Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : `ಫೀಸ್’ ಕಟ್ಟದ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಹಾಕುವಂತಿಲ್ಲ : ಹೈಕೋರ್ಟ್ ಮಹತ್ವದ ತೀರ್ಪು !

04/03/2026 4:55 AM

ಕರ್ನಾಟಕದ ‘ಗ್ರಾಮ ಪಂಚಾಯತಿ’ಗಳು ಈ 15 ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಕಡ್ಡಾಯ !

04/03/2026 4:50 AM

ಛಲ, ಶಿಸ್ತು, ಸಂಯಮದಿಂದ ಸಾಧನೆ ಸಾಧ್ಯ: ಪದ್ಮಶ್ರೀ ಡಾ.ಕೆ.ಎಸ್.ರಾಜಣ್ಣ

03/03/2026 10:11 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕರ್ನಾಟಕದ ‘ಗ್ರಾಮ ಪಂಚಾಯತಿ’ಗಳು ಈ 15 ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಕಡ್ಡಾಯ !
KARNATAKA

ಕರ್ನಾಟಕದ ‘ಗ್ರಾಮ ಪಂಚಾಯತಿ’ಗಳು ಈ 15 ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಕಡ್ಡಾಯ !

By kannadanewsnow5704/03/2026 4:50 AM

ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ಜನರ ಜೀವನಮಟ್ಟವನ್ನು ಸುಧಾರಿಸಲು ಮತ್ತು ನಗರ ಪ್ರದೇಶದ ಮಾದರಿಯಲ್ಲೇ ಸೌಲಭ್ಯಗಳನ್ನು ಒದಗಿಸಲು ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಒದಗಿಸಬೇಕಾದ 15 ಪ್ರಮುಖ ಮೂಲಭೂತ ಸೌಕರ್ಯಗಳನ್ನು ಗುರುತಿಸಿ ಸರ್ಕಾರ ಅಧಿಕೃತ ಸುತ್ತೋಲೆ ಹೊರಡಿಸಿದೆ.

ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 61.43 ರಷ್ಟು ಜನರು ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದು, ಅವರಿಗೆ ದೈನಂದಿನ ಜೀವನಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಗ್ರಾಮಗಳಲ್ಲಿ ಜಾರಿಯಾಗಲಿರುವ 15 ಪ್ರಮುಖ ಸೌಲಭ್ಯಗಳು:

ಶುದ್ಧ ಕುಡಿಯುವ ನೀರು: ಪ್ರತಿ ಕುಟುಂಬಕ್ಕೆ ದಿನಕ್ಕೆ ಕನಿಷ್ಠ 55 ಲೀಟರ್ ಶುದ್ಧ ನೀರು ಒದಗಿಸುವುದು ಮತ್ತು ಶೇ. 80 ರಷ್ಟು ಮನೆಗಳಿಗೆ ವೈಯಕ್ತಿಕ ನಳ ಸಂಪರ್ಕ ನೀಡುವುದು.

ವೈಯಕ್ತಿಕ ಶೌಚಾಲಯ: ‘ನಿರ್ಮಲ ಭಾರತ ಅಭಿಯಾನ’ದಡಿ ಪ್ರತಿ ಮನೆಗೆ ಶೌಚಾಲಯ ನಿರ್ಮಾಣ ಹಾಗೂ ಶಾಲೆ-ಅಂಗನವಾಡಿಗಳಲ್ಲಿ ನೈರ್ಮಲ್ಯ ಕಾಪಾಡುವುದು.

ರಸ್ತೆ ನಿರ್ಮಾಣ: ಕಚ್ಚಾ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸುಸಜ್ಜಿತ ಗ್ರಾಮೀಣ ರಸ್ತೆಗಳ ಜಾಲ ನಿರ್ಮಿಸುವುದು.

ಆಟದ ಮೈದಾನ: ಯುವಜನತೆ ಮತ್ತು ಮಕ್ಕಳ ದೈಹಿಕ ವಿಕಾಸಕ್ಕಾಗಿ ಪ್ರತಿ ಪಂಚಾಯಿತಿಯಲ್ಲಿ ಕನಿಷ್ಠ ಒಂದು ಸುಸಜ್ಜಿತ ಆಟದ ಮೈದಾನ ನಿರ್ಮಾಣ.

