Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್‌ಮೈಂಡ್ ಪಾಕಿಸ್ತಾನದಲ್ಲಿ ಪತ್ತೆ

21/04/2026 2:38 PM

ಬೆಂಗಳೂರಲ್ಲಿ ಜನಗಣತಿಗೆ ಗೈರಾದವರಿಗೆ ಜಿಬಿಎ ಶಾಕ್: ಎಫ್ಐಆರ್ ದಾಖಲಿಸಿ, ಕಾನೂನು ಕ್ರಮದ ಎಚ್ಚರಿಕೆ

21/04/2026 2:31 PM

ಕಟ್ಟಡ ಕಾರ್ಮಿಕರೇ ಎಚ್ಚರ! ಸಿಮೆಂಟ್ ಬಳಕೆಯಲ್ಲಿ ಅಜಾಗರೂಕತೆ ಬೇಡ: ಇಲ್ಲಿವೆ ಆರೋಗ್ಯ ರಕ್ಷಣೆಗೆ ಅಗತ್ಯ ಸಲಹೆಗಳು

21/04/2026 2:25 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಹಿಳೆಯರಿಗೆ ತಮ್ಮ ಹಕ್ಕುಗಳ ಕುರಿತು ಅರಿವು ಮೂಡಿಬೇಕು: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು
KARNATAKA

ಮಹಿಳೆಯರಿಗೆ ತಮ್ಮ ಹಕ್ಕುಗಳ ಕುರಿತು ಅರಿವು ಮೂಡಿಬೇಕು: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು

By kannadanewsnow0912/01/2026 5:40 PM

ಶಿವಮೊಗ್ಗ : ಮಹಿಳೆಯರಿಗೆ ತಮ್ಮ ಹಕ್ಕುಗಳ ಕುರಿತು ಅರಿವು ಮೂಡಿಸಲು ಕಾಲಕಾಲಕ್ಕೆ ಕಾರ್ಯಾಗಾರಗಳನ್ನು ನಡೆಸುವ ಅಗತ್ಯವಿದೆ. ಎಷ್ಟೆ ತಿಳಿದುಕೊಂಡಿದ್ದರೂ ಇನ್ನಷ್ಟು ತಿಳಿದುಕೊಳ್ಳಬೇಕಾದ ವಿಷಯ ಇರುತ್ತದೆ ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.

ಇಂದು ಶಿವಮೊಗ್ಗದ ಸಾಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಆಯೋಜಿಸಿದ್ದಂತ ಮಹಿಳಾ ವಿಚಾರ ಗೋಷ್ಟಿಯನ್ನು ಉದ್ಘಾಟಿಸಿ ಮಾತನಾಡಿದಂತ ಅವರು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅನುಷ್ಟಾನಕ್ಕೆ ಬಂದ ಮೇಲೆ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಸಶಕ್ತರಾಗಲು ಸಾಧ್ಯವಾಗಿದೆ. ಜೊತೆಗೆ ದೈನಂದಿನ ವ್ಯವಹಾರದ ಬಗ್ಗೆ ಅರಿವು ಹೊಂದುವಂತೆ ಆಗಿದೆ. ಮಹಿಳೆಯರಿಗೆ ಇಂತಹ ಕಾರ್ಯಗಾರ ಮೂಲಕ ಇನ್ನಷ್ಟು ಅರಿವು ಮೂಡಿಸುತ್ತಿರೋದು ಶ್ಲಾಘನೀಯವೇ ಸರಿ ಎಂದರು.

