Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತದಲ್ಲಿ SJ-100 ಪ್ರಯಾಣಿಕ ವಿಮಾನಗಳನ್ನು ಉತ್ಪಾದಿಸಲು ರಷ್ಯಾದ ಯುಎಸಿಯೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ ಭಾರತ

29/10/2025 7:00 AM

ಮೂರನೇ ತ್ರೈಮಾಸಿಕದಲ್ಲಿ ಭಾರತೀಯ ರಿಯಲ್ ಎಸ್ಟೇಟ್ ನಲ್ಲಿ ‘ವಿದೇಶಿ ಹೂಡಿಕೆ’ ಶೇ.68ರಷ್ಟು ಕುಸಿತ

29/10/2025 6:57 AM

SHOCKING : ದೇಶದಲ್ಲೊಂದು ವಿಚಿತ್ರ ಘಟನೆ : ಕನಸಿಗೆ ಹೆದರಿ 16 ವರ್ಷದ ಬಾಲಕ ಆತ್ಮಹತ್ಯೆ.!

29/10/2025 6:55 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ `ದ್ವಿತೀಯ ಪಿಯುಸಿ’ ಪಾಸ್ ಗೆ ಲಿಖಿತ ಪರೀಕ್ಷೆಯಲ್ಲಿ `ಕನಿಷ್ಠ ಅಂಕ’ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ
KARNATAKA

ರಾಜ್ಯದಲ್ಲಿ `ದ್ವಿತೀಯ ಪಿಯುಸಿ’ ಪಾಸ್ ಗೆ ಲಿಖಿತ ಪರೀಕ್ಷೆಯಲ್ಲಿ `ಕನಿಷ್ಠ ಅಂಕ’ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

By kannadanewsnow5729/10/2025 6:40 AM

ಬೆಂಗಳೂರು : ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಇರುವ ವಿಷಯಗಳಿಗೆ ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 21 ಅಂಕ, ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 24 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಹತ್ವದ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಹಾಗು ಉಲ್ಲೇಖ (1) ರ ಸರ್ಕಾರಿ ಆದೇಶದಂತೆ 2025-26 ನೇ ಶೈಕ್ಷಣಿಕ ಸಾಲಿನಿಂದ ಪ್ರಾಯೋಗಿಕ ಹಾಗು ಪ್ರಾಯೋಗಿಕವಲ್ಲದ ಪರೀಕ್ಷಾ ವಿಷಯಗಳಿಗೆ ಕನಿಷ್ಠ ಉತ್ತೀರ್ಣ ಶೇಕಡವಾರು ಪ್ರಮಾಣವನ್ನು ನಿಗದಿಪಡಿಸಿ ಸರ್ಕಾರ ಅದೇಶಸಿದೆ. ಅದರಂತೆ ಭಾಷಾ ಮತ್ತು ಐಚಿಕ ವಿಷಯಗಳಿಗೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಯು ಪ್ರಕಟಿಸಿರುವ ಪಠ್ಯವಸ್ತುವನ್ನು ಆಧರಿಸಿ ಪರೀಕ್ಷೆಗಳನ್ನು ಈ ಕೆಳಕಂಡ ಅಂಶಗಳಂತೆ ನಡೆಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.

2025-26ನೇ ಶೈಕ್ಷಣಿಕ ವರ್ಷದಿಂದ ಮನಃಶಾಸ್ತ್ರ (PSYCHOLOGY), ಗಣಕ ವಿಜ್ಞಾನ (COMPUTER SCIENCE) ಮತ್ತು ಗ್ರಹವಿಜ್ಞಾನ (HOME SCIENCE) ವಿಷಯಗಳಿಗೆ ಹೊಸ ಪಠ್ಯಕ್ರಮವನ್ನು ಅಳವಡಿಸಿದ್ದು, ಹೊಸ ವಿದ್ಯಾರ್ಥಿಗಳು (FRESH STUDENTS) ಮತ್ತು ಖಾಸಗಿ ಅಭ್ಯರ್ಥಿಗಳಿಗೆ ಹೊಸ ಪಠ್ಯಕ್ರಮದನ್ವಯ ಪ್ರಶ್ನೆಪತ್ರಿಕೆ ರಚಿಸಲಾಗುತ್ತದೆ.

ಸದರಿ ವಿಷಯಗಳ ಪುನರಾವರ್ತಿತ ಅಭ್ಯರ್ಥಿಗಳಿಗೆ 2025-26 ಮತ್ತು 2026-27ನೇ ಸಾಲಿನ ಪರೀಕ್ಷೆಗಳಿಗೆ ಮಾತ್ರ ಹಳೇ ಪಠ್ಯಕ್ರಮದಂತೆ ಪ್ರಶ್ನೆಪತ್ರಿಕೆ ರಚಿಸಿ ಪರೀಕ್ಷೆ ನಡೆಸಲಾಗುತ್ತದೆ. 2025-26ನೇ ಸಾಲಿನಿಂದ ಪರೀಕ್ಷೆಗೆ ಹಾಜರಾಗುವ ಹೊಸ (FRESHER), ಖಾಸಗಿ (PRIVATE) ಮತ್ತು ಪುನರಾವರ್ತಿತ (REPEATER) ಅಭ್ಯರ್ಥಿಗಳಿಗೆ ಈ ಕೆಳಕಂಡ ಕನಿಷ್ಠ ಉತ್ತೀರ್ಣ ಶೇಕಡವಾರು ಪ್ರಮಾಣ ಅನ್ವಯವಾಗುತ್ತದೆ.

ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ ಲಿಖಿತ ಪರೀಕ್ಷೆಯನ್ನು ಹಾಗೂ ಕನಿಷ್ಠ ಉತ್ತೀರ್ಣ ಶೇಕಡವಾರು ಪ್ರಮಾಣವನ್ನು ಈ ಕೆಳಕಂಡಂತೆ ನಿಗದಿಪಡಿಸಲಾಗಿದೆ.

ಪ್ರಾಯೋಗಿಕ ಪರೀಕ್ಷೆ ಇಲ್ಲದ ಭಾಷಾ ಮತ್ತು ಐಚ್ಚಿಕ ವಿಷಯಗಳಿಗೆ (ಕರ್ನಾಟಕ ಸಂಗೀತ ಹಾಗು ಹಿಂದೂಸ್ಥಾನಿ ಸಂಗೀತ ವಿಷಯಗಳನ್ನು ಹೊರತುಪಡಿಸಿ) ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಯು ಪ್ರಕಟಿಸಿರುವ ಪಠ್ಯವಸ್ತುವನ್ನು ಆಧರಿಸಿ ಉಲ್ಲೇಖ (2) ರಂತೆ 80 ಅಂಕಗಳನ್ನು ಲಿಖಿತ ಪರೀಕ್ಷೆಗೆ ಹಾಗೂ 20 ಅಂಕಗಳನ್ನು ಆಂತರಿಕ ಮೌಲ್ಯಮಾಪನಕ್ಕೆ ನಿಗದಿಪಡಿಸಲಾಗಿದೆ.

ಆಂತರಿಕ ಮೌಲ್ಯಮಾಪನಕ್ಕೆ ಗರಿಷ್ಠ 20 ಅಂಕಗಳಿದ್ದು, ಇದಕ್ಕೆ ಯಾವುದೇ ಕನಿಷ್ಠ ಅಂಕಗಳ ಮಿತಿಯನ್ನು ನಿಗದಿಪಡಿಸಿರುವುದಿಲ್ಲ.

ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ ಪ್ರಶ್ನೆಪತ್ರಿಕಾ ವಿನ್ಯಾಸ, ನೀಲಿನಕ್ಷೆ ಹಾಗು ಪ್ರಶ್ನೆ ಪತ್ರಿಕೆಗಳನ್ನು ಗರಿಷ್ಠ 80 ಅಂಕಗಳಿಗೆ ಸಿದ್ಧಪಡಿಸಲಾಗುತ್ತದೆ. ಪ್ರತಿ ವಿಷಯದ ಲಿಖಿತ ಪರೀಕ್ಷೆಯಲ್ಲಿ ಗರಿಷ್ಠ 80 ಅಂಕಗಳಿಗೆ, ಕನಿಷ್ಠ 24 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ಆಂತರಿಕ ಅಂಕಗಳೂ ಸೇರಿ ಕನಿಷ್ಠ 30 ಅಂಕಗಳನ್ನು ಪಡೆದಲ್ಲಿ ಹಾಗೂ ಎಲ್ಲಾ ವಿಷಯಗಳಲ್ಲಿ ಒಟ್ಟಾರೆಯಾಗಿ ಶೇಕಡಾ 33 ಅಂಕಗಳನ್ನು ಪಡೆದಲ್ಲಿ ಅಂತಹ ಅಭ್ಯರ್ಥಿಯನ್ನು ಉತ್ತೀರ್ಣರಾಗಿದ್ದಾರೆ ಎಂದು ಘೋಷಿಸಲಾಗುತ್ತದೆ.

