Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಅಂಡಮಾನ್ ಪ್ರವಾಸಕ್ಕೆ ತೆರಳಿದಾಗ ದುರಂತ : ಧಾರವಾಡದ KCD ಕಾಲೇಜು ಪ್ರೊಫೆಸರ್ ‘ಹೃದಯಾಘಾತಕ್ಕೆ’ ಬಲಿ!

12/01/2026 6:27 AM

ಸಾರ್ವಜನಿಕರೇ ಗಮನಿಸಿ: `ಸೈಟ್’ ಖರೀದಿಸುವಾಗ ಈ 7 ದಾಖಲೆಗಳು ಸರಿ ಇದೆಯಾ ಒಮ್ಮೆ ಚೆಕ್ ಮಾಡಿಕೊಳ್ಳಿ

12/01/2026 6:20 AM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಟ್ರ್ಯಾಕ್ಟರ್, ಟ್ಯಾಕ್ಸಿ, ಆಟೋ ರಿಕ್ಷಾ, ಗುಡ್ಸ್ ವಾಹನ ಖರೀದಿಗೆ ಸರ್ಕಾರದಿಂದ ಸಿಗಲಿದೆ 4 ಲಕ್ಷ ರೂ. ಸಹಾಯಧನ.!

12/01/2026 6:15 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಮಹಾ ಪದಗಾರ ‘ದಳವಾಯಿ ಚಿತ್ತಪ್ಪ’ ವಿಧಿವಶ
KARNATAKA

BREAKING: ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಮಹಾ ಪದಗಾರ ‘ದಳವಾಯಿ ಚಿತ್ತಪ್ಪ’ ವಿಧಿವಶ

By kannadanewsnow0921/10/2025 2:12 PM

ಬಳ್ಳಾರಿ: ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದಳವಾಯಿ ಚಿತ್ತಪ್ಪನವರು ನಿಧನರಾಗಿದ್ದಾರೆ. ಜನಪದ ಮಹಾಕಾವ್ಯಗಳ ಧ್ವನಿಗೆ ದಿಕ್ಕು ತೋರಿಸಿದ ಮಹಾ ಪದಗಾರ ಇನ್ನಿಲ್ಲವಾಗಿದ್ದಾರೆ.

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಬಂಡಿ ಗ್ರಾಮದ ದಳವಾಯಿ ಚಿತ್ತಪ್ಪ (90 ವರ್ಷ) ನವರ ಸಿರಿಕಂಠಕ್ಕೆ ತಲೆದೂಗದವರಿಲ್ಲ. ಸಂಡೂರು-ಕೂಡ್ಲಿಗಿ ಪರಿಸರದಲ್ಲಿ ಹಬ್ಬ ಹರಿದಿನಗಳಲ್ಲಿ ಗಣನಾದದೊಂದಿಗೆ ಚಿತ್ತಪ್ಪನ ದನಿ ಕೇಳದಿದ್ದರೆ ಕಾರ್ಯಕ್ರಮ ಅಪೂರ್ಣ ಎಂಬುವುದು ಸುತ್ತಲಿನವರ ಅಭಿಪ್ರಾಯವಾಗಿದೆ. ಶ್ರೀಯುತರು ಹಲವಾರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಮುದಾಯ ಸಮ್ಮೇಳನಗಳಲ್ಲಿ ಹಾಡಿ ಜನಮನ ಗೆದ್ದಿದ್ದರು.

ದಳವಾಯಿ ಚಿತ್ತಪ್ಪನವರು ತಮ್ಮ ಹದಿನೆಂಟನೇ ವಯಸ್ಸಿಗೆ ಮದುವೆಯಾದರು. ಇವರ ಪತ್ನಿ ಮರಬನಹಳ್ಳಿ ಸಣಮ್ಮ. ಇವರಿಗೆ ಐದು ಜನ ಗಂಡುಮಕ್ಕಳು ಮತ್ತು ಮೂರು ಜನ ಹೆಣ್ಣುಮಕ್ಕಳು . ಸುಮಾರು ಮುವತ್ತೈದು ಮೊಮ್ಮಕ್ಕಳು ಮರಿಮಕ್ಕಳನ್ನು ಕಂಡಿರುವ ದಳವಾಯಿ ಚಿತ್ತಪ್ಪನವರು ಸಂಡೂರು ಭಾಗದ ಗೊಲ್ಲಾಳಿಕೆಯಲ್ಲಿ ಹಿರಿಯ ತಲೆ. ದಳವಾಯಿ ಚಿತ್ತಪ್ಪನವರು ಎತ್ತರದ ಆಳು. ಅವರು ತೊಡುವ ಬಿಳಿ ಬಟ್ಟೆಯಂತೆಯೇ ಬೆಳ್ಳಗಿರುವ ಹುರಿಮೀಸೆ, ಎರೆಡೂ ಮುಂಗೈಯಲ್ಲಿ ಎದ್ದುಕಾಣುವ ಬೆಳ್ಳಿ ಕಡಗ, ಕಿವಿಯಲ್ಲಿ ಮಿಂಚುವ ಕಿವಿಯೋಲೆ, ಕೈಯಲ್ಲಿ ಬಿದುರು ಕೋಲು ಹಿಡಿದು ನಡೆದು ಬರುತ್ತಿದ್ದರೆ ಜಾನಪದ ಶಿಖರವೇ ನಡೆದು ಬರುವಂತೆ ಭಾಸವಾಗುತ್ತಿದ್ದರು.

ಕಾಡುಗೊಲ್ಲ ಬುಡಕಟ್ಟಿನ ಸಾಂಸ್ಕೃತಿಕ ಆರಾಧನಾ ದೈವಗಳಾದ ಜುಂಜಪ್ಪ, ಎತ್ತಪ್ಪ. ಚಿತ್ತಯ್ಯ ಸಿದ್ದಯ್ಯ, ರಂಗಪ್ಪ, ಗೌರಸಂದ್ರದ ಮಾರಮ್ಮ ಕುರಿತಂತೆ ಸುದೀರ್ಘ ಮಹಾ ಕಾವ್ಯಗಳನ್ನು ಲೀಲಾಜಾಲವಾಗಿ ಗಣೆಯೊಂದಿಗೆ ಹಾಡುವ ಕಲೆ ಕರಗತವಾಗಿತ್ತು. ‘ಚಿತ್ತಯ್ಯ’ನ ಕಾವ್ಯ ಇವರಿಗೆ ಅತ್ಯಂತ ಪ್ರಿಯವಾದದ್ದು. ಚಿತ್ತಯ್ಯ- ಗಂಗಿಮಾಳಿ ಮದುವೆ ಪ್ರಸಂಗವನ್ನು ಮನದುಂಬಿ ಹಾಡುವ ಶ್ರೀಯುತರು ಕಾಡುಗೊಲ್ಲ ಬುಡಕಟ್ಟಿನ ಮದುವೆ ಸಂಬಂದಿತ ಚಪ್ಪರ, ಹಾಲಸ್ತ, ಒಳ್ಳಕ್ಕಿ, ಜಾಡಿ, ಧಾರೆ, ಹಸೆ, ಬೂವ ಮುಂತಾದ ಆಚರಣಾ ವಿಧಾನಗಳನ್ನು ಚಿತ್ತಯ್ಯ- ಗಂಗಿ ಮಾಳವ್ವನ ಮದುವೆಗೆ ಅನ್ವಯಿಸಿ ಹಾಡುವ ಪರಿ ಹಾಗೂ ಸಾಹಿತ್ಯಕ ಪರಿಭಾಷೆ ಯಾವ ಶಿಷ್ಟ ಕವಿಗಳಿಗಿಂತಲೂ ಮಿಗಿಲಾಗಿ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಿದ್ದರು.

ಇಷ್ಟೇ ಅಲ್ಲದೆ ಇವರು ಹಾಡುವ ಎಲ್ಲಾ ಕಾವ್ಯ ಕಥನಗಳಲ್ಲಿ ಕಾಡುಗೊಲ್ಲ ಬುಡಕಟ್ಟಿನ ಸಾಂಸ್ಕೃತಿಕ ಸಾಮಾಜಿಕ ಸನ್ನಿವೇಶಗಳು ಅಂತರಗಂಗೆಯಾಗಿ ಪ್ರವಹಿಸುತ್ತಿರುತ್ತವೆ. ಚಿತ್ತಪ್ಪನವರ ಕನ್ನಡ ಭಾಷಾ ಸಂಪತ್ತು ಆಶ್ಚರ್ಯ ಹುಟ್ಟುವಷ್ಟು ಕಾವ್ಯಾತ್ಮಕತೆ ಹಾಗೂ ಧ್ವನಿ ಪೂರ್ಣತೆಯಿಂದ ಕೂಡಿದೆ . ಕಾಡು ಗೊಲ್ಲ ಬುಡಕಟ್ಟಿನ ಪಾರಂಪರಿಕ ಜ್ಞಾನ ಮತ್ತು ಕೌಶಲ ಲಿಪಿಯಲ್ಲಿಲ್ಲ, ಅವುಗಳು ಇರುವುದು ಅವರ ಮೌಖಿಕಥೆಯಲ್ಲಿ . ದಳವಾಯಿ ಚಿತ್ತಪ್ಪನವರು ಈ ಎಲ್ಲಾ ಸಂಗತಿಗಳನ್ನು ತಾನು ಹಾಡುವ ಕಾವ್ಯಗಳಲ್ಲಿ ಸಾಧಿತ ಗೊಳಿಸಿದ್ದರು.

