Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಎದೆ ನೋವು ಅಂದ್ರೆ ಕೇವಲ ಹೃದಯದ ಸಮಸ್ಯೆಯಲ್ಲ: ನಿಮ್ಮ ಶ್ವಾಸಕೋಶ, ಜಠರವೂ ಕಾರಣವಾಗಿರಬಹುದು!

27/03/2026 6:41 PM

ದೇಶದಲ್ಲಿ ಲಾಕ್‌ಡೌನ್ ಭೀತಿ ಇಲ್ಲ: ಇಂಧನ ಬಿಕ್ಕಟ್ಟಿನ ವದಂತಿಗಳಿಗೆ ತೆರೆ ಎಳೆದ ಕೇಂದ್ರ ಸರ್ಕಾರ

27/03/2026 6:35 PM

VIDEO : ಕ್ಷಿಪಣಿಗಳ ಮೇಲೆ ‘Thank You India’ ಎಂದು ಬರೆದು ಇಸ್ರೇಲ್ ಕಡೆಗೆ ಹಾರಿಸಿದ ಇರಾನ್

27/03/2026 6:35 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಮಲೆನಾಡಿನಲ್ಲಿ ಆತಂಕ ಸೃಷ್ಟಿಸಿದ್ದ ‘ನಿಗೂಢ ವಿಮಾನ’ದ ರಹಸ್ಯ ಬಯಲು : ರಾಜ್ಯ ಸರ್ಕಾರ ಸ್ಪಷ್ಟನೆ.!
KARNATAKA

BIG NEWS : ಮಲೆನಾಡಿನಲ್ಲಿ ಆತಂಕ ಸೃಷ್ಟಿಸಿದ್ದ ‘ನಿಗೂಢ ವಿಮಾನ’ದ ರಹಸ್ಯ ಬಯಲು : ರಾಜ್ಯ ಸರ್ಕಾರ ಸ್ಪಷ್ಟನೆ.!

By kannadanewsnow5725/03/2026 7:22 AM

ಬೆಂಗಳೂರು: ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಕಳಸದಿಂದ ಬಾಳೆಹೊನ್ನೂರಿನವರೆಗೆ ಭದ್ರಾ ನದಿ ಪಾತ್ರದಲ್ಲಿ ಅತ್ಯಂತ ಕೆಳಮಟ್ಟದಲ್ಲಿ ಹಾರಾಟ ನಡೆಸಿ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದ್ದ ಆ ನಿಗೂಢ ವಿಮಾನದ ಹಾರಾಟದ ಹಿಂದಿನ ಅಸಲಿ ಕಾರಣ ಈಗ ಬಹಿರಂಗವಾಗಿದೆ. ಇದು ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲ, ಬದಲಾಗಿ ಕೇಂದ್ರ ಸರ್ಕಾರ ಅನುಮತಿ ನೀಡಿರುವ ವೈಜ್ಞಾನಿಕ ಸಮೀಕ್ಷೆಯಾಗಿದೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಚರ್ಚೆ

ವಿಧಾನ ಪರಿಷತ್ ಸದಸ್ಯರಾದ ಡಾ. ಆರತಿ ಕೃಷ್ಣ ಅವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ (ಸಂಖ್ಯೆ: 1101) ಗೃಹ ಸಚಿವರು ಲಿಖಿತ ಉತ್ತರ ನೀಡಿದ್ದಾರೆ. ಮಲೆನಾಡು ಭಾಗದಲ್ಲಿ ಸದ್ದಿಲ್ಲದೆ ಹಾರಾಡಿದ್ದ ವಿಮಾನದ ಬಗ್ಗೆ ಸ್ಥಳೀಯರಲ್ಲಿ ಹಾಗೂ ಪೊಲೀಸ್ ಇಲಾಖೆಯಲ್ಲಿ ಯಾವುದೇ ಮಾಹಿತಿ ಇಲ್ಲದಿರುವುದು ಗೊಂದಲಕ್ಕೆ ಕಾರಣವಾಗಿತ್ತು.

ಸರ್ಕಾರ ನೀಡಿದ ಸ್ಪಷ್ಟನೆ ಏನು?

