Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Watch video: ‘ದಪ್ಪ ಆಗ್ತೀನಿ, ಬೇಡ!’: ಜೈಸ್ವಾಲ್ ಕೇಕ್ ನೀಡಿದ್ದಕ್ಕೆ ರೋಹಿತ್ ಶರ್ಮಾ ನೀಡಿದ ತಮಾಷೆಯ ಪ್ರತಿಕ್ರಿಯೆ ವೈರಲ್!

07/12/2025 7:01 PM

BREAKING: 30 ಕೋಟಿ ವಂಚನೆ ಪ್ರಕರಣ: ಬಾಲಿವುಡ್ ನಿರ್ಮಾಪಕ ವಿಕ್ರಮ್ ಭಟ್ ಅರೆಸ್ಟ್ | Vikram Bhatt Arrest

07/12/2025 6:52 PM

Indigo Crisis: ಮುಂಬೈನಲ್ಲಿ ಐದನೇ ದಿನದಂದು 112 ಇಂಡಿಗೋ ವಿಮಾನಗಳು ರದ್ದು, ಹೈದರಾಬಾದ್ ನಂತರ ಎರಡನೇ ಅತಿ ಹೆಚ್ಚು !

07/12/2025 6:42 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ `RTE’ ಅಡಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯ ತಲಾ ವಾರ್ಷಿಕ ವೆಚ್ಚ ಮರು ನಿಗದಿಪಡಿಸಿ ಸರ್ಕಾರ ಆದೇಶ
KARNATAKA

ರಾಜ್ಯದಲ್ಲಿ `RTE’ ಅಡಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯ ತಲಾ ವಾರ್ಷಿಕ ವೆಚ್ಚ ಮರು ನಿಗದಿಪಡಿಸಿ ಸರ್ಕಾರ ಆದೇಶ

By kannadanewsnow5710/10/2025 5:46 AM

ಬೆಂಗಳೂರು : 2025-26ನೇ ಸಾಲಿನಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿ ವಿದ್ಯಾರ್ಥಿಯ ತಲಾ ವಾರ್ಷಿಕ ವೆಚ್ಚವನ್ನು ಮರು ನಿಗದಿಪಡಿಸುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ (ಆರ್.ಟಿ.ಇ)2009ರ ಸೆಕ್ಷನ್ 12(1)(ಸಿ)ಯ ಅನುಸಾರ ಎಲ್ಲಾ ಖಾಸಗಿ ಅನುದಾನ ರಹಿತ ಶಾಲೆಗಳು (ಅಲ್ಪಸಂಖ್ಯಾತ ಶಾಲೆಗಳನ್ನು ಹೊರತುಪಡಿಸಿ) 1ನೇ ತರಗತಿಯ ಶೇ:25ರಷ್ಟು ಸಾಮರ್ಥ್ಯವನ್ನು ಆ ಶಾಲೆಯ ನೆರೆಹೊರೆಯ ಪ್ರದೇಶದ ದುರ್ಬಲ ಮತ್ತು ಅಶಕ್ತ ವರ್ಗಗಳಿಗೆ ಸೇರಿದ ಮಕ್ಕಳಿಗೆ ಪ್ರವೇಶ ನೀಡಿ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು 8ನೇ ತರಗತಿಯವರೆಗೆ ನೀಡಬೇಕಿರುತ್ತದೆ. ಶಾಲೆಯು ಪೂರ್ವ ಪ್ರಾಥಮಿಕ ಶಿಕ್ಷಣವನ್ನು ನೀಡುತ್ತಿದ್ದರೆ, ಮೇಲಿನ ಅಗತ್ಯತೆಯು ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಅನ್ವಯಿಸುತ್ತದೆ.

