Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಕೆಲಸಗಾರ `ಹೃದಯಾಘಾತ’ದಿಂದ ಸಾವನ್ನಪ್ಪಿದ್ರೂ ಮೊಬೈಲ್ ನೋಡುತ್ತ ಕುಳಿತ ಮಾಲೀಕ : ವಿಡಿಯೋ ವೈರಲ್ | WATCH VIDEO

12/10/2025 7:53 AM

ಮತ್ತೊಂದು ಸಾಂಕ್ರಾಮಿಕ ರೋಗ ಬರುತ್ತಾ? ಜಪಾನ್ ನಲ್ಲಿ ಮಾರಣಾಂತಿಕ ಕಾಯಿಲೆ, 4000 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲು, ಶಾಲೆಗಳು ಬಂದ್

12/10/2025 7:46 AM

ರಾಜ್ಯದ ಎಲ್ಲ ಪದವಿ ಕಾಲೇಜುಗಳಲ್ಲಿ `ಸ್ಕೌಟ್ಸ್ & ಗೈಡ್ಸ್’ ಸ್ಥಾಪನೆ ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ

12/10/2025 7:42 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ‘ಕಸಾಪದಲ್ಲೂ’ ಭಾರಿ ಹಣಕಾಸು ಅವ್ಯವಹಾರ : ಮಹೇಶ್ ಜೋಶಿ ಅಧ್ಯಕ್ಷ ಸ್ಥಾನಕ್ಕೆ ಕುತ್ತು!
KARNATAKA

BREAKING : ‘ಕಸಾಪದಲ್ಲೂ’ ಭಾರಿ ಹಣಕಾಸು ಅವ್ಯವಹಾರ : ಮಹೇಶ್ ಜೋಶಿ ಅಧ್ಯಕ್ಷ ಸ್ಥಾನಕ್ಕೆ ಕುತ್ತು!

By kannadanewsnow0530/09/2025 11:34 AM

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಹಣಕಾಸಿನ ವಿಚಾರದಲ್ಲಿ ವ್ಯವಹಾರದಲ್ಲಿ ಭಾರಿ ಅಕ್ರಮ ನಡೆದಿದ್ದು, ಶೀಘ್ರದಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ಸೂಪರ್ ಸೀಡ್ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ ಕಸಾಪ ಆಡಳಿತಾಧಿಕಾರಿ ನೇಮಕಕ್ಕೆ ಸರ್ಕಾರ ಇದೀಗ ಚಿಂತನೆ ನಡೆಸುತ್ತಿದೆ. ಹಾಗಾಗಿ ಹಾಲಿ ಅಧ್ಯಕ್ಷರಾಗಿರುವ ಮಹೇಶ್ ಜೋಶಿ ಅವರ ಅಧ್ಯಕ್ಷ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ.

ಹೌದು ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಆರ್ಥಿಕ ಅವ್ಯವಹಾರ ತನಿಖೆಗೆ ವಿಚಾರಣಾಧಿಕಾರಿ ನೇಮಕ ಮಾಡಿತ್ತು. ತನಿಖೆಗೆ ವಿಚಾರಣಾಧಿಕಾರಿ ನೇಮಿಸಿ ಸಹಕಾರ ಇಲಾಖೆ ಆದೇಶ ಹೊರಡಿಸಿತ್ತು. 2002 ರಿಂದ ಇಲ್ಲಿಯ ತನಕ ನಿರಂತರವಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೋಟ್ಯಾಂತರ ರೂಪಾಯಿ ಹಣಕಾಸಿನ ಅವ್ಯವಹಾರ ನಡೆದಿವೆ ಎನ್ನುವ ಗಂಭೀರವಾದ ಆರೋಪ ಕೇಳಿ ಬಂದಿದೆ. ಅದಕ್ಕೆ ಸಂಬಂಧಪಟ್ಟಂತೆ ಸಹಕಾರ ಇಲಾಖೆ ವಿಚಾರಣಾಧಿಕಾರಿ ನೇಮಕ ಮಾಡಿದ್ದು ವಿಚಾರಣೆ ಬಳಿಕ ಆಡಿಟ್ ವರದಿಗಳನ್ನು ಸರ್ಕಾರ ಪಡೆದುಕೊಂಡಿತ್ತು.