ಪ್ರಾಯೋಗಿಕ ಪರೀಕ್ಷೆ ಇರುವ ವಿಷಯಗಳಿಗೆ ಲಿಖಿತ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ ಹಾಗೂ ಕನಿಷ್ಠ ಉತ್ತೀರ್ಣ ಶೇಕಡವಾರು ಪ್ರಮಾಣವನ್ನು ಈ ಕೆಳಕಂಡಂತೆ ನಿಗದಿಪಡಿಸಲಾಗಿದೆ.

ಅ. ಕರ್ನಾಟಕ ಸಂಗೀತ ಹಾಗು ಹಿಂದೂಸ್ಥಾನಿ ಸಂಗೀತ ವಿಷಯಗಳಲ್ಲಿ ಗರಿಷ್ಠ 40 ಅಂಕಗಳ ಲಿಖಿತ ಹಾಗು 60 ಅಂಕಗಳ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತದೆ. ಉತ್ತೀರ್ಣರಾಗಲು ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 12 ಅಂಕಗಳನ್ನು ಹಾಗು ಪ್ರಾಯೋಗಿಕ ಪರೀಕ್ಷೆಯಲ್ಲಿ ಕನಿಷ್ಠ 18 ಅಂಕಗಳನ್ನು ಒಂದೇ ಪರೀಕ್ಷೆಯಲ್ಲಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಈ ಎರಡು ಅಂಶಗಳು ಸೇರಿ ಕನಿಷ್ಠ 30 ಅಂಕಗಳನ್ನು ಪಡೆದಲ್ಲಿ ಹಾಗೂ ಎಲ್ಲಾ ವಿಷಯಗಳಲ್ಲಿ ಒಟ್ಟಾರೆಯಾಗಿ ಶೇಕಡಾ 33 ಅಂಕಗಳನ್ನು ಪಡೆದಲ್ಲಿ ಅಂತಹ ಅಭ್ಯರ್ಥಿಯನ್ನು ಉತ್ತೀರ್ಣರಾಗಿದ್ದಾರೆ ಎಂದು ಘೋಷಿಸಲಾಗುತ್ತದೆ.

ಆ. NSQF ವಿಷಯಗಳಲ್ಲಿ ಲಿಖಿತ ಪರೀಕ್ಷೆಯನ್ನು ಗರಿಷ್ಠ 60 ಅಂಕಗಳಿಗೆ ನಡೆಸಿ, 30 ಅಂಕಗಳಿಗೆ ಪರಿವರ್ತಿಸಲಾಗುವುದು. ಪ್ರಾಯೋಗಿಕ ಪರೀಕ್ಷೆಯನ್ನು ಗರಿಷ್ಠ 50 ಅಂಕಗಳಿಗೆ ನಡೆಸಲಾಗುತ್ತದೆ ಹಾಗು 20 ಅಂಕಗಳನ್ನು ಆಂತರಿಕ ಮೌಲ್ಯಮಾಪನಕ್ಕೆ ನಿಗದಿಪಡಿಸಲಾಗಿದೆ. ಉತ್ತೀರ್ಣರಾಗಲು ಲಿಖಿತ ಪರೀಕ್ಷೆಯಲ್ಲಿ 30 ಅಂಕಗಳಿಗೆ ಕನಿಷ್ಠ 10 ಅಂಕಗಳು ಮತ್ತು ಪ್ರಾಯೋಗಿಕ ಪರೀಕ್ಷೆಯಲ್ಲಿ ಕನಿಷ್ಠ 18 ಅಂಕಗಳನ್ನು ಒಂದೇ ಪರೀಕ್ಷೆಯಲ್ಲಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಈ ಮೂರು ಅಂಶಗಳು ಸೇರಿ ಕನಿಷ್ಠ 30 ಅಂಕಗಳನ್ನು ಪಡೆದಲ್ಲಿ ಹಾಗೂ ಎಲ್ಲಾ ವಿಷಯಗಳಲ್ಲಿ ಒಟ್ಟಾರೆಯಾಗಿ ಶೇಕಡಾ 33 ಅಂಕಗಳನ್ನು ಪಡೆದಲ್ಲಿ ಅಂತಹ ಅಭ್ಯರ್ಥಿಯನ್ನು ಉತ್ತೀರ್ಣರಾಗಿದ್ದಾರೆ ಎಂದು ಘೋಷಿಸಲಾಗುತ್ತದೆ.

