Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಗೆ ಅರ್ಜಿ ಆಹ್ವಾನ

17/01/2026 6:20 PM

Health Tips: ನಮ್ಮ ಪೂರ್ವಿಕರು ಪಾಲನೆ ಮಾಡಿದ ಆರೋಗ್ಯದ ಗುಟ್ಟಿದು: ಈ ದಿನಚರಿ ಪಾಲಿಸಿದ್ರೆ ಕಾಯಿಲೆ ದೂರ ಗ್ಯಾರಂಟಿ

17/01/2026 6:12 PM

ವಾಹನ ಸವಾರರೇ ಎಚ್ಚರ ; ಏ.1ರಿಂದ ‘ಟೋಲ್ ಪ್ಲಾಜಾ’ಗಳಲ್ಲಿ ಹೊಸ ರೂಲ್ಸ್, ಫಾಸ್ಟ್ಟ್ಯಾಗ್ ಇಲ್ಲದೇ ವಾಹನ ಚಲಿಸೋಲ್ಲ!

17/01/2026 6:08 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Health Tips: ನಮ್ಮ ಪೂರ್ವಿಕರು ಪಾಲನೆ ಮಾಡಿದ ಆರೋಗ್ಯದ ಗುಟ್ಟಿದು: ಈ ದಿನಚರಿ ಪಾಲಿಸಿದ್ರೆ ಕಾಯಿಲೆ ದೂರ ಗ್ಯಾರಂಟಿ
KARNATAKA

Health Tips: ನಮ್ಮ ಪೂರ್ವಿಕರು ಪಾಲನೆ ಮಾಡಿದ ಆರೋಗ್ಯದ ಗುಟ್ಟಿದು: ಈ ದಿನಚರಿ ಪಾಲಿಸಿದ್ರೆ ಕಾಯಿಲೆ ದೂರ ಗ್ಯಾರಂಟಿ

By kannadanewsnow0917/01/2026 6:12 PM

ಕೆಎನ್ಎನ್ ಡಿಜಿಟಲ್ ಡೆಸ್ಕ್: ಡಾಕ್ಟರ್ ಇಲ್ಲದ ಕಾಲದಲ್ಲಿ ನಮ್ಮ ಪೂರ್ವಿಕರು ಪಾಲನೆ ಮಾಡಿದ ಆರೋಗ್ಯದ ಗುಟ್ಟು. ಆಯುರ್ವೇದದ ಈ ದಿನಚರಿ ಪಾಲನೆ ಮಾಡಿದವರು ನೂರಾರು ವರ್ಷ ಕಾಯಿಲೆ ಇಲ್ಲದೇ ಬದುಕಿದರು. ನೂರರ ಸಮೀಪದಲ್ಲೂ ಗಟ್ಟಿಯಾಗಿ ಆರೋಗ್ಯವಂತರಾಗಿದ್ದರು. ಆಯುರ್ವೇದದ ಪ್ರಕಾರ ದಿನಚರಿ (Daily Routine) ಎಂದರೆ ಕೇವಲ ಕೆಲಸ ಮಾಡುವುದಲ್ಲ, ಅದು ಪ್ರಕೃತಿಯೊಂದಿಗೆ ನಮ್ಮ ದೇಹವನ್ನು ಹೊಂದಿಸಿಕೊಳ್ಳುವ ವಿಧಾನವಾಗಿದೆ. ಆಯುರ್ವೇದದ ಪ್ರಕಾರ ನಿಮ್ಮ ದಿನವನ್ನು ಹೇಗೆ ಕಳೆಯಬೇಕು ಎಂಬ ಮಾಹಿತಿ ಇಲ್ಲಿದೆ:

​1. ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದು (Early Morning)
​ಸೂರ್ಯೋದಯಕ್ಕೆ ಸುಮಾರು 1.5 ಗಂಟೆಗಳ ಮೊದಲು (ಅಂದರೆ ಬೆಳಿಗ್ಗೆ 4:30 ರಿಂದ 5:30 ರ ನಡುವೆ) ಏಳುವುದು ಅತ್ಯುತ್ತಮ.
ಈ ಸಮಯದಲ್ಲಿ ವಾತಾವರಣವು ಶುದ್ಧವಾಗಿರುತ್ತದೆ ಮತ್ತು ಮನಸ್ಸು ಶಾಂತವಾಗಿರುತ್ತದೆ.

​2. ಮುಖ ಪ್ರಕ್ಷಾಲನ ಮತ್ತು ಹಲ್ಲುಜ್ಜುವುದು
​ಕಣ್ಣುಗಳು: ತಣ್ಣೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಿ.
​ಹಲ್ಲುಜ್ಜುವುದು: ಕಹಿ ಅಥವಾ ಒಗರು ರುಚಿಯ ಗಿಡಮೂಲಿಕೆಗಳ ಪುಡಿ ಅಥವಾ ಪೇಸ್ಟ್ ಬಳಸಿ.

​ನಾಲಿಗೆ ಸ್ವಚ್ಛತೆ: ನಾಲಿಗೆಯ ಮೇಲಿರುವ ಬಿಳಿ ಪದರವನ್ನು (ಆಮ) ತೆಗೆಯಲು ನಾಲಿಗೆಯನ್ನು ಸ್ವಚ್ಛಗೊಳಿಸಿ. ಇದು ಜೀರ್ಣಕ್ರಿಯೆಗೆ ಸಹಕಾರಿ.

​3. ಅಭ್ಯಂಗ (ತೈಲ ಮಸಾಜ್)
​ಸ್ನಾನಕ್ಕೆ ಮೊದಲು ಇಡೀ ದೇಹಕ್ಕೆ ಮೃದುವಾಗಿ ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಹಚ್ಚಿಕೊಳ್ಳಿ. ಇದು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ, ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಯುತ್ತದೆ.

​4. ವ್ಯಾಯಾಮ ಮತ್ತು ಸ್ನಾನ
​ನಿಮ್ಮ ಶಕ್ತಿಯ ಅರ್ಧದಷ್ಟು ಮಾತ್ರ ವ್ಯಾಯಾಮ ಮಾಡಿ (ಬೆವರುವವರೆಗೆ). ಯೋಗಾಸನ ಮತ್ತು ಪ್ರಾಣಾಯಾಮ ಅತ್ಯಂತ ಶ್ರೇಷ್ಠ.
​ನಂತರ ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ತಲೆಗೆ ಅತಿ ಬಿಸಿ ನೀರನ್ನು ಹಾಕಬೇಡಿ.

​5. ಆಹಾರ ಪದ್ಧತಿ
​ಉಪಹಾರ: ಬೆಳಿಗ್ಗೆ ಹಸಿವಾದಾಗ ಹಗುರವಾದ ಮತ್ತು ಪೌಷ್ಟಿಕಾಂಶಯುಕ್ತ ಉಪಹಾರ ಸೇವಿಸಿ.
​ಮಧ್ಯಾಹ್ನದ ಊಟ: ಇದು ದಿನದ ಅತಿ ಮುಖ್ಯ ಮತ್ತು ದೊಡ್ಡ ಆಹಾರವಾಗಿರಲಿ. ಏಕೆಂದರೆ ಮಧ್ಯಾಹ್ನ ಸೂರ್ಯನು ಪ್ರಬಲವಾಗಿರುವಾಗ ನಮ್ಮ ಜೀರ್ಣಶಕ್ತಿ (ಜಠರಾಗ್ನಿ) ಹೆಚ್ಚಿರುತ್ತದೆ.
​ರಾತ್ರಿ ಊಟ: ಸೂರ್ಯಾಸ್ತದ ನಂತರ ಅಥವಾ ಮಲಗುವ 2-3 ಗಂಟೆಗಳ ಮೊದಲು ಹಗುರವಾದ ಆಹಾರ ಸೇವಿಸಿ.