ಕಾಯ್ದೆಯ ಸೆಕ್ಷನ್ 12(2)ರ ಅನುಸಾರ ಸರ್ಕಾರವು ಅಂತಹ ಶಾಲೆಗಳಿಗೆ ಸರ್ಕಾರಿ ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿಗೆ ಮಾಡುತ್ತಿರುವ ವೆಚ್ಚಕ್ಕೆ ಸೀಮಿತಗೊಳಿಸಿ, ಆಯಾ ಖಾಸಗಿ ಶಾಲೆಯು ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲೆ ಮಾಡಿರುವ ವೆಚ್ಚ ಅಥವಾ ಆ ಶಾಲೆಯು ಪ್ರತಿ ವಿದ್ಯಾರ್ಥಿಗೆ ವಿಧಿಸುತ್ತಿರುವ ಶುಲ್ಕ ಈ ಎರಡರಲ್ಲಿ ಯಾವುದು ಕಡಿಮೆಯೋ ಅದನ್ನು ಮರುಪಾವತಿಸಬೇಕಿರುತ್ತದೆ. ಕರ್ನಾಟಕ ಶಿಕ್ಷಣ ಹಕ್ಕು ನಿಯಮಗಳ ಪ್ರಕಾರ ಸರ್ಕಾರವು ಶೈಕ್ಷಣಿಕ ಸಾಲಿನ ಪ್ರಾರಂಭಕ್ಕೂ ಮುನ್ನ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ತಲಾ ವೆಚ್ಚವನ್ನು ಅಧಿಸೂಚಿಸಬೇಕಿರುತ್ತದೆ.

ಮೇಲೆ ಓದಲಾದ (1)ರಲ್ಲಿನ ದಿನಾಂಕ:08.05.2012ರ ಸರ್ಕಾರದ ಆದೇಶದಲ್ಲಿ, ಸರ್ಕಾರಿ ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿಗೆ ಮಾಡುತ್ತಿರುವ ವೆಚ್ಚವನ್ನು ತರಗತಿ 1 ಮತ್ತು ನಂತರದ ತರಗತಿಗಳಿಗೆ ರೂ.11848/- ಮತ್ತು ಪೂರ್ವ ಪ್ರಾಥಮಿಕ ತರಗತಿಗಳಿಗೆ ರೂ.5924/- ಎಂದು ಅಧಿಸೂಚಿಸಲಾಗಿದೆ.

ಮೇಲೆ ಓದಲಾದ (2)ರಲ್ಲಿನ ಸರ್ಕಾರದ ಆದೇಶಗಳಲ್ಲಿ, ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್ 12(2) ಮತ್ತು ನಿಯಮ 8(1)ರಲ್ಲಿ ಸರ್ಕಾರಿ ಶಾಲೆಗಳಲ್ಲಿ ಪ್ರತಿ ಮಗುವಿನ ತಲಾ ವಾರ್ಷಿಕ ವೆಚ್ಚವನ್ನು 2017-18, 2018-19 ಮತ್ತು 2019-20ನೇ ಶೈಕ್ಷಣಿಕ ಸಾಲಿಗೆ ಹಾಗೂ ಸರ್ಕಾರದ ಆದೇಶ ಸಂಖ್ಯೆ: ಇಪಿ 108 ಎಂ.ಹೆಚ್.ಟಿ 2020, ದಿನಾಂಕ:05.09.2020, ಸರ್ಕಾರದ ಆದೇಶ ಸಂಖ್ಯೆ: ಇಪಿ 50 ಎಂ.ಹೆಚ್.ಟಿ 2021, ದಿನಾಂಕ: 29.10.2021 ರಂತೆ 2020-21 ಮತ್ತು 2021-22ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಪ್ರಾಥಮಿಕ ತರಗತಿಗಳಿಗೆ ರೂ.16,000/- ಎಂದು ಮತ್ತು ಪೂರ್ವ ಪ್ರಾಥಮಿಕ ತರಗತಿಗಳಿಗೆ ರೂ.8000/- ಎಂದು ಪರಿಷ್ಕರಿಸಿ ಆದೇಶಿಸಲಾಗಿದೆ.

ಮೇಲೆ ಓದಲಾದ (3) ರಲ್ಲಿನ ಸರ್ಕಾರದ ಆದೇಶದಲ್ಲಿ, 2022-23ನೇ ಹಾಗೂ 2023-24ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಪ್ರಾಥಮಿಕ ತರಗತಿಗಳಿಗೆ ರೂ. 16,000/- ಮತ್ತು ಪೂರ್ವ ಪ್ರಾಥಮಿಕ ತರಗತಿಗಳಿಗೆ ರೂ. 8000/- ಎಂದು ಆದೇಶಿಸಲಾಗಿದೆ.

ಮೇಲೆ ಓದಲಾದ (4) ರಲ್ಲಿನ ಸರ್ಕಾರದ ಆದೇಶದಲ್ಲಿ, 2024-25ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಪ್ರಾಥಮಿಕ ತರಗತಿಗಳಿಗೆ ರೂ. 16,000/- ಮತ್ತು ಪೂರ್ವ ಪ್ರಾಥಮಿಕ ತರಗತಿಗಳಿಗೆ ರೂ. 8000/- ಎಂದು ಆದೇಶಿಸಲಾಗಿದೆ.

ಮೇಲೆ ಓದಲಾದ (5)ರಲ್ಲಿನ ಪುಸ್ತಾವನೆಯಲ್ಲಿ, ಆ‌ರ್.ಟಿ.ಇ ಅಡಿ ಪ್ರವೇಶ ಪಡೆದು ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಸಲು, ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮಗಳು 2012ರ ನಿಯಮ 8 ರಂತೆ ಪ್ರತಿ ವರ್ಷ ಸರ್ಕಾರದ ಹಂತದಲ್ಲಿ ಪ್ರತಿ ಮಗುವಿನ ತಲಾ ವೆಚ್ಚ ಘೋಷಣೆ ಆಗಬೇಕಿರುವುದಾಗಿ ತಿಳಿಸಿ, ಆ‌ರ್.ಟಿ.ಇ. ಅಡಿ ಪ್ರವೇಶ ಪಡೆದ ವಿದ್ಯಾರ್ಥಿಗಳ 2025-26ನೇ ಸಾಲಿನ ಶುಲ್ಕ ಮರುಪಾವತಿಯನ್ನು ಸಂಬಂಧಿಸಿದ ಖಾಸಗಿ ಅನುದಾನರಹಿತ ಪ್ರಾಥಮಿಕ ಶಾಲೆಗಳಿಗೆ ಸಂದಾಯಿಸಲು ಪ್ರತಿ ಮಗುವಿನ ತಲಾ ವಾರ್ಷಿಕ ವೆಚ್ಚ ಘೋಷಿಸುವಂತೆ ಸಹ ಪತ್ರದಲ್ಲಿ ಕೋರಿರುತ್ತಾರೆ.

ಮೇಲ್ಕಂಡ ಪ್ರಸ್ತಾವನೆಯ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಆ‌ರ್.ಟಿ.ಇ ಅಡಿ ಪ್ರವೇಶ ಪಡೆದು ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಸಲು, ಶಿಕ್ಷಣ ಹಕ್ಕು ಕಾಯ್ದೆ 2009ರ ಸೆಕ್ಷನ್ 12(2) ಮತ್ತು ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮಗಳು 2012ರ ನಿಯಮ.

8(1)ರಂತೆ ಸರ್ಕಾರದ ಶಾಲೆಗಳಲ್ಲಿ ಪ್ರವೇಶ ಪಡೆದ ಪ್ರತಿ ಮಗುವಿನ ತಲಾ ವಾರ್ಷಿಕ ವೆಚ್ಚದನ್ವಯ 2025-26ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಪ್ರತಿ ಮಗುವಿನ ತಲಾ ವಾರ್ಷಿಕ ವೆಚ್ಚವನ್ನು ಪ್ರಾಥಮಿಕ ತರಗತಿಗಳಿಗೆ ರೂ.16,000/- ಮತ್ತು ಪೂರ್ವ ಪ್ರಾಥಮಿಕ ತರಗತಿಗಳಿಗೆ ರೂ.8,000/-ಎಂದು ನಿಗದಿಪಡಿಸಿ ಆದೇಶಿಸಿದೆ.

Government orders re-fixing of annual expenditure per student studying under `RTE' in the state
Share. Facebook Twitter LinkedIn WhatsApp Email

Related Posts

ಬೆಂಗಳೂರಿನ ವಾಯು ಮಾಲಿನ್ಯ ನಿಯಂತ್ರಣಕ್ಕೆ ಡಿಸಿಎಂ ತಕ್ಷಣದ ಕ್ರಮ: ತಜ್ಞರ ಸಮಿತಿ ರಚನೆಗೆ ಸೂಚನೆ!

07/12/2025 4:25 PM2 Mins Read

ಗಮನಿಸಿ : ನಾಟಿ ಕೋಳಿ Vs ಬಾಯ್ಲರ್ ಕೋಳಿ : ಆರೋಗ್ಯಕ್ಕೆ ಯಾವುದರ ಮಾಂಸ ಉತ್ತಮ ತಿಳಿಯಿರಿ.!

