Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪೋಷಕರೇ ಗಮನಿಸಿ : ಬೈಕ್ ನಲ್ಲಿ ಹೋಗುವಾಗ ನಿಮ್ಮ ಮಕ್ಕಳಿಗೆ `ಹೆಲ್ಮೆಟ್’ ಹಾಕದಿದ್ದರೆ ದಂಡ ಫಿಕ್ಸ್.!

25/11/2025 6:21 AM

ಇದು ‘BPL ಕಾರ್ಡ್’ ರದ್ದಾದವರ ಕಥೆ: ಸಿಎಂ ಸಿದ್ಧರಾಮಯ್ಯ ಸಾಹೇಬ್ರೆ ಈ ಗೋಳಿನ ವ್ಯಥೆ ಕೇಳಿ, ಸಮಸ್ಯೆ ಸರಿಪಡಿಸಿ

25/11/2025 6:15 AM

ರಾಜ್ಯದಲ್ಲಿ ‘ಶಾಸಕರ PA’ಗಳನ್ನು ನೇಮಕಕ್ಕೆ ಇರುವ ನಿಯಮಗಳು ಏನು? ಇಲ್ಲಿದೆ ಮಾಹಿತಿ

25/11/2025 6:14 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇದು ‘BPL ಕಾರ್ಡ್’ ರದ್ದಾದವರ ಕಥೆ: ಸಿಎಂ ಸಿದ್ಧರಾಮಯ್ಯ ಸಾಹೇಬ್ರೆ ಈ ಗೋಳಿನ ವ್ಯಥೆ ಕೇಳಿ, ಸಮಸ್ಯೆ ಸರಿಪಡಿಸಿ
KARNATAKA

ಇದು ‘BPL ಕಾರ್ಡ್’ ರದ್ದಾದವರ ಕಥೆ: ಸಿಎಂ ಸಿದ್ಧರಾಮಯ್ಯ ಸಾಹೇಬ್ರೆ ಈ ಗೋಳಿನ ವ್ಯಥೆ ಕೇಳಿ, ಸಮಸ್ಯೆ ಸರಿಪಡಿಸಿ

By kannadanewsnow0925/11/2025 6:15 AM

ಬೆಂಗಳೂರು: ಆ ಕುಟುಂಬಕ್ಕೆ ಹೊಟ್ಟೆ ತುಂಬ ಉಣ್ಣೋದಕ್ಕೆ ಇದ್ದದ್ದೇ ಒಂದು ರೇಷನ್ ಕಾರ್ಡ್. ಸಿಟಿ ಸೇರಿದರೂ, ಹೊಟ್ಟೆಗೆ ಬಿಪಿಎಲ್ ಕಾರ್ಡ್ ಅಕ್ಕಿಯೇ ಗಟ್ಟಿಯಾಗಿತ್ತು. ಕಾರಣ ಕಡಿಮೆ ಸಂಬಳದಲ್ಲೂ, ಅನ್ನ ರಾಮಯ್ಯ ಎಂಬ ಕೀರ್ತಿಗಳಿಸಿದ್ದಂತ ಸಿದ್ಧರಾಮಯ್ಯ ಕೊಡುತ್ತಿದ್ದ 10 ಕೆಜಿ ಅಕ್ಕಿ ಹೊಟ್ಟೆ ತುಂಬಿಸುತ್ತಿತ್ತು. ಆದರೇ ಕಂಪನಿಯವರು ಟಿಡಿಎಸ್ ಪಡೆಯೋದಕ್ಕೆ ಐಟಿ ಫೈಲ್ ಮಾಡಬೇಕು ಎಂದಿದ್ದಕ್ಕೆ ಮಾಡಿದ್ದರ ಕಾರಣ, ಬಿಪಿಎಲ್ ಕಾರ್ಡ್ ರದ್ದಗೊಂಡು ವ್ಯಥೆ ಪಡುವಂತಾಗಿದೆ. ಆ ಬಿಪಿಎಲ್ ಕಾರ್ಡ್ ರದ್ದಾದವರ ಕಥೆ ಮುಂದೆ ಓದಿ.

ರಾಜ್ಯದ ಹಳ್ಳಿಯೊಂದರಲ್ಲಿ ಅಪ್ಪ-ಮಗ ಇಬ್ಬರಿದ್ದರು. ಉದ್ಯೋಗ ಹರಸಿ ಬಂದಾಗ, ಹೆಚ್ಚು ಓದಿಲ್ಲದ ಅವರಿಗೆ ಜೀವನ ನಿರ್ವಹಣೆಗೆ ಸೇರಿದ್ದು ಸ್ವಿಗ್ಗಿಯಲ್ಲಿ ಪುಡ್ ಡಿಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಕಷ್ಟ ಪಟ್ಟು ದುಡಿದಂತ ದುಡ್ಡಿನಲ್ಲೇ ಕಂಪನಿಯಿಂದ ಟಿಡಿಎಸ್ ಕಡಿತಗೊಳಿಸಿ ಹಣವನ್ನು ನೀಡಲಾಗುತ್ತಿತ್ತು. ಒಂದು ವರ್ಷಗಳ ಹಿಂದೆ ಕೆಲಸ ಬಿಟ್ಟಾಗ, ಕಂಪನಿಯವರು ನಿಮ್ಮ ಕಡಿತದ ಟಿಡಿಎಸ್ ಪಡೆಯೋದಕ್ಕೆ ಐಟಿ ಫೈಲ್ ಮಾಡಿ ಎಂಬುದಾಗಿ ಸೂಚಿಸಿತ್ತು.

ಸ್ವಿಗ್ಗಿ ಕಂಪನಿಯವರು ಹೇಳಿದ್ದ ಕಾರಣ ತಾನು ದುಡಿದ ಹಣದಲ್ಲಿ ಟಿಡಿಎಸ್ ಕಡಿತಗೊಳಿಸಿದ್ದನ್ನು ಮರಳಿ ಪಡೋಯದಕ್ಕೆ ಆ ಕುಟುಂಬ ಸಿಎ ಬಳಿ ತೆರಳಿತ್ತು. ಅವರು ಕೇಳಿದಂತೆ ಮಾಹಿತಿ ನೀಡಿ ಐಟಿ ಫೈಲಿಂಗ್ ಕೂಡ ಮಾಡಿತ್ತು. ಸ್ವಿಗ್ಗಿ ಕಂಪನಿಯು ಕಡಿತಗೊಳಿಸಿದ್ದಂತ ಹಣವನ್ನು ಅಪ್ಪ-ಮಗನ ಪ್ಯಾನ್ ಸಂಖ್ಯೆಗೆ ಪಾವತಿಸಿದ್ದ ಒಂದಷ್ಟು ಹಣ ಕೂಡ ಐಟಿ ಫೈಲಿಂಗ್ ಬಳಿಕ ಬ್ಯಾಂಕ್ ಖಾತೆಗೂ ಜಮಾಗೊಂಡಿತ್ತು.

ಈ ಘಟನೆಯಾದ ಒಂದು ವರ್ಷದ ಬಳಿಕ ದಿಢೀರ್ ಅಪ್ಪ-ಮಗನಿಗೆ ನೀಡಿದ್ದಂತ ಬಿಪಿಎಲ್ ಕಾರ್ಡ್ ರದ್ದುಗೊಳಿಸಲಾಗಿದೆ ಎಂಬುದಾಗಿ ನ್ಯಾಯಬೆಲೆ ಅಂಗಡಿಯವರು ರೇಷನ್ ಪಡೆಯಲು ಹೋದಾಗ ಹೇಳಿದ್ದನ್ನು ಕಂಡು ಆಘಾತಗೊಂಡರು. ಕಾರಣ ಏನೆಂದು ವಿಚಾರಿಸಿದಾಗ ನೀವು ಆದಾಯ ತೆರಿಗೆ ಪಾವತಿದಾರರು ಆಗಿದ್ದೀರಿ. ಹೀಗಾಗಿ ನಿಮ್ಮ ರೇಷನ್ ಕಾರ್ಡ್ ರದ್ದು ಪಡಿಸಲಾಗಿದೆ ಎಂಬುದಾಗಿತ್ತು.

ಅಯ್ಯೋ ನಾನೆಲ್ಲಿ ಆದಾಯ ತೆರಿಗೆ ಪಾವತಿಸಿದೆ. ಟಿಡಿಎಸ್ ಕಡಿತಗೊಳಿಸಿದ್ದನ್ನು ಮರಳಿ ಪಡೆಯೋದಕ್ಕೆ ಐಟಿ ಫೈಲ್ ಮಾಡಿದ್ದು. ಅದು ಆದಾಯ ತೆರಿಗೆ ಪಾವತಿಯಲ್ಲ ಎಂಬುದಾಗಿ ಯಾರನ್ನೇ ಗೋಗರೆದರೂ ಅದಕ್ಕೆ ಉತ್ತರವಿರಲಿಲ್ಲ. ಪರಿಹಾರವೂ ಇಲ್ಲದಂತಾಗಿತ್ತು. ರೇಷನ್ ಕಾರ್ಡ್ ರದ್ದಾಗಿ ಅಕ್ಕಿ ದೊರೆಯದೇ ಒಂದಷ್ಟು ದಿನ ಗೋಳಾಡಿದ ಆ ತಂದೆ-ಮಗ ಕೊನೆಗೆ ಅನ್ನಕ್ಕಾಗಿ ಬೇರೆ ದಾರಿ ಕಂಡುಕೊಳ್ಳುವಂತಾಯ್ತು.

ಐಟಿ ಫೈಲಿಂಗ್ ಎಫೆಕ್ಟ್ ನಿಂದ ಬಿಪಿಎಲ್ ಕಾರ್ಡ್ ರದ್ದುಗೊಂಡಿದ್ದರಿಂದ ಜೀವನ ನಿರ್ವಹಣೆಗಾಗಿ ಬ್ಯಾಂಕ್ ನಿಂದ ಸಾಲ ಪಡೆದು ತಳ್ಳೋ ಗಾಡಿ ಖರೀದಿಸಿ ಸೊಪ್ಪು, ತರಕಾರಿ ಮಾರುತ್ತಾ ಬದುಕು ಸಾಗಿಸುತ್ತಿದೆ. ನೋಡಿ ಸಿಎಂ ಸಿದ್ಧರಾಮಯ್ಯ ಸಾಹೇಬ್ರೆ ಇವರು ಕೂಡ ನಿಮ್ಮ ದೃಷ್ಠಿಯಲ್ಲಿ ಆದಾಯ ತೆರಿಗೆ ಪಾವತಿದಾರರು. ಮನಸ್ಸು ಮಾಡಿ ಸ್ವಾಮಿ, ಒಮ್ಮೆ ಅವಕಾಶ ನೀಡಿ. ಇಂತಹ ಸಮಸ್ಯೆ ಪರಿಹರಿಸಿ ಎಂಬುದು ಇಂತಹ ಲಕ್ಷಾಂತರ ನೊಂದವರ ಕುಟುಂಬದ ಮನವಿಯಾಗಿದೆ.

ವಸಂತ ಬಿ ಈಶ್ವರಗೆರೆ…, ಸಂಪಾದಕರು

ಒಬ್ಬರ ಕಾರಣಕ್ಕೆ ‘BPL ಕಾರ್ಡ್ ರದ್ದು’ ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆದ ಸರ್ಕಾರ

Share. Facebook Twitter LinkedIn WhatsApp Email

Related Posts

ಪೋಷಕರೇ ಗಮನಿಸಿ : ಬೈಕ್ ನಲ್ಲಿ ಹೋಗುವಾಗ ನಿಮ್ಮ ಮಕ್ಕಳಿಗೆ `ಹೆಲ್ಮೆಟ್’ ಹಾಕದಿದ್ದರೆ ದಂಡ ಫಿಕ್ಸ್.!

25/11/2025 6:21 AM1 Min Read

ರಾಜ್ಯದಲ್ಲಿ ‘ಶಾಸಕರ PA’ಗಳನ್ನು ನೇಮಕಕ್ಕೆ ಇರುವ ನಿಯಮಗಳು ಏನು? ಇಲ್ಲಿದೆ ಮಾಹಿತಿ

25/11/2025 6:14 AM3 Mins Read

BIG NEWS : ರಾಜ್ಯದಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ‘ಭೂ ಪರಿವರ್ತನೆ’ಗಾಗಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ.!

25/11/2025 6:10 AM4 Mins Read
Recent News

ಪೋಷಕರೇ ಗಮನಿಸಿ : ಬೈಕ್ ನಲ್ಲಿ ಹೋಗುವಾಗ ನಿಮ್ಮ ಮಕ್ಕಳಿಗೆ `ಹೆಲ್ಮೆಟ್’ ಹಾಕದಿದ್ದರೆ ದಂಡ ಫಿಕ್ಸ್.!

25/11/2025 6:21 AM

ಇದು ‘BPL ಕಾರ್ಡ್’ ರದ್ದಾದವರ ಕಥೆ: ಸಿಎಂ ಸಿದ್ಧರಾಮಯ್ಯ ಸಾಹೇಬ್ರೆ ಈ ಗೋಳಿನ ವ್ಯಥೆ ಕೇಳಿ, ಸಮಸ್ಯೆ ಸರಿಪಡಿಸಿ

25/11/2025 6:15 AM

ರಾಜ್ಯದಲ್ಲಿ ‘ಶಾಸಕರ PA’ಗಳನ್ನು ನೇಮಕಕ್ಕೆ ಇರುವ ನಿಯಮಗಳು ಏನು? ಇಲ್ಲಿದೆ ಮಾಹಿತಿ

25/11/2025 6:14 AM

ALERT : `ನೈಟ್ ಶಿಫ್ಟ್’ ನಲ್ಲಿ ಕೆಲಸ ಮಾಡುವವರೇ ಎಚ್ಚರ : ಈ ಕಾಯಿಲೆಗಳ ಅಪಾಯ ಹೆಚ್ಚು.!

25/11/2025 6:11 AM
State News
KARNATAKA

ಪೋಷಕರೇ ಗಮನಿಸಿ : ಬೈಕ್ ನಲ್ಲಿ ಹೋಗುವಾಗ ನಿಮ್ಮ ಮಕ್ಕಳಿಗೆ `ಹೆಲ್ಮೆಟ್’ ಹಾಕದಿದ್ದರೆ ದಂಡ ಫಿಕ್ಸ್.!

By kannadanewsnow5725/11/2025 6:21 AM KARNATAKA 1 Min Read

ಬೆಂಗಳೂರು: ಬೈಕ್ ನಲ್ಲಿ ಪೋಷಕರ ಜತೆ ಪ್ರಯಾಣಿಸುವ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ ಎಂದು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ. ಮೋಟಾರು…

ಇದು ‘BPL ಕಾರ್ಡ್’ ರದ್ದಾದವರ ಕಥೆ: ಸಿಎಂ ಸಿದ್ಧರಾಮಯ್ಯ ಸಾಹೇಬ್ರೆ ಈ ಗೋಳಿನ ವ್ಯಥೆ ಕೇಳಿ, ಸಮಸ್ಯೆ ಸರಿಪಡಿಸಿ

25/11/2025 6:15 AM

ರಾಜ್ಯದಲ್ಲಿ ‘ಶಾಸಕರ PA’ಗಳನ್ನು ನೇಮಕಕ್ಕೆ ಇರುವ ನಿಯಮಗಳು ಏನು? ಇಲ್ಲಿದೆ ಮಾಹಿತಿ

25/11/2025 6:14 AM

BIG NEWS : ರಾಜ್ಯದಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ‘ಭೂ ಪರಿವರ್ತನೆ’ಗಾಗಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ.!

25/11/2025 6:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.