Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯ ಸರ್ಕಾರ ಎರಡು ಪಟ್ಟು ಬೆಳೆ ಪರಿಹಾರ ನೀಡಬೇಕು: ಸಂಸದ ಬೊಮ್ಮಾಯಿ ಆಗ್ರಹ

09/10/2025 1:50 PM

BREAKING : ಉತ್ತರ ಪ್ರದೇಶದಲ್ಲಿ ನಿಯಂತ್ರಣ ತಪ್ಪಿ ಖಾಸಗಿ ವಿಮಾನ ಪತನ : ತಪ್ಪಿದ ಭಾರೀ ದುರಂತ | WATCH VIDEO

09/10/2025 1:46 PM

BIG NEWS: ಪದೇ ಪದೇ ಸಂಚಾರ ನಿಯಮ ಉಲ್ಲಂಘನೆಯಲ್ಲಿ ಬೆಂಗಳೂರು ದೇಶದಲ್ಲೇ ಮೊದಲು: ಸಮೀಕ್ಷಾ ವರದಿಯಲ್ಲಿ ಬಹಿರಂಗ

09/10/2025 1:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಪದೇ ಪದೇ ಸಂಚಾರ ನಿಯಮ ಉಲ್ಲಂಘನೆಯಲ್ಲಿ ಬೆಂಗಳೂರು ದೇಶದಲ್ಲೇ ಮೊದಲು: ಸಮೀಕ್ಷಾ ವರದಿಯಲ್ಲಿ ಬಹಿರಂಗ
KARNATAKA

BIG NEWS: ಪದೇ ಪದೇ ಸಂಚಾರ ನಿಯಮ ಉಲ್ಲಂಘನೆಯಲ್ಲಿ ಬೆಂಗಳೂರು ದೇಶದಲ್ಲೇ ಮೊದಲು: ಸಮೀಕ್ಷಾ ವರದಿಯಲ್ಲಿ ಬಹಿರಂಗ

By kannadanewsnow0909/10/2025 1:46 PM

ಬೆಂಗಳೂರು: ಬೆಂಗಳೂರು ಹೆಚ್ಚು ದಟ್ಟಣೆ ಇರುವ ನಗರಗಳ ಸಾಲಿನಲ್ಲಿ ಸೇರಿರುವುದು ಗೊತ್ತೇ ಇದೆ, ಇದೀಗ ಬೆಂಗಳೂರು ಪದೇ ಪದೇ ಸಂಚಾರ ನಿಯಮ ಉಲ್ಲಂಘಟನೆ ಮಾಡುವವರ ಪಟ್ಟಿಯಲ್ಲೂ ಸಹ ಅಗ್ರಸ್ಥಾನ ಪಡೆದುಕೊಂಡಿದೆ.

ಹೌದು, ಭಾರತದ ಸುರಕ್ಷತೆ ಮತ್ತು ರಕ್ಷಣೆಯ ಕ್ಷೇತ್ರದ ಅಗ್ರ ಕಂಪನಿಗಳಲ್ಲಿ ಒಂದಾದ ACKO, ಇತ್ತೀಚಿಗೆ ನಡೆಸಿದ ಸಮೀಕ್ಷಾ ವರದಿಯಲ್ಲಿ ದೇಶದಲ್ಲೇ ಅತಿ ಹೆಚ್ಚು ಪುನಾವರ್ತಿತ ಸಂಚಾರ ನಿಯಮ ಉಲ್ಲಂಘನೆ ಮಾಡುವವರೂ ಬೆಂಗಳೂರಿಗರೇ ಎಂಬುದು ಬಹಿರಂಗವಾಗಿದೆ.

ACKO ಸಂಸ್ಥೆ ಇತ್ತೀಚೆಗೆ ಡಿಸೆಂಬರ್ 2024 ರಿಂದ ಜೂನ್ 2025 ರವರೆಗೆ ಸಮೀಕ್ಷೆ ನಡೆಸಿದೆ. ಇದರ ಪ್ರಕಾರ, ಬೆಂಗಳೂರಿನ ವಾಹನ ಸವಾರರ ಪೈಕಿ ಶೇ. 10.8 ರಷ್ಟು ಜನರು 10 ಕ್ಕೂ ಹೆಚ್ಚು ದಂಡ ಬಾಕಿ ಉಳಿಸಿಕೊಂಡಿದ್ದಾರೆ ಎಂದು ವರದಿ ಹೇಳುತ್ತದೆ, ಇದು ಭಾರತೀಯ ಮಹಾನಗರಗಳಲ್ಲಿಯೇ ಅತ್ಯಧಿಕವಾಗಿದೆ.