ಧರ್ಮಸ್ಥಳ ಸಂಘವು ಮಹಿಳೆಯರ ಜೀವನಶೈಲಿಯನ್ನೇ ಬದಲಾಯಿಸಿದೆ. ಹಿಂದೆ ನೀವು ಕಷ್ಟಪಟ್ಟಿದ್ದಕ್ಕೆ ಇಂದು ಫಲ ಸಿಕ್ಕಿದೆ. ಗಂಡನಿoದ ಆಗುತ್ತಿದ್ದ ಶೋಷಣೆ ಸಹ ತಪ್ಪಿದೆ. ಬಹಳಷ್ಟು ಕುಟುಂಬ ನಿರಾಳವಾಗಿ ಬದುಕೋದಕ್ಕೆ ಮದ್ಯವರ್ಜನ ಶಿಬಿರ ಕಾರಣವಾಗಿದೆ. ಪ್ರತಿವರ್ಷ 13 ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತಿದೆ ಎಂದರೆ ಸಂಸ್ಥೆಯ ಆರ್ಥಿಕ ಶಕ್ತಿ ಅರ್ಥವಾಗುತ್ತದೆ. ಆರೋಗ್ಯ ಶಿಬಿರ, ಕೆರೆಗಳ ಕಾಯಕಲ್ಪ, ಮಕ್ಕಳಿಗೆ ಶೈಕ್ಷಣಿಕ ನೆರವು ಕಲ್ಪಿಸುವುದು ಸೇರಿದಂತೆ ಭಕ್ತಿಯ ಮೂಲಕ ಜನರನ್ನು ಆರ್ಥಿಕ ಅಭಿವೃದ್ದಿ ಕೊಡಿಸುವ ಕೆಲಸ ಯೋಜನೆ ಮಾಡುತ್ತಿದೆ ಎಂದು ತಿಳಿಸಿದರು.

ಧರ್ಮಸ್ಥಳದ ಬಗ್ಗೆ ಒಂದಿಷ್ಟು ದುಷ್ಟ ಶಕ್ತಿಗಳು ಕೆಲಸ ಮಾಡಿದವು. ಆದರೇ ಅವರ ಕಾರ್ಯ ಸಾಧುವಾಗಲಿಲ್ಲ. ನೂರಾರು ಬುರುಡೆ ಇದೆ ಅಂತ ಹೇಳಿದ ತಕ್ಷಣ ಕೋರ್ಟ್ ಕೂಡ ತನಿಖೆಗೆ ಆದೇಶಿಸಿತು. ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿತು. ಸರ್ಕಾರದ ನಡೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಕೂಡ ಸ್ವಾಗತಿಸಿದರು. ಆದರೇ ಧರ್ಮಸ್ಥಳದ ಹೆಸರು ಹಾಳು ಮಾಡೋದಕ್ಕೆ ಪ್ರಯತ್ನಿಸಿದ ಪ್ರಯತ್ನ ಮಾತ್ರ ಫಲಿಸಲಿಲ್ಲ ಎಂದರು.

ನಾನು ಪದ್ಮ ಭೂಷಣ ನೀಡಬೇಕು ಎಂಬುದಾಗಿ ಸರ್ಕಾರಕ್ಕೆ ಆಗ್ರಸಿದೆ. ಅವರಲ್ಲಿ ಡಾ.ವೀರೇಂದ್ರ ಹೆಗಡೆ ಅವರು ಒಬ್ಬರಾಗಿದ್ದರು. ಜೊತೆಗೆ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರಸ್ವಾಮೀಜಿ. ಆದರೇ ಕೇಂದ್ರ ಸರ್ಕಾರ ಇಬ್ಬರಿಗೂ ಪದ್ಮಭೂಷಣ ಪ್ರಶಸ್ತಿ ನೀಡಿದೆ. ಅದು ತಮಗೆ ಹರ್ಷವನ್ನು ತಂದಿರುವುದಾಗಿ ಹೇಳಿದರು.

