Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ದೇಶದಲ್ಲಿ ನಿರ್ಭಯಾ ರೀತಿ ಮತ್ತೊಂದು ಅತ್ಯಾಚಾರ : ಖಾಸಗಿ ಭಾಗಕ್ಕೆ ರಾಡ್ ಸೇರಿಸಿ ರೇಪ್, ಆರೋಪಿ ಅರೆಸ್ಟ್!

10/12/2025 12:08 PM

BIG NEWS : ರಾಜ್ಯ ಸರ್ಕಾರದ ಎಲ್ಲಾ ವಾಹನ ಚಾಲಕರು, ಡಿ-ಗ್ರೂಪ್ ನೌಕರರು ಕರ್ತವ್ಯದ ವೇಳೆ ಸಮವಸ್ತ್ರ. `I.D ಕಾರ್ಡ್’ ಧರಿಸುವುದು ಕಡ್ಡಾಯ.!

10/12/2025 12:05 PM

BREAKING: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಕ್ರಿಕೆಟ್ ಕೋಚ್‌ ಮೇಲೆ ಹಲ್ಲೆ, ಗಂಭೀರ ಗಾಯ: 20 ಹೊಲಿಗೆ, ಭುಜ ಮುರಿತ!

10/12/2025 12:01 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ ಸರ್ಕಾರದ ಎಲ್ಲಾ ವಾಹನ ಚಾಲಕರು, ಡಿ-ಗ್ರೂಪ್ ನೌಕರರು ಕರ್ತವ್ಯದ ವೇಳೆ ಸಮವಸ್ತ್ರ. `I.D ಕಾರ್ಡ್’ ಧರಿಸುವುದು ಕಡ್ಡಾಯ.!
KARNATAKA

BIG NEWS : ರಾಜ್ಯ ಸರ್ಕಾರದ ಎಲ್ಲಾ ವಾಹನ ಚಾಲಕರು, ಡಿ-ಗ್ರೂಪ್ ನೌಕರರು ಕರ್ತವ್ಯದ ವೇಳೆ ಸಮವಸ್ತ್ರ. `I.D ಕಾರ್ಡ್’ ಧರಿಸುವುದು ಕಡ್ಡಾಯ.!

By kannadanewsnow5710/12/2025 12:05 PM

ಬೆಂಗಳೂರು :ಕರ್ನಾಟಕ ಸರ್ಕಾರ ಸಚಿವಾಲಯದ ಎಲ್ಲಾ ವಾಹನ ಚಾಲಕರು ಹಾಗೂ ಗ್ರೂಪ್-ಡಿ ವೃಂದದ ನೌಕರರು ಕರ್ತವ್ಯದ ಅವಧಿಯಲ್ಲಿ ಕಡ್ಡಾಯವಾಗಿ ಸಮವಸ್ತ್ರ ಮತ್ತು ಗುರುತಿನ ಚೀಟಿಗಳನ್ನು ಧರಿಸುವಂತೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಕರ್ನಾಟಕ ಸರ್ಕಾರ ಸಚಿವಾಲಯದ ವಿಧಾನ ಸೌಧ, ವಿಕಾಸ ಸೌಧ ಹಾಗೂ ಬಹು ಮಹಡಿ ಕಟ್ಟಡಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ವಾಹನ ಚಾಲಕರು ಹಾಗೂ ಗ್ರೂಪ್-ಡಿ ವೃಂದದ ನೌಕರರು ಕರ್ತವ್ಯದ ಅವಧಿಯಲ್ಲಿ ಸಮವಸ್ತ್ರ ಮತ್ತು ಗುರುತಿನ ಚೀಟಿಗಳನ್ನು ಧರಿಸದೇ ಇರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಇದರಿಂದ ಸಾರ್ವಜನಿಕರು ಮತ್ತು ಸರ್ಕಾರದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳನ್ನು ಗುರುತಿಸುವುದು ಸಾಧ್ಯವಾಗುತ್ತಿಲ್ಲ. ಇದರಿಂದ ಶಿಸ್ತಿನ ಉಲ್ಲಂಘನೆ ಆಗುತ್ತಿರುತ್ತದೆ.

ಕರ್ನಾಟಕ ಸರ್ಕಾರ ಸಚಿವಾಲಯ ಕೈಪಿಡಿ(2005) ರ ಕಂಡಿಕೆ-48ರಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್-ಡಿ ವೃಂದದ ನೌಕರರ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ನಿಗದಿಪಡಿಸಲಾಗಿರುತ್ತದೆ. ಅದರಂತೆ, ಕಚೇರಿ ಜ್ಞಾಪನ ಸಂಖ್ಯೆ:ಡಿಪಿಎಆರ್ 44 ಎಎಆರ್ 79 ದಿನಾಂಕ:12.09.1980ರ ಅನುಬಂಧದಲ್ಲಿ ಡಿ-ಗುಂಪಿನ ಸಿಬ್ಬಂದಿ ವರ್ಗದ ಕರ್ತವ್ಯಗಳು ಮತ್ತು ಹೊಣೆಗಾರಿಕೆಗಳನ್ನು ನಿಗದಿಪಡಿಸಲಾಗಿರುತ್ತದೆ.

ಸದರಿ ಜ್ಞಾಪನದಂತೆ ಗ್ರೂಪ್-ಡಿ ವೃಂದದ ಎಲ್ಲಾ ನೌಕರರು ಸಮವಸ್ತ್ರ ಧರಿಸಿ ಕಚೇರಿಗೆ ಹಾಜರಾಗುವುದು ಕಡ್ಡಾಯವಾಗಿರುತ್ತದೆ.

‘ಎಲ್ಲಾ ರೀತಿಯ ನೌಕರರು ತಮ್ಮ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕೆಂದು ನಿರೀಕ್ಷಿಸುವುದು ಸರ್ಕಾರದ ಕಾರ್ಯನೀತಿಯಾಗಿರುವ ಕಾರಣ, ವಾಹನ ಚಾಲಕರು ಮತ್ತು ಡಿ-ಗುಂಪಿನ ಯಾರೇ ನೌಕರನು ತಾನು ಮಾಡಬೇಕಾದ ಯಾವುದೇ ಕರ್ತವ್ಯವನ್ನು ನಿರಾಕರಿಸಿದಲ್ಲಿ 1957ರ ಕರ್ನಾಟಕ ಸರ್ಕಾರಿ ಸೇವಾ (ವರ್ಗೀಕರಣ, ನಿಯಂತ್ರಣ, ಅಪೀಲು) ನಿಯಮಾವಳಿಯ ಮೇರೆಗೆ ಕ್ರಮಕ್ಕೆ ಒಳಗಾಗತಕ್ಕದ್ದು.

ಸರ್ಕಾರದ ៨ ថ : 24 2 2018 (III) ໖:11.01.2019໘ ໙໕ ವಿವಿಧ ವರ್ಗದೆ ಹುದ್ದೆಗಳಿಗೆ ಲಭ್ಯವಿರುವ ಸಮವಸ್ತ್ರ ಭತ್ಯೆಯ ದರಗಳನ್ನು ದಿನಾಂಕ:01.01.2019ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿ ಆದೇಶಿಸಲಾಗಿದೆ. ಅದರಂತೆ ಸರ್ಕಾರದ ಎಲ್ಲಾ ಹಿರಿಯ ವಾಹನ ಚಾಲಕರು/ಚಾಲಕರು, ಎಲ್ಲಾ ಗ್ರೂಪ್ಡಿ ಸಿಬ್ಬಂದಿಗೆ ಮಾಸಿಕ ಸಮವಸ್ತ್ರ ನಿರ್ವಹಣಾ ಭತ್ಯೆ ರೂ.400/-ಗಳನ್ನು ಮಂಜೂರು ಮಾಡಲಾಗಿದೆ.

ಈ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ವಾಹನ ಚಾಲಕರು ಹಾಗೂ ಗ್ರೂಪ್-ಡಿ ವೃಂದದ ನೌಕರರಿಗೆ ಇನ್ನು ಮುಂದೆ ಈ ಕೆಳಕಂಡಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

ಅ) ಪ್ರತಿಯೊಬ್ಬ ಹಿರಿಯ ವಾಹನ ಚಾಲಕ/ಚಾಲಕರು, ಗ್ರೂಪ್-ಡಿ ನೌಕರರು ಕರ್ತವ್ಯದ ಮೇಲಿದ್ದಾಗ ಕಡ್ಡಾಯವಾಗಿ ಸಮವಸ್ತ್ರವನ್ನು ಮತ್ತು ಗುರುತಿನ ಚೀಟಿಯನ್ನು ಧರಿಸತಕ್ಕದ್ದು.