ಅಧ್ಯಯನದ ಸಮಯದಲ್ಲಿ, ನಗರದಲ್ಲಿ 14.5 ಲಕ್ಷಕ್ಕೂ ಹೆಚ್ಚು ಸಂಚಾರ ತಪಾಸಣೆಗಳನ್ನು ನಡೆಸಲಾಗಿದ್ದು, ಸುಮಾರು ಶೇ. 61 ಮಂದಿ ಅಂದರೆ, ಪ್ರತಿ 10 ಜನರಲ್ಲಿ ಸುಮಾರು 6 ಮಂದಿ ಕನಿಷ್ಠ ಒಂದು ಸಂಚಾರ ದಂಡವನ್ನು ಹೊಂದಿರುವುದು ಕಂಡುಬಂದಿದೆ. ಹೆಲ್ಮೆಟ್ ಇಲ್ಲದೆ ಸವಾರಿ ಮಾಡುವ ಪ್ರವೃತ್ತಿ ಹೆಚ್ಚಾಗಿ ಕಂಡುಬಂದಿದ್ದು, ಹೆಚ್ಚಿನ ಪ್ರಕರಣಗಳು ಹೆಲ್ಮೇಟ್ ಸಂಬಂಧಿತ ದಂಡಗಳೇ ಕಂಡುಬಂದಿವೆ.

ಈ ವಿದ್ಯಾಮಾನಗಳು ಬೆಂಗಳೂರಿನಲ್ಲಿ ಹೆಚ್ಚಾಗಿ ಕಂಡುಬಂದಿದೆ
● ಪುನರಾವರ್ತಿತ ಅಪರಾಧಗಳು: ಬೆಂಗಳೂರಿನಲ್ಲಿ 1.56 ಲಕ್ಷ ಬಳಕೆದಾರರ ಬಳಿ 10 ಕ್ಕೂ ಹೆಚ್ಚು ದಂಡ ಬಾಕಿ ಉಳಿದಿದ್ದು, ಇದು ಭಾರತದ ಇತರ ಮಹಾನಗರಗಳಿಗೆ ಹೋಲಿಸಿದರೆ ಅತಿ ಹೆಚ್ಚು.
● ಚಲನ್ ಪರಿಶೀಲನೆಗಳು: ಬೆಂಗಳೂರಿನ ಚಾಲಕರು ಅತ್ಯಂತ ಜಾಗರೂಕರಾಗಿದ್ದು, ತಿಂಗಳಿಗೆ ಸರಾಸರಿ 4.12 ಬಾರಿ ತಮ್ಮ ಚಲನ್‌ಗಳನ್ನು ಪರಿಶೀಲಿಸುತ್ತಾರೆ ಎಂದು ಕಂಡುಬಂದಿದೆ, ಈ ವಿಷಯದಲ್ಲಿ ನಗರವು ಚೆನ್ನೈ ನಂತರದ ಎರಡನೇ ಸ್ಥಾನದಲ್ಲಿದೆ.
● ಡಿಜಿಟಲ್ ಜಾರಿಗೊಳಿಸುವಿಕೆ: ಡಿಜಿಟಲ್ ಉಲ್ಲಂಘನೆಗಳಲ್ಲಿ ಬೆಂಗಳೂರು ದೇಶದಲ್ಲೇ ಮುಂಚೂಣಿಯಲ್ಲಿದೆ, ಶೇ. 23 ರಷ್ಟು ಚಲನ್‌ಗಳನ್ನು ಕ್ಯಾಮೆರಾಗಳು ಮತ್ತು ಮೊಬೈಲ್ ಸಾಧನಗಳ ಮೂಲಕ ನೀಡಲಾಗಿದೆ.
● ಹೆಲ್ಮೆಟ್ ಧರಿಸದೇ ಇರುವುದು: ದೇಶಾದ್ಯಂತ ಕಂಡುಬರುವ ಅತ್ಯಂತ ಸಾಮಾನ್ಯವಾದ ಸಂಚಾರ ಉಲ್ಲಂಘನೆಯಾಗಿದ್ದು, 10.5 ಮಿಲಿಯನ್‌ಗಿಂತಲೂ ಹೆಚ್ಚು ಹೆಲ್ಮೆಟ್ ಸಂಬಂಧಿತ ಅಪರಾಧಗಳು ದಾಖಲಾಗಿವೆ. ಎಲ್ಲಾ ಚಲನ್‌ಗಳ ಶೇಕಡಾ 34.8 ಪ್ರತಿಶತ ಈ ಉಲ್ಲಂಘನೆಗಳು ಕಂಡುಬಂದಿದೆ.
● ಹಲವು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಜನರು: ಬೆಂಗಳೂರಿನ (ಸುಮಾರು 11%) ನಂತರ, ಅತಿ ಹೆಚ್ಚು ಪದೇ ಪದೇ ನಿಯಮ ಉಲ್ಲಂಘಿಸುವ ನಗರಗಳು ಚೆನ್ನೈ (8%), ದೆಹಲಿ (6%), ಮುಂಬೈ (5%) ಮತ್ತು ಪುಣೆ (3%).
● ಅತಿ ಹೆಚ್ಚು ಪ್ರಕರಣಗಳ ದರಗಳು: ದೆಹಲಿಯಲ್ಲಿ ಅತಿ ಹೆಚ್ಚು ಚಲನ್‌ಗಳು ದಾಖಲಾಗಿದ್ದು, ಶೇ. 73 ರಷ್ಟು ಬಳಕೆದಾರರು ಕನಿಷ್ಠ ಒಂದು ಚಲನ್ ಹೊಂದಿದ್ದರೆ, ನಂತರದ ಸ್ಥಾನಗಳಲ್ಲಿ ಚೆನ್ನೈ (ಶೇ. 64) ಮತ್ತು ಮುಂಬೈ (ಶೇ. 62) ಇವೆ.
● ಚಲನ್ ಪರಿಶೀಲನೆ: ಸಂಚಾರ ದಂಡಗಳನ್ನು ಪರಿಶೀಲಿಸುವಲ್ಲಿ ಚೆನ್ನೈ ಅತ್ಯಂತ ಸಕ್ರಿಯವಾಗಿದೆ. ಸರಾಸರಿಯಾಗಿ, ಅಲ್ಲಿನ ಪ್ರತಿಯೊಬ್ಬ ವ್ಯಕ್ತಿಯು ಪ್ರತಿ ತಿಂಗಳು ಸುಮಾರು 5 ಬಾರಿ ತಮ್ಮ ದಂಡವನ್ನು ಪರಿಶೀಲಿಸುತ್ತಾರೆ ಎಂದು ಕಂಡುಬಂದಿದೆ.
● ಅತ್ಯಧಿಕ ದಂಡ: ದೆಹಲಿಯಲ್ಲಿ ಅತಿ ಹೆಚ್ಚು ದಂಡ ಪಾವತಿಯಾಗಿದೆ, ಚಾಲಕನೋರ್ವ ಐದು ಚಲನ್‌ಗಳಬರೋಬ್ಬರಿ ₹61,000 ಪಾವತಿಸಿದ್ದಾರೆ.

