Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Chanakya Niti: ಹೆಂಡ್ತಿಗೆ ಗಂಡ ಎಂದಿಗೂ ಈ ತಪ್ಪುಗಳನ್ನು ಮಾಡಬಾರದಂತೆ…!

26/09/2025 8:03 AM

BREAKING : ಖಾಸಗಿ ಫೋಟೋ ಇಟ್ಕೊಂಡು `ಬ್ಲ್ಯಾಕ್ ಮೇಲ್’ : ಪ್ರಿಯತಮ, ಸ್ನೇಹಿತನ ವಿರುದ್ಧ ‘ಕಿಪ್ಪಿ ಕೀರ್ತಿ’ ದೂರು.!

26/09/2025 8:02 AM

ಕಾವೇರಿ ಆರತಿ : `KRS’ ವೀಕ್ಷಿಸಲು ಫ್ರೀ ಎಂಟ್ರಿ- ಶಾಸಕ ರಮೇಶ್ ಬಂಡಿಸಿದ್ದೇಗೌಡ ಘೋಷಣೆ

26/09/2025 7:57 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಾವೇರಿ ಆರತಿ : `KRS’ ವೀಕ್ಷಿಸಲು ಫ್ರೀ ಎಂಟ್ರಿ- ಶಾಸಕ ರಮೇಶ್ ಬಂಡಿಸಿದ್ದೇಗೌಡ ಘೋಷಣೆ
KARNATAKA

ಕಾವೇರಿ ಆರತಿ : `KRS’ ವೀಕ್ಷಿಸಲು ಫ್ರೀ ಎಂಟ್ರಿ- ಶಾಸಕ ರಮೇಶ್ ಬಂಡಿಸಿದ್ದೇಗೌಡ ಘೋಷಣೆ

By kannadanewsnow5726/09/2025 7:57 AM

ಮಂಡ್ಯ : ಸೆಪ್ಟೆಂಬರ್ 26 ರ ಇಂದಿನಿಂದ ಅಕ್ಟೋಬರ್ 2 ರವರೆಗೆ ಕೆ.ಆರ್.ಎಸ್ ಬೃಂದಾವನಕ್ಕೆ ಆಗಮಿಸುವ ಸಾರ್ವಜನಿಕರ ವಾಹನಕ್ಕೆ ಟೋಲ್ ಹಾಗೂ ಬೃಂದಾವನ ವೀಕ್ಷಣೆಯ ಪ್ರವೇಶ ಶುಲ್ಕ ಇರುವುದಿಲ್ಲ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ‌ ರಮೇಶ ಬಾಬು ಬಂಡಿಸಿದ್ದೇಗೌಡ ಅವರು ತಿಳಿಸಿದ್ದಾರೆ.

ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕಾವೇರಿ ನದಿಗೆ “ಕಾವೇರಿ ಆರತಿ” ಮಾಡುವ ಕಾರ್ಯಕ್ರಮವು ಸೆಪ್ಟೆಂಬರ್ 26 ರ ಇಂದಿನಿಂದ ಐದು ದಿನಗಳ ಕಾಲ‌ ಕೆಆರ್ ಎಸ್ ನ ಬೃಂದಾವನ ಉದ್ಯಾನವನದಲ್ಲಿ ನೆರವೇರಲಿದೆ.

ಕಾವೇರಿ ಆರತಿ ಕಾರ್ಯಕ್ರಮದ ವೀಕ್ಷಣೆಗೆ ಪ್ರತಿ ನಿತ್ಯ 8 ರಿಂದ 10 ಸಾವಿರಕ್ಕೂ ಅಧಿಕ ಪ್ರವಾಸಿಗರು ರಾಜ್ಯ, ಹೊರರಾಜ್ಯದ ನಾನಾ ಭಾಗಗಳಿಂದ ಆಗಮಿಸಿ “ಕಾವೇರಿ ಆರತಿ”ಯನ್ನು ಕಣ್ತುಂಬಿಕೊಳ್ಳಲಿದ್ದಾರೆ.

ಕಾವೇರಿ ಆರತಿ ವೀಕ್ಷಿಸಲು ಆಗಮಿಸುವ ಪ್ರವಾಸಿಗರಿಗೆ ಉಚಿತವಾಗಿ ಹಂಚಲು ಜಲಸಂಪನ್ಮೂಲ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಲಾಡು ಮಾಡಿಸಿದ್ದಾರೆ.

ಪ್ರತಿನಿತ್ಯ ಲಾಡು ವಿತರಣೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. “ಕಾವೇರಿ ಆರತಿ” ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಕಾವೇರಿ ತಾಯಿ ಪ್ರಸಾದವಾಗಿ ಲಾಡನ್ನು ಉಚಿತವಾಗಿ ವಿತರಣೆ ಮಾಡಲಾಗುವುದು.

ಕಾವೇರಿ ಕನ್ನಡ ನಾಡಿನ ಜೀವನದಿ. ಕೇರಳ, ತಮಿಳುನಾಡು ಹಾಗೂ ರಾಜ್ಯದ ನಾನಾ ಭಾಗಗಳಿಂದ ಕೆಆರ್ ಎಸ್ ವೀಕ್ಷಣೆಗೆ ದಿನಂಪ್ರತಿ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಕಾವೇರಿ ಆರತಿ ವೀಕ್ಷಿಸಲು ಆಗಮಿಸಲಿದ್ದಾರೆ. ಹೀಗಾಗಿ ಅವರಿಗೆ ಲಾಡು ವಿತರಣೆ ವ್ಯವಸ್ಥೆ ಮಾಡಲಾಗಿದೆ.