ದಳವಾಯಿ ಚಿತ್ತಪ್ಪ ಇವರ ಪ್ರತಿಭಾ ಸಂಪತ್ತು ಹಾಗು ವ್ಯಕ್ತಿತ್ವವನ್ನು ಕುರಿತಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಮೌಲ್ಯಯುಕ್ತ ಲೇಖನಗಳು ಪ್ರಕಟಗೊಂಡಿವೆ.

ಬೆಂಗಳೂರಿನ ನಾಡೋಜ ಸಿರಿಯಜ್ಜಿ ಪ್ರತಿಷ್ಠಾನ ಕೊಡಮಾಡುವ ಪ್ರತಿಷ್ಠಿತ ಸಿರಿಬೆಳಗು ಪ್ರಶಸ್ತಿಗೆ ಭಾಜನರಾಗಿದ್ದರು. ಇದರೊಂದಿಗೆ ಕರ್ನಾಟಕ ಜಾನಪದ ಅಕಾಡೆಮಿ 2023-24 ನೇ ಸಾಲಿನ ರಾಜ್ಯ ಮಟ್ಟದ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿತ್ತು. ಮುಂದುವರಿಕೆಯಾಗಿ ಕರ್ನಾಟಕ ಜಾನಪದ ಪರಿಷತ್ತು ಲೋಕಸಿರಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು.

ದಳವಾಯಿ ಚಿತ್ತಪ್ಪನವರು ಇಂದು (21-10-2025) ನಿಧನರಾಗಿದ್ದಾರೆ. ಇವರ ನಿಧನದಿಂದ ಕನ್ನಡ ಜಾನಪದ ಲೋಕ ಒಬ್ಬ ಹಿರಿಯ ಸಾಂಸ್ಕೃತಿಕ ಕಲಾವಿದನನ್ನು ಕಳೆದುಕೊಂಡಿದೆ. ಇವರ ಜಾನಪದ ಕಾವ್ಯ ಕಥನಗಳು ಎಂದಿಗೂ ಜನಮನದಲ್ಲಿ ಅಚ್ಚಳಿಯದೆ ನೆಲೆಸಿರುತ್ತವೆ ಎಂಬುದಾಗಿ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಹೇಳುವ ಮೂಲಕ, ಅವರ ನಿಧನಕ್ಕೆ ಅಕಾಡೆಮಿಯ ಪರವಾಗಿ ಸಂತಾಪ ಸೂಚಿಸಿದ್ದಾರೆ.

ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು

BREAKING: ದಕ್ಷಿಣ ಆಫ್ರಿಕಾ ‘ಎ’ ವಿರುದ್ಧದ ಪಂದ್ಯಗಳಿಗೆ ಭಾರತ ತಂಡ ಪ್ರಕಟ: ರಿಷಭ್ ಪಂತ್ ನಾಯಕ ನೇಮಕ | Rishabh Pant

ಹಾಸನಾಂಬೆ ದರ್ಶನದ ಬಗ್ಗೆ ಈ ಮಹತ್ವದ ಅಪ್ ಡೇಟ್ ಕೊಟ್ಟ ಸಚಿವ ಕೃಷ್ಣಬೈರೇಗೌಡ

Share. Facebook Twitter LinkedIn WhatsApp Email

Related Posts

SHOCKING : ಅಂಡಮಾನ್ ಪ್ರವಾಸಕ್ಕೆ ತೆರಳಿದಾಗ ದುರಂತ : ಧಾರವಾಡದ KCD ಕಾಲೇಜು ಪ್ರೊಫೆಸರ್ ‘ಹೃದಯಾಘಾತಕ್ಕೆ’ ಬಲಿ!