ಹಿರಿಯ ಅಧಿಕಾರಿಗಳಿಂದ ಆಡಿಟ್ ಪರಿಶೀಲನೆ ಆದ ಬಳಿಕ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಕಷ್ಟು ಆರ್ಥಿಕ ವ್ಯಹಾರ ಮತ್ತು ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸೂಪರ್ ಸೀಡ್ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಕೆಲವೇ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಧ್ಯಕ್ಷರಾಗಿರುವ ಮಹೇಶ್ ಜೋಶಿ ಅವರನ್ನು ಕೆಳಗಿಳಿಸಿ ಆಡಳಿತ ಅಧಿಕಾರಿ ನೇಮಕ ಮಾಡುವ ಕುರಿತು ಸರ್ಕಾರ ವಲಯದಲ್ಲಿ ಚಿಂತನೆ ನಡೆದಿದೆ.

2022 ರಿಂದ ಇಲ್ಲಿಯವರೆಗೂ ನಿರಂತರವಾಗಿ ಆರ್ಥಿಕ ಚಟುವಟಿಕೆಗಳಲ್ಲಿ ಸಾಕಷ್ಟು ಅಕ್ರಮ ಅವ್ಯವಹಾರ ನಡೆದಿದೆ. ಪರಿಷತ್ತಿನ ಹಣವನ್ನು ಅಧ್ಯಕ್ಷರ ಕುಟುಂಬದ ಕಾರ್ಯಕ್ರಮಗಳಿಗೆ ಬಳಕೆ ಮಾಡಲಾಗಿದೆ. ಮತ್ತು ವಾಹನಗಳ ಖರೀದಿಯಲ್ಲಿ ಲೋಪದೋಷಗಳು ಆಗಿವೆ. ಕಂಪ್ಯೂಟರ್, ಪುಸ್ತಕಗಳ ಪ್ರಕಟಣೆ, ಸಿಸಿಟಿವಿ ಅಳವಡಿಕೆ ಈ ಎಲ್ಲಾ ಹಣವನ್ನು ದುರ್ಬಳಕೆ ಮಾಡಿಕೊಂಡಿರುವಂತಹದ್ದು ಕಂಡುಬಂದಿದೆ.

ಅಷ್ಟೆ ಅಲ್ಲದೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗಳಿಗೆ ಬರುವಂತಹ CSR ಹಣವನ್ನು ಸಹ ಕೂಡ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಅದಕ್ಕೆ ಸಂಬಂಧಪಟ್ಟಂತೆ ಜುಲೈ ಮೊದಲ ವಾರದಲ್ಲಿ ಸಹಕಾರ ಇಲಾಖೆ ವಿಚಾರಣೆಗೆ ಕೂಡ ಆದೇಶ ನೀಡಿತ್ತು. ಈ ಒಂದು ಆಡಿಟ್ ವರದಿಯನ್ನು ಆಧರಿಸಿ ಸರ್ಕಾರ ಕನ್ನಡ ಸಾಹಿತ್ಯ ಪರಿಷತ್ ಅನ್ನು ಸೂಪರ್ ಸೀಡ್ ಮಾಡುವ ಸಾಧ್ಯತೆಗಳು ದಟ್ಟವಾಗಿವೆ ಎಂದು ತಿಳಿದು ಬಂದಿದೆ.