ಇ. ವಿಜ್ಞಾನ ಸಂಯೋಜನೆಯ ಪ್ರಾಯೋಗಿಕ ವಿಷಯಗಳಿಗೆ:-

(PHYSICS), 김영진 (CHEMISTRY), ) (BIOLOGY), ವಿಜ್ಞಾನ (COMPUTER SCIENCE), ವಿದ್ಯುನ್ಮಾನಶಾಸ್ತ್ರ (ELECTRONICS) ಮತ್ತು ಗೃಹವಿಜ್ಞಾನ (HOME SCIENCE) ವಿಷಯಗಳಿಗೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಯು ಪ್ರಕಟಿಸಿರುವ ಪಠ್ಯವಸ್ತುವನ್ನು ಆಧರಿಸಿ ಉಲ್ಲೇಖ (2) ರಂತೆ 70 ಅಂಕಗಳಿಗೆ ಲಿಖಿತ ಪರೀಕ್ಷೆಯನ್ನು ಹಾಗೂ 30 ಅಂಕಗಳಿಗೆ ಪ್ರಾಯೋಗಿಕ ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ.

ಸದರಿ ವಿಷಯಗಳಿಗೆ ಪ್ರಶ್ನೆಪತ್ರಿಕಾ ವಿನ್ಯಾಸ, ನೀಲಿನಕ್ಷೆ ಹಾಗು ಪ್ರಶ್ನೆ ಪತ್ರಿಕೆಗಳನ್ನು ಗರಿಷ್ಠ 70 ಅಂಕಗಳಿಗೆ ಸಿದ್ಧಪಡಿಸಲಾಗುತ್ತದೆ. ಪ್ರತಿ ವಿಷಯದ ಲಿಖಿತ ಪರೀಕ್ಷೆಯಲ್ಲಿ ಗರಿಷ್ಠ 70 ಅಂಕಗಳಿಗೆ, ಕನಿಷ್ಠ 21 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ಪ್ರಾಯೋಗಿಕ ಪರೀಕ್ಷೆ ಅಂಕಗಳೂ ಸೇರಿ ಕನಿಷ್ಠ 30 ಅಂಕಗಳನ್ನು ಪಡೆದಲ್ಲಿ ಹಾಗೂ ಎಲ್ಲಾ ವಿಷಯಗಳಲ್ಲಿ ಒಟ್ಟಾರೆಯಾಗಿ ಶೇಕಡಾ 33 ಅಂಕಗಳನ್ನು ಪಡೆದಲ್ಲಿ ಅಂತಹ ಅಭ್ಯರ್ಥಿಯನ್ನು ಉತ್ತೀರ್ಣರಾಗಿದ್ದಾರೆ ಎಂದು ಘೋಷಿಸಲಾಗುತ್ತದೆ. ಪ್ರಾಯೋಗಿಕ ಪರೀಕ್ಷೆಗೆ ಗರಿಷ್ಠ 30 ಅಂಕಗಳಿದ್ದು, ಇದರಲ್ಲಿ ಯಾವುದೇ ಕನಿಷ್ಠ ಅಂಕಗಳ ಮಿತಿಯನ್ನು ನಿಗದಿಪಡಿಸಿರುವುದಿಲ್ಲ.

'Minimum marks' in written exam mandatory for passing 'Second PUC' in the state: Important order from the government
Share. Facebook Twitter LinkedIn WhatsApp Email

Related Posts

ರಾಜ್ಯದ ಸರ್ಕಾರಿ ಶಾಲೆ, ಪಿಯು ಕಾಲೇಜುಗಳಲ್ಲಿ ನೀರು, ವಿದ್ಯುತ್ ಬಿಲ್ ಪಾವತಿಗೆ ಸರ್ಕಾರದಿಂದ 15 ಕೋಟಿ ರೂ.ಬಿಡುಗಡೆ

