Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇನ್ಮುಂದೆ ‘ಟೋಲ್ ಪ್ಲಾಜಾ’ಗಳಲ್ಲಿ ನಗದು ಪಾವತಿ ಬಂದ್: ಏಪ್ರಿಲ್.10ರಿಂದ ಜಾರಿಗೆ ಬರಲಿದೆ ಹೊಸ ನಿಯಮಗಳು!

05/04/2026 1:07 PM

ಜಾಗತಿಕ ಜಲ ಸಂಕಟ: ಯಾವ ದೇಶಗಳು ನೀರಿನ ಕೊರತೆಯ ಅಪಾಯದಲ್ಲಿವೆ ಗೊತ್ತಾ?

05/04/2026 1:04 PM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ ಎಲ್ಲಾ ಸಾಲ ಸೌಲಭ್ಯಗಳು.!

05/04/2026 12:56 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಜನತೆಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ ಎಲ್ಲಾ ಸಾಲ ಸೌಲಭ್ಯಗಳು.!
KARNATAKA

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ ಎಲ್ಲಾ ಸಾಲ ಸೌಲಭ್ಯಗಳು.!

By kannadanewsnow5705/04/2026 12:56 PM

ಬೆಂಗಳೂರು: ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕ-ಯುವತಿಯರು ಮತ್ತು ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮವು ವಿವಿಧ ಸಬ್ಸಿಡಿ ಸಹಿತ ಸಾಲ ಯೋಜನೆಗಳನ್ನು ಘೋಷಿಸಿದೆ. ಸ್ವಯಂ ಉದ್ಯೋಗ, ಕೃಷಿ ಮತ್ತು ಉದ್ದಿಮೆ ಆರಂಭಿಸಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಈ ಯೋಜನೆಗಳ ಲಾಭ ಪಡೆಯಬಹುದಾಗಿದೆ.

ನಿಗಮವು ಪ್ರಮುಖವಾಗಿ ಈ ಕೆಳಗಿನ ಐದು ಕ್ಷೇತ್ರಗಳಲ್ಲಿ ನೆರವು ನೀಡುತ್ತಿದೆ:

ಸ್ವಯಂ ಉದ್ಯೋಗ ಯೋಜನೆ (ನೇರ ಸಾಲ)

ಈ ಯೋಜನೆಯಡಿ ಸಣ್ಣ ವ್ಯಾಪಾರ ಅಥವಾ ಚಟುವಟಿಕೆಗಳಿಗೆ ₹1.00 ಲಕ್ಷ ಘಟಕ ವೆಚ್ಚ ನಿಗದಿಪಡಿಸಲಾಗಿದೆ. ಇದರಲ್ಲಿ ₹50,000 ಸಬ್ಸಿಡಿ (ಸಹಾಯಧನ) ಸಿಗಲಿದ್ದು, ಉಳಿದ ₹50,000 ಸಾಲವಾಗಿರುತ್ತದೆ. ಇದನ್ನು 30 ಸಮಾನ ಕಂತುಗಳಲ್ಲಿ ಶೇ. 4ರ ಬಡ್ಡಿ ದರದಲ್ಲಿ ಮರುಪಾವತಿಸಬೇಕು. ಇದೇ ಮಾದರಿಯಲ್ಲಿ ಕುರಿ/ಮೇಕೆ ಸಾಕಾಣಿಕೆಗೂ ಅವಕಾಶವಿದೆ.

ಉದ್ದಿಮೆಶೀಲತಾ ಅಭಿವೃದ್ಧಿ ಯೋಜನೆ (ಬ್ಯಾಂಕ್‌ಗಳ ಸಹಯೋಗದಲ್ಲಿ)

ಸಾಮಾನ್ಯ ಉದ್ಯಮ: ಯೋಜನೆ ವೆಚ್ಚದ ಶೇ. 70ರಷ್ಟು ಅಥವಾ ಗರಿಷ್ಠ ₹2.00 ಲಕ್ಷ ಸಹಾಯಧನ ನೀಡಲಾಗುವುದು.

ಸ್ವಾವಲಂಬಿ ಸಾರಥಿ: ಸರಕು ಸಾಗಾಣಿಕೆ/ಟ್ಯಾಕ್ಸಿ ಖರೀದಿಸಲು ಶೇ. 75ರಷ್ಟು ಅಥವಾ ಗರಿಷ್ಠ ₹4.00 ಲಕ್ಷ ಸಹಾಯಧನ ಲಭ್ಯವಿದೆ.

