Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ ‘ST ಮೀಸಲಾತಿ’ಯಲ್ಲೂ ವರ್ಗೀಕರಣ ಬೇಕು: ಸರ್ಕಾರಕ್ಕೆ ‘ಆದಿವಾಸಿ ನಾಯಕ’ರು ಆಗ್ರಹ

09/10/2025 6:40 PM

ಮಕ್ಕಳ ಮಾನಸಿಕ ದೃಢತೆ ಹೆಚ್ಚಲು ಓದಿನ ಜೊತೆಗೆ ‘ಕ್ರೀಡೆ’ಯಲ್ಲೂ ಪಾಲ್ಗೊಳ್ಳಿ: ಶಾಸಕ ಗೋಪಾಲಕೃಷ್ಣ ಬೇಳೂರು

09/10/2025 6:35 PM

ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಕೇಸಲ್ಲಿ ಮಹೇಶ್ ತಿಮರೋಡಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ

09/10/2025 6:23 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಕ್ಕಳ ಮಾನಸಿಕ ದೃಢತೆ ಹೆಚ್ಚಲು ಓದಿನ ಜೊತೆಗೆ ‘ಕ್ರೀಡೆ’ಯಲ್ಲೂ ಪಾಲ್ಗೊಳ್ಳಿ: ಶಾಸಕ ಗೋಪಾಲಕೃಷ್ಣ ಬೇಳೂರು
KARNATAKA

ಮಕ್ಕಳ ಮಾನಸಿಕ ದೃಢತೆ ಹೆಚ್ಚಲು ಓದಿನ ಜೊತೆಗೆ ‘ಕ್ರೀಡೆ’ಯಲ್ಲೂ ಪಾಲ್ಗೊಳ್ಳಿ: ಶಾಸಕ ಗೋಪಾಲಕೃಷ್ಣ ಬೇಳೂರು

By kannadanewsnow0909/10/2025 6:35 PM

ಶಿವಮೊಗ್ಗ : ಮಕ್ಕಳ ಮಾನಸಿಕ ದೃಢತೆ ಹೆಚ್ಚಾಗಲು ಓದಿನ ಜೊತೆಗೆ ಕ್ರೀಡೆಯೂ ಕಾರಣವಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಮಾನಸಿಕ ದೃಢತೆಯನ್ನು ಹೆಚ್ಚಿಸಿಕೊಳ್ಳಲು ಕ್ರೀಡೆಯಲ್ಲಿ ಹೆಚ್ಚು ಹೆಚ್ಚು ಪಾಲ್ಗೊಳ್ಳುವಂತೆ ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಸಲಹೆ ಮಾಡಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರಗತಿ ಸಂಯುಕ್ತ ಪ್ರೌಢಶಾಲೆಯ ಶಾಲಾವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪ್ರಗತಿ ಸಂಯುಕ್ತ ಶಾಲೆ ಇವರ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 17 ವರ್ಷದೊಳಗಿನ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದಂತ ಅವರು, ಓದಿನ ಜೊತೆ ಕ್ರೀಡೆಯಲ್ಲೂ ಆಸಕ್ತಿ ಇರಿಸಿಕೊಳ್ಳಿ. ಮಕ್ಕಳ ದೈಹಿಕ ಮತ್ತು ಮಾನಸಿಕ ಸ್ಥಿತಿ ಸುಧಾರಣೆಗೆ ಸರ್ಕಾರ ಪೌಷ್ಟಿಕ ಆಹಾರವಾಗಿ ಮೊಟ್ಟೆ, ಚುಕ್ಕಿ, ಬಾಳೆಹಣ್ಣು ನೀಡುತ್ತಿದೆ. ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ದಿಗೆ ಅಗತ್ಯ ಸೌಲಭ್ಯವನ್ನು ನೀಡಲಾಗುತ್ತಿದೆ. ಇಂತಹ ಕ್ರೀಡಾಕೂಟಗಳಿಗೆ ಸರ್ಕಾರ ಸಹಾಯಧನ ಕಡಿಮೆ ಕೊಡುತ್ತದೆ. ಆದರೆ ದಾನಿಗಳು, ಸಂಘ-ಸoಸ್ಥೆಗಳ ಸಹಕಾರದಿಂದ ಕಾರ್ಯಕ್ರಮಗಳು ಯಶಸ್ಸು ಕಾಣುತ್ತದೆ ಎಂದರು.

