Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಲ್ಲಿ ಮೂವರು ಸರಗಳ್ಳರು ಅರೆಸ್ಟ್, 15.70 ಲಕ್ಷ ಮೌಲ್ಯದ 57.28 ಗ್ರಾಂ ಚಿನ್ನದ ಮಾಂಗಲ್ಯ ಸರ ವಶಕ್ಕೆ

22/08/2025 12:57 PM

ಸಾರ್ವಜನಿಕರೇ ಎಚ್ಚರ : ರಾಜ್ಯದಲ್ಲಿ `POP ಗಣೇಶ ಮೂರ್ತಿ ಬಳಕೆ ಮಾಡಿದ್ರೆ 10,000 ದಂಡ, ಜೈಲು ಶಿಕ್ಷೆ ಫಿಕ್ಸ್.!

22/08/2025 12:50 PM

ಬೆಂಗಳೂರಲ್ಲಿ ದ್ವಿ-ಚಕ್ರ ವಾಹನ ಕದಿಯುತ್ತಿದ್ದ ಓರ್ವ ಕಳ್ಳ ಅರೆಸ್ಟ್, 16 ಲಕ್ಷ ಮೌಲ್ಯದ 8 ಬೈಕ್ ಜಪ್ತಿ

22/08/2025 12:50 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾರ್ವಜನಿಕರೇ ಎಚ್ಚರ : ರಾಜ್ಯದಲ್ಲಿ `POP ಗಣೇಶ ಮೂರ್ತಿ ಬಳಕೆ ಮಾಡಿದ್ರೆ 10,000 ದಂಡ, ಜೈಲು ಶಿಕ್ಷೆ ಫಿಕ್ಸ್.!
KARNATAKA

ಸಾರ್ವಜನಿಕರೇ ಎಚ್ಚರ : ರಾಜ್ಯದಲ್ಲಿ `POP ಗಣೇಶ ಮೂರ್ತಿ ಬಳಕೆ ಮಾಡಿದ್ರೆ 10,000 ದಂಡ, ಜೈಲು ಶಿಕ್ಷೆ ಫಿಕ್ಸ್.!

By kannadanewsnow5722/08/2025 12:50 PM

ಬೆಂಗಳೂರು: ರಾಜ್ಯಾಧ್ಯಂತ ಪಿಒಪಿ ಗಣೇಶ ಮೂರ್ತಿ ತಯಾರಿಕೆ ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ. ಕೇವಲ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ತಯಾರಿಸಿ, ಬಳಕೆ ಮಾಡಲು ಅವಕಾಶ ನೀಡಲಾಗಿದೆ. ಒಂದು ವೇಳೆ ನಿಯಮ ಮೀರಿ ಪಿಒಪಿ ಗಣೇಶ ಮೂರ್ತಿ ತಯಾರಿಕೆ, ಮಾರಾಟ ಮಾಡಿದ್ರೇ 10,000 ದಂಡ ಹಾಗೂ ಜೈಲು ಶಿಕ್ಷೆ ಕಾಯಂ ಎಂಬುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.

ಈ ಕುರಿತಂತೆ ರಾಜ್ಯ ಸರ್ಕಾರದಿಂದ ಮಾಹಿತಿ ನೀಡಿದ್ದು, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಓಪಿ) ಮತ್ತು ಬಣ್ಣಲೇಪಿತ ವಿಗ್ರಹಗಳನ್ನು ತಯಾರಿಕೆ ಹಾಗೂ ಬಳಕೆ ಮಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಸಾರ್ವಜನಿಕರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಸುವ ಮೂಲಕ ಪರಿಸರ ಸ್ನೇಹಿ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಲಾಗಿದೆ.

ಪಿಒಪಿ ಗಣೇಶ ಮೂರ್ತಿ ತಯಾರಿಕೆ, ಮಾರಾಟ ಮಾಡುವುದು ಜಲಮಾಲಿನ್ಯ(ತಡೆ ಮತ್ತು ನಿಯಂತ್ರಣ)ಕಾಯ್ದೆ 1974ರ ಕಲಂ33(ಎ) ರನ್ವಯ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಓಪಿ) ಮತ್ತು ಬಣ್ಣಲೇಪಿತ ವಿಗ್ರಹಗಳನ್ನು ತಯಾರಿಕೆ ಹಾಗೂ ಬಳಕೆ ಮಾಡುವುದು ಕಾನೂನು ಬಾಹೀರವಾಗಿದೆ. ಕಾಯ್ದೆಯನ್ನು ಉಲ್ಲಂಘಿಸಿದಲ್ಲಿ ಜಲಮಾಲಿನ್ಯ(ತಡೆ ಮತ್ತು ನಿಯಂತ್ರಣ)ಕಾಯ್ದೆ 1974ರ ಕಲಂ45(ಎ)ರನ್ವಯ ರೂ.10,000/-ಗಳ ವರೆಗೆ ದಂಡ ವಿಧಿಸಬಹುದಾಗಿದ್ದು ಮತ್ತು ಜೈಲುವಾಸ ಸಹ ವಿಧಿಸಬಹುದಾಗಿದೆ ಎಂಬುದಾಗಿ ಎಚ್ಚರಿಕೆ ನೀಡಿದೆ.

ರಾಜ್ಯಾಧ್ಯಂತ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಗ್ರಾಮ ಪಂಚಾಯ್ತಿ ಅಧಿಕಾರಿಗಳು ಪಿಒಪಿ ಗಣೇಶ ಮೂರ್ತಿ ತಯಾರಿಕೆ, ಮಾರಾಟದ ಬಗ್ಗೆ ಹದ್ದಿನ ಕಣ್ಣಿಟ್ಟಿದ್ದಾರೆ. ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಮತ್ತು ಬಣ್ಣಲೇಪಿತ ವಿಗ್ರಹಗಳನ್ನು ತಯಾರಿಕೆ ಹಾಗೂ ಬಳಕೆ ಮಾಡುವುದನ್ನು ಕಂಡುಬಂದಲ್ಲಿ ಅಂತವರ ವಿರುದ್ಧ ಪ್ರಕರಣ ದಾಖಲಿಸಲಿದ್ದಾರೆ ಎಂಬುದಾಗಿ ತಿಳಿಸಿದೆ.

ಅಲ್ಲದೇ ಪರಿಸರ ಸ್ನೇಹಿ ಮಣ್ಣಿನಿಂದ ಮಾಡಿದ ಗಣೇಶ ವಿಗ್ರಹಗಳನ್ನು ತಯಾರಿಕೆ ಹಾಗೂ ಬಳಕೆ ಮಾಡಬೇಕು ಎಂದು ರಾಜ್ಯ ಸರ್ಕಾರ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

Public beware: `10000 fine and imprisonment for using `POP Ganesh idol' in the state!
Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ಮೂವರು ಸರಗಳ್ಳರು ಅರೆಸ್ಟ್, 15.70 ಲಕ್ಷ ಮೌಲ್ಯದ 57.28 ಗ್ರಾಂ ಚಿನ್ನದ ಮಾಂಗಲ್ಯ ಸರ ವಶಕ್ಕೆ

22/08/2025 12:57 PM2 Mins Read

ಬೆಂಗಳೂರಲ್ಲಿ ದ್ವಿ-ಚಕ್ರ ವಾಹನ ಕದಿಯುತ್ತಿದ್ದ ಓರ್ವ ಕಳ್ಳ ಅರೆಸ್ಟ್, 16 ಲಕ್ಷ ಮೌಲ್ಯದ 8 ಬೈಕ್ ಜಪ್ತಿ

22/08/2025 12:50 PM2 Mins Read

ಗಮನಿಸಿ : ತುರ್ತು ಸಂದರ್ಭದಲ್ಲಿ ನಿಮ್ಮನ್ನು ರಕ್ಷಿಸುವ 4 ಔಷಧಗಳಿವು, ಪ್ರತಿ ಮನೆಯಲ್ಲೂ ಇರಬೇಕು.!

22/08/2025 12:41 PM2 Mins Read
Recent News

ಬೆಂಗಳೂರಲ್ಲಿ ಮೂವರು ಸರಗಳ್ಳರು ಅರೆಸ್ಟ್, 15.70 ಲಕ್ಷ ಮೌಲ್ಯದ 57.28 ಗ್ರಾಂ ಚಿನ್ನದ ಮಾಂಗಲ್ಯ ಸರ ವಶಕ್ಕೆ

22/08/2025 12:57 PM

ಸಾರ್ವಜನಿಕರೇ ಎಚ್ಚರ : ರಾಜ್ಯದಲ್ಲಿ `POP ಗಣೇಶ ಮೂರ್ತಿ ಬಳಕೆ ಮಾಡಿದ್ರೆ 10,000 ದಂಡ, ಜೈಲು ಶಿಕ್ಷೆ ಫಿಕ್ಸ್.!

22/08/2025 12:50 PM

ಬೆಂಗಳೂರಲ್ಲಿ ದ್ವಿ-ಚಕ್ರ ವಾಹನ ಕದಿಯುತ್ತಿದ್ದ ಓರ್ವ ಕಳ್ಳ ಅರೆಸ್ಟ್, 16 ಲಕ್ಷ ಮೌಲ್ಯದ 8 ಬೈಕ್ ಜಪ್ತಿ

22/08/2025 12:50 PM

ಪ್ರಯಾಣಿಕರಿಗೆ ಗುಡ್ ನ್ಯೂಸ್: ಗಣೇಶ ಚತುರ್ಥಿಗೆ 380 ವಿಶೇಷ ರೈಲುಗಳನ್ನು ಓಡಿಸಲಿದೆ ಭಾರತೀಯ ರೈಲ್ವೆ

22/08/2025 12:46 PM
State News
KARNATAKA

ಬೆಂಗಳೂರಲ್ಲಿ ಮೂವರು ಸರಗಳ್ಳರು ಅರೆಸ್ಟ್, 15.70 ಲಕ್ಷ ಮೌಲ್ಯದ 57.28 ಗ್ರಾಂ ಚಿನ್ನದ ಮಾಂಗಲ್ಯ ಸರ ವಶಕ್ಕೆ

By kannadanewsnow0922/08/2025 12:57 PM KARNATAKA 2 Mins Read

ಬೆಂಗಳೂರು: ನಗರದಲ್ಲಿ ಸರ ಅಪರಹಣ ಮಾಡಿದ ಮೂವರು ಸರಗಳ್ಳರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ 57.28 ಗ್ರಾಂನ ಒಂದು ಚಿನ್ನದ ಮಾಂಗಲ್ಯ…

ಸಾರ್ವಜನಿಕರೇ ಎಚ್ಚರ : ರಾಜ್ಯದಲ್ಲಿ `POP ಗಣೇಶ ಮೂರ್ತಿ ಬಳಕೆ ಮಾಡಿದ್ರೆ 10,000 ದಂಡ, ಜೈಲು ಶಿಕ್ಷೆ ಫಿಕ್ಸ್.!

22/08/2025 12:50 PM

ಬೆಂಗಳೂರಲ್ಲಿ ದ್ವಿ-ಚಕ್ರ ವಾಹನ ಕದಿಯುತ್ತಿದ್ದ ಓರ್ವ ಕಳ್ಳ ಅರೆಸ್ಟ್, 16 ಲಕ್ಷ ಮೌಲ್ಯದ 8 ಬೈಕ್ ಜಪ್ತಿ

22/08/2025 12:50 PM

ಗಮನಿಸಿ : ತುರ್ತು ಸಂದರ್ಭದಲ್ಲಿ ನಿಮ್ಮನ್ನು ರಕ್ಷಿಸುವ 4 ಔಷಧಗಳಿವು, ಪ್ರತಿ ಮನೆಯಲ್ಲೂ ಇರಬೇಕು.!

22/08/2025 12:41 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.