Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಇನ್ನು ಒಂದೇ ವ್ಯವಸ್ಥೆಯಡಿ ಸಿಗಲಿವೆ `ಭೂ ಪರಿವರ್ತನೆ, ಆಸ್ತಿ ತೆರಿಗೆ’ ಸೇರಿ ಈ ಎಲ್ಲಾ ಸೇವೆಗಳು !

23/02/2026 6:52 AM

ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್ : RTE ದಾಖಲಾತಿಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ !

23/02/2026 6:36 AM

SHOCKING : ಪೋಷಕರೇ ಎಚ್ಚರ : `ಲೂಡೋ’ ಆಡುವಾಗ ಕಾಯಿನ್ ನುಂಗಿ ಬಾಲಕಿ ಸಾವು !

23/02/2026 6:26 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್ : RTE ದಾಖಲಾತಿಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ !
KARNATAKA

ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್ : RTE ದಾಖಲಾತಿಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ !

By kannadanewsnow5723/02/2026 6:36 AM

ಬೆಂಗಳೂರು : ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್, ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಅಡಿ ಖಾಸಗಿ ಶಾಲೆಗಳಲ್ಲಿ ಶೇಕಡ 25 ರಷ್ಟು ಉಚಿತ ಸೀಟು ಪಡೆಯಲು ಶಾಲಾ ಶಿಕ್ಷಣ ಇಲಾಖೆ 2026- 27 ನೇ ಸಾಲಿನ ಅರ್ಜಿ ಸಲ್ಲಿಕೆ ಮತ್ತು ಆಯ್ಕೆ ಪ್ರಕ್ರಿಯೆಗೆ ವೇಳಾಪಟ್ಟಿ ಪ್ರಕಟಿಸಿದೆ.

ಮಾರ್ಚ್ 10ರಂದು ನೆರೆಹೊರೆ ಶಾಲೆಗಳ ಅಂತಿಮ ಪಟ್ಟಿ, ಎಲ್‌ಕೆಜಿ ಮತ್ತು ಒಂದನೇ ತರಗತಿಗೆ ಅನುದಾನ ರಹಿತ ಶಾಲೆಗಳಲ್ಲಿ ಶೇಕಡ 25ರ ಪ್ರಮಾಣದಲ್ಲಿ ಲಭ್ಯವಿರುವ ಸೀಟು ಹಾಗೂ ಅನುದಾನಿತ ಶಾಲೆಗಳಲ್ಲಿ ಲಭ್ಯವಿರುವ ಶಾಲಾವಾರು ಸೀಟುಗಳ ಸಂಖ್ಯೆಯನ್ನು ಜಿಲ್ಲೆಯ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು. ಮಾರ್ಚ್ 11ರಿಂದ 12ರವರೆಗೆ ಅರ್ಜಿ ಸಲ್ಲಿಸಲು ಪ್ರಯೋಗಾರ್ಥ ಅವಧಿ ಇರಲಿದೆ. ಮಾರ್ಚ್ 16 ರಿಂದ ಏಪ್ರಿಲ್ 15 ರವರೆಗೆ ಆರ್‌.ಟಿ.ಇ. ಆಡಿ ದಾಖಲಾತಿ ಕೋರಿ ಪೋಷಕರು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಏಪ್ರಿಲ್ 21ರಂದು ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. ಏಪ್ರಿಲ್ 27ರಂದು ಆನ್ ಲೈನ್ ಲಾಟರಿ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ನಡೆಯಲಿದೆ. ಏ. 29 ರಿಂದ ಮೇ 15 ರವರೆಗೆ ಶಾಲೆಗಳಲ್ಲಿ ದಾಖಲಾತಿ ನಡೆಯಲಿದೆ. ಮೇ 19ರಂದು ಆನ್ ಲೈನ್  ಮೂಲಕ ಎರಡನೇ ಸುತ್ತಿನ ಸೀಟು ಹಂಚಿಕೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಗತ್ಯ ದಾಖಲೆಗಳು 

ಮಗುವಿನ ಜನನ ಪ್ರಮಾಣ ಪತ್ರ  : ಮಗುವಿನ ವಯಸ್ಸಿನ ದೃಢೀಕರಣಕ್ಕಾಗಿ ಅಧಿಕೃತ ಜನನ ಪ್ರಮಾಣ ಪತ್ರ ಕಡ್ಡಾಯ.

ಮಗುವಿನ ಆಧಾರ್ ಕಾರ್ಡ್ : ಮಗುವಿನ ಆಧಾರ್ ಸಂಖ್ಯೆ ಮತ್ತು ವಿವರಗಳು ಬೇಕಾಗುತ್ತವೆ.

ಪೋಷಕರ ಆಧಾರ್ ಕಾರ್ಡ್ : ತಂದೆ ಮತ್ತು ತಾಯಿ ಇಬ್ಬರ ಆಧಾರ್ ಕಾರ್ಡ್‌ಗಳು ಅವಶ್ಯಕ.