ವೈಜ್ಞಾನಿಕ ಸಮೀಕ್ಷೆ: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭೂ ಗರ್ಭದಲ್ಲಿರುವ ಖನಿಜ ನಿಕ್ಷೇಪಗಳನ್ನು (O.G.P ಪ್ರದೇಶಗಳು) ಗುರುತಿಸಲು ಈ ಹಾರಾಟ ನಡೆಸಲಾಗುತ್ತಿದೆ.

ಯಾರಿಂದ ಹಾರಾಟ?: ಭಾರತ ಸರ್ಕಾರವು ಎಕ್ಸ್-ಕ್ಯಾಲಿಬರ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಗೆ ಸಮೀಕ್ಷೆಯ ಗುತ್ತಿಗೆ ನೀಡಿದೆ. ಈ ಕಂಪನಿಯು ಹಿಮಾಲಯನ್ ಹೆಲಿ ಸರ್ವಿಸ್ ಲಿಮಿಟೆಡ್ ಸಹಯೋಗದೊಂದಿಗೆ ಅಧಿಕೃತವಾಗಿ ಹಾರಾಟ ನಡೆಸುತ್ತಿದೆ.

ತಾಂತ್ರಿಕ ಉಪಕರಣಗಳ ಬಳಕೆ: ಕಡಿಮೆ ಎತ್ತರದಲ್ಲಿ ಹಾರಾಡುವ ವಿಮಾನದಲ್ಲಿ ಮ್ಯಾಗ್ನೆಟಿಕ್ ಗ್ರೇಡಿಯೋ ಮೀಟರ್ ಮತ್ತು ರೇಡಿಯೋ ಮೀಟರ್ ಸಂವೇದಕಗಳನ್ನು ಬಳಸಲಾಗುತ್ತಿದೆ.

ಅವಧಿ: ಈ ಸಮೀಕ್ಷೆ ನಡೆಸಲು ಫೆಬ್ರವರಿ 13, 2026 ರಿಂದ ಜುಲೈ 31, 2026 ರವರೆಗೆ ಕಾಲಾವಕಾಶ ನೀಡಲಾಗಿದೆ.

ಪೊಲೀಸ್ ಇಲಾಖೆಗೆ ಮಾಹಿತಿ

ಈ ಹಾರಾಟದ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಇಲ್ಲ ಎಂಬ ಆರೋಪಕ್ಕೆ ಉತ್ತರಿಸಿರುವ ಸರ್ಕಾರ, ಫೆಬ್ರವರಿ 13 ರಂದೇ ಹಿಮಾಲಯನ್ ಹೆಲಿ ಸರ್ವಿಸ್ ಸಂಸ್ಥೆಯು ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಪೊಲೀಸ್ ಅಧೀಕ್ಷಕರಿಗೆ ಈ ಬಗ್ಗೆ ಮಾಹಿತಿ ನೀಡಿದೆ ಎಂದು ತಿಳಿಸಿದೆ. ಅಲ್ಲದೆ, ಸಾರ್ವಜನಿಕರ ಆತಂಕ ದೂರ ಮಾಡಲು ಈಗಾಗಲೇ ಪತ್ರಿಕಾ ಪ್ರಕಟಣೆಯನ್ನೂ ನೀಡಲಾಗಿದೆ ಎಂದು ಸರ್ಕಾರ ಹೇಳಿದೆ.

The secret of the 'mysterious plane' that created panic in the Malnadu region has been revealed: State government clarifies.!
Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ 51,000 ಕೋಟಿ ಮೊತ್ತದ ಬಂಡವಾಳ ಹೂಡಿಕೆ: 70,000 ಉದ್ಯೋಗ ಸೃಷ್ಠಿ – ಸಚಿವ ಎಂ.ಬಿ ಪಾಟೀಲ್

27/03/2026 6:32 PM2 Mins Read

‘IPL ಟಿಕೆಟ್’ಗಾಗಿ ಮುಗಿಬಿದ್ದ ಶಾಸಕರು: ತಲಾ 2 ಟಿಕೆಟ್ ವ್ಯವಸ್ಥೆ ಮಾಡಲು KSCAಗೆ ಡಿಸಿಎಂ ಡಿ.ಕೆ ಶಿವಕುಮಾರ್ ಮನವಿ