​6. ನಿದ್ರೆ (ಸರಿಯಾದ ಸಮಯಕ್ಕೆ ವಿಶ್ರಾಂತಿ)
​ರಾತ್ರಿ 10 ಗಂಟೆಯೊಳಗೆ ಮಲಗುವುದು ಸೂಕ್ತ. ಚೆನ್ನಾಗಿ ನಿದ್ರೆ ಮಾಡುವುದರಿಂದ ದೇಹದ ಅಂಗಾಂಶಗಳು ಪುನಶ್ಚೇತನಗೊಳ್ಳುತ್ತವೆ.

​ಗಮನಿಸಬೇಕಾದ ಪ್ರಮುಖ ಅಂಶಗಳು:
​ನೀರು: ಬಾಯಾರಿಕೆಯಾದಾಗ ಮಾತ್ರ ನೀರು ಕುಡಿಯಿರಿ. ಬೆಳಿಗ್ಗೆ ಎದ್ದ ತಕ್ಷಣ ಉಗುರುಬೆಚ್ಚಗಿನ ನೀರು ಕುಡಿಯುವುದು (ಉಷಾಪಾನ) ಮಲಬದ್ಧತೆಯನ್ನು ತಡೆಯುತ್ತದೆ.
​ಮನಸ್ಥಿತಿ: ಊಟ ಮಾಡುವಾಗ ಮತ್ತು ಕೆಲಸ ಮಾಡುವಾಗ ಶಾಂತವಾಗಿರಿ.

​ನೆನಪಿಡಿ: ಆಯುರ್ವೇದವು ಪ್ರತಿಯೊಬ್ಬರ ದೇಹದ ಪ್ರಕೃತಿಗೆ (ವಾತ, ಪಿತ್ತ, ಕಫ) ಅನುಗುಣವಾಗಿ ಬದಲಾಗುತ್ತದೆ.

ಕೂತರೇ ನಿಂತರೇ ಡಾಕ್ಟರ್ ಬಳಿ ಓಡ ಬೇಡಿ: ಅಂಗೈಯಲ್ಲಿ ಆರೋಗ್ಯ, ನಿಮ್ಮ ಆರೋಗ್ಯ ನಿಮ್ಮ ಕೈಲಿ ಇರುವಾಗ ಕಾಪಾಡ್ಕೋಳ್ಳಿ:

