ಶಿವಮೊಗ್ಗ: ರಾಜ್ಯ ಸರ್ಕಾರದಿಂದ ಸಾಗರ, ಹೊಸನಗರಕ್ಕೆ ಬಂಫರ್ ಗಿಫ್ಟ್ ನೀಡಿದೆ. ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳೋದಕ್ಕೆ ಬರೋಬ್ಬರಿ 20.17 ಕೋಟಿ ಅನುದಾನ ಮಂಜೂರು ಮಾಡಲಾಗಿದೆ.
ಈ ಕುರಿತಂತೆ ಶಿವಮೊಗ್ಗ ಜಿಲ್ಲಾಧಿಕಾರಿಗಳು ಅಧಿಕೃತ ಜ್ಞಾಪನವನ್ನು ಹೊರಡಿಸಿದ್ದು, ಅದರಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005 ರಂತ ರಚಿಸಿರುವ ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರದಡಿ ಮಾರ್ಗಸೂಚಿಗಳಂತೆ ರಾಜ್ಯ ಸರ್ಕಾರವು ನಿರ್ದಿಷ್ಟ ಸ್ಥಳೀಯ ಯೋಜನೆಗಳ ಉದ್ದೇಶಕ್ಕೆ ಬಳಸಿಕೊಳ್ಳಲು ಅವಕಾಶವಿರುತ್ತದೆ. ಈ ಸಂಬಂಧ ಆಯುಕ್ತರು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಹಾಗೂ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳು, ಕಂದಾಯ ಇಲಾಖೆ ಬೆಂಗಳೂರು ರವರ ಉಲ್ಲೇಖ (1) ರ ಪತ್ರದಂತೆ ಜಿಲ್ಲೆಯ ಭೂಕುಸಿತ ತಡೆಗಟ್ಟುವಿಕ ರಚನಾತ್ಮಕ ಕಾರ್ಯಗಳಿಗೆ ಅಗತ್ಯವಿರುವ ಅಂದಾಜು ವೆಚ್ಚದ ವಿವರವನ್ನು ಉಲ್ಲೇಖ (2) ರ ಪ್ರಸ್ತಾವನೆಯಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು ಎಂದಿದ್ದಾರೆ.
ಸರ್ಕಾರದ ಆದೇಶದಲ್ಲಿ ಶಿವಮೊಗ್ಗ ಜಿಲ್ಲೆಯ 84 ಕಾಮಗಾರಿಗಳಿಗೆ ರೂ 95.30 ಕೋಟಿಗಳನ್ನು ಮಂಜೂರು ಮಾಡಿ ಬಿಡುಗಡೆ ಮಾಡಿರುತ್ತಾರೆ. ಉಲ್ಲೇಖ (3) ಈ ಕಛೇರಿ ಅಧಿಕೃತ ಜ್ಞಾಪನದಂತೆ 55 ಕಾಮಗಾಮಗಳಿಗೆ ಕರ್ನಾಟಕ ಸಾರ್ವಜನಿಕ ಸಂಗ್ರಹಗಳಲ್ಲಿ ಪಾರದರ್ಶಕ ಅಧಿನಿಯಮ-1999 ರ ಪ್ರಕಾರ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಆಹ್ವಾನಿಸಿ ನಿಯಮಗಳಂತೆ ಕ್ರಮವಹಿಸಲು ಅನುಷ್ಟಾನಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಉಳಿದ 29 ಕಾಮಗಾರಿಗಳಿಗೆ ಅನುಮೋದನೆ ನೀಡಲು ಉಲ್ಲೇಖ (4) ಮತ್ತು (5) ರ ಪತ್ರಗಳಲ್ಲಿ ಕಾಮಗಾರಿಯ ವಿವರಗಳೊಂದಿಗೆ ಅನುಷ್ಟಾನಾಧಿಕಾರಿಗಳನ್ನು ಸೂಚಿಸಿ ಮಾನ್ಯ ಶಾಸಕರು ತೀರ್ಥಹಳ್ಳಿ ಮತ್ತು ಸಾಗರ ವಿಧಾನಸಭಾ ಕ್ಷೇತ್ರ ರವರು ಕೋರಿರುತ್ತಾರೆ. ಶಾಸಕರುರವರು ಕೋರಿರುವಂತೆ ಪರಿಶೀಲಿಸಿ, ಜಿಲ್ಲಾ ವಿಪತ್ತು ನಿರ್ವಹಣಾ (DDMP) ಸಭೆಯಲ್ಲಿ ಚರ್ಚಿಸಿ ಅನುಷ್ಟಾನಾಧಿಕಾರಿಗಳಿಗೆ ಸರ್ಕಾರದ ಆದೇಶದಲ್ಲಿರುವಂತ ಷರತ್ತಿಗೊಳಪಡಿಸಿ ಈ ಕೆಳಕಂಡ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಅನುಮೋದನೆಯಾದ ಮೊತ್ತಕ್ಕ ಶೇ 50% ರಷ್ಟು ಅನುದಾನವನ್ನು ಅನಷ್ಟಾನಾಧಿಕಾರಿಗಳಿಗೆ ಕೆ-2 ಮೂಲಕ ಅನುದಾನ ಬಿಡುಗಡೆ ಮಾಡಿದೆ ಎಂದು ಹೇಳಿದ್ದಾರೆ.



‘ಶಕ್ತಿ ಯೋಜನೆ ಫಲಾನುಭವಿ’ಗಳಿಗೆ ಆಧಾರ್ ಬದಲು ‘ಸ್ಮಾರ್ಟ್ ಕಾರ್ಡ್’: ಉಚಿತವಾಗಿ ವಿತರಣೆ
BREAKING : ಅಬಕಾರಿ ಬಳಿಕ ‘RTO’ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ : ತಪಾಸಣೆ ಮಾಡದೇ ವಾಹನಗಳಿಗೆ ‘FC’ ವಿತರಣೆ!








