ಮುಂಬೈ: ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಎಸ್ ಯುವಿ ಆಟೋ ರಿಕ್ಷಾ ಮತ್ತು ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮಗು ಮತ್ತು ಇತರ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮುಂಬೈನಿಂದ 300 ಕಿ.ಮೀ ದೂರದಲ್ಲಿರುವ ರತ್ನಗಿರಿಯ ಕರಡ್-ಚಿಪ್ಲುನ್ ರಸ್ತೆಯ ಪಿಂಪ್ರಿ ಖುರ್ದ್ ಗ್ರಾಮದಲ್ಲಿ ಸೋಮವಾರ ರಾತ್ರಿ 10.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೇಗವಾಗಿ ಬಂದ ಸ್ಪೋರ್ಟ್ಸ್ ಯುಟಿಲಿಟಿ ವಾಹನ (ಎಸ್ ಯುವಿ) ಮಗು ಸೇರಿದಂತೆ ನಾಲ್ವರನ್ನು ಕರೆದೊಯ್ಯುತ್ತಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ ಮತ್ತು ತ್ರಿಚಕ್ರ ವಾಹನವನ್ನು ಸ್ವಲ್ಪ ದೂರ ಎಳೆದಿದೆ ಎಂದು ಅವರು ಹೇಳಿದರು.
ನಂತರ ಎಸ್ ಯುವಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆಟೋ ರಿಕ್ಷಾದಲ್ಲಿದ್ದ ನಾಲ್ವರು ಮತ್ತು ಎಸ್ ಯುವಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರನ್ನು ಪುಣೆಯ ಪಾರ್ವತಿ ಪ್ರದೇಶದ ನಿವಾಸಿಗಳಾದ ಇಬ್ರಾಹಿಂ ಇಸ್ಮಾಯಿಲ್ ಲೋನ್ (65), ನಿಯಾಜ್ ಮೊಹಮ್ಮದ್ ಹುಸೇನ್ ಸಯ್ಯದ್ (50), ಶಬಾನಾ ನಿಯಾಜ್ ಸಯ್ಯದ್ (40), ಹೈದರ್ ನಿಯಾಜ್ ಸಯ್ಯದ್ (4) ಮತ್ತು ಎಸ್ ಯುವಿ ಚಾಲಕ ಆಸಿಫ್ ಹಕೀಮುದ್ದೀನ್ ಸೈಫಿ (28) ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು