Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೊಣಕಾಲು ನೋವಿನಿಂದ ಮುಕ್ತಿ ಪಡೆಯಲು ಇಲ್ಲಿದೆ ಸರಳ ಮನೆ ಮದ್ದುಗಳು!

01/03/2026 3:36 PM

ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರವನ್ನು ಸುರಕ್ಷಿತವಾಗಿ ಕರೆತನ್ನಿ: ಸಿಎಂ, ಡಿಸಿಎಂಗೆ MLC ರಮೇಶ್ ಗೂಳಿಗೌಡ ಪತ್ರ

01/03/2026 3:29 PM

ಅಕ್ಷರಲೋಕಕ್ಕೆ ಕಾಡುಗೊಲ್ಲರ ಸಾಂಸ್ಕೃತಿಕ ರಾಯಭಾರಿ: ಶಿವ ಕೀರ್ತಿಯವರ ಶ್ರೀ ಶಿವ ಚಿತ್ರಲಿಂಗೇಶ್ವರ ವಾಣಿ ಕೃತಿ ಲೋಕಾರ್ಪಣೆ

01/03/2026 3:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಕ್ಷರಲೋಕಕ್ಕೆ ಕಾಡುಗೊಲ್ಲರ ಸಾಂಸ್ಕೃತಿಕ ರಾಯಭಾರಿ: ಶಿವ ಕೀರ್ತಿಯವರ ಶ್ರೀ ಶಿವ ಚಿತ್ರಲಿಂಗೇಶ್ವರ ವಾಣಿ ಕೃತಿ ಲೋಕಾರ್ಪಣೆ
KARNATAKA

ಅಕ್ಷರಲೋಕಕ್ಕೆ ಕಾಡುಗೊಲ್ಲರ ಸಾಂಸ್ಕೃತಿಕ ರಾಯಭಾರಿ: ಶಿವ ಕೀರ್ತಿಯವರ ಶ್ರೀ ಶಿವ ಚಿತ್ರಲಿಂಗೇಶ್ವರ ವಾಣಿ ಕೃತಿ ಲೋಕಾರ್ಪಣೆ

By kannadanewsnow0901/03/2026 3:22 PM

ಬೆಂಗಳೂರು: ಜಾನಪದದ ಅಪ್ಪಟ ಸಗಡು ಮತ್ತು ಮಣ್ಣಿನ ಸಂಸ್ಕೃತಿಯನ್ನು ಉಸಿರಾಗಿಸಿಕೊಂಡಿರುವ ಕಾಡುಗೊಲ್ಲರ ಸಮುದಾಯದ ಹೆಮ್ಮೆಯ ಪುತ್ರಿ, ಉದಯೋನ್ಮುಖ ಸಾಹಿತಿ ಶಿವ ಕೀರ್ತಿ (ಕೀರ್ತಿ) ಅವರು ರಚಿಸಿರುವ ‘ಶ್ರೀ ಶಿವ ಚಿತ್ರಲಿಂಗೇಶ್ವರ ವಾಣಿ’ ಎಂಬ 101 ವಚನಗಳ ಸಂಕಲನವು ಕನ್ನಡ ಸಾಹಿತ್ಯದ ಬಾನಿನಲ್ಲಿ ಹೊಸ ಧ್ರುವತಾರೆಯಾಗಿ ಮೂಡಿಬಂದಿದೆ.

ಆಧುನಿಕತೆಯ ಭರಾಟೆಯಲ್ಲಿ ಮೌಲ್ಯಗಳು ಮರೆಯಾಗುತ್ತಿರುವ ಈ ಸಂಕೀರ್ಣ ಕಾಲಘಟ್ಟದಲ್ಲಿ, ಹದಿಹರೆಯದ ಹೆಣ್ಣುಮಗಳೊಬ್ಬಳು ಹನ್ನೆರಡನೇ ಶತಮಾನದ ಶರಣರ ಕ್ರಾಂತಿಕಾರಿ ಚಿಂತನೆಗಳನ್ನು ಸಮಕಾಲೀನ ಬದುಕಿಗೆ ಅನ್ವಯಿಸಿ ವಚನಗಳನ್ನು ರಚಿಸಿರುವುದು ಅಕ್ಷರ ಲೋಕದ ವಿಸ್ಮಯವೇ ಸರಿ. ದೊಡ್ಡಗೊಲ್ಲರಹಟ್ಟಿಯ ಈ ಪ್ರತಿಭೆಯು ತನ್ನ ಲೇಖನಿಯ ಮೂಲಕ ಸಾಮಾಜಿಕ ಕಳಕಳಿ ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ಅತ್ಯಂತ ಪ್ರೌಢಿಮೆಯಿಂದ ಚಿತ್ರಿಸಿದ್ದು, ಈ ಕೃತಿಯು ಕೇವಲ ಅಕ್ಷರಗಳ ಗುಂಪಾಗದೆ, ಅಂತರಂಗದ ಅರಿವನ್ನು ಜಾಗೃತಗೊಳಿಸುವ ಜ್ಞಾನದೀವಿಗೆಯಾಗಿದೆ.

