Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾದ್ರೆ ಜೈಲು ಫಿಕ್ಸ್: ದೇಶಾದ್ಯಂತ ‘ಎಸ್‌ಮಾ’ ಜಾರಿಗೊಳಿಸಿದ ಕೇಂದ್ರ ಸರ್ಕಾರ

10/03/2026 6:29 PM

BREAKING: ಇಂಡಿಗೋ ಸಿಇಒ ಹುದ್ದೆಗೆ ಪೀಟರ್ ಎಲ್ಬರ್ಸ್ ರಾಜೀನಾಮೆ | IndiGo CEO Pieter Elbers

10/03/2026 6:22 PM

BREAKING : ಇಂಡಿಗೋ CEO ಸ್ಥಾನಕ್ಕೆ ‘ಪೀಟರ್ ಎಲ್ಬರ್ಸ್’ ರಾಜೀನಾಮೆ |Pieter Elbers

10/03/2026 6:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗ್ರಾಮೀಣ ಭಾಗದ ಜನರಿಗೆ ಆಪತ್ಬಾಂಧವನಾದ ‘ಸಂಚಾರಿ ಆರೋಗ್ಯ ಘಟಕ’: ಮನೆಬಾಗಿಲಲ್ಲೇ ಚಿಕಿತ್ಸೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ
KARNATAKA

ಗ್ರಾಮೀಣ ಭಾಗದ ಜನರಿಗೆ ಆಪತ್ಬಾಂಧವನಾದ ‘ಸಂಚಾರಿ ಆರೋಗ್ಯ ಘಟಕ’: ಮನೆಬಾಗಿಲಲ್ಲೇ ಚಿಕಿತ್ಸೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ

By kannadanewsnow0909/03/2026 12:13 PM

ಶಿವಮೊಗ್ಗ: ಸಾರಿಗೆ ಸಂಪರ್ಕ ದುಸ್ತರವಾಗಿರುವ ಮಲೆನಾಡಿನ ಗುಡ್ಡಗಾಡು ಪ್ರದೇಶಗಳ ಜನರಿಗೆ ಸಂಚಾರಿ ಆರೋಗ್ಯ ಘಟಕವು ಸಂಜೀವಿನಿಯಾಗಿ ಪರಿಣಮಿಸಿದೆ. ಸಾಗರ ಮತ್ತು ಹೊಸನಗರ ತಾಲ್ಲೂಕುಗಳ ವ್ಯಾಪ್ತಿಯ ನೂರಾರು ಹಳ್ಳಿಗಳಲ್ಲಿ ಈ ಘಟಕವು ಮನೆಬಾಗಿಲಿಗೆ ಆರೋಗ್ಯ ಸೇವೆಯನ್ನು ತಲುಪಿಸುತ್ತಿದೆ. ಈ ಸಂಚಾರಿ ಆರೋಗ್ಯ ಘಟಕ ವಾಹನಕ್ಕೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಿದರು.

​ಈ ವೇಳೆ ಮಾತನಾಡಿದಂತ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸಾಗರ ತಾಲ್ಲೂಕಿನ ಕಾರ್ಗಲ್ ಸಮೀಪದ ಚೆನ್ನಗೊಂಡ, ಭಾನುಕುಳಿ ಪಂಚಾಯಿತಿ ವ್ಯಾಪ್ತಿಯ ಸುಮಾರು 66 ಹಳ್ಳಿಗಳಿಗೆ ಹಾಗೂ ತುಮರಿ ಭಾಗದ ಕಟ್ಟಿನಕಾರು, ಬ್ಯಾಕೋಡು ಭಾಗದ ಹೊಸಕೊಪ್ಪ, ಕುದರೂರು, ಶಂಕನಶಾನುಭೋಗ ಪಂಚಾಯಿತಿಗಳಿಗೆ ಸಂಬಂಧಿಸಿದ 49 ಹಳ್ಳಿಗಳಿಗೆ ಈ ಘಟಕವು ನಿರಂತರ ಸೇವೆ ನೀಡುತ್ತಿದೆ ಎಂದರು.