ರುದ್ರಭೂಮಿ ಅಭಿವೃದ್ಧಿ: ಗ್ರಾಮಗಳ ಹೊರಭಾಗದಲ್ಲಿ ಘನವೆತ್ತ ಅಂತ್ಯಕ್ರಿಯೆ ನಡೆಸಲು ಅಗತ್ಯವಿರುವ ರುದ್ರಭೂಮಿ ಸೌಲಭ್ಯ ಒದಗಿಸುವುದು.

ದನದ ಕೊಟ್ಟಿಗೆಗಳ ನಿರ್ಮಾಣ: ಜಾನುವಾರುಗಳ ರಕ್ಷಣೆಗಾಗಿ ನರೇಗಾ ಯೋಜನೆಯಡಿ ಕುರಿ ಮತ್ತು ದನದ ದೊಡ್ಡಿಗಳ ನಿರ್ಮಾಣಕ್ಕೆ ಆದ್ಯತೆ.

ಧಾನ್ಯ ಒಕ್ಕಣೆ ಕಣ: ಸಣ್ಣ ಮತ್ತು ಅತಿಸಣ್ಣ ರೈತರಿಗೆ ಅನುಕೂಲವಾಗಲು ಸಮೂಹಿಕ ಧಾನ್ಯ ಒಕ್ಕಣೆ ಕಣಗಳ ನಿರ್ಮಾಣ.

ಬಯಲು ರಂಗಮಂದಿರ: ಗ್ರಾಮೀಣ ಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ಸಾಂಸ್ಕೃತಿಕ ವೇದಿಕೆಗಳ ನಿರ್ಮಾಣ.

ನಾಗರಿಕ ಸೇವಾ ಕೇಂದ್ರಗಳು: ಸರ್ಕಾರದ ದಾಖಲೆಗಳು ಮತ್ತು ಯೋಜನೆಗಳ ಮಾಹಿತಿ ಗ್ರಾಮ ಮಟ್ಟದಲ್ಲೇ ಸಿಗುವಂತೆ ಸೇವಾ ಕೇಂದ್ರಗಳ ಸ್ಥಾಪನೆ.

ಕೌಶಲ್ಯಾಭಿವೃದ್ಧಿ ತರಬೇತಿ: ಗ್ರಾಮೀಣ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಹೆಚ್ಚಿಸಲು ವಿಶೇಷ ತರಬೇತಿ ನೀಡಿಕೆ.

‘ನಮ್ಮ ಹಳ್ಳಿ-ನಮ್ಮ ನೀರು’: ಕೆರೆ-ಕಟ್ಟೆಗಳ ಪುನರುಜ್ಜೀವನ ಮತ್ತು ಅಂತರ್ಜಲ ವೃದ್ಧಿಗೆ ಜಲ ಮರುಪೂರಣ ಯೋಜನೆಗಳ ಅನುಷ್ಠಾನ.

‘ನಮ್ಮ ಹೊಲ-ನಮ್ಮ ದಾರಿ’: ರೈತರು ತಮ್ಮ ಜಮೀನುಗಳಿಗೆ ಸುಲಭವಾಗಿ ತಲುಪಲು ಸಂಪರ್ಕ ರಸ್ತೆಗಳ ಅಭಿವೃದ್ಧಿ.

ಸ್ವಯಂ ಉದ್ಯೋಗಕ್ಕೆ ಉತ್ತೇಜನ: ಗ್ರಾಮೀಣ ಭಾಗದಲ್ಲಿ ಸಣ್ಣ ಉದ್ದಿಮೆಗಳನ್ನು ಪ್ರಾರಂಭಿಸಲು ಬ್ಯಾಂಕ್ ಸಾಲ ಮತ್ತು ತಾಂತ್ರಿಕ ನೆರವು.

ಸಾರ್ವಜನಿಕ ಗ್ರಂಥಾಲಯ: ಜ್ಞಾನಾರ್ಜನೆಗಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಸಜ್ಜಿತ ಗ್ರಂಥಾಲಯಗಳ ಸ್ಥಾಪನೆ.

‘ನಮ್ಮೂರ ಕೆರೆ’ ಸಂರಕ್ಷಣೆ: ಹಳೆಯ ಕೆರೆಗಳ ಹೂಳೆತ್ತುವುದು ಮತ್ತು ಅವುಗಳನ್ನು ಸಾಂಸ್ಕೃತಿಕ ಹಾಗೂ ಪರಿಸರ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವುದು.

