Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮುಂದಿನ ಪ್ರಧಾನಿ, ಮುಖ್ಯಮಂತ್ರಿ ಹಾಸನದಿಂದಲೇ ಬರುವ ಸಾಧ್ಯತೆ ಇದೆ: ಶಿವಯೋಗಿ ಸ್ವಾಮೀಜಿ ಭವಿಷ್ಯ!

07/02/2026 10:28 AM

ಮೈಸೂರಿಗೆ ಜಾಗತಿಕ ಕಿರುಚಿತ್ರ–ಸಾಕ್ಷ್ಯಚಿತ್ರಗಳ ಕಲರವ; ಫೆ.20ರಿಂದ ‘ಪರಿದೃಶ್ಯ–2026’

07/02/2026 10:17 AM

ALERT: ರಾತ್ರಿಯಲ್ಲಿ `ಲೈಟ್’ ಆನ್ ಮಾಡಿಕೊಂಡು ಮಲಗುವವರೇ ಎಚ್ಚರ : `ಕ್ಯಾನ್ಸರ್’ ಬರಬಹುದು.!

07/02/2026 10:11 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೈಸೂರಿಗೆ ಜಾಗತಿಕ ಕಿರುಚಿತ್ರ–ಸಾಕ್ಷ್ಯಚಿತ್ರಗಳ ಕಲರವ; ಫೆ.20ರಿಂದ ‘ಪರಿದೃಶ್ಯ–2026’
KARNATAKA

ಮೈಸೂರಿಗೆ ಜಾಗತಿಕ ಕಿರುಚಿತ್ರ–ಸಾಕ್ಷ್ಯಚಿತ್ರಗಳ ಕಲರವ; ಫೆ.20ರಿಂದ ‘ಪರಿದೃಶ್ಯ–2026’

By kannadanewsnow0907/02/2026 10:17 AM

ಮೈಸೂರು: ಜಗತ್ತಿನ ವಿವಿಧ ದೇಶಗಳ ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ‘ಪರಿದೃಶ್ಯ–2026’ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ದಸರಾ ನಗರಿ ಮೈಸೂರು ಸಜ್ಜಾಗುತ್ತಿದೆ. ಫೆಬ್ರವರಿ 20ರಿಂದ 22ರವರೆಗೆ ಐತಿಹಾಸಿಕ ಮಹಾರಾಜ ಕಾಲೇಜು ಮೈದಾನದಲ್ಲಿ ಉತ್ಸವ ನಡೆಯಲಿದೆ.

ಮೈಸೂರು ಸಿನಿಮಾ ಸೊಸೈಟಿ (ಎಂಸಿಎಸ್) ಆಯೋಜಿಸಿರುವ ಈ ನಾಲ್ಕನೇ ಆವೃತ್ತಿಯ ಉತ್ಸವದಲ್ಲಿ ಭಾರತ ಸೇರಿದಂತೆ 114 ದೇಶಗಳಿಂದ ಆಯ್ಕೆಯಾದ ಕಿರುಚಿತ್ರಗಳು ಹಾಗೂ ಸಾಕ್ಷ್ಯಚಿತ್ರಗಳ ಪ್ರದರ್ಶನ ನಡೆಯಲಿದೆ. ಪ್ರೇಕ್ಷಕರ ಹೆಚ್ಚಿನ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಬಾರಿ ವಿಶಾಲ ಸ್ಥಳವನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

‘ಪರಿದೃಶ್ಯ’ ಉತ್ಸವವು ವರ್ಷದಿಂದ ವರ್ಷಕ್ಕೆ ಯಶೋಗಾಥೆ ಬರೆಯುತ್ತಿದೆ. ಮೊದಲ ಆವೃತ್ತಿಯಲ್ಲಿ 10 ದೇಶಗಳಿಂದ 150 ಚಿತ್ರಗಳು ಪ್ರದರ್ಶನಗೊಂಡಿದ್ದರೆ, ಮೂರನೇ ಆವೃತ್ತಿಯಲ್ಲಿ 109 ದೇಶಗಳಿಂದ 3,100ಕ್ಕೂ ಹೆಚ್ಚು ಚಿತ್ರಗಳು ಭಾಗವಹಿಸಿದ್ದವು. 2026ರ ಆವೃತ್ತಿಗೆ 114 ದೇಶಗಳಿಂದ 3,000ಕ್ಕೂ ಅಧಿಕ ಚಿತ್ರಗಳ ಭಾಗವಹಿಸುವಿಕೆಗೆ ಪ್ರಸ್ತಾವನೆಗಳು ಬಂದಿರುವುದು ಕುತೂಹಲಕಾರಿ ಬೆಳವಣಿಗೆ.

