Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೊದಲ ದಿನವೇ ರಾಜ್ಯಾಧ್ಯಂತ 60.16 ಲಕ್ಷ ಮಕ್ಕಳಿಗೆ ‘ಪಲ್ಸ್ ಪೋಲಿಯಾ’ ಲಸಿಕೆ

21/12/2025 9:46 PM

ದ್ವೇಷ ಬಿತ್ತುವ ಶಕ್ತಿಗಳ ವಿರುದ್ಧ ಹೋರಾಟ ನಮ್ಮ ಕರ್ತವ್ಯ, ಜಾತಿ ಹೋಗಬೇಕಾದರೆ ಸಮಾನತೆ ಬರಬೇಕು : ಸಿಎಂ ಸಿದ್ದರಾಮಯ್ಯ

21/12/2025 9:15 PM

BIG NEWS : ಧರ್ಮಗಳು ಪ್ರೀತಿ ಹಾಗೂ ಕರುಣೆ ಬೋಧಿಸುತ್ತವೆ ಹೊರತು ದ್ವೇಷವನ್ನಲ್ಲ : ಸಿಎಂ ಸಿದ್ದರಾಮಯ್ಯ ಹೇಳಿಕೆ

21/12/2025 8:37 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೂಲ ಮರೆತವರು ಅಸ್ತಿತ್ವ ಕಳೆದಕೊಳ್ಳುತ್ತಾರೆ : ರಾಮಚಂದ್ರಾಪುರ ಶ್ರೀ
KARNATAKA

ಮೂಲ ಮರೆತವರು ಅಸ್ತಿತ್ವ ಕಳೆದಕೊಳ್ಳುತ್ತಾರೆ : ರಾಮಚಂದ್ರಾಪುರ ಶ್ರೀ

By kannadanewsnow0722/09/2025 8:12 PM

ಶಿವಮೊಗ್ಗ: ಇಂದು ಮನುಷ್ಯನ ಮನಸ್ಥಿತಿ ಹೇಗಿದೆಯೆಂದರೆ ಪುಣ್ಯದ ಫಲ ಬೇಕು, ಆದರೆ ಪುಣ್ಯದ ಕಾರ್ಯ ಮಾಡುವುದಕ್ಕೆ ಮನಸ್ಸಿಲ್ಲ. ದುಃಖ ಬೇಡ, ಆದರೆ ದುಃಖದ ಮೂಲವಾದ ಪಾಪ ಮಾಡುವುದನ್ನು ನಿಲ್ಲಿಸುವುದಿಲ್ಲ. ಇದು ಬದಲಾಗಿ ಪುಣ್ಯದ ಕಾರ್ಯದಲ್ಲಿ ಮನಸ್ಸು, ದುಃಖದಿಂದ ದೂರವಿರುವ ಕಾರ್ಯ ಮಾಡುವಂತಾಗಲು ಇರುವ ದಾರಿ ಒಂದೇ. ಅದು ಜಗನ್ಮಾತೆಯಾದ ರಾಜರಾಜೇಶ್ವರಿಯ ಧ್ಯಾನ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಸೋಮವಾರ ಸಾಗರದ  ರಾಘವೇಶ್ವರ ಸಭಾಭವನದಲ್ಲಿ ಆರಂಭಗೊಂಡ ‘ನವರಾತ್ರ ನಮಸ್ಯಾ’ ಕಾರ್ಯಕ್ರಮದಲ್ಲಿ ಶ್ರೀ ಲಲಿತಾ ದೇವಿಯ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿ ಪೂಜೆಗೆ ಚಾಲನೆ ನೀಡಿದ ಅವರು, ನಂತರ ಲಲಿತೋಪಾಖ್ಯಾನ ಪ್ರವಚನವನ್ನು ಅನುಗ್ರಹಿಸಿದರು.