Share. Facebook Twitter LinkedIn WhatsApp Email

Related Posts

ರಾಜ್ಯದ ಎಲ್ಲ ಪದವಿ ಕಾಲೇಜುಗಳಲ್ಲಿ `ಸ್ಕೌಟ್ಸ್ & ಗೈಡ್ಸ್’ ಸ್ಥಾಪನೆ ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ

12/10/2025 7:42 AM1 Min Read

ಗಮನಿಸಿ : ಜಮೀನು, ಮನೆ ಖರೀದಿಸುವಾಗ ಈ ದಾಖಲೆಗಳು ಸರಿ ಉಂಟಾ ಚೆಕ್ ಮಾಡಿಕೊಳ್ಳಿ.!

12/10/2025 7:24 AM2 Mins Read

ರಾಜ್ಯದಲ್ಲಿ `18000’ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ : ಸರ್ಕಾರದಿಂದಲೇ ಅನುದಾನಿತ ಶಾಲೆಗಳಿಗೂ ಅತಿಥಿ ಶಿಕ್ಷಕರ ನೇಮಕ

12/10/2025 7:19 AM1 Min Read
Recent News

SHOCKING : ಕೆಲಸಗಾರ `ಹೃದಯಾಘಾತ’ದಿಂದ ಸಾವನ್ನಪ್ಪಿದ್ರೂ ಮೊಬೈಲ್ ನೋಡುತ್ತ ಕುಳಿತ ಮಾಲೀಕ : ವಿಡಿಯೋ ವೈರಲ್ | WATCH VIDEO

12/10/2025 7:53 AM

ಮತ್ತೊಂದು ಸಾಂಕ್ರಾಮಿಕ ರೋಗ ಬರುತ್ತಾ? ಜಪಾನ್ ನಲ್ಲಿ ಮಾರಣಾಂತಿಕ ಕಾಯಿಲೆ, 4000 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲು, ಶಾಲೆಗಳು ಬಂದ್

12/10/2025 7:46 AM

ರಾಜ್ಯದ ಎಲ್ಲ ಪದವಿ ಕಾಲೇಜುಗಳಲ್ಲಿ `ಸ್ಕೌಟ್ಸ್ & ಗೈಡ್ಸ್’ ಸ್ಥಾಪನೆ ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ

12/10/2025 7:42 AM

BREAKING: ನಾಳೆ ಗಾಜಾದಿಂದ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಘೋಷಣೆ

12/10/2025 7:32 AM
State News
KARNATAKA

ರಾಜ್ಯದ ಎಲ್ಲ ಪದವಿ ಕಾಲೇಜುಗಳಲ್ಲಿ `ಸ್ಕೌಟ್ಸ್ & ಗೈಡ್ಸ್’ ಸ್ಥಾಪನೆ ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ

By kannadanewsnow5712/10/2025 7:42 AM KARNATAKA 1 Min Read

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಡ್ಡಾಯವಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಾಪಿಸಿ ನಿರ್ವಹಿಸಬೇಕು ಎಂದು ಕಾಲೇಜು…

ಗಮನಿಸಿ : ಜಮೀನು, ಮನೆ ಖರೀದಿಸುವಾಗ ಈ ದಾಖಲೆಗಳು ಸರಿ ಉಂಟಾ ಚೆಕ್ ಮಾಡಿಕೊಳ್ಳಿ.!

12/10/2025 7:24 AM

ರಾಜ್ಯದಲ್ಲಿ `18000’ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ : ಸರ್ಕಾರದಿಂದಲೇ ಅನುದಾನಿತ ಶಾಲೆಗಳಿಗೂ ಅತಿಥಿ ಶಿಕ್ಷಕರ ನೇಮಕ

12/10/2025 7:19 AM

SHOCKING : ರಾಜ್ಯದಲ್ಲಿ ಹೃದಯವಿದ್ರಾವಕ ಘಟನೆ : ತಂದೆ ಸಾವಿನಿಂದ ಮನನೊಂದು ಮಗಳೂ ಆತ್ಮಹತ್ಯೆ!

12/10/2025 7:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.