​ಈ ವಚನ ಸಂಕಲನದ ಪ್ರತಿ ಸಾಲುಗಳಲ್ಲೂ ಭಕ್ತಿ ಮತ್ತು ವೈಚಾರಿಕತೆಯ ಅದ್ಭುತ ಸಂಗಮವಿದೆ. ‘ಶ್ರೀ ಶಿವ ಚಿತ್ರಲಿಂಗೇಶ್ವರ’ ಎಂಬ ಪವಿತ್ರ ಅಂಕಿತನಾಮದಡಿ ಲೇಖಕಿಯು ಶರಣಾಗತಿ ಭಾವದ ಪರಮೋಚ್ಛ ಸ್ಥಿತಿಯನ್ನು ತಲುಪಿದ್ದಾರೆ. ಮನುಷ್ಯನ ಅಹಂಕಾರದ ಮುಖವಾಡವನ್ನು ಕಳಚಿ, ವಿನಯವನ್ನೇ ಜೀವನದ ಪರಮ ಧರ್ಮವನ್ನಾಗಿಸಿಕೊಳ್ಳಬೇಕು ಎನ್ನುವ ಹಂಬಲ ಇಲ್ಲಿನ ಪ್ರತಿ ವಚನದಲ್ಲೂ ಎದ್ದು ಕಾಣುತ್ತದೆ.

ಬಸವಣ್ಣನವರ ‘ಕಾಯಕವೇ ಕೈಲಾಸ’ ತತ್ತ್ವವನ್ನು ಮೈಗೂಡಿಸಿಕೊಂಡಿರುವ ಶಿವ ಕೀರ್ತಿ ಅವರು, ಸೋಮಾರಿತನವನ್ನು ತೊರೆದು ಶ್ರಮಜೀವಿಯಾಗುವ ಸನ್ಮಾರ್ಗವನ್ನು ಯುವ ಪೀಳಿಗೆಗೆ ಬೋಧಿಸಿದ್ದಾರೆ. ಸಂಬಂಧಗಳ ಸಂಕೋಲೆಯಲ್ಲಿ ‘ನಂಬಿಕೆಯೇ ಜೀವಾಳ’ ಎಂಬ ಸತ್ಯವನ್ನು ಸಾರುತ್ತಾ, ಲೋಕದ ಡೊಂಕನ್ನು ತಿದ್ದುವ ಮುನ್ನ ತನ್ನ ಅಂತರಂಗವನ್ನು ಶುದ್ಧೀಕರಿಸಿಕೊಳ್ಳಬೇಕೆಂಬ ಶರಣರ ಸಿದ್ಧಾಂತವನ್ನು ಲೇಖಕಿ ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ.

​ಈ ಸಾಹಿತ್ಯಿಕ ಮಹತ್ಕಾರ್ಯವನ್ನು ಕಂಡು ಕಾಡುಗೊಲ್ಲರ ಜನಪದ ಸಗಡು ತಂಡ ಹಾಗೂ ಸಮಸ್ತ ಕಾಡುಗೊಲ್ಲ ಸಮಾಜವು ಅತ್ಯಂತ ಹೆಮ್ಮೆಯಿಂದ ಅಭಿನಂದನೆಗಳನ್ನು ಸಲ್ಲಿಸಿದೆ.ಪರಿಮಳ ಪ್ರಕಾಶನದ ಮೂಲಕ ಅಚ್ಚುಕಟ್ಟಾಗಿ ಹೊರಬಂದಿರುವ ಈ ವಚನ ಕುಸುಮಗಳು ಅಜ್ಞಾನದ ಕತ್ತಲೆಯನ್ನು ಸರಿಸಿ, ಜ್ಞಾನದ ಬೆಳಕನ್ನು ಪಸರಿಸಲಿ ಎಂಬುದು ಸಾಹಿತ್ಯಾಸಕ್ತರ ಸದಾಶಯವಾಗಿದೆ. ಶಿವ ಕೀರ್ತಿ ಅವರ ಸಾಹಿತ್ಯ ಕೃಷಿಯು ನಿರಂತರವಾಗಿ ಸಾಗಲಿ, ಅವರಿಗೆ ಶ್ರೀ ಶಿವ ಚಿತ್ರಲಿಂಗೇಶ್ವರನು ಆಯುಷ್ಯ, ಆರೋಗ್ಯ ಮತ್ತು ಯಶಸ್ಸನ್ನು ಕರುಣಿಸಲಿ ಎಂದು ಸಮಸ್ತ ನಾಡು ತುಂಬು ಹೃದಯದಿಂದ ಹಾರೈಸುತ್ತಿದೆ.

