Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಹಿಳೆಯ ವಾಹನ ಅಡ್ಡಗಟ್ಟಿ ಸಾರ್ವಜನಿಕವಾಗಿ ಅವಮಾನಿಸಿದ ವ್ಯಕ್ತಿಗೆ 11 ಲಕ್ಷಕ್ಕೂ ಅಧಿಕ ದಂಡ!

28/04/2026 10:33 PM

BREAKING; ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಗೆಲುವು, 15 ಮಹಾನಗರ ಪಾಲಿಕೆಗಳ ಗೆಲುವು

28/04/2026 9:32 PM

ಸಿಡಿಲು-ಗುಡುಗು ಸಂದರ್ಭದಲ್ಲಿ: ಜಾಗೃತರಾಗಿರಿ, ಸುರಕ್ಷಿತವಾಗಿರಿ; ಜೀವ ಉಳಿಸುವ ಮುನ್ನೆಚ್ಚರಿಕಾ ಕ್ರಮಗಳು

28/04/2026 9:30 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರಧಾನಮಂತ್ರಿ ಮೋದಿಯಿಂದ ಇಸ್ರೇಲ್ ಕಲಿಯಬಹುದಾದದ್ದು ಏನೇನು ಗೊತ್ತಾ?
INDIA

ಪ್ರಧಾನಮಂತ್ರಿ ಮೋದಿಯಿಂದ ಇಸ್ರೇಲ್ ಕಲಿಯಬಹುದಾದದ್ದು ಏನೇನು ಗೊತ್ತಾ?

By kannadanewsnow0908/09/2025 5:07 PM

ಅಮೆರಿಕ-ಭಾರತ ಸಂಬಂಧ ಇತ್ತೀಚಿನ ತಿಂಗಳುಗಳಲ್ಲಿ ತೀವ್ರ ವಿಶ್ವಾಸ ಬಿಕ್ಕಟ್ಟಿನಲ್ಲಿ ಸಿಲುಕಿವೆ. ಸುಂಕ ನೀತಿ, ರಷ್ಯಾದೊಂದಿಗಿನ ಭಾರತದ ವಿಶೇಷ ಬಾಂಧವ್ಯ ಹಾಗೂ ಪಾಕಿಸ್ತಾನದೊಂದಿಗಿನ ಭಾರತದ ಗಡಿ ಘರ್ಷಣೆಗಳಲ್ಲಿ ಅಮೆರಿಕದ ಆಡಳಿತಾತ್ಮಕ ವಿಧಾನಗಳಲ್ಲಿ ಅಪಾರ ವಿವಾದಗಳು ಈ ಬಿಕ್ಕಟ್ಟಿಗೆ ಕಾರಣವಾಗಿವೆ.

ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಭಾರತ ಹೆಚ್ಚಿನ ಪ್ರಮಾಣದ ಸುಂಕ ವಿಧಿಸುತ್ತಿದೆ ಎಂದು ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರು ಪದೇ ಪದೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಭಾರತವು ವಿಧಿಸುತ್ತಿರುವ ಸುಂಕದ ದರವು “ವಿಶ್ವದ ಅತ್ಯಧಿಕ” ಸುಂಕ ಪ್ರಮಾಣವಾಗಿದೆ ಎಂದು ಹೇಳಿದ ಅವರು, ತಮ್ಮ ರಾಷ್ಟ್ರದಿಂದ ವಿಧಿಸಲ್ಪಡುವ ಸುಂಕ ಪ್ರಮಾಣವನ್ನು ಶೇಕಡ 50 ರಷ್ಟು ಹೆಚ್ಚಿಸುವ ಮೂಲಕ ಪ್ರತಿಕ್ರಿಯೆ ನೀಡಿದ್ದರು.