ಜಿಲ್ಲಾಮಟ್ಟದ ಪಂದ್ಯಾವಳಿ ನಡೆಯುವಾಗ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಯಾವ್ಯಾವ ಅಧಿಕಾರಿಗಳು ಗೈರಾಗಿದ್ದಾರೋ ಅವರಿಗೆ ನೋಟಿಸ್ ನೀಡಲು ಶಿಕ್ಷಣಾಧಿಕಾರಿಗಳಿಗೆ ಸ್ಥಳದಲ್ಲಿ ಸೂಚನೆ ನೀಡಿದ ಅವರು, ದೈಹಿಕ ಶಿಕ್ಷಕರ ನೇಮಕಾತಿಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.

ಮಲೆನಾಡು ಅಭಿವೃದ್ದಿ ಪ್ರತಿಷ್ಟಾನದ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಶಾಸಕರು ಶೈಕ್ಷಣಿಕ ಕ್ಷೇತ್ದ ಅಭಿವೃದ್ದಿಗೆ ಅಗತ್ಯ ಸಹಕಾರ ನೀಡುತ್ತಿದ್ದಾರೆ. ಅದನ್ನು ಮಕ್ಕಳು ಸದ್ಭಳಕೆ ಮಾಡಿಕೊಳ್ಳಬೇಕು. ಬದುಕಿಗೆ ಓದು ಎಷ್ಟು ಮುಖ್ಯವೋ, ಕ್ರೀಡೆ ಸಹ ಅಷ್ಟೆ ಮುಖ್ಯವಾಗಿದೆ. ಕ್ರೀಡೆ ಮನಸ್ಸಿನ ಆರೋಗ್ಯವನ್ನು ಕಾಯುತ್ತದೆ. ಕ್ರೀಡಾಪಟುಗಳಿಗೆ ಸೋಲುಗೆಲುವು ಮುಖ್ಯವಲ್ಲ. ಎಲ್ಲರೂ ಒಂದೆಡೆ ಸೇರಿ ಸಂಭ್ರಮಿಸುವುದನ್ನು, ಸೌಹಾರ್ಧತೆಯನ್ನು ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಾಗರ ತಾಲ್ಲೂಕು ಬಿಇಓ ಪರಶುರಾಮಪ್ಪ ಈ., ಸೂರ್ಯನಾರಾಯಣ ಖಂಡಿಕಾ, ಸತ್ಯನಾರಾಯಣ, ನಗರಸಭಾ ಸದಸ್ಯ ಗಣಪತಿ ಮಂಡಗಳಲೆ, ಭೂಮೇಶ್, ಸೈಯದ್ ಜಾಕೀರ್, ಸುಬ್ರಹ್ಮಣ್ಯ, ರಮೇಶ್, ವಿಜಯಲಕ್ಷಿ ,ಡಾ. ಟಿ.ಎಸ್.ರಾಘವೇಂದ್ರ. ಎಂ.ಪ್ರಕಾಶ್ , ಅವನಿ, ಶಂಕರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮಹಿಳಾ ನೌಕರರಿಗೆ ಮುಟ್ಟಿನ ರಜೆ: ಸಿಎಂ, ಡಿಸಿಎಂಗೆ ಸಾಗರದ ಸರ್ಕಾರಿ ನೌಕರರ ಸಂಘದ ಮಹಿಳಾ ಪದಾಧಿಕಾರಿಗಳು ಧನ್ಯವಾದ

ಹೀಗಿದೆ ಇಂದಿನ ‘ರಾಜ್ಯ ಸಚಿವ ಸಂಪುಟ ಸಭೆ’ಯ ಸಂಪೂರ್ಣ ಹೈಲೈಟ್ಸ್ | Karnataka Cabinet Meeting