ವರದಿ: ಶಶಿ ಬಿ ಈಶ್ವರಗೆರೆ

ದುಬೈನಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷಿತವಾಗಿ ಕರೆತರಲು ಎಲ್ಲ ವ್ಯವಸ್ಥೆ: ಸಿಎಂ ಸಿದ್ಧರಾಮಯ್ಯ

ರಾಜ್ಯದ ಜನತೆಗೆ ಸಿಹಿ ಸುದ್ದಿ: ಸದ್ಯಕ್ಕಿಲ್ಲ ವಿದ್ಯುತ್ ದರ ಏರಿಕೆ; ಸಿಎಂ ಸ್ಪಷ್ಟನೆ

Share. Facebook Twitter LinkedIn WhatsApp Email

Related Posts

ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರವನ್ನು ಸುರಕ್ಷಿತವಾಗಿ ಕರೆತನ್ನಿ: ಸಿಎಂ, ಡಿಸಿಎಂಗೆ MLC ರಮೇಶ್ ಗೂಳಿಗೌಡ ಪತ್ರ

01/03/2026 3:29 PM2 Mins Read

ದುಬೈನಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷಿತವಾಗಿ ಕರೆತರಲು ಎಲ್ಲ ವ್ಯವಸ್ಥೆ: ಸಿಎಂ ಸಿದ್ಧರಾಮಯ್ಯ

01/03/2026 3:15 PM1 Min Read
UDUPI SI

ಉಡುಪಿಯಲ್ಲಿ ಪೊಲೀಸ್ ಮ್ಯಾರಥಾನ್ ವೇಳೆ ಹೃದಯಾಘಾತ; ಕುಂದಾಪುರ ಗ್ರಾಮಾಂತರ ಠಾಣೆ ಎಸ್‌ಐ ದಾರುಣ ಸಾವು

01/03/2026 3:08 PM1 Min Read
Recent News

ಮೊಣಕಾಲು ನೋವಿನಿಂದ ಮುಕ್ತಿ ಪಡೆಯಲು ಇಲ್ಲಿದೆ ಸರಳ ಮನೆ ಮದ್ದುಗಳು!

01/03/2026 3:36 PM

ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರವನ್ನು ಸುರಕ್ಷಿತವಾಗಿ ಕರೆತನ್ನಿ: ಸಿಎಂ, ಡಿಸಿಎಂಗೆ MLC ರಮೇಶ್ ಗೂಳಿಗೌಡ ಪತ್ರ

01/03/2026 3:29 PM

ಅಕ್ಷರಲೋಕಕ್ಕೆ ಕಾಡುಗೊಲ್ಲರ ಸಾಂಸ್ಕೃತಿಕ ರಾಯಭಾರಿ: ಶಿವ ಕೀರ್ತಿಯವರ ಶ್ರೀ ಶಿವ ಚಿತ್ರಲಿಂಗೇಶ್ವರ ವಾಣಿ ಕೃತಿ ಲೋಕಾರ್ಪಣೆ

01/03/2026 3:22 PM
BREAKING NEWS

ಗಲ್ಫ್ ರಾಷ್ಟ್ರಗಳಲ್ಲಿ CBSE ಪರೀಕ್ಷೆ ಮುಂದೂಡಿಕೆ: ಇಸ್ರೇಲ್-ಇರಾನ್ ಯುದ್ಧದ ಭೀತಿಯೇ ಕಾರಣ!

01/03/2026 3:17 PM
State News
KARNATAKA

ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರವನ್ನು ಸುರಕ್ಷಿತವಾಗಿ ಕರೆತನ್ನಿ: ಸಿಎಂ, ಡಿಸಿಎಂಗೆ MLC ರಮೇಶ್ ಗೂಳಿಗೌಡ ಪತ್ರ

By kannadanewsnow0901/03/2026 3:29 PM KARNATAKA 2 Mins Read

ಬೆಂಗಳೂರು: ಇರಾನ್-ಇರಾಕ್ ನಡುವಿನ ಯುದ್ಧದ ಭೀತಿಯಿಂದ ದುಬೈ ಸೇರಿದಂತೆ ಅರಬ್ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರು ಮತ್ತು ಜನಪ್ರತಿನಿಧಿಗಳನ್ನು ತುರ್ತಾಗಿ…

ಅಕ್ಷರಲೋಕಕ್ಕೆ ಕಾಡುಗೊಲ್ಲರ ಸಾಂಸ್ಕೃತಿಕ ರಾಯಭಾರಿ: ಶಿವ ಕೀರ್ತಿಯವರ ಶ್ರೀ ಶಿವ ಚಿತ್ರಲಿಂಗೇಶ್ವರ ವಾಣಿ ಕೃತಿ ಲೋಕಾರ್ಪಣೆ

01/03/2026 3:22 PM

ದುಬೈನಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷಿತವಾಗಿ ಕರೆತರಲು ಎಲ್ಲ ವ್ಯವಸ್ಥೆ: ಸಿಎಂ ಸಿದ್ಧರಾಮಯ್ಯ

01/03/2026 3:15 PM
UDUPI SI

ಉಡುಪಿಯಲ್ಲಿ ಪೊಲೀಸ್ ಮ್ಯಾರಥಾನ್ ವೇಳೆ ಹೃದಯಾಘಾತ; ಕುಂದಾಪುರ ಗ್ರಾಮಾಂತರ ಠಾಣೆ ಎಸ್‌ಐ ದಾರುಣ ಸಾವು

01/03/2026 3:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.