ಧರ್ಮಸ್ಥಳ ಸಂಘದಿಂದ ಇಂದು ಹೆಣ್ಣು ಮಕ್ಕಳ ಬದುಕೇ ಬದಲಾಗಿದೆ. ಸುಲಭವಾಗಿ ಸಾಲಸೌಲಭ್ಯ ಸಿಗುವಂತೆ ಆಗಿದೆ. ಅದೇ ಬ್ಯಾಂಕ್ ಗಳಿಗೆ ಹೋದ್ರೆ ಆ ದಾಖಲೆ, ಈ ದಾಖಲೆ ಅಂತ ಕೇಳುತ್ತಾರೆ. ಇಲ್ಲಿ ಸುಲಭವಾಗಿ ಸಿಗುತ್ತದೆ. ಮಹಿಳೆಯರು ಯಾರೂ ಟೀಕೆ-ಟಿಪ್ಪಣಿಗಳಿಗೆ ಕಿವಿಗೊಡಬಾರದು ಎಂಬುದಾಗಿ ತಿಳಿಸಿದರು.

ಈ ಸಾಗರ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯ ವೇದಿಕೆಯಲ್ಲಿ ನಗಸಭೆ ನಿಕಟಪೂರ್ವ ಅಧ್ಯಕ್ಷೆ ಮೈತ್ರಿ ಪಾಟೀಲ್, ಶಿರಸಿ ವಿಭಾಗದ ಜಿಲ್ಲಾ ನಿರ್ದೇಶಕ  ದಿನೇಶ್ ಎಂ., ರೂಪ ರಮೇಶ್, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯೆ ಕಸ್ತೂರಿ ಸಾಗರ್, ನಗರಸಭೆ ಮಾಜಿ ಅಧ್ಯಕ್ಷೆ ಮಧುರಾ ಶಿವಾನಂದ್, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸಹ ಶಿಕ್ಷಕಿ ಸವಿತಾ ಎಂ. ಇನ್ನಿತರರು ಹಾಜರಿದ್ದರು. ಲೀಲಾವತಿ ಪ್ರಾರ್ಥಿಸಿದರು. ದಯಾನಂದ ಪೂಜಾರಿ ಪ್ರಾಸ್ತಾವಿಕ ಮಾತನಾಡಿದರು. ಗೌರಮ್ಮ ಪ್ರಾಸ್ತಾವಿಕ ಮಾತನಾಡಿದರು.

ಹೀಗಿದೆ ಧರ್ಮಸ್ಥಳ ಸಂಘದ ಸಾಗರ ತಾಲ್ಲೂಕು ಸಾಧನಾ ವರದಿ

ಸಾಗರ ತಾಲ್ಲೂಕಿನಲ್ಲಿ ಧರ್ಮಸ್ಥಳ ಸಂಘದಡಿ ಸಕ್ರೀಯ ಸ್ವ ಸಹಾಯ ಸಂಘಗಳ ಸಂಖ್ಯೆ 2,576 ಆಗಿದ್ದರೇ, ಸದಸ್ಯರ ಸಂಖ್ಯೆ 19,600 ಆಗಿದೆ. ಸದಸ್ಯರ ಉಳಿತಾಯ 1,62,27,000. ಪ್ರಸ್ತುತ ವರ್ಷದ್ದಿ ಆರೋಗ್ಯ ವಿಮೆಯಡಿ 620 ಮಂದಿ ಕ್ಲೈಂ ಮಾಡಿಕೊಂಡಿದ್ದಾರೆ. ಇದಕ್ಕಾಗಿ 1,71,08,564 ಹಣವನ್ನು ಪಾವತಿಸಲಾಗಿದೆ. 14 ವ್ಯಸನ ಮುಕ್ತ ಶಿಬಿರವನ್ನು ನಡೆಸಿದ್ದರೇ, ಇದರಿಂದಾಗಿ 1,214 ಮಂದಿ ವ್ಯಸನ ಮುಕ್ತರಾಗಿದ್ದಾರೆ. ಧರ್ಮಸ್ಥಳ ಸಂಘದಿಂದ 101 ಮಂದಿ ಮಾಶಾಸನ ಪಡೆಯುತ್ತಿದ್ದಾರೆ. ಇದಕ್ಕಾಗಿ ಪ್ರತಿ ತಿಂಗಳು 1,10,000 ಪಾವತಿಸಲಾಗುತ್ತಿದೆ.