27/03/2026 6:11 PM1 Min Read

‘IPL ಟಿಕೆಟ್‌’ಗಾಗಿ ಶಾಸಕರ ಬೇಡಿಕೆ: KSCA ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದ DCM ಡಿ.ಕೆ.ಶಿವಕುಮಾರ್

27/03/2026 5:48 PM1 Min Read
Recent News

ಎದೆ ನೋವು ಅಂದ್ರೆ ಕೇವಲ ಹೃದಯದ ಸಮಸ್ಯೆಯಲ್ಲ: ನಿಮ್ಮ ಶ್ವಾಸಕೋಶ, ಜಠರವೂ ಕಾರಣವಾಗಿರಬಹುದು!

27/03/2026 6:41 PM

ದೇಶದಲ್ಲಿ ಲಾಕ್‌ಡೌನ್ ಭೀತಿ ಇಲ್ಲ: ಇಂಧನ ಬಿಕ್ಕಟ್ಟಿನ ವದಂತಿಗಳಿಗೆ ತೆರೆ ಎಳೆದ ಕೇಂದ್ರ ಸರ್ಕಾರ

27/03/2026 6:35 PM

VIDEO : ಕ್ಷಿಪಣಿಗಳ ಮೇಲೆ ‘Thank You India’ ಎಂದು ಬರೆದು ಇಸ್ರೇಲ್ ಕಡೆಗೆ ಹಾರಿಸಿದ ಇರಾನ್

27/03/2026 6:35 PM

ರಾಜ್ಯದಲ್ಲಿ 51,000 ಕೋಟಿ ಮೊತ್ತದ ಬಂಡವಾಳ ಹೂಡಿಕೆ: 70,000 ಉದ್ಯೋಗ ಸೃಷ್ಠಿ – ಸಚಿವ ಎಂ.ಬಿ ಪಾಟೀಲ್

27/03/2026 6:32 PM
State News
KARNATAKA

ರಾಜ್ಯದಲ್ಲಿ 51,000 ಕೋಟಿ ಮೊತ್ತದ ಬಂಡವಾಳ ಹೂಡಿಕೆ: 70,000 ಉದ್ಯೋಗ ಸೃಷ್ಠಿ – ಸಚಿವ ಎಂ.ಬಿ ಪಾಟೀಲ್

By kannadanewsnow0927/03/2026 6:32 PM KARNATAKA 2 Mins Read

ಬೆಂಗಳೂರು: ಗುರುವಾರದಂದು ನಡೆದ ʼ ಇನ್ವೆಸ್ಟ್ ಕರ್ನಾಟಕ ಸಮಾವೇಶ 2026ʼದಲ್ಲಿ ವೈಮಾಂತರಿಕ್ಷ, ವಾಹನ, ಜೈವಿಕ ತಂತ್ರಜ್ಞಾನ ಮತ್ತು ತಯಾರಿಕಾ ವಲಯದ…

‘IPL ಟಿಕೆಟ್’ಗಾಗಿ ಮುಗಿಬಿದ್ದ ಶಾಸಕರು: ತಲಾ 2 ಟಿಕೆಟ್ ವ್ಯವಸ್ಥೆ ಮಾಡಲು KSCAಗೆ ಡಿಸಿಎಂ ಡಿ.ಕೆ ಶಿವಕುಮಾರ್ ಮನವಿ

27/03/2026 6:11 PM

‘IPL ಟಿಕೆಟ್‌’ಗಾಗಿ ಶಾಸಕರ ಬೇಡಿಕೆ: KSCA ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದ DCM ಡಿ.ಕೆ.ಶಿವಕುಮಾರ್

27/03/2026 5:48 PM

BIG NEWS: ದಾವಣಗೆರೆ ಉಪ ಚುನಾವಣೆ: ಸಿಎಂ ಸಿದ್ಧರಾಮಯ್ಯ ಸಂಧಾನ ಸಕ್ಸಸ್, ಸಾದಿಕ್ ಪೈಲ್ವಾನ್ ನಾಮಪತ್ರ ವಾಪಾಸ್

27/03/2026 5:45 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.