Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ರಾಯಚೂರಲ್ಲಿ ವಿಷ ಸೇವಿಸಿ ಮೂವರು ಯುವತಿಯರು ಆತ್ಮಹತ್ಯೆಗೆ ಯತ್ನ, ಒಬ್ಬರು ಸಾವು

14/09/2025 10:04 PM

ಚಿಕ್ಕಬಳ್ಳಾಪುರದಲ್ಲಿ ಗಣೇಶ ಮೆರವಣಿಗೆ ನೋಡಲು ತೆರಳುತ್ತಿದ್ದ ಇಬ್ಬರು ದುರ್ಮರಣ

14/09/2025 9:46 PM

ಮಲಗುವ ಮುನ್ನ ಈ 3 ಅಕ್ಷರಗಳ ಮಂತ್ರವನ್ನು ಪಠಿಸಿ, ಮರುದಿನ ನಿಮ್ಮ ಎಲ್ಲಾ ಪ್ರಯತ್ನ ಯಶಸ್ವಿ

14/09/2025 9:26 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮ್ಮ‌ ಕಾಂಗ್ರೆಸ್ ಪಕ್ಷದೊಳಗೆಯೇ ಅಸಮಾನತೆ ಇಲ್ವೇ? ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಬಿಜೆಪಿ MLC ಸಿಟಿ ರವಿ
KARNATAKA

ನಿಮ್ಮ‌ ಕಾಂಗ್ರೆಸ್ ಪಕ್ಷದೊಳಗೆಯೇ ಅಸಮಾನತೆ ಇಲ್ವೇ? ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಬಿಜೆಪಿ MLC ಸಿಟಿ ರವಿ

By kannadanewsnow0514/09/2025 6:56 PM
ct ravi siddaramaiah
ct ravi siddaramaiah

ಬೆಂಗಳೂರು : ಹಿಂದೂ ಸಮಾಜದಲ್ಲಿ ಅಸಮಾನತೆ ಇದೆ ಎಂದು ಮೈಸೂರಿನಲ್ಲಿ ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ ಅವರಿಗೆ ಸಿ.ಟಿ.ರವಿ ಬಹಿರಂಗ ಪತ್ರ ಬರೆದು, ಅಸಮಾನತೆ ಹಿಂದೂ ಸಮಾಜದಲ್ಲಿ ಮಾತ್ರ ಇದೆಯೇ? ನಿಮ್ಮ‌ ಕಾಂಗ್ರೆಸ್ ಪಕ್ಷದೊಳಗೆಯೇ ಅಸಮಾನತೆ ಇಲ್ವೇ? ಎಂಬ ಪ್ರಶ್ನೆ ಕೇಳಿದ್ದಾರೆ.

ಅಸಮಾನತೆ ಬರೀ ಹಿಂದೂ ಸಮಾಜದಲ್ಲಿ ಮಾತ್ರ ಇದೆಯಾ? ಉಳಿದ ಕಡೆಗಳಿಗೆ ಇಲ್ವಾ? ಅಸಮಾನತೆ ಶ್ರೀಮಂತ–ಬಡವರ ನಡುವೆಯೂ ಇದೆ. ವಿದ್ಯಾವಂತ–ಅವಿದ್ಯಾವಂತರ ನಡುವೆಯೂ ಇದೆ. ಒಂದೇ ಜಾತಿಯಲ್ಲಿ ಇದ್ದರೂ ವಿವಿಧ ಅಧಿಕಾರದ ಹುದ್ದೆಯಲ್ಲಿದ್ದವರ ನಡುವೆಯೂ ಇದೆ. ಅಸಮಾನತೆಗೆ ಹಲವು ಮುಖಗಳಿವೆ. ಆರ್ಥಿಕ ಅಸಮಾನತೆ, ಸಾಮಾಜಿಕ ಅಸಮಾನತೆ, ಶೈಕ್ಷಣಿಕ ಅಸಮಾನತೆ, ಅಧಿಕಾರದ ಅಸಮಾನತೆ, ಮತೀಯ ಅಸಮಾನತೆ.

ಕ್ರಿಶ್ಚಿಯನ್‌, ಮುಸ್ಲಿಮರಲ್ಲೂ ಅಸಮಾನತೆ ಇದೆ. ಅಮೆರಿಕದಲ್ಲಿ ವೈಟ್ ಅಂಡ್ ಬ್ಲಾಕ್ ಅನ್ನುವಂತಹ ಅಸಮಾನತೆ ಇದೆ. ಹಿಂದೂ ಸಮಾಜದಲ್ಲಿ ಅಸ್ಪೃಶ್ಯತೆಯ ಅಸಮಾನತೆ ಇದೇ ಅನ್ನುವ ಏಕೈಕ ಕಾರಣ ಕೊಟ್ಟು ಲಕ್ಷಾಂತರ ಸಂಖ್ಯೆಯಲ್ಲಿ ಹಿಂದೂಗಳನ್ನು ಮತಾಂತರ ಮಾಡಲಾಗಿದೆ. ಏಸು ಕ್ರಿಸ್ತರ ಎದುರು ಸಮಾನವಾಗಿ, ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ ಅಂದವರು ಹಿಂದೂ ಸಮಾಜದೊಳಗಿರುವ ಅಷ್ಟೂ ಜಾತಿಗಳ ಹಿಂದೆ ಕ್ರೈಸ್ತ ಎನ್ನುವ ಹೆಸರು ಸೇರಿಸಿ ಅಲ್ಲಿ ಮತ್ತೆ ಯಾಕೆ ಹಿಂದೂ ಸಮಾಜಕ್ಕೆ‌ ಸಮಾನಾಂತರವಾದ ಜಾತಿ ವ್ಯವಸ್ಥೆ ನಿರ್ಮಾಣ ಮಾಡುವ ಕೆಲಸ ಮಾಡುತ್ತಿದ್ದೀರಿ?

ನಿಮ್ಮ ಪಕ್ಷದ ನಾಯಕರು ಜಗತ್ತಿಗೇ ಸಮಾನತೆ ಮಿತೃತ್ವ, ಭ್ರಾತ್ರತ್ವದ ಪಾಠ ಮಾಡುತ್ತಾರೆ. ಆದರೆ ಅದನ್ನು ಪಾಲಿಸಬೇಕಾದ ನೈತಿಕ ಜವಾಬ್ದಾರಿ ಹೆಗಲಮೇಲೇರಿದಾಗ ಅಸಹಿಷ್ಣುಗಳಾಗಿ ತಾರತಮ್ಯವನ್ನು ತೋರುತ್ತೀರಿ. ಇದೇ ಕಾರಣಕ್ಕೆ ತಾನೇ ತಾವು ತಮ್ಮದೇ ಪಕ್ಷದ ರಾಜ್ಯ ಅದ್ಯಕ್ಷರ ಬಳಿಯಿಂದ ಬಹಿರಂಗವಾಗಿ ಕ್ಷಮಾಪಣೆ ಕೇಳಿಸಿದಿರಿ. ಅಷ್ಟಕ್ಕೂ ಅವರು ಮಾಡಿದ ತಪ್ಪೇನು? ಸದನದೊಳಗೆ “ನಮಸ್ಥೆ ಸದಾ ವತ್ಸಲೆ ಮಾತೃಭೂಮಿ” ಅಂದರು, ತಾಯಿ ಭಾರತೀಯ ಸ್ತುತಿ ನಿಮ್ಮಗಳಿಂದ‌ ಸಹಿಸಲಾಗದೆ ಅಸಮಾನತೆ ತೋರಿದಿರಿ.

ಇನ್ನು ಗೃಹ ಸಚಿವರಾದ ಪರಮೇಶ್ವರ್ ಯಾರು ಅಸಮಾನತೆ ತೋರಿದ ಕಾರಣ ಚುನಾವಣೆಯಲ್ಲಿ ಸೋತು ಮುಖ್ಯಮಂತ್ರಿ ಆಗಲಿಲ್ಲ ಎಂದು ಬೇರೆಯಾಗಿ ಹೇಳಬೇಕಿಲ್ಲ. ಅದೆಷ್ಟು ಬಾರಿ ತಾವು ಸ್ವತ: ಅಸಮಾನತೆಗೆ ಗುರಿಯಾಗಿಲ್ಲ. ನಿಮ್ಮ‌ಪಕ್ಷದ ದೆಹಲಿ‌ನಾಯಕರೇ ನಿಮ್ಮನ್ನ ಕೆಟ್ಟದಾಗಿ ನಡೆಸಿಕೊಳ್ಳಲಿಲ್ಲ ಹೇಳಿ. ನಿಮ್ಮದೇ ಆಪ್ತ ವಲಯದಲ್ಲಿ ಅದನ್ನು ಹೇಳಿಕೊಂಡು ಹಲುಬಿದ್ದೀರಿ ಕೂಡ ಎಂದು ಬರೆದಿದ್ದಾರೆ.

ಅಸಮಾನತೆಯನ್ನು ಸಮರ್ಥಿಸುವ ಒಂದು ವೇದ ಮಂತ್ರ, ಒಂದು ವಚನ, ಒಂದು ದಾಸವಾಣಿಯನ್ನು ತೋರಿಸಿ. ವೇದಗಳಿರಬಹುದು, ವಚನಗಳಿರಬಹುದು, ದಾಸವಾಣಿ ಇರಬಹುದು ಇವೆಲ್ಲದರಲ್ಲೂ ಅಸಮಾನತೆಯನ್ನು ತೊಡೆದು ಹಾಕಲು ಸಂಪೂರ್ಣ ಪ್ರಯತ್ನ ಮಾಡಿದ್ದಾರೆ. ಅಸಮಾನತೆಯನ್ನು ತೊಳೆದು ಹಾಕಲು ಪ್ರಯತ್ನಿಸಿದ ಬುದ್ಧ, ಬಸವಣ್ಣ, ರಾಮಾನುಜಾಚಾರ್ಯ, ಕನಕದಾಸರಂತವರನ್ನೇ ಮುಂದಿಟ್ಟುಕೊಂಡು ಜಾತಿಯತೆ ಮಾಡುವವರಿಗೆ ಏನನ್ನ ಬೇಕು ಎಂದು ಪ್ರಶ್ನಿಸಿದ್ದಾರೆ.

Share. Facebook Twitter LinkedIn WhatsApp Email

Related Posts

BREAKING: ರಾಯಚೂರಲ್ಲಿ ವಿಷ ಸೇವಿಸಿ ಮೂವರು ಯುವತಿಯರು ಆತ್ಮಹತ್ಯೆಗೆ ಯತ್ನ, ಒಬ್ಬರು ಸಾವು

14/09/2025 10:04 PM1 Min Read

ಚಿಕ್ಕಬಳ್ಳಾಪುರದಲ್ಲಿ ಗಣೇಶ ಮೆರವಣಿಗೆ ನೋಡಲು ತೆರಳುತ್ತಿದ್ದ ಇಬ್ಬರು ದುರ್ಮರಣ

14/09/2025 9:46 PM1 Min Read

ಮಲಗುವ ಮುನ್ನ ಈ 3 ಅಕ್ಷರಗಳ ಮಂತ್ರವನ್ನು ಪಠಿಸಿ, ಮರುದಿನ ನಿಮ್ಮ ಎಲ್ಲಾ ಪ್ರಯತ್ನ ಯಶಸ್ವಿ

14/09/2025 9:26 PM3 Mins Read
Recent News

BREAKING: ರಾಯಚೂರಲ್ಲಿ ವಿಷ ಸೇವಿಸಿ ಮೂವರು ಯುವತಿಯರು ಆತ್ಮಹತ್ಯೆಗೆ ಯತ್ನ, ಒಬ್ಬರು ಸಾವು

14/09/2025 10:04 PM

ಚಿಕ್ಕಬಳ್ಳಾಪುರದಲ್ಲಿ ಗಣೇಶ ಮೆರವಣಿಗೆ ನೋಡಲು ತೆರಳುತ್ತಿದ್ದ ಇಬ್ಬರು ದುರ್ಮರಣ

14/09/2025 9:46 PM

ಮಲಗುವ ಮುನ್ನ ಈ 3 ಅಕ್ಷರಗಳ ಮಂತ್ರವನ್ನು ಪಠಿಸಿ, ಮರುದಿನ ನಿಮ್ಮ ಎಲ್ಲಾ ಪ್ರಯತ್ನ ಯಶಸ್ವಿ

14/09/2025 9:26 PM

1000ಕ್ಕೂ ಹೆಚ್ಚು ಬಾರಿ ಜೇನುಹುಳಗಳು ಕಚ್ಚಿ ಇಬ್ಬರು ಸಹೋದರರು ದುರ್ಮರಣ

14/09/2025 9:23 PM
State News
KARNATAKA

BREAKING: ರಾಯಚೂರಲ್ಲಿ ವಿಷ ಸೇವಿಸಿ ಮೂವರು ಯುವತಿಯರು ಆತ್ಮಹತ್ಯೆಗೆ ಯತ್ನ, ಒಬ್ಬರು ಸಾವು

By kannadanewsnow0914/09/2025 10:04 PM KARNATAKA 1 Min Read

ರಾಯಚೂರು: ವಿಷ ಸೇವಿಸಿ ಮೂವರು ಯುವತಿಯರು ಆತ್ಮಹತ್ಯೆಗೆ ಯತ್ನಿಸಿದಂತ ಘಟನೆ ರಾಯಚೂರಲ್ಲಿ ನಡೆದಿದೆ. ಈ ಘಟನೆಯಲ್ಲಿ ಓರ್ವ ಯುವತಿ ಸಾವನ್ನಪ್ಪಿದ್ದಾರೆ.…

ಚಿಕ್ಕಬಳ್ಳಾಪುರದಲ್ಲಿ ಗಣೇಶ ಮೆರವಣಿಗೆ ನೋಡಲು ತೆರಳುತ್ತಿದ್ದ ಇಬ್ಬರು ದುರ್ಮರಣ

14/09/2025 9:46 PM

ಮಲಗುವ ಮುನ್ನ ಈ 3 ಅಕ್ಷರಗಳ ಮಂತ್ರವನ್ನು ಪಠಿಸಿ, ಮರುದಿನ ನಿಮ್ಮ ಎಲ್ಲಾ ಪ್ರಯತ್ನ ಯಶಸ್ವಿ

14/09/2025 9:26 PM

ಇಸ್ರೇಲ್ ಬೆಳವಣಿಗೆ ವಾಸ್ತವ ಅರಿಯಲು, ಭಾರತೀಯ ಪತ್ರಕರ್ತರ ನಿಯೋಗ ಭೇಟಿ

14/09/2025 8:22 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.