29/10/2025 6:40 AM2 Mins Read

ರಾಜ್ಯದ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕಿಯರು, ಮಹಿಳಾ ನೌಕರರಿಗೆ ಗುಡ್ ನ್ಯೂಸ್ : ‘ಶಿಶುಪಾಲನಾ ರಜೆ’ ಸೌಲಭ್ಯ ಕಲ್ಪಿಸಿ ಸರ್ಕಾರ ಮಹತ್ವದ ಆದೇಶ

29/10/2025 6:27 AM1 Min Read

ರಾಜ್ಯದ ಜನತೆಯ ಗಮನಕ್ಕೆ : ನಿಮ್ಮ `BPL’ ರೇಷನ್ ಕಾರ್ಡ್ ರದ್ದಾಗಿದ್ದರೆ ಜಸ್ಟ್ ಹೀಗೆ ಮಾಡಿ.!

29/10/2025 6:15 AM3 Mins Read
Recent News

ಭಾರತದಲ್ಲಿ SJ-100 ಪ್ರಯಾಣಿಕ ವಿಮಾನಗಳನ್ನು ಉತ್ಪಾದಿಸಲು ರಷ್ಯಾದ ಯುಎಸಿಯೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ ಭಾರತ

29/10/2025 7:00 AM

ಮೂರನೇ ತ್ರೈಮಾಸಿಕದಲ್ಲಿ ಭಾರತೀಯ ರಿಯಲ್ ಎಸ್ಟೇಟ್ ನಲ್ಲಿ ‘ವಿದೇಶಿ ಹೂಡಿಕೆ’ ಶೇ.68ರಷ್ಟು ಕುಸಿತ

29/10/2025 6:57 AM

SHOCKING : ದೇಶದಲ್ಲೊಂದು ವಿಚಿತ್ರ ಘಟನೆ : ಕನಸಿಗೆ ಹೆದರಿ 16 ವರ್ಷದ ಬಾಲಕ ಆತ್ಮಹತ್ಯೆ.!

29/10/2025 6:55 AM

ಖಾಸಗಿ ವೈದ್ಯರಿಗೂ 50 ಲಕ್ಷ ರೂಪಾಯಿ ಕೇಂದ್ರ ನೆರವು ಸಿಗಬೇಕು: ಸುಪ್ರೀಂಕೋರ್ಟ್

29/10/2025 6:51 AM
State News
KARNATAKA

ರಾಜ್ಯದ ಸರ್ಕಾರಿ ಶಾಲೆ, ಪಿಯು ಕಾಲೇಜುಗಳಲ್ಲಿ ನೀರು, ವಿದ್ಯುತ್ ಬಿಲ್ ಪಾವತಿಗೆ ಸರ್ಕಾರದಿಂದ 15 ಕೋಟಿ ರೂ.ಬಿಡುಗಡೆ

By kannadanewsnow5729/10/2025 6:40 AM KARNATAKA 2 Mins Read

ಬೆಂಗಳೂರು: ಸರ್ಕಾರಿ ಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ಬಳಕೆಯಾಗಿರುವ ವಿದ್ಯುತ್‌ ಮತ್ತು ನೀರಿನ ಬಿಲ್ ಪಾವತಿಗಾಗಿ ರಾಜ್ಯ ಸರ್ಕಾರವು 15…

ರಾಜ್ಯದಲ್ಲಿ `ದ್ವಿತೀಯ ಪಿಯುಸಿ’ ಪಾಸ್ ಗೆ ಲಿಖಿತ ಪರೀಕ್ಷೆಯಲ್ಲಿ `ಕನಿಷ್ಠ ಅಂಕ’ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

29/10/2025 6:40 AM

ರಾಜ್ಯದ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕಿಯರು, ಮಹಿಳಾ ನೌಕರರಿಗೆ ಗುಡ್ ನ್ಯೂಸ್ : ‘ಶಿಶುಪಾಲನಾ ರಜೆ’ ಸೌಲಭ್ಯ ಕಲ್ಪಿಸಿ ಸರ್ಕಾರ ಮಹತ್ವದ ಆದೇಶ

29/10/2025 6:27 AM

ರಾಜ್ಯದ ಜನತೆಯ ಗಮನಕ್ಕೆ : ನಿಮ್ಮ `BPL’ ರೇಷನ್ ಕಾರ್ಡ್ ರದ್ದಾಗಿದ್ದರೆ ಜಸ್ಟ್ ಹೀಗೆ ಮಾಡಿ.!

29/10/2025 6:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.