ಸಮುದಾಯ ಕಾರ್ಯಕ್ರಮದ ಅಡಿಯಲ್ಲಿ 2.50 ಲಕ್ಷದಲ್ಲಿ ಹಿಂದೂ ರುದ್ರಭೂಮಿಯನ್ನು ನಿರ್ಮಿಸಿದ್ದರೇ, ಶಿಕ್ಷಕರ ಕೊರತೆ ಇರುವಂತ ಸರ್ಕಾರಿ ಶಾಲೆಗಳಿಗೆ ಧರ್ಮಸ್ಥಳ ಸಂಘದಿಂದ ಸಾಗರ ತಾಲ್ಲೂಕಿನಲ್ಲಿ 20 ಶಿಕ್ಷಕರನ್ನು ನೇಮಿಸಲಾಗಿದೆ. ಒಟ್ಟು 2.85 ಲಕ್ಷ ಜ್ಞಾನದೀಪ ಶಿಕ್ಷಕರ ಗೌರವಧನ ನೀಡಲಾಗುತ್ತಿದೆ. 13 ಹಾಲು ಉತ್ಪಾಕರ ಸಂಘದ ಕಟ್ಟಡವನ್ನು 4.88 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿಕೊಡಲಾಗಿದೆ. ಜನಮಂಗಲ ಅಂಗವೈಕಲ್ಯ ಸಲಕರಣೆಯನ್ನು 178 ಮಂದಿಗೆ 6.25 ಲಕ್ಷ ವೆಚ್ಚದಲ್ಲಿ ವಿತರಿಸಲಾಗಿದೆ. ಈವರೆಗೆ ಸಾಗರ ತಾಲ್ಲೂಕಿನಲ್ಲಿ ಬರೋಬ್ಬರಿ 197 ದೇವಸ್ಥಾನಗಳನ್ನು 1.94 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ.

ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು..

ನಿವೃತ್ತರಾಗಲಿರುವ ವಾಲ್ಮಾರ್ಟ್ ಸಿಇಒ, ಪ್ರತಿ 30 ನಿಮಿಷಕ್ಕೆ 1.4 ಲಕ್ಷ ರೂಪಾಯಿ ಸಂಪಾದನೆ

BREAKING: ‘ರಾಜ್ಯ ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: 2026ನೇ ಸಾಲಿನ ‘ಗಳಿಕೆ ರಜೆ ಅಧ್ಯರ್ಪಿಸಿ ನಗದೀಕರಣ’ಕ್ಕೆ ಆದೇಶ

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ಜನಗಣತಿಗೆ ಗೈರಾದವರಿಗೆ ಜಿಬಿಎ ಶಾಕ್: ಎಫ್ಐಆರ್ ದಾಖಲಿಸಿ, ಕಾನೂನು ಕ್ರಮದ ಎಚ್ಚರಿಕೆ

21/04/2026 2:31 PM1 Min Read

ಕಟ್ಟಡ ಕಾರ್ಮಿಕರೇ ಎಚ್ಚರ! ಸಿಮೆಂಟ್ ಬಳಕೆಯಲ್ಲಿ ಅಜಾಗರೂಕತೆ ಬೇಡ: ಇಲ್ಲಿವೆ ಆರೋಗ್ಯ ರಕ್ಷಣೆಗೆ ಅಗತ್ಯ ಸಲಹೆಗಳು

21/04/2026 2:25 PM2 Mins Read

ಉಪನ್ಯಾಸಕ ಆಕಾಂಕ್ಷಿಗಳಿಗೆ ಸುವರ್ಣಾವಕಾಶ: ಕೆ-ಸೆಟ್, ಯುಜಿಸಿ-ನೆಟ್ ತರಬೇತಿಗೆ ಕರಾಮುವಿ ಅರ್ಜಿ ಆಹ್ವಾನ