ಫಾಸ್ಟ್ ಫುಡ್/ಮೊಬೈಲ್ ಕಿಚನ್: ಹಳದಿ ಬೋರ್ಡ್ ವಾಹನ ಅಥವಾ ಮೊಬೈಲ್ ಕ್ಯಾಂಟೀನ್ ಆರಂಭಿಸಲು ₹4.00 ಲಕ್ಷದವರೆಗೆ ಸಹಾಯಧನ ಸಿಗಲಿದೆ.

ಹೈನುಗಾರಿಕೆ: ಹಸು ಅಥವಾ ಎಮ್ಮೆ ಸಾಕಾಣಿಕೆಗೆ ಗರಿಷ್ಠ ₹1.25 ಲಕ್ಷದವರೆಗೆ ಸಬ್ಸಿಡಿ ದೊರೆಯಲಿದೆ.

ಭೂ ಒಡೆತನ ಯೋಜನೆ

ಭೂಹೀನ ಕೃಷಿ ಕಾರ್ಮಿಕ ಮಹಿಳೆಯರಿಗಾಗಿ ಈ ಯೋಜನೆ ಮೀಸಲಿದೆ. 26 ಜಿಲ್ಲೆಗಳಲ್ಲಿ ಘಟಕ ವೆಚ್ಚವನ್ನು ₹15 ರಿಂದ ₹20 ಲಕ್ಷಕ್ಕೆ ಹಾಗೂ 4 ಜಿಲ್ಲೆಗಳಲ್ಲಿ ₹20 ರಿಂದ ₹25 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದರಲ್ಲಿ ಶೇ. 50ರಷ್ಟು ಸಹಾಯಧನವಿದ್ದು, ಉಳಿದ ಶೇ. 50ರಷ್ಟು ಮೊತ್ತವನ್ನು ಶೇ. 6ರ ಬಡ್ಡಿದರದಲ್ಲಿ 10 ವರ್ಷಗಳ ಅವಧಿಯಲ್ಲಿ ಮರುಪಾವತಿಸಬೇಕು.

ಗಂಗಾ ಕಲ್ಯಾಣ ಮತ್ತು ಏತ ನೀರಾವರಿ ಯೋಜನೆ

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲು ಈ ಯೋಜನೆ ಸಹಕಾರಿ.

ಘಟಕ ವೆಚ್ಚ: ಬೆಂಗಳೂರು ಸುತ್ತಮುತ್ತಲಿನ 6 ಜಿಲ್ಲೆಗಳಲ್ಲಿ ₹4.75 ಲಕ್ಷ (ಸಬ್ಸಿಡಿ ₹4.25 ಲಕ್ಷ) ಹಾಗೂ ಉಳಿದ 25 ಜಿಲ್ಲೆಗಳಲ್ಲಿ ₹3.75 ಲಕ್ಷ (ಸಬ್ಸಿಡಿ ₹3.25 ಲಕ್ಷ) ನಿಗದಿಪಡಿಸಲಾಗಿದೆ.

ಕನಿಷ್ಠ 1.20 ಎಕರೆಯಿಂದ 5 ಎಕರೆ ಜಮೀನು ಹೊಂದಿರುವ ರೈತರು ಇದರ ಲಾಭ ಪಡೆಯಬಹುದು.

ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆ

ಮಹಿಳಾ ಸ್ವಸಹಾಯ ಗುಂಪುಗಳ ಆರ್ಥಿಕ ಸಬಲೀಕರಣಕ್ಕಾಗಿ ಈ ಯೋಜನೆ ರೂಪಿಸಲಾಗಿದೆ. 10 ಮಹಿಳೆಯರಿರುವ ಗುಂಪಿಗೆ ಉದ್ಯಮ ಆರಂಭಿಸಲು ₹5.00 ಲಕ್ಷ ಮೊತ್ತವನ್ನು ಮಂಜೂರು ಮಾಡಲಾಗುತ್ತದೆ. ಇದರಲ್ಲಿ ₹2.50 ಲಕ್ಷ ಸಹಾಯಧನ ಹಾಗೂ ₹2.50 ಲಕ್ಷ ಬೀಜಧನ (ಸಾಲ) ಇರುತ್ತದೆ. ಅಂದರೆ ಪ್ರತಿ ಸದಸ್ಯೆಗೆ ತಲಾ ₹50,000 ನೆರವು ದೊರೆತಂತಾಗುತ್ತದೆ.

