರು: ರಾಪಿಡೋ ಆ್ಯಪ್ ಮೂಲಕ ಆಟೋ ಬುಕ್ ಮಾಡಿ, ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ವಾಹನ ಹಾಗೂ ಮೊಬೈಲ್…

ಮಂಡ್ಯದಲ್ಲಿ ಕೃಷಿ ವಿಶ್ವ ವಿದ್ಯಾಲಯ ಸ್ಥಾಪನೆ; ಯುವ ರೈತರಿಗೆ ಶಕ್ತಿ – ಸಚಿವ ಎನ್.ಚಲುವರಾಯಸ್ವಾಮಿ

07/04/2026 7:23 PM

BIG NEWS: ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರ ವಿರುದ್ಧ ಈ ಗಂಭೀರ ಆರೋಪ ಮಾಡಿದ ಕೈ ಶಾಸಕ

07/04/2026 7:20 PM

ಮಹಾಲಕ್ಷ್ಮಿ ಮುಂದೆ ಒಂದೇ ಕರೆನ್ಸಿ ನೋಟಿನಲ್ಲಿ ಹೀಗೆ ಮಾಡಿ, ನಿಮ್ಮ ಆದಾಯವು 3 ಪಟ್ಟು ಹೆಚ್ಚುತ್ತೆ

07/04/2026 7:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.