ಜಾತಿ ಪ್ರಮಾಣ ಪತ್ರ : ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಅಥವಾ ಇತರೆ ಹಿಂದುಳಿದ ವರ್ಗಗಳಿಗೆ (OBC) ಸೇರಿದವರಾಗಿದ್ದರೆ, ಮಗುವಿನ ಹೆಸರಿನಲ್ಲಿರುವ ಜಾತಿ ಪ್ರಮಾಣ ಪತ್ರ (RD ಸಂಖ್ಯೆಯೊಂದಿಗೆ).

ಆದಾಯ ಪ್ರಮಾಣ ಪತ್ರ (Income Certificate): ಆರ್ಥಿಕವಾಗಿ ಹಿಂದುಳಿದ ವರ್ಗದಡಿ (EWS) ಅರ್ಜಿ ಸಲ್ಲಿಸುವವರಿಗೆ ವಾರ್ಷಿಕ ಆದಾಯ ದೃಢೀಕರಣ ಪತ್ರ ಬೇಕು (ಸಾಮಾನ್ಯವಾಗಿ ₹3.5 ಲಕ್ಷದ ಒಳಗಿರಬೇಕು).

ವಾಸಸ್ಥಳದ ದೃಢೀಕರಣ ಪತ್ರ (Address Proof): ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ಅನ್ನು ವಿಳಾಸದ ಪುರಾವೆಯಾಗಿ ಬಳಸಬಹುದು.

ಮಗುವಿನ ಭಾವಚಿತ್ರ (Passport Size Photo): ಆನ್‌ಲೈನ್ ಅರ್ಜಿಯಲ್ಲಿ ಅಪ್‌ಲೋಡ್ ಮಾಡಲು ಇತ್ತೀಚಿನ ಭಾವಚಿತ್ರ.

ವಿಶೇಷ ವರ್ಗದ ಪ್ರಮಾಣ ಪತ್ರ (Special Category): ಅನಾಥ ಮಕ್ಕಳು, ಎಚ್‌ಐವಿ ಬಾಧಿತರು ಅಥವಾ ವಿಶೇಷ ಚೇತನ ಮಕ್ಕಳಾಗಿದ್ದಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಪಡೆದ ಪ್ರಮಾಣ ಪತ್ರಗಳು.

ಶಿಕ್ಷಣ ಹಕ್ಕು ಕಾಯ್ದೆ (RTE)

6-14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ನೀಡುತ್ತದೆ. ಇದು ಖಾಸಗಿ ಶಾಲೆಗಳಲ್ಲಿ 25% ಸೀಟುಗಳನ್ನು ದುರ್ಬಲ ವರ್ಗದವರಿಗೆ ಮೀಸಲಿಡಲು, ಯಾವುದೇ ಪ್ರವೇಶ ಪರೀಕ್ಷೆ ಅಥವಾ ದೇಣಿಗೆ ನಿಷೇಧಿಸಲು ಮತ್ತು 8ನೇ ತರಗತಿಯವರೆಗೆ ಮಕ್ಕಳನ್ನು ತಡೆಹಿಡಿಯದಂತೆ (No-detention) ಆದೇಶಿಸುತ್ತದೆ.

RTE ಕಾಯ್ದೆಯ ಪ್ರಮುಖ ಆದೇಶಗಳು ಮತ್ತು ನಿಬಂಧನೆಗಳು:

ಉಚಿತ ಮತ್ತು ಕಡ್ಡಾಯ ಶಿಕ್ಷಣ: 6 ರಿಂದ 14 ವರ್ಷ ವಯಸ್ಸಿನ ಪ್ರತಿಯೊಂದು ಮಗುವಿಗೆ ಸಮೀಪದ ಶಾಲೆಯಲ್ಲಿ 8ನೇ ತರಗತಿಯವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕಿದೆ.

ಖಾಸಗಿ ಶಾಲೆಗಳಲ್ಲಿ 25% ಮೀಸಲಾತಿ: ಅನುದಾನ ರಹಿತ ಖಾಸಗಿ ಶಾಲೆಗಳು ಪ್ರವೇಶ ಹಂತದಲ್ಲಿ (ನರ್ಸರಿ ಅಥವಾ 1ನೇ ತರಗತಿ) 25% ಸೀಟುಗಳನ್ನು ಆರ್ಥಿಕವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗದ ಮಕ್ಕಳಿಗೆ ಉಚಿತವಾಗಿ ನೀಡಬೇಕು.

ಪ್ರವೇಶ ನಿಯಮಗಳು: ಪ್ರವೇಶ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಸಂದರ್ಶನ (Interview) ಅಥವಾ ಮಕ್ಕಳ/ಪೋಷಕರ ಆಯ್ಕೆ ಪ್ರಕ್ರಿಯೆ ಇರುವಂತಿಲ್ಲ. ಕ್ಯಾಪಿಟೇಶನ್ ಶುಲ್ಕ ಅಥವಾ ದೇಣಿಗೆ ಸಂಗ್ರಹಿಸುವುದು ನಿಷೇಧ.