▪️ಬಿಕ್ಕಳಿಕೆ ಬರುವುದೇ: ಹುರುಳಿ ಕಷಾಯ ಸೇವಿಸಿರಿ.
▪️ಕಫ ಬರುವುದೇ: ಶುಂಠಿ ಕಷಾಯ ಸೇವಿಸಿರಿ.
▪️ಹೊಟ್ಟೆಯಲ್ಲಿ ಹರಳಾದರೇ: ಬಾಳೆದಿಂಡಿನ ಪಲ್ಯ ಸೇವಿಸಿರಿ.
▪️ಬಿಳಿ ಕೂದಲು: ಮೂಗಿನಲ್ಲಿ ಬೇವಿನ ಎಣ್ಣೆ ಹಾಕಿರಿ.
▪️ಮರೆವು ಬರುವುದೇ: ನಿತ್ಯ ಸೇವಿಸಿ ಜೇನು.
▪️ಕೋಪ ಬರುವುದೇ: ಕಾಳು ಮೆಣಸು ಸೇವಿಸಿ.
▪️ಮೂಲವ್ಯಾಧಿಯೇ: ನಿತ್ಯ ಸೇವಿಸಿ ಎಳ್ಳು.
▪️ಮುಪ್ಪು ಬೇಡವೇ: ಗರಿಕೆ ರಸ ಸೇವಿಸಿ.
▪️ನಿಶಕ್ತಿಯೇ: ದೇಶಿ ಆಕಳ ಹಾಲು ಸೇವಿಸಿ.
▪️ಇರುಳುಗಣ್ಣು ಇದೆಯೇ: ತುಲಸಿ ರಸ ಕಣ್ಣಿಗೆ ಹಾಕಿ.
▪️ಕುಳ್ಳಗಿರುವಿರೇ: ನಿತ್ಯ ಸೇವಿಸಿ ನಿಂಬೆ ಹಣ್ಣು.
▪️ತೆಳ್ಳಗಿರುವಿರೆ: ನಿತ್ಯ ಸೇವಿಸಿ ಸೀತಾ ಫಲ.
▪️ತೆಳ್ಳಗಾಗಬೇಕೇ: ನಿತ್ಯ ಸೇವಿಸಿ ಬಿಸಿ ನೀರು.
▪️ಹಸಿವಿಲ್ಲವೇ: ನಿತ್ಯ ಸೇವಿಸಿ ಓಂ ಕಾಳು.
▪️ತುಂಬಾ ಹಸಿವೇ: ಸೇವಿಸಿ ಹಸಿ ಶೇಂಗಾ.
▪️ಬಾಯಾರಿಕೆಯೇ: ಸೇವಿಸಿ ತುಳಸಿ.
▪️ಬಾಯಾರಿಕೆ ಇಲ್ಲವೇ: ಸೇವಿಸಿ ಬೆಲ್ಲ.
▪️ಸಕ್ಕರೆ ಕಾಯಿಲೆಯೇ: ಬಿಡಿ ಸಕ್ಕರೆ, ಸೇವಿಸಿ ರಾಗಿ.
▪️ರಕ್ತ ಹೀನತೆಯೇ: ನಿತ್ಯ ಸೇವಿಸಿ ಪಾಲಕ್ ಸೊಪ್ಪು.
▪️ತಲೆ ಸುತ್ತುವುದೇ: ಬೆಳ್ಳುಳ್ಳಿ ಕಷಾಯ ಸೇವಿಸಿ.
▪️ಬಂಜೆತನವೇ: ಔದುಂಬರ ಚಕ್ಕೆ ಕಷಾಯ
▪️ಸ್ವಪ್ನ ದೋಷವೇ: ತುಳಸಿ ಕಷಾಯ ಸೇವಿಸಿ.
▪️ಅಲರ್ಜಿ ಇದೆಯೇ: ಅಮೃತ ಬಳ್ಳಿ ಕಷಾಯ ಸೇವಿಸಿ.
▪️ಹೃದಯ ದೌರ್ಬಲವೇ: ಸೋರೆಕಾಯಿ ರಸ ಸೇವಿಸಿ.
▪️ರಕ್ತ ದೋಷವೇ: ಕೇಸರಿ ಹಾಲು ಸೇವಿಸಿ.
▪️ದುರ್ಗಂಧವೇ: ಹೆಸರು ಹಿಟ್ಟು ಸ್ನಾನ ಮಾಡಿ.
▪️ಕೋಳಿ ಜ್ವರಕ್ಕೆ: ತುಳಸಿ,ಅಮೃತ ಬಳ್ಳಿ ಕಷಾಯ ಸೇವಿಸಿ.
▪️ಕಾಲಲ್ಲಿ ಆಣಿ ಇದೆಯೇ: ಉತ್ತರಾಣಿ ಸೊಪ್ಪು ಕಟ್ಟಿರಿ.
▪️ಮೊಣಕಾಲು ನೋವು: ನಿತ್ಯ ಮಾಡಿ ವಜ್ರಾಸನ.
▪️ಸಂಕಟ ಆಗುವುದೇ: ಎಳನೀರು ಸೇವಿಸಿ.
▪️ಮಗು ಹಾಸಿಗೆಯಲ್ಲಿ ಮೂತ್ರ ಮಾಡುವುದೇ: ನಿತ್ಯ ಕೊಡಿ ಜೇನು.
▪️ಜಲ ಶುದ್ಧಿ ಮಾಡಬೇಕೇ: ತಾಮ್ರದ ಪಾತ್ರೆಯಲ್ಲಿ ನೀರು ಹಾಕಿ, ಅದರಲ್ಲಿ ತುಳಸಿ ಎಲೆ ಹಾಕಿರಿ.
▪️ವಾಂತಿಯಾಗುವುದೇ: ಎಳನೀರು-ಜೇನು ಸೇವಿಸಿ.
▪️ಭೇದಿ ತುಂಬಾ ಆಗುವುದೇ: ಅನ್ನ ಮಜ್ಜಿಗೆ ಊಟ ಮಾಡಿ.
▪️ಹಲ್ಲು ಸಡಿಲವೇ: ದಾಳಿಂಬೆ ಸಿಪ್ಪೆಯ ಕಷಾಯ ಸೇವಿಸಿ.
▪️ಕಾಮಾಲೆ ರೋಗವೇ: ನಿತ್ಯ ಮೊಸರು ಸೇವಿಸಿ.
▪️ಉಗುರು ಸುತ್ತು ಇದೆಯೇ: ನಿಂಬೆ ಹಣ್ಣಿನ ಒಳಗೆ ಬೆರಳು ಇಡಿ.
▪️ಎದೆ ಹಾಲಿನ ಕೊರತೆಯೇ: ನಿತ್ಯ ಸೇವಿಸಿ ಎಳ್ಳು.
▪️ಎಲುಬುಗಳ ನೋವೇ: ನಿತ್ಯ ಸೇವಿಸಿ ಮೆಂತ್ಯೆ ಬೆಳ್ಳುಳ್ಳಿ.
▪️ತುಟಿ ಸೀಳಿದಿಯೇ: ಹಾಲಿನ ಕೆನೆ ಹಚ್ಚಿರಿ.
▪️ಪಿತ್ತವೇ: ಚಹಾ ಬಿಟ್ಟುಬಿಡಿ.
▪️ಉಷ್ಣವೇ: ಕಾಫಿ ಬಿಟ್ಟುಬಿಡಿ.
▪️ಚಂಚಲವೇ: ನಾಸಿಕದಲ್ಲಿ ದೇಶಿ ತುಪ್ಪ ಹಾಕಿ.
▪️ಬಹು ಮೂತ್ರವೇ: ದಾಲ್ಚಿನ್ನಿ ಕಷಾಯ ಸೇವಿಸಿ.
▪️ಮೂತ್ರ ತಡೆಗೆ: ಜೀರಿಗೆ ಕಷಾಯ ಸೇವಿಸಿ.
▪️ಆಯಾಸವೇ: ಅಭ್ಯಂಗ ಸ್ನಾನ ಮಾಡಿ
▪️ಹಿಮ್ಮಡಿ ಸೀಳುವುದೇ: ಔಡಲ ಎಣ್ಣೆ ಸುಣ್ಣ ಕಲಸಿ ಲೇಪಿಸಿ.

