ಬೆಂಗಳೂರು: ಕೌಟುಂಬಿಕ ಕಲಹದಿಂದಾಗಿ ತನ್ನ ಅಣ್ಣನನ್ನೇ ಚಾಕುವಿನಿಂದ ಇರಿದು ತಮ್ಮನೊಬ್ಬ ಕೊಲೆಗೈದಿರುವಂತ ಘಟನೆ ಮೈಲಸಂದ್ರದಲ್ಲಿ ನಡೆದಿದೆ. ಆ ಮೂಲಕ ಬೆಂಗಳೂರು ಜನತೆ ಬೆಚ್ಚಿ ಬೀಳುವಂತೆ ಮಾಡಿದೆ.
ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಮೈಲಸಂದ್ರದಲ್ಲಿ ಈ ಘಟನೆ ನಡೆದಿದೆ. ಕೆಲಸದಿಂದ ಮನೆಗೆ ಮರಳಿದಂತ ಅಣ್ಣ ಬಾಲರಾಜ್ ಮೇಲೆ ತಮ್ಮ ಆಂಥೋನಿ ರಾಜ್ ಚಾಕುವಿನಿಂದ ಈ ದಾಳಿ ನಡೆಸಿದ್ದಾನೆ.
ಹಿಂದಿನಿಂದ ಅಣ್ಣ ಬಾಲರಾಜ್ ಒದ್ದಿರುವಂತ ತಮ್ಮ ಆಂಥೋನಿ ರಾಜ್ ಮನಬಂದಂತೆ ಹೊಟ್ಟೆ ಸೇರಿದಂತೆ ಇತರೆ ಭಾಗಗಳಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ.
ತೀವ್ರ ರಕ್ತಸ್ತ್ರಾವದಿಂದ ಅಣ್ಣ ಬಾಲರಾಜ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿರೋದಾಗಿ ಹೇಳಲಾಗುತ್ತಿದೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING: 54 ನಿಗಮ, ಮಂಡಳಿ ಅಧ್ಯಕ್ಷರಿಗೆ ಬಂಫರ್ ಗಿಫ್ಟ್: ರಾಜ್ಯ ಸಚಿವರ ಸ್ಥಾನಮಾನ ನೀಡಿ ಸರ್ಕಾರ ಆದೇಶ