​ಅದೇ ರೀತಿ, ಹೊಸನಗರ ತಾಲ್ಲೂಕಿನ ಯಡೂರು, ಸಂಪೆಕಟ್ಟೆ ಮತ್ತು ನಿಟ್ಟೂರು ಭಾಗದ 46 ಹಳ್ಳಿಗಳ ಜನರು ಈ ಯೋಜನೆಯ ಸದುಪಯೋಗ ಪಡೆಯುತ್ತಿದ್ದಾರೆ. ಸಾರಿಗೆ ವ್ಯವಸ್ಥೆ ಸಮರ್ಪಕವಾಗಿಲ್ಲದ ಮತ್ತು ದುರ್ಗಮ ಹಾದಿಯ ಹಳ್ಳಿಗಳೇ ಈ ಘಟಕದ ಉದ್ದೇಶ ಆಗಿದೆ ಎಂದು ಹೇಳಿದರು.

​ಲಭ್ಯವಿರುವ ಪ್ರಮುಖ ಚಿಕಿತ್ಸೆಗಳು

​ಈ ಸಂಚಾರಿ ಆರೋಗ್ಯ ಘಟಕವು ಕೇವಲ ಪ್ರಾಥಮಿಕ ಚಿಕಿತ್ಸೆಯಷ್ಟೇ ಅಲ್ಲದೆ, ಗಂಭೀರ ಆರೋಗ್ಯ ಸಮಸ್ಯೆಗಳ ಮೇಲ್ವಿಚಾರಣೆಯನ್ನೂ ಮಾಡಲಿದೆ.

  • ​ತಾಯಿ-ಮಗು ಆರೈಕೆ: ಗರ್ಭಿಣಿ ಮತ್ತು ಬಾಣಂತಿಯರ ತಪಾಸಣೆ ಹಾಗೂ ರಕ್ತಹೀನತೆ ತಡೆಗಟ್ಟಲು ಕಬ್ಬಿಣಾಂಶದ ಮಾತ್ರೆಗಳ ವಿತರಣೆ.
  • ​ಅಸಾಂಕ್ರಾಮಿಕ ರೋಗಗಳ ಪತ್ತೆ: ಬಿಪಿ (ರಕ್ತದೊತ್ತಡ), ಮಧುಮೇಹ (ಶುಗರ್) ಮತ್ತು ಕ್ಯಾನ್ಸರ್‌ನಂತಹ ರೋಗಗಳ ಆರಂಭಿಕ ಪತ್ತೆ ಹಚ್ಚುವಿಕೆ.
  • ​ಔಷಧ ವಿತರಣೆ: ಬಿಪಿ ಮತ್ತು ಶುಗರ್ ಕಾಯಿಲೆಗೆ ನಿಯಮಿತವಾಗಿ ಮಾತ್ರೆಗಳ ನೀಡುವಿಕೆ.
  • ​ಸಾಂಕ್ರಾಮಿಕ ರೋಗಗಳ ನಿಯಂತ್ರಣ: ಕ್ಷಯ ರೋಗ ಪತ್ತೆಗೆ ಕಫ ಸಂಗ್ರಹಣೆ ಹಾಗೂ ಕುಷ್ಠರೋಗದ ತಪಾಸಣೆ.
  • ​ಜಾಗೃತಿ: ಜನರಲ್ಲಿ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು.

​ದಕ್ಷ ತಂಡದ ಕಾರ್ಯಾಚರಣೆ

​ಈ ಘಟಕದಲ್ಲಿ ಒಬ್ಬರು ವೈದ್ಯರು, ಶುಶ್ರೂಷಕರು (ನರ್ಸ್) ಹಾಗೂ ಲ್ಯಾಬ್ ಟೆಕ್ನೀಷಿಯನ್ ಕಾರ್ಯನಿರ್ವಹಿಸುತ್ತಿದ್ದು, ಸುಸಜ್ಜಿತ ವಾಹನದ ಮೂಲಕ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಜನಸಾಮಾನ್ಯರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆಸ್ಪತ್ರೆಗೆ ಬರಲು ಸಾಧ್ಯವಾಗದ ವೃದ್ಧರು ಹಾಗೂ ರೋಗಿಗಳಿಗೆ ಈ ‘ಮನೆಬಾಗಿಲ ಸೇವೆ’ ದೊಡ್ಡ ಆಸರೆಯಾಗಿದೆ.