ಆದಾಗ್ಯೂ, ಇದು ಕೇವಲ ಒಂದೆಡೆಯ ದೃಷ್ಟಿಕೋನವಾಗಿದೆ. ರಷ್ಯಾದೊಂದಿಗೆ ನಿಕಟ ಬಾಂಧವ್ಯವನ್ನು ಹೊಂದಿರುವ ಮತ್ತು ರಷ್ಯಾದ ಕಚ್ಚಾ ತೈಲದ ಅತಿದೊಡ್ಡ ಗ್ರಾಹಕ ಎಂದು ಪರಿಗಣಿಸಲ್ಪಟ್ಟಿರುವ ಭಾರತವು ಟ್ರಂಪ್ ಅವರ ಕಠಿಣ ವಾಗ್ದಾಳಿಗೆ ಒಳಗಾಯಿತು. ಟ್ರಂಪ್ ಅವರು ರಷ್ಯಾ ಮತ್ತು ಭಾರತದ ಆರ್ಥಿಕತೆಗಳನ್ನು “ಮೃತ ಆರ್ಥಿಕತೆಗಳು” ಎಂದು ಹೇಳುತ್ತಾ, ಅವುಗಳು “ಪರಸ್ಪರ ಘರ್ಷಣೆಯಲ್ಲಿವೆ” ಎಂದು ಅಭಿಪ್ರಾಯಪಟ್ಟಿದ್ದರು. ಜೊತೆಗೆ ಉಕ್ರೇನ್ ವಿರುದ್ಧ ಮಾಸ್ಕೋದ ಯುದ್ಧಕ್ಕೆ ವ್ಯಾಪಾರದ ಮೂಲಕ ಉತ್ತೇಜನ ನೀಡಿವೆ ಎಂದು ಆರೋಪಿಸಿದರು. ಟ್ರಂಪ್ ಇನ್ನೂ ಮುಂದುವರಿದು, ಪ್ರಧಾನಮಂತ್ರಿ ನರೇಂದ್ರ ಮೋದಿ “ಉಕ್ರೇನ್‌ನಲ್ಲಿ ಮೃತಪಟ್ಟವರ ಬಗ್ಗೆ ಕಾಳಜಿ ವಹಿಸುವುದಿಲ್ಲ” ಎಂದು ಹೇಳಿದರು. ಇದು ವೈಯಕ್ತಿಕ ಅವಮಾನದ ಹೇಳಿಕೆ ಮತ್ತು ಭಾರತದ ಉದಯೋನ್ಮುಖ ಶಕ್ತಿಯ ಸ್ಥಾನಮಾನಕ್ಕೆ ಅವಮಾನಕರವಾದ ಹೇಳಿಕೆಯಾಗಿದೆ.

ಪಾಕಿಸ್ತಾನದೊಂದಿಗಿನ ಗಡಿ ಘರ್ಷಣೆಗಳಲ್ಲಿ, ತಟಸ್ಥ ಮಧ್ಯವರ್ತಿಯಾಗಲು ಟ್ರಂಪ್ ಪ್ರಯತ್ನಿಸಿದರು. ಅವರು ಭಾರಿ ಒತ್ತಡ ಹೇರಿದರು ಎಂದು ಆರೋಪಿಸಲಾಗಿದ್ದು ಎರಡೂ ಕಡೆಯ ಮೇಲೆ ನಿರ್ಬಂಧಗಳನ್ನು ಹೇರುವ ಬೆದರಿಕೆ ಹಾಕಿದ್ದು ಕದನ ವಿರಾಮಕ್ಕೆ ಕಾರಣವಾಯಿತು.  ಅಲ್ಲದೇ, ಅಂತಿಮವಾಗಿ ಪಾಕಿಸ್ತಾನವು ಅವರ ಮಧ್ಯಸ್ಥಿಕೆಯನ್ನು ಅಪಾರವಾಗಿ ಹೊಗಳಿದ್ದು, ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲು ಪ್ರಸ್ತಾಪಿಸುವ ಮಟ್ಟಕ್ಕೆ ಅವರನ್ನು ಕೊಂಡಾಡಿದೆ. ಮತ್ತೊಂದೆಡೆ, ಭಾರತವು ವಾಷಿಂಗ್ಟನ್ ನ ಪಾತ್ರದ ಮಹತ್ವವನ್ನು ಕಡಿಮೆ ಮಾಡಲು ನಿರ್ಧರಿಸಿತು. ಇದು ಎರಡು ದೇಶಗಳ ನಡುವಿನ ಅಪಾರ ಅಪನಂಬಿಕೆಯ ಮತ್ತೊಂದು ಅಭಿವ್ಯಕ್ತಿಯಾಗಿದೆ.

ಮೋದಿ ಅವರ ಕಠಿಣ ಪ್ರತಿಕ್ರಿಯೆಯು ಆರ್ಥಿಕ ಮತ್ತು ಮಿಲಿಟರಿ ಒತ್ತಡಗಳಲ್ಲಿ ಮಾತ್ರ ಬೇರೂರದೇ, ಪ್ರಾಥಮಿಕವಾಗಿ ವೈಯಕ್ತಿಕ ಮತ್ತು ರಾಷ್ಟ್ರ ಗೌರವಕ್ಕೆ ಧಕ್ಕೆಯಾಗಿದೆ ಎಂಬ ಭಾವನೆಯಿಂದ ಹುಟ್ಟಿಕೊಂಡಿತು. ಅಧ್ಯಕ್ಷ ಟ್ರಂಪ್ ಅವರ ನಾಲ್ಕು ದೂರವಾಣಿ ಕರೆಗಳನ್ನು ಅವರು ನಿರಾಕರಿಸಿದರು. ಈ ಸನ್ನಿವೇಶದೊಂದಿಗೆ ಇಸ್ರೇಲ್ ಪ್ರಮುಖ ವಿಷಯವನ್ನು ಕಲಿಯಬಹುದು.

ಖಾನ್ ಯೂನಿಸ್ ಘಟನೆ

ಖಾನ್ ಯೂನಿಸ್ ನಲ್ಲಿರುವ ನಾಸರ್ ಆಸ್ಪತ್ರೆಯ ಮೇಲೆ ಆಗಸ್ಟ್ 25 ರಂದು ಇಸ್ರೇಲ್ ಶೆಲ್ ದಾಳಿ ನಡೆಸಿತು. ಪತ್ರಕರ್ತರು ಸೇರಿದಂತೆ ಸುಮಾರು ಇಪ್ಪತ್ತು ಜನರು ಸಾವನ್ನಪ್ಪಿದರು. ಕೆಲವೇ ಗಂಟೆಗಳಲ್ಲಿ, ಇಸ್ರೇಲ್ ರಕ್ಷಣಾ ಪಡೆ (ಐ.ಡಿ.ಎಫ್) ವಕ್ತಾರರು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು ಮತ್ತು ಪ್ರಧಾನಮಂತ್ರಿ ಪ್ರತಿಕ್ರಿಯೆ ನೀಡಲು ಮುಂದಾದರು. “ಮುಗ್ಧ ನಾಗರಿಕರಿಗೆ” ಹಾನಿ ಮಾಡಿದ್ದಕ್ಕಾಗಿ ಐ.ಡಿ.ಎಫ್ ವಕ್ತಾರರು ಇಂಗ್ಲಿಷ್ ನಲ್ಲಿ ಕ್ಷಮೆ ಯಾಚಿಸಿದರು. ತಕ್ಷಣದ ತನಿಖೆ ನಡೆಸಲಾಗುವುದು ಎಂದು ಸಿಬ್ಬಂದಿ ಮುಖ್ಯಸ್ಥರು ಘೋಷಿಸಿದರು. ಪ್ರಧಾನಮಂತ್ರಿ ಈ ಘಟನೆಯನ್ನು ಸಂಪೂರ್ಣವಾಗಿ ತನಿಖೆ ಮಾಡಲ್ಪಡುವ “ದುರಂತ ಘಟನೆ” ಎಂದು ಉಲ್ಲೇಖಿಸಿದರು.

ಈ ಮೂರೂ ಹೇಳಿಕೆಗಳು ಅಂತಾರಾಷ್ಟ್ರೀಯ ಸಾರ್ವಜನಿಕ ಅಭಿಪ್ರಾಯವನ್ನು ಶಾಂತಗೊಳಿಸುವ ಆಶಯದ ಜೊತೆಗೆ ಘಟನೆಯ ಪರಿಣಾಮಗಳ ಬಗ್ಗೆ ಗಮನಾರ್ಹ ಮಟ್ಟದ ಆತಂಕವನ್ನೂ, ಜೊತೆಗೆ ಭೀತಿಯನ್ನು ಸಹ ವ್ಯಕ್ತಪಡಿಸಿದವು. ಅಮಾಯಕ ನಾಗರಿಕರ ಹತ್ಯೆಗೆ ಸ್ವಲ್ಪ ಜವಾಬ್ದಾರಿಯನ್ನು ನಾಯಕರು ತೆಗೆದುಕೊಳ್ಳುವ ಸಂದೇಶವನ್ನು ರವಾನಿಸಿದ್ದು, ಇದು ಅಂತಾರಾಷ್ಟ್ರೀಯ ಕಾನೂನಿನ ವಿಷಯದಲ್ಲಿ ಅಪಾಯಕಾರಿ ಪೂರ್ವನಿದರ್ಶನವನ್ನು ಸ್ಥಾಪಿಸಬಹುದಾದ ಸಂದೇಶವಾಗಿದೆ ಎಂಬುದನ್ನು ನಾಯಕರು ತಮ್ಮ ಕ್ರಿಯೆಯಲ್ಲಿ ಅಭಿವ್ಯಕ್ತಪಡಿಸಿದ್ದಾರೆ.

ಘಟನೆಗಳು ನಂತರ ಬಹಿರಂಗಪಡಿಸಿದಂತೆ, ವಾಸ್ತವವು ಹೆಚ್ಚು ಸಂಕೀರ್ಣವಾಗಿತ್ತು; ಸಂತ್ರಸ್ತರ ಪೈಕಿ ಅನೇಕರು ಹಮಾಸ್ ಗೆ ಸೇರಿದವರಾಗಿದ್ದರು. ಆದಾಗ್ಯೂ, ಸಂಪೂರ್ಣ ಮಾಹಿತಿಗಾಗಿ ಕಾಯುವ ಬದಲು, ಹೊಣೆ ಹೊರುವ ಸಂದೇಶವನ್ನು ಇಸ್ರೇಲ್ ಸಾರಿದ್ದು, ಅದರ ರಾಜತಾಂತ್ರಿಕ ಮತ್ತು ಕಾನೂನು ಸ್ಥಾನಮಾನವನ್ನು ದುರ್ಬಲಗೊಳಿಸಿದೆ.

ಭಾರತದಿಂದ ಕಲಿಯಬೇಕಾದ ಪಾಠ

ಪ್ರಧಾನಮಂತ್ರಿ ಮೋದಿ ಅವರ ಉದಾಹರಣೆಯನ್ನು ನೋಡಬೇಕಾದುದು ಇದೇ ಸನ್ನಿವೇಶದಲ್ಲಿ. ಟ್ರಂಪ್ ಅವರಿಂದ ಅಪಾರ ವಾಗ್ದಾಳಿ ಎದುರಿಸಿದರೂ, ಮೋದಿ ಅವರು ಕ್ಷಮೆಯಾಚಿಸಲು ಆತುರಪಡಲಿಲ್ಲ; ಬದಲಾಗಿ, ರಾಷ್ಟ್ರ ಗೌರವವನ್ನು ಎತ್ತಿಹಿಡಿಯುವ ಮೂಲಕ ಬಲವಾದ ಪ್ರತಿಕ್ರಿಯೆ ನೀಡುವುದನ್ನು ಆಯ್ಕೆ ಮಾಡಿಕೊಂಡರು.

ಬಹುಶಃ ಅವರ ವಿಧಾನವು ಕಠೋರವಾಗಿ ಕಂಡುಬಂದಿರಬಹುದು, ಆದರೆ ಅದು ಭಾರತವು ಅಧೀನ ಅಥವಾ ಕೀಳು ಸ್ಥಾನಮಾನದಲ್ಲಿ ನಡೆಸಿಕೊಳ್ಳುವುದನ್ನು ಸ್ವೀಕರಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿತು.

ಇದಕ್ಕೆ ವ್ಯತಿರಿಕ್ತವಾಗಿ, ಖಾನ್ ಯೂನಿಸ್ ಘಟನೆಯ ಸಂದರ್ಭದಲ್ಲಿ ಇಸ್ರೇಲ್ ಅತಿಯಾದ ಪಾರದರ್ಶಕತೆ ಮತ್ತು ಆತಂಕವನ್ನು ಪ್ರದರ್ಶಿಸುವ ಪ್ರವೃತ್ತಿಯನ್ನು ತೋರಿತು. ಈ ವಿಧಾನವು ಅಲ್ಪಾವಧಿಯ ಹಾನಿಯನ್ನು ತಗ್ಗಿಸುವ ಗುರಿಯನ್ನು ಹೊಂದಿರಬಹುದು, ಆದರೆ ದೀರ್ಘಾವಧಿಯ ಕಾರ್ಯತಂತ್ರದ ಹಿತಾಸಕ್ತಿಗಳಿಗೆ ಹಾನಿ ಮಾಡುವ ಸಾಧ್ಯತೆಯಿದೆ.

ಕಠಿಣ ಮತ್ತು ಸಂಕೀರ್ಣ ಪರಿಸ್ಥಿತಿಗಳನ್ನು ಎದುರಿಸುವಾಗಲೂ ಒಂದು ದೇಶವು ತನ್ನ ರಾಷ್ಟ್ರ ಗೌರವವನ್ನು ಕಾಪಾಡಿಕೊಳ್ಳಬೇಕು ಎಂಬುದು ಇದರ ನಿರ್ಣಯವಾಗಿದೆ. ಆತುರದಲ್ಲಿ ಜವಾಬ್ದಾರಿಯನ್ನು ವಹಿಸಿಕೊಳ್ಳುವುದನ್ನು ದೌರ್ಬಲ್ಯವೆಂದು ಅರ್ಥೈಸಬಹುದಾಗಿದೆ ಮತ್ತು ವಿರೋಧಿಗಳು ಅದನ್ನು ದುರುಪಯೋಗಪಡಿಸಿಕೊಳ್ಳಬಹುದು. ಅಭಿವ್ಯಕ್ತಿಯಲ್ಲಿ ಎಚ್ಚರಿಕೆ ಮತ್ತು ತಾತ್ವಿಕ ದೃಢತೆ ಅಗತ್ಯವಾಗುವುದು ನಿಖರವಾಗಿ ಅಂತಹ ಕ್ಷಣಗಳಲ್ಲಿಯೇ.

ರಾಷ್ಟ್ರ ಗೌರವವು ಐಷಾರಾಮಿಯಲ್ಲ, ಬದಲಾಗಿ ಅದು ದೂರಗಾಮಿ ಕಾರ್ಯತಂತ್ರದ ಆಸ್ತಿಯಾಗಿದೆ ಎಂಬುದನ್ನು ಭಾರತದಿಂದ ನಾವು ಕಲಿಯಬಹುದಾಗಿದೆ. ಇಸ್ರೇಲ್ ತನ್ನ ಸ್ಥಾನಮಾನ ಮತ್ತು ಭದ್ರತೆಯನ್ನು ಭದ್ರಪಡಿಸಿಕೊಳ್ಳಲು ಬಯಸಿದರೆ, ಅದು ಜಗತ್ತಿಗೆ ಸದೃಢವಾದ ಸ್ಥಿರತೆಯನ್ನು ತೋರಿಸಬೇಕು. ಇದು ಅಂತಾರಾಷ್ಟ್ರೀಯ ಒತ್ತಡ ತೀವ್ರವಾಗಿದ್ದಾಗಲೂ ಕ್ಷಮೆಯಾಚನೆಯನ್ನು ಮುಂದೂಡುವುದು ಉಚಿತ ಎಂಬುದರ ಸೂಚ್ಯವಾಗಿದೆ.

ಲೇಖಕರು: ಝಾಕಿ ಶಾಲೋಮ್, ಜೆರುಸಲೆಮ್ ಪೋಸ್ಟ್

BREAKING: ಶಾಸಕ ವೀರೇಂದ್ರ ವಿರುದ್ಧದ ಅಕ್ರಮ ಆನ್ ಲೈನ್ ಬೆಟ್ಟಿಂಗ್ ಕೇಸ್: 14 ದಿನ ನ್ಯಾಯಾಂಗ ಬಂಧನ

BREAKING : ನೇಪಾಳದಲ್ಲಿ ಸಾಮಾಜಿಕ ಮಾಧ್ಯಮ ನಿಷೇಧ ವಿರೋಧಿಸಿ ಬೃಹತ್ ಪ್ರತಿಭಟನೆ ; ಒರ್ವ ಸಾವು, 80 ಜನರಿಗೆ ಗಾಯ

Share. Facebook Twitter LinkedIn WhatsApp Email

Related Posts

BREAKING; ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಗೆಲುವು, 15 ಮಹಾನಗರ ಪಾಲಿಕೆಗಳ ಗೆಲುವು

28/04/2026 9:32 PM2 Mins Read

​’ಪರಿವಾರವಾದಿ’ಗಳಿಗೆ ಮಹಿಳೆಯರ ಕಂಡರೆ ಭಯ!: ಸಂಸತ್ತಿನಲ್ಲಿ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಕಿಡಿ

28/04/2026 8:51 PM1 Min Read

ಪತ್ನಿ ಸ್ವಂತ ಕ್ಲಿನಿಕ್ ನಡೆಸಬಯಸುವುದು ಕ್ರೌರ್ಯವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ

28/04/2026 8:48 PM2 Mins Read
Recent News

ಮಹಿಳೆಯ ವಾಹನ ಅಡ್ಡಗಟ್ಟಿ ಸಾರ್ವಜನಿಕವಾಗಿ ಅವಮಾನಿಸಿದ ವ್ಯಕ್ತಿಗೆ 11 ಲಕ್ಷಕ್ಕೂ ಅಧಿಕ ದಂಡ!

28/04/2026 10:33 PM

BREAKING; ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಗೆಲುವು, 15 ಮಹಾನಗರ ಪಾಲಿಕೆಗಳ ಗೆಲುವು

28/04/2026 9:32 PM

ಸಿಡಿಲು-ಗುಡುಗು ಸಂದರ್ಭದಲ್ಲಿ: ಜಾಗೃತರಾಗಿರಿ, ಸುರಕ್ಷಿತವಾಗಿರಿ; ಜೀವ ಉಳಿಸುವ ಮುನ್ನೆಚ್ಚರಿಕಾ ಕ್ರಮಗಳು

28/04/2026 9:30 PM

ಬೆಂಗಳೂರಲ್ಲಿ ಖಾಸಗಿ ಟ್ಯಾಂಕರ್ ಮಾಫಿಯಾಗೆ ಬ್ರೇಕ್, ಮನೆ ಬಾಗಿಲಿಗೆ ಬರಲಿದೆ ಕೈಗೆಟುಕುವ ದರದಲ್ಲಿ ಕಾವೇರಿ ನೀರು!

28/04/2026 9:18 PM
State News
KARNATAKA

ಸಿಡಿಲು-ಗುಡುಗು ಸಂದರ್ಭದಲ್ಲಿ: ಜಾಗೃತರಾಗಿರಿ, ಸುರಕ್ಷಿತವಾಗಿರಿ; ಜೀವ ಉಳಿಸುವ ಮುನ್ನೆಚ್ಚರಿಕಾ ಕ್ರಮಗಳು

By kannadanewsnow0928/04/2026 9:30 PM KARNATAKA 1 Min Read

ಬೆಂಗಳೂರು: ಮಳೆಗಾಲದ ಆರಂಭ ಅಥವಾ ಅನಿರೀಕ್ಷಿತ ಹವಾಮಾನ ಬದಲಾವಣೆಯ ಸಮಯದಲ್ಲಿ ಸಿಡಿಲು ಬಡಿಯುವುದು ಪ್ರಕೃತಿಯ ಅನಿವಾರ್ಯ ವಿದ್ಯಮಾನ. ಆದರೆ, ಸರಿಯಾದ…

ಬೆಂಗಳೂರಲ್ಲಿ ಖಾಸಗಿ ಟ್ಯಾಂಕರ್ ಮಾಫಿಯಾಗೆ ಬ್ರೇಕ್, ಮನೆ ಬಾಗಿಲಿಗೆ ಬರಲಿದೆ ಕೈಗೆಟುಕುವ ದರದಲ್ಲಿ ಕಾವೇರಿ ನೀರು!

28/04/2026 9:18 PM

BIG NEWS: ರಾಜ್ಯದಲ್ಲಿ ಡಿಸಿ ಮನೆಗೂ ತಟ್ಟಿದ ಜಲಕ್ಷಾಮ: ಚಾಮರಾಜನಗರದಲ್ಲಿ ಹನಿ ನೀರಿಗೂ ಹಾಹಾಕಾರ

28/04/2026 8:41 PM

ಬೆಂಗಳೂರಲ್ಲಿ ‘CAAL ವೆಬ್‌ಸೈಟ್’ ಉದ್ಘಾಟಿಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸುನೀಲ್ ದತ್ ಯಾದವ್

28/04/2026 8:30 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.