ಆ) ಸಕ್ಷಮ ಪ್ರಾಧಿಕಾರಗಳು / ಮೇಲಧಿಕಾರಿಗಳು ಅವರ ಅಧೀನದಲ್ಲಿರುವ ಡಿ-ದರ್ಜೆ ನೌಕರರು ಮತ್ತು ವಾಹನ ಚಾಲಕರು ಕರ್ತವ್ಯದ ಮೇಲಿದ್ದಾಗ ಸಮವಸ್ತ್ರ ಮತ್ತು ಗುರುತಿನ ಚೀಟಿಯನ್ನು ಧರಿಸದಿದ್ದಲ್ಲಿ, ಸಂಬಳ ಬಟವಾಡೆ ಅಧಿಕಾರಿಗಳಿಗೆ (ಸಿಆಸುಇ ಲೆಕ್ಕಪತ್ರ ಶಾಖೆ) ಈ ಬಗ್ಗೆ ಪ್ರಮಾಣಿ ಪತ್ರವನ್ನು ನೀಡತಕ್ಕದ್ದು. ಹೀಗೆ ಪ್ರಮಾಣ ಪತ್ರವನ್ನು ನೀಡಿದ್ದಲ್ಲಿ, ಸಿಆಸುಇ ಲೆಕ್ಕಪತ್ರ ಶಾಖೆಯು ಸಮವಸ್ತ್ರ ಭತ್ಯೆಯನ್ನು ವೇತನದಲ್ಲಿ ಕಡಿತಗೊಳಿಸತಕ್ಕದ್ದು.

ಇ) ಈ ನಿರ್ದೇಶನವನ್ನು ಪಾಲಿಸದೇ ಇರುವ ಪ್ರತಿಯೊಬ್ಬ ವಾಹನ ಚಾಲಕರು ಹಾಗೂ ಡಿ ವೃಂದದ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸಕ್ಷಮ ಪ್ರಾಧಿಕಾರ/ಮೇಲಧಿಕಾರಿಗಳು ಅಗತ್ಯ ಕ್ರಮವಹಿಸತಕ್ಕದ್ದು.

ಈ) ಸಚಿವಾಲಯದಲ್ಲಿ ಖಾಲಿ ಇರುವ ಗ್ರೂಪ್-ಡಿ ವೃಂದದ ಹುದ್ದೆಗಳ ಎದುರಾಗಿ ಹೊರಗುತ್ತಿಗೆ ಏಜೆನ್ಸಿಗಳ ಮೂಲಕ ಸಿಬ್ಬಂದಿಗಳ ಸೇವೆಯನ್ನು ಪಡೆಯಲಾಗುತ್ತಿದ್ದು, ಅಂತಹ ಹೊರಗುತ್ತಿಗೆ ನೌಕರರು ಸಹ ಸಿಆಸುಇ (ಕಾರ್ಯಕಾರಿ) ಶಾಖೆಯಿಂದ ನೀಡಲಾಗುವ ಗುರುತಿನ ಚೀಟಿ ಮತ್ತು ಹೊರಗುತ್ತಿಗೆ ಏಜೆನ್ಸಿ ನೀಡುವ ಸಮವಸ್ತ್ರವನ್ನು ಕರ್ತವ್ಯದ ಮೇಲಿದ್ದಾಗ ಕಡ್ಡಾಯವಾಗಿ ಧರಿಸತಕ್ಕದ್ದು. ಇಲ್ಲದಿದ್ದಲ್ಲಿ, ಅಂತಹ ಸಿಬ್ಬಂದಿಗಳ ಸೇವೆಯನ್ನು ಹೊರಗುತ್ತಿಗೆ ಏಜೆನ್ಸಿಗೆ ಹಿಂದಿರುಗಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.

ಮೇಲ್ಕಾಣಿಸಿದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಈ ಸಂಬಂಧ ತಮ್ಮ ವ್ಯಾಪ್ತಿಯಲ್ಲಿರುವ ವಾಹನ ಚಾಲಕ / ಗ್ರೂಪ್-ಡಿ ನೌಕರರಿಗೆ ಅಗತ್ಯ ಮಾಹಿತಿ ಮತ್ತು ನಿರ್ದೇಶನಗಳನ್ನು ನೀಡುವಂತೆ ಈ ಮೂಲಕ ಸಚಿವಾಲಯದ ಎಲ್ಲಾ ಸಕ್ಷಮ ಪ್ರಾಧಿಕಾರಿಗಳೆಗೆ ಸೂಚಿಸಲಾಗಿದೆ.

All state government vehicle drivers and D-group employees are required to wear uniforms and `I.D. cards' while on duty.
Share. Facebook Twitter LinkedIn WhatsApp Email

Related Posts

BREAKING : ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಕಾಟನ್ ಮಿಲ್ : 1 ಕೋಟಿ ಮೌಲ್ಯದ ಹತ್ತಿ ಬೆಂಕಿಗಾಹುತಿ!

10/12/2025 11:51 AM1 Min Read

BREAKING : ‘ಲೈಂಗಿಕ ಸಮಸ್ಯೆಗೆ’ ಪರಿಹಾರ ನೀಡೋದಾಗಿ ಟೆಕ್ಕಿಗೆ ವಂಚನೆ ಕೇಸ್ : ನಕಲಿ ಗುರೂಜಿ ಸೇರಿ ಇಬ್ಬರು ಅರೆಸ್ಟ್!

10/12/2025 11:41 AM1 Min Read

SHOCKING : ಮಕ್ಕಳಿಗೆ `ಮೊಬೈಲ್’ ಕೊಡುವ ಪೋಷಕರೇ ಎಚ್ಚರ : ಮಕ್ಕಳಲ್ಲಿ ಹೆಚ್ಚುತ್ತಿವೆ ಈ ಗಂಭೀರ ಸಮಸ್ಯೆಗಳು.!

10/12/2025 11:38 AM2 Mins Read
Recent News

BREAKING : ದೇಶದಲ್ಲಿ ನಿರ್ಭಯಾ ರೀತಿ ಮತ್ತೊಂದು ಅತ್ಯಾಚಾರ : ಖಾಸಗಿ ಭಾಗಕ್ಕೆ ರಾಡ್ ಸೇರಿಸಿ ರೇಪ್, ಆರೋಪಿ ಅರೆಸ್ಟ್!

10/12/2025 12:08 PM

BIG NEWS : ರಾಜ್ಯ ಸರ್ಕಾರದ ಎಲ್ಲಾ ವಾಹನ ಚಾಲಕರು, ಡಿ-ಗ್ರೂಪ್ ನೌಕರರು ಕರ್ತವ್ಯದ ವೇಳೆ ಸಮವಸ್ತ್ರ. `I.D ಕಾರ್ಡ್’ ಧರಿಸುವುದು ಕಡ್ಡಾಯ.!

10/12/2025 12:05 PM

BREAKING: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಕ್ರಿಕೆಟ್ ಕೋಚ್‌ ಮೇಲೆ ಹಲ್ಲೆ, ಗಂಭೀರ ಗಾಯ: 20 ಹೊಲಿಗೆ, ಭುಜ ಮುರಿತ!

10/12/2025 12:01 PM

BREAKING : ರಷ್ಯಾದ ವಿಲಿಟರಿ ಜೆಟ್ ವಿಮಾನ ಪತನವಾಗಿ 7 ಮಂದಿ ಸ್ಥಳದಲ್ಲೇ ಸಾವು | Russia Plane Crash

10/12/2025 11:58 AM
State News
KARNATAKA

BIG NEWS : ರಾಜ್ಯ ಸರ್ಕಾರದ ಎಲ್ಲಾ ವಾಹನ ಚಾಲಕರು, ಡಿ-ಗ್ರೂಪ್ ನೌಕರರು ಕರ್ತವ್ಯದ ವೇಳೆ ಸಮವಸ್ತ್ರ. `I.D ಕಾರ್ಡ್’ ಧರಿಸುವುದು ಕಡ್ಡಾಯ.!

By kannadanewsnow5710/12/2025 12:05 PM KARNATAKA 2 Mins Read

ಬೆಂಗಳೂರು :ಕರ್ನಾಟಕ ಸರ್ಕಾರ ಸಚಿವಾಲಯದ ಎಲ್ಲಾ ವಾಹನ ಚಾಲಕರು ಹಾಗೂ ಗ್ರೂಪ್-ಡಿ ವೃಂದದ ನೌಕರರು ಕರ್ತವ್ಯದ ಅವಧಿಯಲ್ಲಿ ಕಡ್ಡಾಯವಾಗಿ ಸಮವಸ್ತ್ರ…

BREAKING : ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಕಾಟನ್ ಮಿಲ್ : 1 ಕೋಟಿ ಮೌಲ್ಯದ ಹತ್ತಿ ಬೆಂಕಿಗಾಹುತಿ!

10/12/2025 11:51 AM

BREAKING : ‘ಲೈಂಗಿಕ ಸಮಸ್ಯೆಗೆ’ ಪರಿಹಾರ ನೀಡೋದಾಗಿ ಟೆಕ್ಕಿಗೆ ವಂಚನೆ ಕೇಸ್ : ನಕಲಿ ಗುರೂಜಿ ಸೇರಿ ಇಬ್ಬರು ಅರೆಸ್ಟ್!

10/12/2025 11:41 AM

SHOCKING : ಮಕ್ಕಳಿಗೆ `ಮೊಬೈಲ್’ ಕೊಡುವ ಪೋಷಕರೇ ಎಚ್ಚರ : ಮಕ್ಕಳಲ್ಲಿ ಹೆಚ್ಚುತ್ತಿವೆ ಈ ಗಂಭೀರ ಸಮಸ್ಯೆಗಳು.!

10/12/2025 11:38 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.