ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರ ಬೆನ್ನಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ನಿಂತಿದ್ದಾರೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೊರಡಿಸಿರುವಂತ ಟಿಪ್ಪಣಿಯು ಮಲೆನಾಡಿನ ಜನರ ವಿರುದ್ಧವಾಗಿದೆ. ಹೀಗಾಗಿ ಮುಂದಿನ ಶಾಸನೀಯ ಕ್ರಮ ಜರುಗಿಸುವವರೆಗೆ ವಾಪಾಸ್ಸು ಪಡೆಯುವಂತೆ ಪತ್ರದಲ್ಲಿ ಕೋರಿದ್ದಾರೆ.
ಈ ಕುರಿತಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಪತ್ರ ಬರೆದಿರುವಂತ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಶಿವಮೊಗ್ಗ ಜಿಲ್ಲೆಯ ಶರಾವತಿ ವಿದ್ಯುತ್ ಯೋಜನೆಗಾಗಿ ಅರಣ್ಯ ಇಲಾಖೆಯಿಂದ 50 ವರ್ಷಗಳ ಹಿಂದೆ ಕರ್ನಾಟಕ ಪವರ್ ಕಾರ್ಪೊರೇಷನ್ (ಕೆ.ಪಿ.ಸಿ.)ಗೆ ಸುಮಾರು 2 ಲಕ್ಷ ಎಕರೆಗೂ ಹೆಚ್ಚು ಭೂಮಿಯನ್ನು ನೀಡಲಾಗಿದ್ದು, ಈ ಪೈಕಿ ಕೆ.ಪಿ.ಸಿ. 20 ಸಾವಿರ ಎಕರೆ ಭೂಮಿಯನ್ನು ಬಳಕೆ ಮಾಡಿರುವುದಿಲ್ಲ. ಹೀಗಾಗಿ ಅನಾಥವಾಗಿರುವ ಭೂಮಿಯನ್ನು ಪಟ್ಟಭದ್ರ ಹಿತಾಸಕ್ತಿಗಳು ಒತ್ತುವರಿ ಮಾಡುತ್ತಿದ್ದಾರೆ ಎಂದು ದಿನಪತ್ರಿಕೆಯಲ್ಲಿ ವರದಿ ಪಕಟವಾಗಿದೆ ಎಂದಿದ್ದಾರೆ.
ವೃಕ್ಷ ಲಕ್ಷ ಆಂದೋಲನದ ಅನಂತ ಹೆಗಡೆ ಅಶೀಸರ ಅವರು ಕೂಡ ಈ ಸಂಬಂಧ ಸಚಿವಾಲಯಕ್ಕೆ ಪತ್ರ ಬರೆದಿರುತ್ತಾರೆ. ಈ ಬಗ್ಗೆ ತಾವು ನಿಯಮಾನುಸಾರ ಯಾವುದೇ ಯೋಜನೆಗೆ ಮಂಜೂರಾದ ಭೂಮಿಯನ್ನು ಬಳಕೆ ಮಾಡದೇ ಇದ್ದ ಪಕ್ಷದಲ್ಲಿ ಆ ಭೂಮಿಯನ್ನು ಅರಣ್ಯ ಇಲಾಖೆಗೆ ಹಿಂತಿರುಗಿಸಬೇಕಾಗುತ್ತದೆ. 20 ಸಾವಿರ ಎಕರ ಬಳಕೆ ಆಗದೆ ಇದ್ದಲ್ಲಿ ಮತ್ತು ಇದನ್ನು ಯಾರಾದರೂ ಒತ್ತುವರಿ ಮಾಡಿದ್ದಲ್ಲಿ ಪರಿಶೀಲಿಸಿ, ಅರಣ್ಯ ಇಲಾಖೆಗೆ ನಿಯಮಾನುಸಾರ ಹಿಂಪಡೆಯಲು ಟಿಪ್ಪಣಿ ನೀಡಿದ್ದು, ಈ ಬಗ್ಗೆ ಈ ಕೆಳಗಿನಂತೆ ಸೃಷ್ಟಿಕರಣ ನೀಡಲಾಗಿದೆ ಎಂದು ಹೇಳಿದ್ದಾರೆ.
ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 50 ವರ್ಷಗಳ ಹಿಂದೆ ಈ ರಾಜ್ಯದ ಬೆಳಕಿಗಾಗಿ ತ್ಯಾಗ ಮಾಡಿದ ಶರಾವತಿ ಯೋಜನೆಯ ಸಂತ್ರಸ್ತರು ರೈತರಾಗಿರುತ್ತಾರೆ. ಶರಾವತಿ ಯೋಜನೆಯಲ್ಲಿ ಜಮೀನನ್ನು ಕಳೆದುಕೊಂಡ ಅನೇಕರಿಗೆ ಇಂದಿಗೂ ಸಾಗುವಳಿ ಚೀಟಿ ಅಥವಾ ಭೂಮಿ ಹಕ್ಕುಪತ್ರ ಸಿಕ್ಕಿರುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ.
ಸದರಿ ಭೂಮಿಯನ್ನು ಯಾವುದೇ ಭೂ ಮಾಫಿಯಾದವರು ಅಥವಾ ಪಟ್ಟಭದ್ರ ಹಿತಾಸಕ್ತಿಗಳು ಒತ್ತುವರಿ ಮಾಡಿರುವುದಿಲ್ಲ. ಸುಮಾರು 15 ಸಾವಿರ ಸಣ್ಣ ಹಿಡುವಳಿದಾರರು ಭೂಮಿಯನ್ನು ಉಳುಮೆ ಮಾಡಿಕೊಂಡು ತಮ್ಮ ಬದುಕನ್ನು ಕಟ್ಟಿಕೊಂಡಿರುತ್ತಾರೆ. ಹಾಗಾಗಿ ತಮ್ಮ ಪತ್ರದ ನಿಲುವು ಮಲೆನಾಡಿನ ಜನರ ವಿರುದ್ಧವಾಗಿದ್ದು, ಮುಂದಿನ ಶಾಸನೀಯ ಕ್ರಮ ಜರುಗಿಸುವರೆಗೆ ತಮ್ಮ ಟಿಪ್ಪಣಿಯನ್ನು ವಾಪಾಸ್ಸು ಪಡೆಯುವಂತೆ ಕೋರಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು


ಸಾಗರ, ಹೊಸನಗರಕ್ಕೆ ಸರ್ಕಾರ ಬಂಫರ್ ಗಿಫ್ಟ್: ವಿವಿಧ ಕಾಮಗಾರಿಗೆ ‘20.17 ಕೋಟಿ ಅನುದಾನ’ ಮಂಜೂರು
BREAKING : ಅಬಕಾರಿ ಬಳಿಕ ‘RTO’ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ : ತಪಾಸಣೆ ಮಾಡದೇ ವಾಹನಗಳಿಗೆ ‘FC’ ವಿತರಣೆ!
BIG NEWS : ಇಷ್ಟು ಮೊತ್ತದ ಬ್ಯಾಂಕ್ ವಹಿವಾಟುಗಳಿಗೆ ಇನ್ಮುಂದೆ `ಪ್ಯಾನ್ ಕಾರ್ಡ್’ ಅಗತ್ಯವಿಲ್ಲ : ಹೊಸ ರೂಲ್ಸ್ ಜಾರಿ !