21/04/2026 2:11 PM1 Min Read
Recent News

BREAKING: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್‌ಮೈಂಡ್ ಪಾಕಿಸ್ತಾನದಲ್ಲಿ ಪತ್ತೆ

21/04/2026 2:38 PM

ಬೆಂಗಳೂರಲ್ಲಿ ಜನಗಣತಿಗೆ ಗೈರಾದವರಿಗೆ ಜಿಬಿಎ ಶಾಕ್: ಎಫ್ಐಆರ್ ದಾಖಲಿಸಿ, ಕಾನೂನು ಕ್ರಮದ ಎಚ್ಚರಿಕೆ

21/04/2026 2:31 PM

ಕಟ್ಟಡ ಕಾರ್ಮಿಕರೇ ಎಚ್ಚರ! ಸಿಮೆಂಟ್ ಬಳಕೆಯಲ್ಲಿ ಅಜಾಗರೂಕತೆ ಬೇಡ: ಇಲ್ಲಿವೆ ಆರೋಗ್ಯ ರಕ್ಷಣೆಗೆ ಅಗತ್ಯ ಸಲಹೆಗಳು

21/04/2026 2:25 PM

ಉಪನ್ಯಾಸಕ ಆಕಾಂಕ್ಷಿಗಳಿಗೆ ಸುವರ್ಣಾವಕಾಶ: ಕೆ-ಸೆಟ್, ಯುಜಿಸಿ-ನೆಟ್ ತರಬೇತಿಗೆ ಕರಾಮುವಿ ಅರ್ಜಿ ಆಹ್ವಾನ

21/04/2026 2:11 PM
State News
KARNATAKA

ಬೆಂಗಳೂರಲ್ಲಿ ಜನಗಣತಿಗೆ ಗೈರಾದವರಿಗೆ ಜಿಬಿಎ ಶಾಕ್: ಎಫ್ಐಆರ್ ದಾಖಲಿಸಿ, ಕಾನೂನು ಕ್ರಮದ ಎಚ್ಚರಿಕೆ

By kannadanewsnow0921/04/2026 2:31 PM KARNATAKA 1 Min Read

ಬೆಂಗಳೂರು : ಜಿಬಿಎ (GBA) ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜನಗಣತಿ ಕಾರ್ಯದ ಪ್ರಗತಿಯು ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ, ಕರ್ತವ್ಯಕ್ಕೆ ಹಾಜರಾಗದ ಸಾವಿರಾರು ಸಿಬ್ಬಂದಿಗಳ…

ಕಟ್ಟಡ ಕಾರ್ಮಿಕರೇ ಎಚ್ಚರ! ಸಿಮೆಂಟ್ ಬಳಕೆಯಲ್ಲಿ ಅಜಾಗರೂಕತೆ ಬೇಡ: ಇಲ್ಲಿವೆ ಆರೋಗ್ಯ ರಕ್ಷಣೆಗೆ ಅಗತ್ಯ ಸಲಹೆಗಳು

21/04/2026 2:25 PM

ಉಪನ್ಯಾಸಕ ಆಕಾಂಕ್ಷಿಗಳಿಗೆ ಸುವರ್ಣಾವಕಾಶ: ಕೆ-ಸೆಟ್, ಯುಜಿಸಿ-ನೆಟ್ ತರಬೇತಿಗೆ ಕರಾಮುವಿ ಅರ್ಜಿ ಆಹ್ವಾನ

21/04/2026 2:11 PM

BIG NEWS : 2ನೇ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದ ವೈದ್ಯನ ಕೊಲೆ ಕೇಸ್ : 24 ಗಂಟೆಯಲ್ಲಿ ಆರೋಪಿ ಅರೆಸ್ಟ್!

21/04/2026 2:09 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.