ಸಸ್ಯಸಂಪತ್ತು ನಮ್ಮಲ್ಲಿ ವಿರಳವಾಗಿ ಕಂಡುಬರುತ್ತಿದೆ. ಇತ್ತೀಚೆಗೆ ನಮಗೆ ಅವುಗಳ ಹೆಸರಾಗಲಿ ಉಪಯೋಗವಾಗಲಿ ಗೊತ್ತಾಗುತ್ತಿಲ್ಲ. ಇಂದು ಬಹುತೇಕ ಜನತೆ ಚಿಕ್ಕಪುಟ್ಟ ರೋಗಗಳಿಗೂ ಮಾತ್ರೆಗಳನ್ನು ಸಿಕ್ಕಾಪಟ್ಟೆ ತಿನ್ನುತ್ತಾರೆ. ನಮ್ಮ ಸುತ್ತಮುತ್ತಲೂ ಇರುವ ಅನೇಕ ಔಷಧೀಯ ಗುಣಗಳುಳ್ಳ ಗಿಡಮೂಲಿಕೆಗಳನ್ನು ಕಡೆಗಣಿಸುತ್ತಾರೆ. ಏಕೆಂದರೆ, ಬಹುತೇಕ ಜನರಿಗೆ ಆ ಗಿಡಗಳ ಹೆಸರಾಗಲಿ ಅದರ ಉಪಯೋಗಗಳಾಗಲಿ ತಿಳಿದಿಲ್ಲ. ಕೇವಲ ಸಸ್ಯಗಳು ಮತ್ತು ಅವುಗಳಿಗೆ ಕನ್ನಡದಲ್ಲಿ ಬಳಸುವ ಹೆಸರುಗಳಿವೆ. ನಿಖರವಾಗಿ ಇದರ ಉಪಯೋಗ ಗೊತ್ತಿದ್ದವರು ಅದರ ವಿವರಣೆಯನ್ನು – ಉಪಯೋಗವನ್ನು ತಿಳಿಸಬಹುದು.