ಉತ್ಸವ ನಿರ್ದೇಶಕಿ ಹಾಗೂ ಮೈಸೂರು ಸಿನಿಮಾ ಸೊಸೈಟಿಯ ಗೌರವ ಕಾರ್ಯದರ್ಶಿ ಪದ್ಮಾವತಿ ಎಸ್. ಭಟ್ ಅವರು ‘ಪರಿದೃಶ್ಯ’ ಕುರಿತಂತೆ ಮಹತ್ವದ ಸಂಗತಿಗಳನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ. ‘ಕ್ಷಕರು, ವಿದ್ಯಾರ್ಥಿಗಳು ಹಾಗೂ ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ಮಾಪಕರಿಗೆ ಕಲಿಕೆಯ ಜೊತೆಗೆ ಸಾಂಸ್ಕೃತಿಕ ಅನುಭವ ನೀಡುವ ಉದ್ದೇಶದಿಂದ ‘ಪರಿದೃಶ್ಯ’ ರೂಪಿಸಲಾಗಿದೆ ಎಂದವರು ತಿಳಿಸಿದ್ದಾರೆ.

ಉತ್ಸವದ ಭಾಗವಾಗಿ

* ಕ್ಯುರೇಟೆಡ್ ಭಾರತೀಯ ಮತ್ತು ಅಂತರರಾಷ್ಟ್ರೀಯ ಚಿತ್ರ ಪ್ರದರ್ಶನಗಳು
* ಚಿತ್ರೋದ್ಯಮ ತಜ್ಞರಿಂದ ಮಾಸ್ಟರ್ ಕ್ಲಾಸ್‌ಗಳು
* ಫಲಕ ಚರ್ಚೆಗಳು ಮತ್ತು ವಿದ್ಯಾರ್ಥಿಗಳ ಸಂವಾದ
* ಕಲೆ ಹಾಗೂ ಸಾಂಸ್ಕೃತಿಕ ಅನುಭವಗಳು
* ಆಹಾರ ಮಳಿಗೆಗಳು ಮತ್ತು ಪ್ರದರ್ಶನಗಳು
* ಸಂಗೀತ ರಾತ್ರಿಗಳು
* ಪ್ರಶಸ್ತಿಪ್ರದಾನ ಸಮಾರಂಭಗಳು ನೆರವೇರಲಿವೆ.

ಸಿನಿಮಾವನ್ನು ಕಲಾ ಮಾಧ್ಯಮ ಮತ್ತು ಸಾಮಾಜಿಕ ಅಭಿವ್ಯಕ್ತಿಯ ರೂಪವಾಗಿ ಉತ್ತೇಜಿಸುವ ಗುರಿಯೊಂದಿಗೆ ಆಯೋಜಿಸಲಾಗಿರುವ ‘ಪರಿದೃಶ್ಯ–2026’ ಮೈಸೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳ ಸಿನಿಮಾ ಪ್ರೇಮಿಗಳ ಪಾಲಿಗೆ ವೈಭವದ ಹಬ್ಬದಂತಾಗಲಿದೆ. ಅದಕ್ಕೆ ತಕ್ಕಂತೆ ಸಿದ್ಧತೆಯೂ ಜೋರಾಗಿ ನಡೆದಿದೆ.

Share. Facebook Twitter LinkedIn WhatsApp Email

Related Posts

BREAKING : ಮುಂದಿನ ಪ್ರಧಾನಿ, ಮುಖ್ಯಮಂತ್ರಿ ಹಾಸನದಿಂದಲೇ ಬರುವ ಸಾಧ್ಯತೆ ಇದೆ: ಶಿವಯೋಗಿ ಸ್ವಾಮೀಜಿ ಭವಿಷ್ಯ!

