ಬೆಂಗಳೂರು: ಸಚಿವ ಸ್ಥಾನಕ್ಕೆ ಕೆ.ಎನ್ ರಾಜಣ್ಣ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿತ್ತು. ಆದರೇ ವಿಧಾನಸಭೆಯಲ್ಲೇ ಮಾತನಾಡಿದಂತ ರಾಜಣ್ಣ ನನ್ನ ಪ್ರಶ್ನೆ ಮಾಡುವಂತ ಕೀಳುಮಟ್ಟಕ್ಕೆ ಹೋಗಬಾರದು ಎಂಬುದಾಗಿ ಗರಂ ಆದರು.
ಇಂದು ವಿಧಾನಸಭೆಯಲ್ಲಿ ಮಾತನಾಡಿದಂತ ಅವರು ಅಶೋಕ್ ಅವರು ವಿರೋಧ ಪಕ್ಷದ ನಾಯಕರು. ನೀವು ಹೇಗೆ ಕುಳಿತಿದ್ದೀರಿ ಇಲ್ಲಿ ಎಂಬುದಾಗಿ ಕೇಳುತ್ತಿದ್ದಾರೆ. ನನಗೆ ನಾಚಿಕೆ ಅಲ್ಲ. ಅಂತಹ ಕೀಳು ಮಟ್ಟದ ಮಾತುಗಳನ್ನು ಆಡುತ್ತಿದ್ದೀರಲ್ಲ ನಿಮಗೆ ನಾಚಿಕೆ ಆಗಬೇಕು ಎಂಬುದಾಗಿ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸದನಕ್ಕೆ ಆಗಮಿಸಲಿದ್ದಾರೆ. ಅವರು ವಿಧಾನಸಭೆಗೆ ಆಗಮಿಸಿದ ನಂತ್ರ ಅಧಿಕೃತವಾದಂತ ಮಾಹಿತಿಯನ್ನು ನೀಡಲಿದ್ದಾರೆ. ನಾನು ರಾಜೀನಾಮೆ ನೀಡಿದ್ದೀನೋ ಇಲ್ಲವೋ ಎನ್ನುವುದನ್ನು ಅವರೇ ವಿವರಿಸಲಿದ್ದಾರೆ ಎಂಬುದಾಗಿ ಹೇಳಿದರು.
BREAKING: ಸಿಎಂ ಸಿದ್ಧರಾಮಯ್ಯ ಭೇಟಿಯಾಗಿ ಸಚಿವ ಸ್ಥಾನಕ್ಕೆ ಕೆ.ಎನ್ ರಾಜಣ್ಣ ಅಧಿಕೃತವಾಗಿ ರಾಜೀನಾಮೆ ಸಲ್ಲಿಕೆ