ಗಮನಿಸಿ: ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು ಆಯಾ ಜಿಲ್ಲೆಯ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

Good news for the people of the state: You will get all these loan facilities from the government!
Share. Facebook Twitter LinkedIn WhatsApp Email

Related Posts

ಇನ್ಮುಂದೆ ‘ಟೋಲ್ ಪ್ಲಾಜಾ’ಗಳಲ್ಲಿ ನಗದು ಪಾವತಿ ಬಂದ್: ಏಪ್ರಿಲ್.10ರಿಂದ ಜಾರಿಗೆ ಬರಲಿದೆ ಹೊಸ ನಿಯಮಗಳು!

05/04/2026 1:07 PM2 Mins Read

BREAKING : ಹುಬ್ಬಳ್ಳಿಯಲ್ಲಿ ಹಿಂದೂ ಯುವತಿಗೆ ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಕೇಸ್ : ಆರೋಪಿ ಮುಫೀಸ್ ಅರೆಸ್ಟ್!

05/04/2026 12:51 PM1 Min Read

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಈ ಎಲ್ಲಾ `ಕೃಷಿ ಯಂತ್ರೋಪಕರಣಗಳ’ ಖರೀದಿಗೆ ಸರ್ಕಾರದಿಂದ ಸಿಗಲಿದೆ ಸಬ್ಸಿಡಿ.!

05/04/2026 12:46 PM2 Mins Read
Recent News

ಇನ್ಮುಂದೆ ‘ಟೋಲ್ ಪ್ಲಾಜಾ’ಗಳಲ್ಲಿ ನಗದು ಪಾವತಿ ಬಂದ್: ಏಪ್ರಿಲ್.10ರಿಂದ ಜಾರಿಗೆ ಬರಲಿದೆ ಹೊಸ ನಿಯಮಗಳು!

05/04/2026 1:07 PM

ಜಾಗತಿಕ ಜಲ ಸಂಕಟ: ಯಾವ ದೇಶಗಳು ನೀರಿನ ಕೊರತೆಯ ಅಪಾಯದಲ್ಲಿವೆ ಗೊತ್ತಾ?

05/04/2026 1:04 PM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ ಎಲ್ಲಾ ಸಾಲ ಸೌಲಭ್ಯಗಳು.!

05/04/2026 12:56 PM

BREAKING : ಹುಬ್ಬಳ್ಳಿಯಲ್ಲಿ ಹಿಂದೂ ಯುವತಿಗೆ ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಕೇಸ್ : ಆರೋಪಿ ಮುಫೀಸ್ ಅರೆಸ್ಟ್!

05/04/2026 12:51 PM
State News
KARNATAKA

ಇನ್ಮುಂದೆ ‘ಟೋಲ್ ಪ್ಲಾಜಾ’ಗಳಲ್ಲಿ ನಗದು ಪಾವತಿ ಬಂದ್: ಏಪ್ರಿಲ್.10ರಿಂದ ಜಾರಿಗೆ ಬರಲಿದೆ ಹೊಸ ನಿಯಮಗಳು!

By kannadanewsnow0905/04/2026 1:07 PM KARNATAKA 2 Mins Read

ನವದೆಹಲಿ: ಭಾರತದಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಹತ್ವದ ಸೂಚನೆಯನ್ನು…

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ ಎಲ್ಲಾ ಸಾಲ ಸೌಲಭ್ಯಗಳು.!

05/04/2026 12:56 PM

BREAKING : ಹುಬ್ಬಳ್ಳಿಯಲ್ಲಿ ಹಿಂದೂ ಯುವತಿಗೆ ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಕೇಸ್ : ಆರೋಪಿ ಮುಫೀಸ್ ಅರೆಸ್ಟ್!

05/04/2026 12:51 PM

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಈ ಎಲ್ಲಾ `ಕೃಷಿ ಯಂತ್ರೋಪಕರಣಗಳ’ ಖರೀದಿಗೆ ಸರ್ಕಾರದಿಂದ ಸಿಗಲಿದೆ ಸಬ್ಸಿಡಿ.!

05/04/2026 12:46 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.