ಕೇವಲ ದೇವಿಯ ಸ್ತುತಿಗೆ ಮುಂದಾಗಬೇಕು ಎಂದು ಮನಸ್ಸು ಮಾಡಿದಾಕ್ಷಣಕ್ಕೆ ನಾವು ಮಾಡಿದ ಪಾಪಗಳ ಪರಿಹಾರ ಸಾಧ್ಯವಾಗಲಿದೆ ಎನ್ನುವುದಾದರೆ, ಇನ್ನು ನಿಜವಾಗಿಯೂ ಶ್ರದ್ಧಾಭಕ್ತಿಯಿಂದ ಆಕೆಯ ಆರಾಧನೆಯಲ್ಲಿ ತೊಡಗಿದಾಗ ಸಿಗಬಹುದಾದ ಪುಣವೆಷ್ಟು ಎಂಬ ಸಂಗತಿ ಊಹೆಗೂ ನಿಲುಕಲಾರದು. ಮಾತ್ರವಲ್ಲ ಆಕೆಯ ಆರಾಧನೆಯಿಂದ ಪಾಪಗಳೂ ಪುಣ್ಯವಾಗಿ ಪರಿವರ್ತನೆಗೊಳ್ಳುವಂಥ ಮಹತ್ವದ ಸಂಗತಿ ಆ ಪೂಜೆಯಲ್ಲಿದೆ. ಯಾವತ್ತೂ ಪೂಜೆಯ ಹಿಂದಿರಬಹುದಾದ ಮಹತ್ವವನ್ನ ಅರಿತು, ಆರಾಧಿಸಬೇಕು. ಪೂಜೆಯಲ್ಲಿ ಬಳಸುವ ಮಂತ್ರದ ಮೂಲ ಅಂತಹ ಶಕ್ತಿಯನ್ನು ಹೊಂದಿದೆ. ಅದೂ ಮೂಲ. ಹಾಗಾಗಿ ಎಂದೂ ಕೂಡ ಮೂಲವನ್ನು ಮರೆಯಬಾರದು. ಅದು ವೃಕ್ಷಕ್ಕೆ ಬೇರಿದ್ದಂತೆ. ಅದನ್ನು ತೋರುವ ಕಾರ್ಯವನ್ನು ಗುರು ಮಾಡುತ್ತಾನೆ. ಜಗತ್ತಿಗೆ ನೆಮ್ಮದಿ ನೀಡುವ ಉದ್ದೇಶದ ಇಂತಹ ಕಾರ್ಯಗಳಿಗಾಗಿಯೇ ಹಿಂದೆ ಋಷಿ ಮುನಿಗಳು, ತಪಸ್ವಿಗಳು ಇಂಥ ಜ್ಞಾನವನ್ನು ಹುಡುಕಿದವರು. ಅದನ್ನು ಅರಿಯಬೇಕಾದರೆ ಗುರುವಿನ ಕುರಿತಾದ ಅರಿವಿರಬೇಕು ಎಂದರು.

ಇದಕ್ಕೂ ಮುನ್ನ ಸೋಮವಾರ ಬೆಳಗ್ಗೆ ನವರಾತ್ರ ನಮಸ್ಯಾದ ಪುಣ್ಯಾಹವಾಚನೆ, ಮಹಾಸಂಕಲ್ಪ, ಯೋಗನಿದ್ರಾ ದೇವಿ ಉಪಾಸನೆ, ದುರ್ಗಾ ಹವನ, ಚಂಡಿಕಾ ಹವನ, ಲಲಿತಾ ಮೂರ್ತಿ ಪ್ರತಿಷ್ಟಾಪನೆ, ಮಾತೆಯರಿಂದ ಕುಂಕುಮಾರ್ಚನೆ, ಉಡಿ ಸಮರ್ಪಣೆ, ಸ್ತೋತ್ರ ಪಠಣ, ಭಜನೆ ನೆರವೇರಿತು.

ಸಮಾಜ ಸಂಭ್ರಮ: ನವರಾತ್ರ ನಮಸ್ಯಾ ಅಂಗವಾಗಿ ಸಮಿತಿಯು ಆಯೊಜಿಸಿದ್ದ ಸಮಾಜ ಸಂಭ್ರಮದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಅಧ್ಯಕ್ಷ ವೆಂಕಟೇಶ ಪ್ರಭು, ವೈಷ್ಯವಾಣಿ ಸಮಾಜದ ಅಧ್ಯಕ್ಷ ಸತ್ಯನಾರಾಯಣರನ್ನು ಸಮಾಜದ ಪರವಾಗಿ ಗೌರವಿಸಲಾಯಿತು. ಸಂಜೆ ದುರ್ಗಾದೀಪ ನಮಸ್ಕಾರ, ಶ್ರೀ ರಾಜರಾಜೇಶ್ವರಿ ಪೂಜೆ ನೆರವೇರಿತು.

Those who forget their origins lose their existence: Ramachandrapura Sri
Share. Facebook Twitter LinkedIn WhatsApp Email

Related Posts

ಮೊದಲ ದಿನವೇ ರಾಜ್ಯಾಧ್ಯಂತ 60.16 ಲಕ್ಷ ಮಕ್ಕಳಿಗೆ ‘ಪಲ್ಸ್ ಪೋಲಿಯಾ’ ಲಸಿಕೆ

21/12/2025 9:46 PM1 Min Read

ದ್ವೇಷ ಬಿತ್ತುವ ಶಕ್ತಿಗಳ ವಿರುದ್ಧ ಹೋರಾಟ ನಮ್ಮ ಕರ್ತವ್ಯ, ಜಾತಿ ಹೋಗಬೇಕಾದರೆ ಸಮಾನತೆ ಬರಬೇಕು : ಸಿಎಂ ಸಿದ್ದರಾಮಯ್ಯ

21/12/2025 9:15 PM1 Min Read

BIG NEWS : ಧರ್ಮಗಳು ಪ್ರೀತಿ ಹಾಗೂ ಕರುಣೆ ಬೋಧಿಸುತ್ತವೆ ಹೊರತು ದ್ವೇಷವನ್ನಲ್ಲ : ಸಿಎಂ ಸಿದ್ದರಾಮಯ್ಯ ಹೇಳಿಕೆ

21/12/2025 8:37 PM1 Min Read
Recent News

ಮೊದಲ ದಿನವೇ ರಾಜ್ಯಾಧ್ಯಂತ 60.16 ಲಕ್ಷ ಮಕ್ಕಳಿಗೆ ‘ಪಲ್ಸ್ ಪೋಲಿಯಾ’ ಲಸಿಕೆ

21/12/2025 9:46 PM

ದ್ವೇಷ ಬಿತ್ತುವ ಶಕ್ತಿಗಳ ವಿರುದ್ಧ ಹೋರಾಟ ನಮ್ಮ ಕರ್ತವ್ಯ, ಜಾತಿ ಹೋಗಬೇಕಾದರೆ ಸಮಾನತೆ ಬರಬೇಕು : ಸಿಎಂ ಸಿದ್ದರಾಮಯ್ಯ

21/12/2025 9:15 PM

BIG NEWS : ಧರ್ಮಗಳು ಪ್ರೀತಿ ಹಾಗೂ ಕರುಣೆ ಬೋಧಿಸುತ್ತವೆ ಹೊರತು ದ್ವೇಷವನ್ನಲ್ಲ : ಸಿಎಂ ಸಿದ್ದರಾಮಯ್ಯ ಹೇಳಿಕೆ

21/12/2025 8:37 PM

BREAKING : ಶೀಘ್ರದಲ್ಲಿ ಚಿಕ್ಕೋಡಿ ತಾಲೂಕು ಜಿಲ್ಲೆಯಾಗಿ ರಚನೆ : ಸಚಿವ ಹೆಚ್.ಕೆ ಪಾಟೀಲ್ ಸುಳಿವು

21/12/2025 8:02 PM
State News
KARNATAKA

ಮೊದಲ ದಿನವೇ ರಾಜ್ಯಾಧ್ಯಂತ 60.16 ಲಕ್ಷ ಮಕ್ಕಳಿಗೆ ‘ಪಲ್ಸ್ ಪೋಲಿಯಾ’ ಲಸಿಕೆ

By kannadanewsnow0921/12/2025 9:46 PM KARNATAKA 1 Min Read

ಬೆಂಗಳೂರು: ಇಂದಿನಿಂದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನವನ್ನು ಸರ್ಕಾರ ಆರಂಭಿಸಿತ್ತು. ಮೊದಲ ದಿನವೇ ಬರೋಬ್ಬರಿ 60.16 ಲಕ್ಷ ಮಕ್ಕಳಿಗೆ…

ದ್ವೇಷ ಬಿತ್ತುವ ಶಕ್ತಿಗಳ ವಿರುದ್ಧ ಹೋರಾಟ ನಮ್ಮ ಕರ್ತವ್ಯ, ಜಾತಿ ಹೋಗಬೇಕಾದರೆ ಸಮಾನತೆ ಬರಬೇಕು : ಸಿಎಂ ಸಿದ್ದರಾಮಯ್ಯ

21/12/2025 9:15 PM

BIG NEWS : ಧರ್ಮಗಳು ಪ್ರೀತಿ ಹಾಗೂ ಕರುಣೆ ಬೋಧಿಸುತ್ತವೆ ಹೊರತು ದ್ವೇಷವನ್ನಲ್ಲ : ಸಿಎಂ ಸಿದ್ದರಾಮಯ್ಯ ಹೇಳಿಕೆ

21/12/2025 8:37 PM

BREAKING : ಶೀಘ್ರದಲ್ಲಿ ಚಿಕ್ಕೋಡಿ ತಾಲೂಕು ಜಿಲ್ಲೆಯಾಗಿ ರಚನೆ : ಸಚಿವ ಹೆಚ್.ಕೆ ಪಾಟೀಲ್ ಸುಳಿವು

21/12/2025 8:02 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.