ಮಕ್ಕಳನ್ನು ತಡೆಹಿಡಿಯುವಂತಿಲ್ಲ (No-detention): ಪ್ರಾಥಮಿಕ ಶಿಕ್ಷಣ ಪೂರ್ಣಗೊಳ್ಳುವವರೆಗೆ (8ನೇ ತರಗತಿಯವರೆಗೆ) ಯಾವುದೇ ಮಗುವನ್ನು ತರಗತಿಯಲ್ಲಿ ತಡೆಹಿಡಿಯುವಂತಿಲ್ಲ (Fail ಮಾಡಬಾರದು) ಅಥವಾ ಶಾಲೆಯಿಂದ ಹೊರಹಾಕುವಂತಿಲ್ಲ.

ವಯಸ್ಸಿಗೆ ಅನುಗುಣವಾದ ದಾಖಲಾತಿ: ಶಾಲೆಯಿಂದ ಹೊರಗುಳಿದ ಮಗುವನ್ನು (Out-of-school child) ಅವರ ವಯಸ್ಸಿಗೆ ಅನುಗುಣವಾದ ತರಗತಿಗೆ ನೇರವಾಗಿ ಪ್ರವೇಶ ನೀಡಬೇಕು.

ಗುಣಮಟ್ಟದ ಮಾನದಂಡಗಳು: ಶಾಲೆಗಳಲ್ಲಿ ಶಿಕ್ಷಕ-ವಿದ್ಯಾರ್ಥಿ ಅನುಪಾತ (Pupil-Teacher Ratio), ಪ್ರತ್ಯೇಕ ಶೌಚಾಲಯಗಳು, ಮತ್ತು ಕುಡಿಯುವ ನೀರಿನ ಸೌಲಭ್ಯ ಕಡ್ಡಾಯ.

ಕಾರ್ಯನಿರ್ವಹಣೆ: ಈ ಕಾಯ್ದೆಯು 1 ಏಪ್ರಿಲ್ 2010 ರಿಂದ ಜಾರಿಗೆ ಬಂದಿದೆ.

Good news for parents enrolling their children in school: Revised schedule for RTE enrollment announced!
Share. Facebook Twitter LinkedIn WhatsApp Email

Related Posts

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಇನ್ನು ಒಂದೇ ವ್ಯವಸ್ಥೆಯಡಿ ಸಿಗಲಿವೆ `ಭೂ ಪರಿವರ್ತನೆ, ಆಸ್ತಿ ತೆರಿಗೆ’ ಸೇರಿ ಈ ಎಲ್ಲಾ ಸೇವೆಗಳು !

23/02/2026 6:52 AM3 Mins Read

SHOCKING : ಪೋಷಕರೇ ಎಚ್ಚರ : `ಲೂಡೋ’ ಆಡುವಾಗ ಕಾಯಿನ್ ನುಂಗಿ ಬಾಲಕಿ ಸಾವು !

23/02/2026 6:26 AM2 Mins Read

ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ’ ಬಗ್ಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

23/02/2026 6:19 AM1 Min Read
Recent News

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಇನ್ನು ಒಂದೇ ವ್ಯವಸ್ಥೆಯಡಿ ಸಿಗಲಿವೆ `ಭೂ ಪರಿವರ್ತನೆ, ಆಸ್ತಿ ತೆರಿಗೆ’ ಸೇರಿ ಈ ಎಲ್ಲಾ ಸೇವೆಗಳು !

23/02/2026 6:52 AM

ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್ : RTE ದಾಖಲಾತಿಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ !

23/02/2026 6:36 AM

SHOCKING : ಪೋಷಕರೇ ಎಚ್ಚರ : `ಲೂಡೋ’ ಆಡುವಾಗ ಕಾಯಿನ್ ನುಂಗಿ ಬಾಲಕಿ ಸಾವು !

23/02/2026 6:26 AM

ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ’ ಬಗ್ಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

23/02/2026 6:19 AM
State News
KARNATAKA

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಇನ್ನು ಒಂದೇ ವ್ಯವಸ್ಥೆಯಡಿ ಸಿಗಲಿವೆ `ಭೂ ಪರಿವರ್ತನೆ, ಆಸ್ತಿ ತೆರಿಗೆ’ ಸೇರಿ ಈ ಎಲ್ಲಾ ಸೇವೆಗಳು !

By kannadanewsnow5723/02/2026 6:52 AM KARNATAKA 3 Mins Read

ಬೆಂಗಳೂರು: ಭೂಮಿಗೆ ಸಂಬಂಧಿಸಿದ ಸರ್ಕಾರದ ಎಲ್ಲಾ ಸೇವೆಗಳನ್ನು ಒಂದೇ ವ್ಯವಸ್ಥೆಯ ಅಡಿಯಲ್ಲಿ ತರುವ ಮಹಾತ್ವಕಾಂಕ್ಷಿ ULMS (Unified Land Management System)…

ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್ : RTE ದಾಖಲಾತಿಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ !

23/02/2026 6:36 AM

SHOCKING : ಪೋಷಕರೇ ಎಚ್ಚರ : `ಲೂಡೋ’ ಆಡುವಾಗ ಕಾಯಿನ್ ನುಂಗಿ ಬಾಲಕಿ ಸಾವು !

23/02/2026 6:26 AM

ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ’ ಬಗ್ಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

23/02/2026 6:19 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.