07/02/2026 10:28 AM1 Min Read

ALERT: ರಾತ್ರಿಯಲ್ಲಿ `ಲೈಟ್’ ಆನ್ ಮಾಡಿಕೊಂಡು ಮಲಗುವವರೇ ಎಚ್ಚರ : `ಕ್ಯಾನ್ಸರ್’ ಬರಬಹುದು.!

07/02/2026 10:11 AM2 Mins Read

Property Rules : `ಆಸ್ತಿ ರಿಜಿಸ್ಟರ್​’ಗೆ ಇನ್ಮುಂದೆ ಈ 5 ದಾಖಲೆಗಳು ಕಡ್ಡಾಯ.!

07/02/2026 10:08 AM2 Mins Read
Recent News

BREAKING : ಮುಂದಿನ ಪ್ರಧಾನಿ, ಮುಖ್ಯಮಂತ್ರಿ ಹಾಸನದಿಂದಲೇ ಬರುವ ಸಾಧ್ಯತೆ ಇದೆ: ಶಿವಯೋಗಿ ಸ್ವಾಮೀಜಿ ಭವಿಷ್ಯ!

07/02/2026 10:28 AM

ಮೈಸೂರಿಗೆ ಜಾಗತಿಕ ಕಿರುಚಿತ್ರ–ಸಾಕ್ಷ್ಯಚಿತ್ರಗಳ ಕಲರವ; ಫೆ.20ರಿಂದ ‘ಪರಿದೃಶ್ಯ–2026’

07/02/2026 10:17 AM

ALERT: ರಾತ್ರಿಯಲ್ಲಿ `ಲೈಟ್’ ಆನ್ ಮಾಡಿಕೊಂಡು ಮಲಗುವವರೇ ಎಚ್ಚರ : `ಕ್ಯಾನ್ಸರ್’ ಬರಬಹುದು.!

07/02/2026 10:11 AM

Property Rules : `ಆಸ್ತಿ ರಿಜಿಸ್ಟರ್​’ಗೆ ಇನ್ಮುಂದೆ ಈ 5 ದಾಖಲೆಗಳು ಕಡ್ಡಾಯ.!

07/02/2026 10:08 AM
State News
KARNATAKA

BREAKING : ಮುಂದಿನ ಪ್ರಧಾನಿ, ಮುಖ್ಯಮಂತ್ರಿ ಹಾಸನದಿಂದಲೇ ಬರುವ ಸಾಧ್ಯತೆ ಇದೆ: ಶಿವಯೋಗಿ ಸ್ವಾಮೀಜಿ ಭವಿಷ್ಯ!

By kannadanewsnow0507/02/2026 10:28 AM KARNATAKA 1 Min Read

ಹಾಸನ : ಈಗಾಗಲೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಚರ್ಚೆ ಜೋರಾಗಿದ್ದು ಒಂದು ಕಡೆ ಐದು ವರ್ಷಗಳ ಕಾಲ ನಮ್ಮ…

ಮೈಸೂರಿಗೆ ಜಾಗತಿಕ ಕಿರುಚಿತ್ರ–ಸಾಕ್ಷ್ಯಚಿತ್ರಗಳ ಕಲರವ; ಫೆ.20ರಿಂದ ‘ಪರಿದೃಶ್ಯ–2026’

07/02/2026 10:17 AM

ALERT: ರಾತ್ರಿಯಲ್ಲಿ `ಲೈಟ್’ ಆನ್ ಮಾಡಿಕೊಂಡು ಮಲಗುವವರೇ ಎಚ್ಚರ : `ಕ್ಯಾನ್ಸರ್’ ಬರಬಹುದು.!

07/02/2026 10:11 AM

Property Rules : `ಆಸ್ತಿ ರಿಜಿಸ್ಟರ್​’ಗೆ ಇನ್ಮುಂದೆ ಈ 5 ದಾಖಲೆಗಳು ಕಡ್ಡಾಯ.!

07/02/2026 10:08 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.