ಈ ವೇಳೆ ಸಾಗರ ಉಪವಿಭಾಗ ಅಧಿಕಾರಿ ವೀರೇಶ್ ಕುಮಾರ್, ಟಿ.ವಿ ಪಾಂಡುರಂಗ, ಕೆ.ಎನ್ ನಾಗೇಂದ್ರ, ನಾಗರಾಜ್ ಗುಡ್ಡೇಮನೆ, ದಿನೇಶ್, ವೈದ್ಯರಾದ ಡಾ.ಶಿವಯೋಗಿ, ಸ್ಟಾಫ್ ನರ್ಸ್ ಅನಸೂಯ, ಲ್ಯಾಬ್ ಟೆಕ್ನೀಷಿಯನ್ ಕೇಶವಮೂರ್ತಿ, THO ಡಾ.ಶ್ರೀನಿವಾಸ್ ಎಸ್.ಎ, AMO ಡಾ.ಸುರೇಶ್.ಎಸ್, ಟಿಹೆಚ್ ಓ ಆಫೀಸ್ ಸಿಬ್ಬಂದಿಗಳಾದ ಸುಮಾ ಪಾಟೀಲ್, ನಾಗರಾಜ್, ಪ್ರಕಾಶ್, ಧರ್ಮರಾಜ್, ಲಲಿತಾನಾಯಕ್, ಸತ್ಯಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

Share. Facebook Twitter LinkedIn WhatsApp Email

Related Posts

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಸಿಎಂ ಸಿದ್ಧರಾಮಯ್ಯ ಅಭಿನಂದನೆ

10/03/2026 6:12 PM1 Min Read

BIG BREAKING: ಬಿಜೆಪಿಯಿಂದ ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ರಿಲೀಸ್

10/03/2026 6:07 PM1 Min Read

1 ಮರ ಕಡಿದರೆ 10 ಸಸಿ ನೆಡಲು ವಿಧಿಸುವ ಶುಲ್ಕಕ್ಕೆ ವಿನಾಯಿತಿ ಇಲ್ಲ: ಸಚಿವ ಈಶ್ವರ ಖಂಡ್ರೆ ಸ್ಪಷ್ಟನೆ

10/03/2026 6:04 PM1 Min Read
Recent News

ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾದ್ರೆ ಜೈಲು ಫಿಕ್ಸ್: ದೇಶಾದ್ಯಂತ ‘ಎಸ್‌ಮಾ’ ಜಾರಿಗೊಳಿಸಿದ ಕೇಂದ್ರ ಸರ್ಕಾರ

10/03/2026 6:29 PM

BREAKING: ಇಂಡಿಗೋ ಸಿಇಒ ಹುದ್ದೆಗೆ ಪೀಟರ್ ಎಲ್ಬರ್ಸ್ ರಾಜೀನಾಮೆ | IndiGo CEO Pieter Elbers

10/03/2026 6:22 PM

BREAKING : ಇಂಡಿಗೋ CEO ಸ್ಥಾನಕ್ಕೆ ‘ಪೀಟರ್ ಎಲ್ಬರ್ಸ್’ ರಾಜೀನಾಮೆ |Pieter Elbers

10/03/2026 6:21 PM

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಸಿಎಂ ಸಿದ್ಧರಾಮಯ್ಯ ಅಭಿನಂದನೆ

10/03/2026 6:12 PM
State News
KARNATAKA

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಸಿಎಂ ಸಿದ್ಧರಾಮಯ್ಯ ಅಭಿನಂದನೆ

By kannadanewsnow0910/03/2026 6:12 PM KARNATAKA 1 Min Read

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಉಪಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆಗಳು. ಶಿವಕುಮಾರ್ ಅವರ ಸಂಘಟನಾ ಚಾತುರ್ಯ,…

BIG BREAKING: ಬಿಜೆಪಿಯಿಂದ ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ರಿಲೀಸ್

10/03/2026 6:07 PM

1 ಮರ ಕಡಿದರೆ 10 ಸಸಿ ನೆಡಲು ವಿಧಿಸುವ ಶುಲ್ಕಕ್ಕೆ ವಿನಾಯಿತಿ ಇಲ್ಲ: ಸಚಿವ ಈಶ್ವರ ಖಂಡ್ರೆ ಸ್ಪಷ್ಟನೆ

10/03/2026 6:04 PM

BREAKING: ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ: ಇಲ್ಲಿದೆ ಲೀಸ್ಟ್

10/03/2026 5:57 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.