ಬೆಂಗಳೂರು : ಬೆಂಗಳೂರಲ್ಲಿ ಘೋರ ಘಟನೆ ಸಂಭವಿಸಿದ್ದು, ಸಾಲಗಾರರ ಕಿರುಕುಳ ತಾಳದೇ ವಿಷ ಸೇವಿಸಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಸಾಲಗಾರರ ಕಿರುಕುಳ ತಾಳದೇ ಸೆಲ್ಫಿ ವಿಡಿಯೋ ಮಾಡಿಟ್ಟು ವಿಷ ಸೇವಿಸಿ ಬೆಂಗಳೂರಿನ ನೆಲಮಂಗಲದ ಕೃಷ್ಣಪ್ಪ (47) ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೃಷ್ಣಪ್ಪ 3 ವರ್ಷದಿಂದ ಪತ್ನಿ, ಮಕ್ಕಳ ಜೊತೆಗೆ ಹಾಸನದಲ್ಲಿ ನೆಲೆಸಿದ್ದರು. ನೆಲಮಂಗಲದ ರಮೇಶ್, ಮಂಜು ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದೆ. ವಿಡಿಯೋ ಮಾಡಿ ಪತ್ನಿಗೆ ಕಾಂಚಾನಾಗೆ ಕಳುಹಿಸಿ ಕೃಷ್ಣಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪಡೆದಿರುವ 1 ಲಕ್ಷ ರೂ. ಸಾಲಕ್ಕೆ 40 ಲಕ್ಷದ ಕೇಸ್ ಹಾಕಿದ್ದಾರೆ. 40 ಲಕ್ಷದ ಚೆಕ್ ಬೌನ್ಸ್ ಕೇಸ್ ಹಾಕಿದ್ದಾರೆಂದು ಉಲ್ಲೇಖಿಸಲಾಗಿದೆ. ಜಾಮೀನು ಪಡೆಯಲೂ ನನಗೆ ಹಣ ಹೊಂದಿಸಲು ಆಗಲ್ಲ. ಹೀಗಾಗಿ ನಾನು ಸಾಯುತ್ತಿದ್ದೇನೆ ಎಂದು ಸೆಲ್ಫಿ ವಿಡಿಯೋ ಮಾಡಿದ್ದಾರೆ. ನ್ನ ಸಾವಿರೆ ರಮೇಶ್, ಮಂಜು ಸಹೋದರರೇ ಕಾರಣ, ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕೆಂದು ಹೇಳಿದ್ದಾರೆ.