Share. Facebook Twitter LinkedIn WhatsApp Email

Related Posts

ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಗೆ ಅರ್ಜಿ ಆಹ್ವಾನ

17/01/2026 6:20 PM1 Min Read

ರಾಜ್ಯದಲ್ಲಿ 88 ಪ್ರಕರಣಗಳಲ್ಲಿ ಪೊಲೀಸರೇ ಶಾಮೀಲು; ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧವೆಂದ ಸಿಎಂ

17/01/2026 5:44 PM3 Mins Read

BREAKING: ಪೌರಾಯುಕ್ತೆಗೆ ನಿಂದಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡಗೆ ಜಾಮೀನು ಮಂಜೂರು

17/01/2026 5:40 PM1 Min Read
Recent News

ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಗೆ ಅರ್ಜಿ ಆಹ್ವಾನ

17/01/2026 6:20 PM

Health Tips: ನಮ್ಮ ಪೂರ್ವಿಕರು ಪಾಲನೆ ಮಾಡಿದ ಆರೋಗ್ಯದ ಗುಟ್ಟಿದು: ಈ ದಿನಚರಿ ಪಾಲಿಸಿದ್ರೆ ಕಾಯಿಲೆ ದೂರ ಗ್ಯಾರಂಟಿ

17/01/2026 6:12 PM

ವಾಹನ ಸವಾರರೇ ಎಚ್ಚರ ; ಏ.1ರಿಂದ ‘ಟೋಲ್ ಪ್ಲಾಜಾ’ಗಳಲ್ಲಿ ಹೊಸ ರೂಲ್ಸ್, ಫಾಸ್ಟ್ಟ್ಯಾಗ್ ಇಲ್ಲದೇ ವಾಹನ ಚಲಿಸೋಲ್ಲ!

17/01/2026 6:08 PM

“PhonePe ಲಿಂಕ್ ಕ್ಲಿಕ್ ಮಾಡಿದ್ರೆ, ನಿಮ್ಮ ಖಾತೆಗೆ 5,000 ರೂ. ಜಮಾ ಆಗುತ್ತೆ” ಈ ಪೊಂಗಲ್ ಗ್ರ್ಯಾಂಡ್ ಗಿಫ್ಟ್ ಪ್ರೋಗ್ರಾಂ ನಿಜವೇ.?

17/01/2026 5:52 PM
State News
KARNATAKA

ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಗೆ ಅರ್ಜಿ ಆಹ್ವಾನ

By kannadanewsnow0917/01/2026 6:20 PM KARNATAKA 1 Min Read

ಬೆಂಗಳೂರು: ಕೃಷಿ ಇಲಾಖೆ ವತಿಯಿಂದ 2025-26 ನೇ ಸಾಲಿನ ಅಂತರಾಷ್ಟ್ರೀಯ ವಾಣಿಜ್ಯ ಮೇಳದ ಅಂಗವಾಗಿ ರಾಷ್ಟ್ರೀಯ ಆಹಾರ ಮತ್ತು ಪೌಷ್ಟಿಕ…

Health Tips: ನಮ್ಮ ಪೂರ್ವಿಕರು ಪಾಲನೆ ಮಾಡಿದ ಆರೋಗ್ಯದ ಗುಟ್ಟಿದು: ಈ ದಿನಚರಿ ಪಾಲಿಸಿದ್ರೆ ಕಾಯಿಲೆ ದೂರ ಗ್ಯಾರಂಟಿ

17/01/2026 6:12 PM

ರಾಜ್ಯದಲ್ಲಿ 88 ಪ್ರಕರಣಗಳಲ್ಲಿ ಪೊಲೀಸರೇ ಶಾಮೀಲು; ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧವೆಂದ ಸಿಎಂ

17/01/2026 5:44 PM

BREAKING: ಪೌರಾಯುಕ್ತೆಗೆ ನಿಂದಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡಗೆ ಜಾಮೀನು ಮಂಜೂರು

17/01/2026 5:40 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.