07/12/2025 1:50 PM3 Mins Read

ALERT : ದೀರ್ಘಕಾಲ ಒಂದೇ ಟವಲ್ ಬಳಸಿದ್ರೆ ಈ ಗಂಭೀರ ಆರೋಗ್ಯ ಸಮಸ್ಯೆ ಬರಬಹುದು ಎಚ್ಚರ

07/12/2025 1:30 PM2 Mins Read
Recent News

Watch video: ‘ದಪ್ಪ ಆಗ್ತೀನಿ, ಬೇಡ!’: ಜೈಸ್ವಾಲ್ ಕೇಕ್ ನೀಡಿದ್ದಕ್ಕೆ ರೋಹಿತ್ ಶರ್ಮಾ ನೀಡಿದ ತಮಾಷೆಯ ಪ್ರತಿಕ್ರಿಯೆ ವೈರಲ್!

07/12/2025 7:01 PM

BREAKING: 30 ಕೋಟಿ ವಂಚನೆ ಪ್ರಕರಣ: ಬಾಲಿವುಡ್ ನಿರ್ಮಾಪಕ ವಿಕ್ರಮ್ ಭಟ್ ಅರೆಸ್ಟ್ | Vikram Bhatt Arrest

07/12/2025 6:52 PM

Indigo Crisis: ಮುಂಬೈನಲ್ಲಿ ಐದನೇ ದಿನದಂದು 112 ಇಂಡಿಗೋ ವಿಮಾನಗಳು ರದ್ದು, ಹೈದರಾಬಾದ್ ನಂತರ ಎರಡನೇ ಅತಿ ಹೆಚ್ಚು !

07/12/2025 6:42 PM

Shocking: ಕೆಲಸದಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯ ಶವವನ್ನು ಮತ್ತೊಂದು ಪೊಲೀಸ್ ವ್ಯಾಪ್ತಿಯಲ್ಲಿ ಎಸೆದ ಪೊಲೀಸರು | Watch video

07/12/2025 6:23 PM
State News
KARNATAKA

ಬೆಂಗಳೂರಿನ ವಾಯು ಮಾಲಿನ್ಯ ನಿಯಂತ್ರಣಕ್ಕೆ ಡಿಸಿಎಂ ತಕ್ಷಣದ ಕ್ರಮ: ತಜ್ಞರ ಸಮಿತಿ ರಚನೆಗೆ ಸೂಚನೆ!

By kannadanewsnow8907/12/2025 4:25 PM KARNATAKA 2 Mins Read

ಬೆಂಗಳೂರು: ​ರಾಜಧಾನಿ ರಕ್ಷಣೆಗೆ ಡಿ.ಕೆ.ಶಿವಕುಮಾರ್ ಗಂಭೀರ ಹೆಜ್ಜೆ ದೆಹಲಿ ಮಾದರಿಯಾಗದಿರಲು ತುರ್ತು ಕ್ರಮ  ​ಶಾಸಕ ದಿನೇಶ್ ಗೂಳಿಗೌಡರ ಮನವಿಗೆ ಸ್ಪಂದನೆ…

ಗಮನಿಸಿ : ನಾಟಿ ಕೋಳಿ Vs ಬಾಯ್ಲರ್ ಕೋಳಿ : ಆರೋಗ್ಯಕ್ಕೆ ಯಾವುದರ ಮಾಂಸ ಉತ್ತಮ ತಿಳಿಯಿರಿ.!

07/12/2025 1:50 PM

ALERT : ದೀರ್ಘಕಾಲ ಒಂದೇ ಟವಲ್ ಬಳಸಿದ್ರೆ ಈ ಗಂಭೀರ ಆರೋಗ್ಯ ಸಮಸ್ಯೆ ಬರಬಹುದು ಎಚ್ಚರ

07/12/2025 1:30 PM

ಬೆಂಗಳೂರಿನ `ವಾಯು ಮಾಲಿನ್ಯ’ ನಿಯಂತ್ರಣಕ್ಕೆ DCM ಡಿ.ಕೆ.ಶಿವಕುಮಾರ್ ತಕ್ಷಣದ ಕ್ರಮ: ತಜ್ಞರ ಸಮಿತಿ ರಚನೆಗೆ ಸೂಚನೆ!

07/12/2025 1:23 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.