ಬೆಂಗಳೂರು: ಸಾಗರಲ್ಲಿ ನಿರ್ಮಿಸಿರುವಂತ ನೂತನ ಮೀನು ಮಾರುಕಟ್ಟೆಯು ಕೊರತೆಯ ಆಗರವಾಗಿತ್ತು. ಹೀಗಾಗಿ ಉದ್ಘಾಟನೆ ಕೂಡ ಕಂಡಿರಲಿಲ್ಲ. ಈ ಮೀನು ಮಾರುಕಟ್ಟೆಯ ಕಾಮಗಾರಿಯನ್ನು ಸಂಪೂರ್ಣಗೊಳಿಸಲು ರಾಜ್ಯ ಸರ್ಕಾರವು ಬರೊಬ್ಬರಿ 129.90 ಲಕ್ಷವನ್ನು ಬಿಡುಗಡೆಗೊಳಿಸಿದೆ.
ಈ ಕುರಿತಂತೆ ರಾಜ್ಯ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಸಾಗರ ಮೀನು ಮಾರುಕಟ್ಟೆಯ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ರೂ.129.90 ಲಕ್ಷವನ್ನು ಪ್ರಸಕ್ತ ಸಾಲಿನ ಪೂರಕ ಅಂದಾಜು-2ರಲ್ಲಿ ಹೆಚ್ಚುವರಿಯಾಗಿ ಒದಗಿಸಲಾದ ರೂ.383 ಲಕ್ಷಗಳಿಂದ ಭರಿಸಲು ಹಾಗೂ ಅನುಷ್ಠಆನ ಸಂಸ್ಥೆಯಾದ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ, ಮಂಗಳೂರು ಅವರಿಗೆ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯು ಸಮಹಮತಿಸಿದೆ ಎಂದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನೂತನ ಮೀನು ಮಾರುಕಟ್ಟೆ ನಿರ್ಮಾಣ ಮಾಡಲಾಗಿತ್ತು. ಆದರೇ ಸುಸಜ್ಜಿತವಾಗಿ ನಿರ್ಮಾಣವಾಗಬೇಕಿದ್ದ ಮೀನು ಮಾರುಕಟ್ಟೆಯೇ ಅವೈಜ್ಞಾನಿಕತೆಯಿಂದ ಕೂಡಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಸರಿಯಾಗಿ ಗಾಳಿ ಬೆಳಕಿನ ವ್ಯವಸ್ಥೆಯಿಲ್ಲದ ರೀತಿಯಲ್ಲಿ ನಿರ್ಮಾಣವಾಗಿದೆ. ಬಳಕೆಗೂ ಸಾಧ್ಯವಾಗೋದಿಲ್ಲ ಎನ್ನುವುದು ಹಲವರ ಆರೋಪಗಳಾಗಿದ್ದವು.
ಈ ಎಲ್ಲಾ ಕಾರಣದಿಂದಾಗಿ ನಿರ್ಮಾಣವಾದರೂ, ಸರಿಯಾಗಿ ನಿರ್ಮಾಣವಾಗದ ಕಾರಣ ಉದ್ಘಾಟನೆಯಾಗಿ ಬಳಕೆಯಾಗದ ಸಾಗರದ ಮೀನು ಮಾರುಕಟ್ಟೆಯನ್ನು ಸರಿ ಮಾಡಲೇ ಬೇಕು ಎನ್ನವ ಹಠಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಬಿದ್ದಿದ್ದರು. ಹೀಗಾಗಿ ಸರ್ಕಾರಕ್ಕೆ ಸಾಗರದ ಮೀನು ಮಾರುಕಟ್ಟೆಯ ಕಾಮಗಾರಿ ಪೂರ್ಣಗೊಳಿಸೋದಕ್ಕೆ ಅನುದಾನಕ್ಕೆ ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿರುವಂತ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಇದೀಗ 1 ಕೋಟಿ 29 ಲಕ್ಷ ಅನುದಾನ ಬಿಡುಗಡೆಗೊಳಿಸಿದ್ದಾರೆ.
ಇದೀಗ ಆರ್ಥಿಕ ಇಲಾಖೆಯಿಂದ ಸಾಗರ ಮೀನು ಮಾರುಕಟ್ಟೆ ಕಾಮಗಾರಿ ಪೂರ್ಣಗೊಳಿಸೋದಕ್ಕೆ 129.90 ಲಕ್ಷ ಅನುದಾವನ್ನು ಬಿಡುಗಡೆಗೊಳಿಸಲಾಗಿದೆ. ಈ ಅನುದಾನದಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಾಗರದ ಮೀನು ಮಾರುಕಟ್ಟೆಯನ್ನು ಯಾವೆಲ್ಲ ರೀತಿಯಲ್ಲಿ ಪರಿವರ್ತಿಸಿ ಪೂರ್ಣಗೊಳಿಸಬೇಕೋ ಆ ನಿಟ್ಟಿನಲ್ಲಿ ಕಾಮಗಾರಿ ನಡೆಯಲಿದೆ. ಆ ಬಳಿಕ ನೂತನವಾಗಿ ನಿರ್ಮಾಣಗೊಂಡಿರುವಂತ ಸಾಗರದ ಮೀನು ಮಾರುಕಟ್ಟೆಯೂ ಸಾರ್ವಜನಿಕರ ಬಳಕೆಗೆ ಲೋಕಾರ್ಪಣೆಗೊಳ್ಳೋ ಸಾಧ್ಯತೆ ಇದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

ಒಂದು ವರ್ಷದೊಳಗೆ ವಿದ್ಯುತ್, ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ: ಮದ್ದೂರು ಶಾಸಕ ಕೆ.ಎಂ.ಉದಯ್
Good News ; ಸಾಲಗಾರರಿಗೆ ಭರ್ಜರಿ ಗುಡ್ ನ್ಯೂಸ್ ; 6 ತಿಂಗಳವರೆಗೆ ‘EMI ಪಾವತಿ’ ವಿನಾಯಿತಿಗೆ ಸರ್ಕಾರ ನಿರ್ಧಾರ!