ಸಂಪ್ರದಾಯಗಳನ್ನು ಒಳಗೊಂಡ ಕಾವೇರಿ ಆರತಿ ದಕ್ಷಿಣ ಭಾರತದಲ್ಲಿ ಪ್ರಪ್ರಥಮವಾಗಿ ನೆರವೇರುತ್ತಿದ್ದು, ಇದಕ್ಕೆ ಕೃಷ್ಣರಾಜಸಾಗರ ಸಾಕ್ಷಿಯಾಗಲಿದೆ.

ಸೆಪ್ಟೆಂಬರ್ 26 ರ ಶುಕ್ರವಾರ ಸಂಜೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ “ಕಾವೇರಿ ಆರತಿ” ಕಾರ್ಯಕ್ರಮಕ್ಕೆ ಶಾಸ್ತ್ರೋಕ್ತವಾಗಿ ಚಾಲನೆ ನೀಡಲಿದ್ದಾರೆ.

Cauvery Aarti: Free entry to watch `KRS' - MLA Ramesh Bandisidde Gowda announces
Share. Facebook Twitter LinkedIn WhatsApp Email

Related Posts

BREAKING : ಖಾಸಗಿ ಫೋಟೋ ಇಟ್ಕೊಂಡು `ಬ್ಲ್ಯಾಕ್ ಮೇಲ್’ : ಪ್ರಿಯತಮ, ಸ್ನೇಹಿತನ ವಿರುದ್ಧ ‘ಕಿಪ್ಪಿ ಕೀರ್ತಿ’ ದೂರು.!

26/09/2025 8:02 AM1 Min Read

ಆಸ್ತಿ ಖರೀದಿ, ಮಾರಾಟಗಾರರೇ ಗಮನಿಸಿ : ನೋಂದಣಿಗೆ ಈ ದಾಖಲೆಗಳು ಕಡ್ಡಾಯ.!

26/09/2025 7:54 AM4 Mins Read

ರಾಜ್ಯದ ರೈತರೇ ಗಮನಿಸಿ : ‘ಸಹಕಾರ ಸಂಘ’ಗಳಿಂದ ನಿಮಗೆ ಸಿಗುವ ‘ಸಾಲ ಸೌಲಭ್ಯ’ಗಳು ಹೀಗಿವೆ.!

26/09/2025 7:50 AM6 Mins Read
Recent News

Chanakya Niti: ಹೆಂಡ್ತಿಗೆ ಗಂಡ ಎಂದಿಗೂ ಈ ತಪ್ಪುಗಳನ್ನು ಮಾಡಬಾರದಂತೆ…!

26/09/2025 8:03 AM

BREAKING : ಖಾಸಗಿ ಫೋಟೋ ಇಟ್ಕೊಂಡು `ಬ್ಲ್ಯಾಕ್ ಮೇಲ್’ : ಪ್ರಿಯತಮ, ಸ್ನೇಹಿತನ ವಿರುದ್ಧ ‘ಕಿಪ್ಪಿ ಕೀರ್ತಿ’ ದೂರು.!

26/09/2025 8:02 AM

ಕಾವೇರಿ ಆರತಿ : `KRS’ ವೀಕ್ಷಿಸಲು ಫ್ರೀ ಎಂಟ್ರಿ- ಶಾಸಕ ರಮೇಶ್ ಬಂಡಿಸಿದ್ದೇಗೌಡ ಘೋಷಣೆ

26/09/2025 7:57 AM

ದ್ವಿಪಕ್ಷೀಯ ಮಾತುಕತೆಗಾಗಿ ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿರುವ ಬ್ರಿಟನ್ ಪ್ರಧಾನಿ

26/09/2025 7:56 AM
State News
KARNATAKA

BREAKING : ಖಾಸಗಿ ಫೋಟೋ ಇಟ್ಕೊಂಡು `ಬ್ಲ್ಯಾಕ್ ಮೇಲ್’ : ಪ್ರಿಯತಮ, ಸ್ನೇಹಿತನ ವಿರುದ್ಧ ‘ಕಿಪ್ಪಿ ಕೀರ್ತಿ’ ದೂರು.!

By kannadanewsnow5726/09/2025 8:02 AM KARNATAKA 1 Min Read

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯಳಾಗಿರುವ ಕಿಪ್ಪಿ ಕೀರ್ತಿ ತನ್ನ ಪ್ರಿಯತಮನ ವಿರುದ್ಧ ದೂರು ದಾಖಲಿಸಿದ್ದಾಳೆ. ಹೌದು, ಖಾಸಗಿ ಫೋಟೋಗಳನ್ನು ಇಟ್ಟುಕೊಂಡು…

ಕಾವೇರಿ ಆರತಿ : `KRS’ ವೀಕ್ಷಿಸಲು ಫ್ರೀ ಎಂಟ್ರಿ- ಶಾಸಕ ರಮೇಶ್ ಬಂಡಿಸಿದ್ದೇಗೌಡ ಘೋಷಣೆ

26/09/2025 7:57 AM

ಆಸ್ತಿ ಖರೀದಿ, ಮಾರಾಟಗಾರರೇ ಗಮನಿಸಿ : ನೋಂದಣಿಗೆ ಈ ದಾಖಲೆಗಳು ಕಡ್ಡಾಯ.!

26/09/2025 7:54 AM

ರಾಜ್ಯದ ರೈತರೇ ಗಮನಿಸಿ : ‘ಸಹಕಾರ ಸಂಘ’ಗಳಿಂದ ನಿಮಗೆ ಸಿಗುವ ‘ಸಾಲ ಸೌಲಭ್ಯ’ಗಳು ಹೀಗಿವೆ.!

26/09/2025 7:50 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.