ವರದಿಯ ಕುರಿತು ಮಾತನಾಡಿದ ACKO ದ ಮೋಟಾರ್ ವಿಮಾ ಉಪಾಧ್ಯಕ್ಷರಾದ ಮಾಯಾಂಕ್ ಗುಪ್ತಾ, ಬೆಂಗಳೂರಿನ ವರದಿಯ ಪ್ರಕಾರ, ಭಾರತದ ತಂತ್ರಜ್ಞಾನ ನಗರ ಎಂದೇ ಜನಜನಿತವಾದ ನಗರದಲ್ಲಿಯೂ ಸಹ, ಅನೇಕ ಜನರು ಇನ್ನೂ ಅಸುರಕ್ಷಿತವಾಗಿ ವಾಹನ ಚಲಾಯಿಸುತ್ತಿದ್ದಾರೆ. ಪ್ರತಿಯೊಂದು ಸಂಚಾರ ದಂಡವು ಕೇವಲ ದಂಡವಲ್ಲ, ಬದಲಾಗಿ ಸುಧಾರಿಸಲು ಒಂದು ಅವಕಾಶ. ACKO ನಲ್ಲಿ, ಜನರನ್ನು ಸುರಕ್ಷಿತವಾಗಿರಿಸುವುದು ನಮ್ಮ ಮೊದಲ ಆದ್ಯತೆ, ಆದ್ದರಿಂದ ಚಾಲಕರು ಮಾಹಿತಿಯುಕ್ತವಾಗಿರಲು ಸಹಾಯ ಮಾಡಲು ನಾವು ನಮ್ಮ ಅಪ್ಲಿಕೇಶನ್‌ನಲ್ಲಿ ಚಲನ್ ಚೆಕ್‌ಗಳನ್ನು ಸೇರಿಸಿದ್ದೇವೆ. ಪುನರಾವರ್ತಿತ ಅಪರಾಧಗಳಂತಹ ಮಾದರಿಗಳನ್ನು ತೋರಿಸುವ ಮೂಲಕ, ಜವಾಬ್ದಾರಿಯುತ ಚಾಲನೆ ಮತ್ತು ಬೆಂಗಳೂರು ಹೇಗೆ ಸುರಕ್ಷಿತ ರಸ್ತೆಗಳಿಗೆ ಉದಾಹರಣೆಯಾಗಬಹುದು ಎಂಬುದರ ಕುರಿತು ನಾವು ಸಂವಾದವನ್ನು ಪ್ರಾರಂಭಿಸಲು ಬಯಸುತ್ತೇವೆ ಎಂದು ಹೇಳಿದರು.

