ಬೆಂಗಳೂರು: ರಾಜ್ಯದ ವಿಕಲಚೇತನರಿಗೆ ಸಾರ್ವಜನಿಕ ಸೇವೆಗಳು ಸುಲಭವಾಗಿ ದೊರೆಯುವಂತೆ ಮಾಡಲು ಮತ್ತು ಅವರಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸಲು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ.
ವಿಕಲಚೇತನರು ಆಸ್ಪತ್ರೆ ಮತ್ತು ಕಚೇರಿಗಳಿಗೆ ಭೇಟಿ ನೀಡುವಾಗ ಎದುರಿಸುತ್ತಿರುವ ತೊಂದರೆಗಳನ್ನು ಗಮನಿಸಿ, ಈ ಕೆಳಗಿನ ಕ್ರಮಗಳನ್ನು ತಕ್ಷಣವೇ ಜಾರಿಗೆ ತರುವಂತೆ ಸೂಚಿಸಲಾಗಿದೆ:
ಪ್ರಮುಖ ನಿರ್ದೇಶನಗಳು:
ರ್ಯಾಂ ಪ್ ವ್ಯವಸ್ಥೆ: ಎಲ್ಲಾ ಆಸ್ಪತ್ರೆ ಮತ್ತು ಕಚೇರಿಗಳಿಗೆ ವಿಕಲಚೇತನರು ಸುಲಭವಾಗಿ ಪ್ರವೇಶಿಸಲು ಅನುಕೂಲವಾಗುವಂತೆ ಕಡ್ಡಾಯವಾಗಿ ರ್ಯಾಂ ಪ್ (Ramp) ವ್ಯವಸ್ಥೆಯನ್ನು ಮಾಡಬೇಕು.
ಬ್ರೈಲ್ ಲಿಪಿ ಮಾಹಿತಿ: ದೃಷ್ಟಿ ದೋಷವುಳ್ಳವರಿಗಾಗಿ ಅಗತ್ಯ ಮಾಹಿತಿಯನ್ನು ಬ್ರೈಲ್ (Braille) ಲಿಪಿಯಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು.
ಶ್ರವಣ ಸಾಧನಗಳು: ಶ್ರವಣ ದೋಷವಿರುವವರಿಗೆ ಅಗತ್ಯವಿರುವ ಶ್ರವಣ ಸಹಾಯಯಕ ಸಾಧನಗಳು (Hearing Aids) ಸುಲಭವಾಗಿ ದೊರೆಯುವಂತೆ ವಿಶೇಷ ಗಮನಹರಿಸಬೇಕು.
ಅನುದಾನ ಮೀಸಲು: ವಿಕಲಚೇತನರ ಬಳಕೆಗೆ ಬೇಕಾದ ಅಗತ್ಯ ಉಪಕರಣಗಳನ್ನು ಖರೀದಿಸಲು ಪ್ರತ್ಯೇಕ ಅನುದಾನವನ್ನು ಮೀಸಲಿಡಬೇಕು.
ಈ ಮೇಲಿನ ಸೂಚನೆಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ತಕ್ಷಣದಿಂದಲೇ ಜಾರಿಗೆ ತರುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.