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ‘ST ಮೀಸಲಾತಿ’ಯಲ್ಲೂ ವರ್ಗೀಕರಣ ಬೇಕು: ಸರ್ಕಾರಕ್ಕೆ ‘ಆದಿವಾಸಿ ನಾಯಕ’ರು ಆಗ್ರಹ

09/10/2025 6:40 PM1 Min Read

ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಕೇಸಲ್ಲಿ ಮಹೇಶ್ ತಿಮರೋಡಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ

09/10/2025 6:23 PM1 Min Read

ಹೀಗಿದೆ ಇಂದಿನ ‘ರಾಜ್ಯ ಸಚಿವ ಸಂಪುಟ ಸಭೆ’ಯ ಸಂಪೂರ್ಣ ಹೈಲೈಟ್ಸ್ | Karnataka Cabinet Meeting

09/10/2025 6:08 PM3 Mins Read
Recent News

ರಾಜ್ಯದಲ್ಲಿ ‘ST ಮೀಸಲಾತಿ’ಯಲ್ಲೂ ವರ್ಗೀಕರಣ ಬೇಕು: ಸರ್ಕಾರಕ್ಕೆ ‘ಆದಿವಾಸಿ ನಾಯಕ’ರು ಆಗ್ರಹ

09/10/2025 6:40 PM

ಮಕ್ಕಳ ಮಾನಸಿಕ ದೃಢತೆ ಹೆಚ್ಚಲು ಓದಿನ ಜೊತೆಗೆ ‘ಕ್ರೀಡೆ’ಯಲ್ಲೂ ಪಾಲ್ಗೊಳ್ಳಿ: ಶಾಸಕ ಗೋಪಾಲಕೃಷ್ಣ ಬೇಳೂರು

09/10/2025 6:35 PM

ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಕೇಸಲ್ಲಿ ಮಹೇಶ್ ತಿಮರೋಡಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ

09/10/2025 6:23 PM

BREAKING : ಖಲಿಸ್ತಾನಿ ಉಗ್ರಗಾಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ‘ಯುಕೆ ಪಿಎಂ’ಗೆ ‘ಪ್ರಧಾನಿ ಮೋದಿ’ ಮನವಿ

09/10/2025 6:17 PM
State News
KARNATAKA

ರಾಜ್ಯದಲ್ಲಿ ‘ST ಮೀಸಲಾತಿ’ಯಲ್ಲೂ ವರ್ಗೀಕರಣ ಬೇಕು: ಸರ್ಕಾರಕ್ಕೆ ‘ಆದಿವಾಸಿ ನಾಯಕ’ರು ಆಗ್ರಹ

By kannadanewsnow0909/10/2025 6:40 PM KARNATAKA 1 Min Read

ಬೆಂಗಳೂರು : 2024 ಆಗಸ್ಟ್ 1 ರಂದು ಬಂದ ಒಳಮೀಸಲಾತಿ ಕುರಿತಾದ ಐತಿಹಾಸಿಕ ತೀರ್ಪು ಪರಿಶಿಷ್ಟ ಜಾತಿಯೊಂದಿಗೆ ಪರಿಶಿಷ್ಟ ಪಂಗಡದಲ್ಲಿಯೂ…

ಮಕ್ಕಳ ಮಾನಸಿಕ ದೃಢತೆ ಹೆಚ್ಚಲು ಓದಿನ ಜೊತೆಗೆ ‘ಕ್ರೀಡೆ’ಯಲ್ಲೂ ಪಾಲ್ಗೊಳ್ಳಿ: ಶಾಸಕ ಗೋಪಾಲಕೃಷ್ಣ ಬೇಳೂರು

09/10/2025 6:35 PM

ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಕೇಸಲ್ಲಿ ಮಹೇಶ್ ತಿಮರೋಡಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ

09/10/2025 6:23 PM

ಹೀಗಿದೆ ಇಂದಿನ ‘ರಾಜ್ಯ ಸಚಿವ ಸಂಪುಟ ಸಭೆ’ಯ ಸಂಪೂರ್ಣ ಹೈಲೈಟ್ಸ್ | Karnataka Cabinet Meeting

09/10/2025 6:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.