Share. Facebook Twitter LinkedIn WhatsApp Email

Related Posts

ರಾಜ್ಯ ಸರ್ಕಾರ ಎರಡು ಪಟ್ಟು ಬೆಳೆ ಪರಿಹಾರ ನೀಡಬೇಕು: ಸಂಸದ ಬೊಮ್ಮಾಯಿ ಆಗ್ರಹ

09/10/2025 1:50 PM3 Mins Read

ಸುಪ್ರೀಂ ಕೋರ್ಟ್ ಜಡ್ಜ್ ಮೇಲೆ ಶೂ ಎಸೆತ ಕೇಸ್ : ರಾಕೇಶ್ ಕಿಶೋರ್, ಭಾಸ್ಕರ್ ರಾವ್ ಗಲ್ಲಿಗೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

09/10/2025 1:43 PM1 Min Read

BREAKING : ಕೋಲಾರದಲ್ಲಿ ಏಕಾಏಕಿ ಕೇಳಿದ ಭಯಾನಕ ಶಬ್ದಕ್ಕೆ ಮನೆಯಿಂದ ಹೊರ ಓಡಿದ ಜನ ಕಾರಣ ನಿಗೂಢ!

09/10/2025 1:36 PM1 Min Read
Recent News

ರಾಜ್ಯ ಸರ್ಕಾರ ಎರಡು ಪಟ್ಟು ಬೆಳೆ ಪರಿಹಾರ ನೀಡಬೇಕು: ಸಂಸದ ಬೊಮ್ಮಾಯಿ ಆಗ್ರಹ

09/10/2025 1:50 PM

BREAKING : ಉತ್ತರ ಪ್ರದೇಶದಲ್ಲಿ ನಿಯಂತ್ರಣ ತಪ್ಪಿ ಖಾಸಗಿ ವಿಮಾನ ಪತನ : ತಪ್ಪಿದ ಭಾರೀ ದುರಂತ | WATCH VIDEO

09/10/2025 1:46 PM

BIG NEWS: ಪದೇ ಪದೇ ಸಂಚಾರ ನಿಯಮ ಉಲ್ಲಂಘನೆಯಲ್ಲಿ ಬೆಂಗಳೂರು ದೇಶದಲ್ಲೇ ಮೊದಲು: ಸಮೀಕ್ಷಾ ವರದಿಯಲ್ಲಿ ಬಹಿರಂಗ

09/10/2025 1:46 PM

ಸುಪ್ರೀಂ ಕೋರ್ಟ್ ಜಡ್ಜ್ ಮೇಲೆ ಶೂ ಎಸೆತ ಕೇಸ್ : ರಾಕೇಶ್ ಕಿಶೋರ್, ಭಾಸ್ಕರ್ ರಾವ್ ಗಲ್ಲಿಗೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

09/10/2025 1:43 PM
State News
KARNATAKA

ರಾಜ್ಯ ಸರ್ಕಾರ ಎರಡು ಪಟ್ಟು ಬೆಳೆ ಪರಿಹಾರ ನೀಡಬೇಕು: ಸಂಸದ ಬೊಮ್ಮಾಯಿ ಆಗ್ರಹ

By kannadanewsnow0909/10/2025 1:50 PM KARNATAKA 3 Mins Read

ಬೆಂಗಳೂರು: ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾದ ಪ್ರವಾಹಕ್ಕೆ ರಾಜ್ಯ ಸರ್ಕಾರ ತಕ್ಷಣವೇ ಕೇಂದ್ರ ಸರ್ಕಾರ ನೀಡುವ ಎರಡು ಪಟ್ಟು ಪರಿಹಾರ…

BIG NEWS: ಪದೇ ಪದೇ ಸಂಚಾರ ನಿಯಮ ಉಲ್ಲಂಘನೆಯಲ್ಲಿ ಬೆಂಗಳೂರು ದೇಶದಲ್ಲೇ ಮೊದಲು: ಸಮೀಕ್ಷಾ ವರದಿಯಲ್ಲಿ ಬಹಿರಂಗ

09/10/2025 1:46 PM

ಸುಪ್ರೀಂ ಕೋರ್ಟ್ ಜಡ್ಜ್ ಮೇಲೆ ಶೂ ಎಸೆತ ಕೇಸ್ : ರಾಕೇಶ್ ಕಿಶೋರ್, ಭಾಸ್ಕರ್ ರಾವ್ ಗಲ್ಲಿಗೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

09/10/2025 1:43 PM

BREAKING : ಕೋಲಾರದಲ್ಲಿ ಏಕಾಏಕಿ ಕೇಳಿದ ಭಯಾನಕ ಶಬ್ದಕ್ಕೆ ಮನೆಯಿಂದ ಹೊರ ಓಡಿದ ಜನ ಕಾರಣ ನಿಗೂಢ!

09/10/2025 1:36 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.