12/01/2026 6:27 AM1 Min Read

ಸಾರ್ವಜನಿಕರೇ ಗಮನಿಸಿ: `ಸೈಟ್’ ಖರೀದಿಸುವಾಗ ಈ 7 ದಾಖಲೆಗಳು ಸರಿ ಇದೆಯಾ ಒಮ್ಮೆ ಚೆಕ್ ಮಾಡಿಕೊಳ್ಳಿ

12/01/2026 6:20 AM2 Mins Read

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಟ್ರ್ಯಾಕ್ಟರ್, ಟ್ಯಾಕ್ಸಿ, ಆಟೋ ರಿಕ್ಷಾ, ಗುಡ್ಸ್ ವಾಹನ ಖರೀದಿಗೆ ಸರ್ಕಾರದಿಂದ ಸಿಗಲಿದೆ 4 ಲಕ್ಷ ರೂ. ಸಹಾಯಧನ.!

12/01/2026 6:15 AM1 Min Read
Recent News

SHOCKING : ಅಂಡಮಾನ್ ಪ್ರವಾಸಕ್ಕೆ ತೆರಳಿದಾಗ ದುರಂತ : ಧಾರವಾಡದ KCD ಕಾಲೇಜು ಪ್ರೊಫೆಸರ್ ‘ಹೃದಯಾಘಾತಕ್ಕೆ’ ಬಲಿ!

12/01/2026 6:27 AM

ಸಾರ್ವಜನಿಕರೇ ಗಮನಿಸಿ: `ಸೈಟ್’ ಖರೀದಿಸುವಾಗ ಈ 7 ದಾಖಲೆಗಳು ಸರಿ ಇದೆಯಾ ಒಮ್ಮೆ ಚೆಕ್ ಮಾಡಿಕೊಳ್ಳಿ

12/01/2026 6:20 AM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಟ್ರ್ಯಾಕ್ಟರ್, ಟ್ಯಾಕ್ಸಿ, ಆಟೋ ರಿಕ್ಷಾ, ಗುಡ್ಸ್ ವಾಹನ ಖರೀದಿಗೆ ಸರ್ಕಾರದಿಂದ ಸಿಗಲಿದೆ 4 ಲಕ್ಷ ರೂ. ಸಹಾಯಧನ.!

12/01/2026 6:15 AM

ಉತ್ತರಕನ್ನಡ : ಪ್ರೀತ್ಸೆ ಎಂದು ಹಿಂದೆ ಬಿದ್ದ ಪಾಗಲ್ ಪ್ರೇಮಿ : ಯುವಕನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆಗೆ ಶರಣು!

12/01/2026 6:11 AM
State News
KARNATAKA

SHOCKING : ಅಂಡಮಾನ್ ಪ್ರವಾಸಕ್ಕೆ ತೆರಳಿದಾಗ ದುರಂತ : ಧಾರವಾಡದ KCD ಕಾಲೇಜು ಪ್ರೊಫೆಸರ್ ‘ಹೃದಯಾಘಾತಕ್ಕೆ’ ಬಲಿ!

By kannadanewsnow0512/01/2026 6:27 AM KARNATAKA 1 Min Read

ಧಾರವಾಡ : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದೆ. ಆದರೆ ಈ ಸಾವು ಅಂಡಮಾನ್ ನಲ್ಲಿ ನಡೆದಿದೆ. ಹೌದು ಅಂಡಮಾನ್ ನಿಕೋಬಾರ್…

ಸಾರ್ವಜನಿಕರೇ ಗಮನಿಸಿ: `ಸೈಟ್’ ಖರೀದಿಸುವಾಗ ಈ 7 ದಾಖಲೆಗಳು ಸರಿ ಇದೆಯಾ ಒಮ್ಮೆ ಚೆಕ್ ಮಾಡಿಕೊಳ್ಳಿ

12/01/2026 6:20 AM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಟ್ರ್ಯಾಕ್ಟರ್, ಟ್ಯಾಕ್ಸಿ, ಆಟೋ ರಿಕ್ಷಾ, ಗುಡ್ಸ್ ವಾಹನ ಖರೀದಿಗೆ ಸರ್ಕಾರದಿಂದ ಸಿಗಲಿದೆ 4 ಲಕ್ಷ ರೂ. ಸಹಾಯಧನ.!

12/01/2026 6:15 AM

ಉತ್ತರಕನ್ನಡ : ಪ್ರೀತ್ಸೆ ಎಂದು ಹಿಂದೆ ಬಿದ್ದ ಪಾಗಲ್ ಪ್ರೇಮಿ : ಯುವಕನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆಗೆ ಶರಣು!

12/01/2026 6:11 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.