ಮುಖ್ಯ ಕಾರ್ಯದರ್ಶಿಗಳ ಸೂಚನೆ: ಈ ಎಲ್ಲಾ ಯೋಜನೆಗಳನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಮತ್ತು ಇತರ ಸರ್ಕಾರಿ ಅನುದಾನಗಳ ಅಡಿಯಲ್ಲಿ ಸಮರ್ಪಕವಾಗಿ ಜಾರಿಗೆ ತರಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಲಾಗಿದೆ.

 

It is mandatory for Karnataka's 'Gram Panchayats' to provide these 15 basic amenities!
Share. Facebook Twitter LinkedIn WhatsApp Email

Related Posts

ಛಲ, ಶಿಸ್ತು, ಸಂಯಮದಿಂದ ಸಾಧನೆ ಸಾಧ್ಯ: ಪದ್ಮಶ್ರೀ ಡಾ.ಕೆ.ಎಸ್.ರಾಜಣ್ಣ

03/03/2026 10:11 PM2 Mins Read

ಜಿಬಿಎ ಅಭ್ಯರ್ಥಿಗಳನ್ನು ಗುರುತಿಸಲು ವಾರದ ಗಡುವು: ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ

03/03/2026 9:57 PM2 Mins Read

ಶಿವಮೊಗ್ಗ: ಸೊರಬದ ಉಳವಿ ಕೆರೆ ಬಳಿಯ ‘ಅವೈಜ್ಞಾನಿಕ ಹಂಪ್ಸ್’ನಿಂದ ಬೈಕ್ ಸವಾರರು ಬಿದ್ದು ಗಾಯ

03/03/2026 9:53 PM2 Mins Read
Recent News

BIG NEWS : `ಫೀಸ್’ ಕಟ್ಟದ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಹಾಕುವಂತಿಲ್ಲ : ಹೈಕೋರ್ಟ್ ಮಹತ್ವದ ತೀರ್ಪು !

04/03/2026 4:55 AM

ಕರ್ನಾಟಕದ ‘ಗ್ರಾಮ ಪಂಚಾಯತಿ’ಗಳು ಈ 15 ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಕಡ್ಡಾಯ !

04/03/2026 4:50 AM

ಛಲ, ಶಿಸ್ತು, ಸಂಯಮದಿಂದ ಸಾಧನೆ ಸಾಧ್ಯ: ಪದ್ಮಶ್ರೀ ಡಾ.ಕೆ.ಎಸ್.ರಾಜಣ್ಣ

03/03/2026 10:11 PM

Watch Video: ಇಸ್ರೇಲ್ ವಾಯುದಾಳಿ: ಇರಾನ್‌ನ ಪ್ರಯಾಣಿಕ ವಿಮಾನ ಭಸ್ಮ, ವೈರಲ್ ವೀಡಿಯೋ ಇಲ್ಲಿದೆ

03/03/2026 10:09 PM
State News
KARNATAKA

ಕರ್ನಾಟಕದ ‘ಗ್ರಾಮ ಪಂಚಾಯತಿ’ಗಳು ಈ 15 ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಕಡ್ಡಾಯ !

By kannadanewsnow5704/03/2026 4:50 AM KARNATAKA 2 Mins Read

ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ಜನರ ಜೀವನಮಟ್ಟವನ್ನು ಸುಧಾರಿಸಲು ಮತ್ತು ನಗರ ಪ್ರದೇಶದ ಮಾದರಿಯಲ್ಲೇ ಸೌಲಭ್ಯಗಳನ್ನು ಒದಗಿಸಲು ಕರ್ನಾಟಕ ಸರ್ಕಾರವು…

ಛಲ, ಶಿಸ್ತು, ಸಂಯಮದಿಂದ ಸಾಧನೆ ಸಾಧ್ಯ: ಪದ್ಮಶ್ರೀ ಡಾ.ಕೆ.ಎಸ್.ರಾಜಣ್ಣ

03/03/2026 10:11 PM

ಜಿಬಿಎ ಅಭ್ಯರ್ಥಿಗಳನ್ನು ಗುರುತಿಸಲು ವಾರದ ಗಡುವು: ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ

03/03/2026 9:57 PM

ಶಿವಮೊಗ್ಗ: ಸೊರಬದ ಉಳವಿ ಕೆರೆ ಬಳಿಯ ‘ಅವೈಜ್ಞಾನಿಕ ಹಂಪ್ಸ್’ನಿಂದ ಬೈಕ್ ಸವಾರರು ಬಿದ್ದು ಗಾಯ

03/03/2026 9:53 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.