ದಕ್ಷಿಣಕನ್ನಡ : ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಓದಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ 12ನೇ ದಿನವೂ ಶೋಧಕಾರ್ಯ ನಡೆಯಲಿದೆ. ಇಂದು ಮಾಸ್ಕ್ ಮ್ಯಾನ್ ಅಚ್ಚರಿ ಜಾಗ ತೋರಿಸುವ ಸಾಧ್ಯತೆ ಇದೆ. ಮಾಸ್ಕ್ ಅಂಡ್ ತೋರಿಸಿದ ಜಾಗ ಅಗೆಯಲು ಎಸ್ಐಟಿ ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಹಾಗಾಗಿ ಧರ್ಮಸ್ಥಳದಲ್ಲಿ ಈ ವಾರ ಪೂರ್ತಿ ಅಸ್ತಿಪಂಜರಕ್ಕಾಗಿ ಶೋಧ ನಡೆಯಲಿದೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಅಧಿಕಾರಿಗಳು ತನಿಖೆಯನ್ನು ಇಂದು ಮತ್ತಷ್ಟು ಚುರುಕುಗೊಳಿಸಿದ್ದು, ಇದೀಗ ಜಿಪಿಆರ್ ಯಂತ್ರ ಧರ್ಮಸ್ಥಳದ ಕಡೆಗೆ ಹೊರಟಿದೆ. ಅಗ್ರಿಮೆಂಟ್ ಹಾಗೂ ಪರ್ಮಿಷನ್ ಪ್ರೊಸಿಜಾmರ್ ಮುಕ್ತಾಯವಾದ ಹಿನ್ನೆಲೆಯಲ್ಲಿ ಮಧ್ಯಾಹ್ನದ ವೇಳೆಗೆ ಜಿಪಿಆರ್ ಯಂತ್ರ ಧರ್ಮಸ್ಥಳಕ್ಕೆ ತಲುಪಲಿದೆ. ಇಂದು ಡಿಐಜಿ ಅನುಚ್ಛೇತ್ ನೇತೃತ್ವದಲ್ಲಿ ಡೆಮೋ ನಡೆಯಲಿದೆ. ನಾಳೆಯಿಂದ ಜಿಪಿಆರ್ ಶೋಧ ಕಾರ್ಯ ಚರಣೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದೀಗ ಇಂದು ಧರ್ಮಸ್ಥಳಕ್ಕೆ ಮಾನವ ಹಕ್ಕುಗಳ ಆಯೋಗ ಭೇಟಿ ನೀಡಲಿದೆ. ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಇಂದು ಭೇಟಿ ನೀಡಲಿದೆ. ಪ್ರಕರಣದ ಬಗ್ಗೆ ಇಂದು ಸಂಪೂರ್ಣ ಮಾಹಿತಿ ಕಲೆ ಹಾಕಲಿದೆ. ಪ್ರಕರಣದ ಬಗ್ಗೆ ಎಸ್ಐಟಿ ಅಧಿಕಾರಿಗಳಿಂದ ಆಯೋಗ ಮಾಹಿತಿ ಪಡೆಯಲಿದೆ. ಇದೀಗ ಧರ್ಮಸ್ಥಳದಲ್ಲಿ ಅಸ್ತಿಪಂಜರ ಶೋಧ ಕಾರ್ಯಕ್ಕೆ ರಾಷ್ಟೀಯ ಮಾನವ ಹಕ್ಕುಗಳ ಆಯೋಗ ಕೂಡ ಎಂಟ್ರಿ ಕೊಟ್ಟಿದೆ.
ಧರ್ಮಸ್ಥಳದಲ್ಲಿ ಅಸ್ತಿ ಪಂಜರ ಶೋಧ ಕೇಸ್ಗೆ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ರತ್ನಗಿರಿ ಬಳಿಕ ಇಂದು ಕನ್ಯಾಡಿಯಲ್ಲಿ ಶೋಧ ಕಾರ್ಯ, ನಡೆಸಲಾಗುತ್ತದೆ ಕನ್ಯಾಡಿಯಲ್ಲಿ ಖಾಸಗಿ ಸ್ಥಳವನ್ನು ತೋರಿಸುವ ಸಾಧ್ಯತೆ ಇದೆ. ಹೀಗಾಗಿ ತೀವ್ರ ಕುತೂಹಲ ಕೆರಳಿಸಿದೆ. ಧರ್ಮಸ್ಥಳದಲ್ಲಿ ಖಾಸಗಿ ವ್ಯಕ್ತಿಗೆ ಸೇರಿದ ಜಾಗದಲ್ಲಿ ಇಂದು ಸಹ ಶೋಧ ನಡೆಸಲಾಗುತ್ತದೆ. ಮಾಸ್ಕ್ ಮ್ಯಾನ್ ಹೇಳಿದಂತೆ ಸ್ಥಳ ತೋರಿಸಿದ ಜಾಗದಲ್ಲಿ ಎಸ್ಐಟಿ ಅಧಿಕಾರಿಗಳು ಕಾರ್ಯಾಚರಣೆ ಮಾಡಲು ಮುಂದಾಗಿದೆ.
ಕೆಲವು ಸ್ಥಳಗಳಲ್ಲಿ ಎಸ್ಐಟಿ ಅಧಿಕಾರಿಗಳು ಮೂರು ಕಡೆ ಆಗಿದಿದ್ದಾರೆ. ಧರ್ಮಸ್ಥಳದಲ್ಲಿ ಅಸ್ತಿಪಂಜರ ಶೋಧ ಕಾರ್ಯಕ್ಕೆ ಎಸ್ಐಟಿ ಹೊಸ ಪ್ಲಾನ್ ಮಾಡಿದ್ದು ಮಾಸ್ಕ್ ಮ್ಯಾನ್ ತೋರಿಸಿದ ಎಲ್ಲಾ ಸ್ಪಾಟ್ ಜಾಗ ಪಾಯಿಂಟ್ ಮಾಡದೆ ಎಸ್ಐಟಿ ಅಧಿಕಾರಿಗಳು ಅಗೆಯಲು ನಿರ್ಧರಿಸಿದ್ದಾರೆ. ಆತ ಹೇಳಿದ ಸ್ಥಳಕ್ಕೆ ನೇರವಾಗಿ ಹೋಗಿ SIT ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಳ್ಳುತ್ತಾರೆ. ಯಾವ ಸ್ಪಾಟ್ ನಲ್ಲಿ ಆತ ಹಾಗೆ ಬೇಕು ಅಂತ ಸೂಚಿಸುತ್ತಾನೆ ