Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಮೀಸಲು ಸಮುದಾಯದ ಪ್ರತಿಭಾನ್ವಿತರು ಸಾಮಾನ್ಯ ವರ್ಗದ ಹುದ್ದೆಗಳಿಗೆ ಅರ್ಹರು : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

17/01/2026 6:17 AM

ಟೋಲ್ ಬೂತ್’ಗಳಲ್ಲಿ ನಗದು ಪಾವತಿ ಬ್ಯಾನ್, ‘ಫಾಸ್ಟ್ ಟ್ಯಾಗ್, UPI ಪಾವತಿ’ಗೆ ಮಾತ್ರ ಅನುಮತಿ!

17/01/2026 6:09 AM

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯುವಂತೆ ಜ್ಞಾಪಿಸಲು `ನೀರಿನ ಗಂಟೆ’ ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ

17/01/2026 6:05 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗಮನಿಸಿ : ರಾಜ್ಯದಲ್ಲಿ ` ಮ್ಯುಟೇಷನ್ ಪೋಡಿ ನಕ್ಷೆ ತಯಾರಿಸಲು ಅನುಸರಿಸಬೇಕಾದ ಕ್ರಮಗಳು ಹೀಗಿವೆ.!
KARNATAKA

ಗಮನಿಸಿ : ರಾಜ್ಯದಲ್ಲಿ ` ಮ್ಯುಟೇಷನ್ ಪೋಡಿ ನಕ್ಷೆ ತಯಾರಿಸಲು ಅನುಸರಿಸಬೇಕಾದ ಕ್ರಮಗಳು ಹೀಗಿವೆ.!

By kannadanewsnow5717/11/2025 6:19 AM

ಬೆಂಗಳೂರು : ಮ್ಯುಟೇಷನ್ ಪೂರ್ವ ನಕ್ಷೆ ತಯಾರಿಸಲು ನೋಟೀಸ್ ಜಾರಿ ಮಾಡುವಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತಂತೆ ಭೂಮಾಪನ ಕಂದಾಯ ವ್ಯವಸ್ಥೆ,ಮತ್ತು ಭೂದಾಖಲೆಗಳ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಭೂವ್ಯಾಜ್ಯಗಳನ್ನು ಮುಂಬರುವ ದಿನಗಳಲ್ಲಿ ತಡೆಗಟ್ಟುವ ಮಹತ್ತರವಾದ ಧೈಯವನ್ನು ಇಲಾಖೆಯು ಹೊಂದಿದ್ದು, ಇದಕ್ಕೆ ಪೂರಕವಾಗಿ 11ಇ ಸ್ಕೆಚ್ ತಯಾರಿಕೆ, ಸಂಯೋಜಿತ ಮ್ಯುಟೇಷನ್ ಪೋಡಿ ಯೋಜನೆಗಳನ್ನು ಕಾರ್ಯ ರೂಪಕ್ಕೆ ತಂದಿರುತ್ತದೆ. ಈ ಯೋಜನೆಗಳ ಪ್ರಮುಖ ಉದ್ದೇಶವು ಮ್ಯುಟೇಷನ್ ಪೂರ್ವ ನಕ್ಷೆಗಳನ್ನು ಸಿದ್ಧಪಡಿಸುವ ಹಂತದಲ್ಲಿಯೇ ಸರ್ವೆ ನಂಬರಿನಲ್ಲಿ ಹಿತಾಸಕ್ತಿಯುಳ್ಳವರೆಲ್ಲರಿಗೂ ಮುಂಚಿತವಾಗಿ ನೋಟೀಸ್ ಜಾರಿ ಮಾಡಿ, ಎಲ್ಲರ ಸಮಕ್ಷಮ ಅಳತೆ ಮಾಡಿ, ಎಲ್ಲಾ ಹಕ್ಕುದಾರರಿಗೂ ಪ್ರತ್ಯೇಕ ಗಡಿ ನಿರ್ಧರಿಸಿ ಹಕ್ಕು ದಾಖಲೆಗಳನ್ನು ತಯಾರಿಸಿ ನಕ್ಷೆಗಳನ್ನು ವಿತರಿಸುವುದಾಗಿದೆ. ಆದ್ದರಿಂದ, ಮ್ಯುಟೇಷನ್ ಪೂರ್ವ ನಕ್ಷೆಗಳನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ಸಂಬಂಧಪಟ್ಟ ಎಲ್ಲಾ ಆರ್.ಟಿ.ಸಿ. ದಾರರಿಗೆ ನೋಟೀಸ್ ಜಾರಿ ಮಾಡುವುದು ಮುಖ್ಯ ಕೆಲಸವಾಗಿದೆ.

ನೋಟೀಸ್ ಜಾರಿ ಮಾಡುವ ಸಮಯದಲ್ಲಿ ಅನುಸರಿಸಬೇಕಾದ ವಿಧಾನ :-

1) ಆರ್ .ಟಿ.ಸಿ.ಯ ಕಾಲಂ ನಂ 9 ರಲ್ಲಿ ನಮೂದಾಗಿರುವ ಎಲ್ಲಾ ಹಕ್ಕುದಾರರಿಗೂ ಅವರ ಹಕ್ಕುಗಳಿಗೆ ಅನುಸಾರವಾಗಿ ಅಳತೆ ಮಾಡಬೇಕಾಗಿದ್ದು, ಎಲ್ಲರಿಗೂ ನೋಟೀಸ್ ಜಾರಿ ಮಾಡುವುದು.

2) ಎಲ್ಲಾ ಆರ್.ಟಿ.ಸಿ. ದಾರರ ವಿಳಾಸ ವಿವರಗಳನ್ನು 11 ಇ ನಕ್ಷೆ ಕೋರಿ ಅರ್ಜಿ ಸಲ್ಲಿಸುವ ಅರ್ಜಿದಾರರಿಂದ ಸಾಧ್ಯವಾದಷ್ಟು ಅರ್ಜಿ ಸಲ್ಲಿಸುವ ಸಮಯದಲ್ಲಿಯೇ ಪಡೆಯುವುದು.

3) ಆರ್ಲ.ಟಿ.ಸಿ. ದಾರರು ಗ್ರಾಮದಲ್ಲಿಯೇ ವಾಸವಾಗಿದ್ದಲ್ಲಿ ಖುದ್ದಾಗಿ ನೋಟೀಸ್ ಜಾರಿ ಮಾಡುವುದು. ನೋಟೀಸ್ ಜಾರಿ ಮಾಡಿದ ವಿಧಾನದ ಬಗ್ಗೆ ಮಹಜರ್‌ನಲ್ಲಿ ವಿವರವಾಗಿ ದಾಖಲೆ ಮಾಡುವುದು. ಆರ್.ಟಿ.ಸಿ.ದಾರರು ಬೇರೆ ಸ್ಥಳದಲ್ಲಿ ವಾಸವಾಗಿದ್ದಲ್ಲಿ ಅಂಚೆಯ ಮೂಲಕ (ಸಿ.ಓ.ಪಿ) ಅಳತೆ ದಿನಾಂಕವನ್ನು ತಪ್ಪದೇ ತಿಳಿಯಪಡಿಸುವುದು.

4) ಎಲ್ಲಾ ಆರ್.ಟಿ.ಸಿ.ದಾರರು ಅಳತೆ ವೇಳೆಯಲ್ಲಿ ಹಾಜರಿರುವಂತೆ ಅವಶ್ಯವಾದ ಎಲ್ಲಾ ಕ್ರಮ ಜರುಗಿಸುವುದು. ಕೈಗೊಂಡ ಕ್ರಮಗಳ ಬಗ್ಗೆ ಮಹಜರ್‌ನಲ್ಲಿ ಸ್ಪಷ್ಟವಾಗಿ ನಮೂದಿಸುವುದು. ನೋಟೀಸ್ ಜಾರಿ ಮಾಡಲಾಗಿಯೂ ಆರ್ಲ.ಟಿ.ಸಿ.ದಾರರ ಪೈಕಿ ಯಾರಾದರೂ ಅಳತೆ ವೇಳೆಯಲ್ಲಿ ಗೈರುಹಾಜರಾಗಿದ್ದರೂ ಸಹ ಅಳತೆ ಕೆಲಸ ಮುಂದುವರೆಸುವುದು. ಎಲ್ಲಾ ಆರ್.ಟಿ.ಸಿ.ದಾರರು ಹಾಜರಿಲ್ಲವೆಂದು ಅಳತೆ ನಿಲ್ಲಿಸುವ ಅಗತ್ಯವಿಲ್ಲ. ಅಳತೆ ಮಾಡುವ ಸಮಯದಲ್ಲಿ ಹಾಜರಾಗುವ ಹಕ್ಕುದಾರರು ಅಥವಾ ಗ್ರಾಮಸ್ಥರ ಸಮ್ಮುಖದಲ್ಲಿ ಅಳತೆ ಮಾಡಿ ಮಹಜರ್‌ನಲ್ಲಿ ನೋಟೀಸ್ ಪಡೆದು ಹಾಜರಾದವರ, ಹಾಜರಾಗದವರ, ನೋಟೀಸು ಪಡೆಯದ ಗೈರು ಹಾಜರಾದವರ ಬಗ್ಗೆ ನಮೂದಿಸುವುದು.

5) ಅಳತೆ ಸಮಯದಲ್ಲಿ ಆರ್.ಟಿ.ಸಿ. ಯ ಎಲ್ಲಾ ಹಕ್ಕುದಾರರ ಪೈಕಿ ಒಬ್ಬರ ಕೋರಿಕೆ ಇದ್ದರೂ ಸಹ ಆರ್ರ.ಟಿ.ಸಿ.ದಾರರು ಹಾಜರಿದ್ದು, ತಮ್ಮ ಅನುಭವ ತೋರಿಸಿ ತಂಟೆತಕರಾರು ಇಲ್ಲದಿದ್ದಲ್ಲಿ ಅವರ ಹಕ್ಕಿನ ವಿಸ್ತೀರ್ಣಕ್ಕೂ ಹಿಸ್ಸೆ ವಿಂಗಡಿಸಿ, ಅಳತೆ ದಾಖಲಿಸಿ ಬ್ಲಾಕ್ ನಂಬರ್ ನೀಡುವುದು.

6) ಸರ್ವೆ ನಂಬರಿನ ಬಾಜು ಸರ್ವೆ ನಂಬರುಗಳ ಹಿಡುವಳಿದಾರರಿಗೆ ನೋಟೀಸು ಜಾರಿ ಮಾಡುವ ಅವಶ್ಯಕತೆ ಇರುವುದಿಲ್ಲ ಹಾಗೂ ಅವರ ಆಕ್ಷೇಪಣೆಗಳನ್ನು 11 ಇ ನಕ್ಷೆ ತಯಾರಿಸುವ ಸಮಯದಲ್ಲಿ ಪರಿಗಣಿಸುವ ಅವಶ್ಯಕತೆ ಇರುವುದಿಲ್ಲ.

ಈ ಕ್ರಮಗಳನ್ನು ಮ್ಯುಟೇಷನ್ ಪೂರ್ವ ನಕ್ಷೆಗಳನ್ನು ತಯಾರಿಸುವಾಗ ಕಡ್ಡಾಯವಾಗಿ ಅನುಸರಿಸಲು ಎಲ್ಲಾ ಪರವಾನಗಿ ಭೂಮಾಪಕರಿಗೆ ಸೂಚನೆ ನೀಡುವುದು ತಹಶೀಲ್ದಾರ್ ಮತ್ತು ಪರ್ಯಾವೇಕ್ಷಕರ ಜವಾಬ್ದಾರಿಯಾಗಿರುತ್ತದೆ ಹಾಗೂ ಭೂದಾಖಲೆಗಳ ಉಪ ನಿರ್ದೇಶಕರು ನೋಟೀಸ್ ಜಾರಿ ಪ್ರಕ್ರಿಯೆಯಲ್ಲಿ ಮೇಲೆ ತಿಳಿಸಿರುವ ಕ್ರಮಗಳನ್ನು ಅನುಸರಿಸುತ್ತಿರುವ ಬಗ್ಗೆ ಪರಿಶೀಲಿಸಿ ವರದಿ ನೀಡುವುದು.

Note: The steps to be followed to prepare a mutation map in the state are as follows.!
Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯುವಂತೆ ಜ್ಞಾಪಿಸಲು `ನೀರಿನ ಗಂಟೆ’ ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ

17/01/2026 6:05 AM1 Min Read

BIG NEWS : ರಾಜ್ಯದಲ್ಲಿ `SSLC-PUC’ ಪ್ರಶ್ನೆ ಪತ್ರಿಕೆ ಲೀಕ್ ಆದರೆ `ಪ್ರಿನ್ಸಿಪಾಲ್’ ವಿರುದ್ಧ ಕೇಸ್ : ಶಿಕ್ಷಣ ಇಲಾಖೆ ಖಡಕ್ ಆದೇಶ

17/01/2026 5:58 AM1 Min Read

ಯುಜಿಸಿಇಟಿ-26ಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭ: ಫೆ.16 ಕೊನೆ ದಿನ

17/01/2026 5:50 AM2 Mins Read
Recent News

BIG NEWS : ಮೀಸಲು ಸಮುದಾಯದ ಪ್ರತಿಭಾನ್ವಿತರು ಸಾಮಾನ್ಯ ವರ್ಗದ ಹುದ್ದೆಗಳಿಗೆ ಅರ್ಹರು : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

17/01/2026 6:17 AM

ಟೋಲ್ ಬೂತ್’ಗಳಲ್ಲಿ ನಗದು ಪಾವತಿ ಬ್ಯಾನ್, ‘ಫಾಸ್ಟ್ ಟ್ಯಾಗ್, UPI ಪಾವತಿ’ಗೆ ಮಾತ್ರ ಅನುಮತಿ!

17/01/2026 6:09 AM

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯುವಂತೆ ಜ್ಞಾಪಿಸಲು `ನೀರಿನ ಗಂಟೆ’ ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ

17/01/2026 6:05 AM

BIG NEWS : ರಾಜ್ಯದಲ್ಲಿ `SSLC-PUC’ ಪ್ರಶ್ನೆ ಪತ್ರಿಕೆ ಲೀಕ್ ಆದರೆ `ಪ್ರಿನ್ಸಿಪಾಲ್’ ವಿರುದ್ಧ ಕೇಸ್ : ಶಿಕ್ಷಣ ಇಲಾಖೆ ಖಡಕ್ ಆದೇಶ

17/01/2026 5:58 AM
State News
KARNATAKA

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯುವಂತೆ ಜ್ಞಾಪಿಸಲು `ನೀರಿನ ಗಂಟೆ’ ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ

By kannadanewsnow5717/01/2026 6:05 AM KARNATAKA 1 Min Read

ಬೆಂಗಳೂರು : ಮಕ್ಕಳಿಗೆ ನೀರು ಕುಡಿಯುವಂತೆ ಜ್ಞಾಪಿಸಲು ಶಾಲೆಗಳಲ್ಲಿ ‘ನೀರಿನ ಗಂಟೆ’ (ವಾಟರ್‌ ಬೆಲ್‌) ಬಾರಿಸುವುದನ್ನು ಕಡ್ಡಾಯಗೊಳಿಸಿ, ಶಾಲಾ ಶಿಕ್ಷಣ…

BIG NEWS : ರಾಜ್ಯದಲ್ಲಿ `SSLC-PUC’ ಪ್ರಶ್ನೆ ಪತ್ರಿಕೆ ಲೀಕ್ ಆದರೆ `ಪ್ರಿನ್ಸಿಪಾಲ್’ ವಿರುದ್ಧ ಕೇಸ್ : ಶಿಕ್ಷಣ ಇಲಾಖೆ ಖಡಕ್ ಆದೇಶ

17/01/2026 5:58 AM

ಯುಜಿಸಿಇಟಿ-26ಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭ: ಫೆ.16 ಕೊನೆ ದಿನ

17/01/2026 5:50 AM

ಪೋಷಕರೇ ಗಮನಿಸಿ : `ಏಕಲವ್ಯ ಮಾದರಿ ವಸತಿ ಶಾಲೆ’ಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

17/01/2026 5:49 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.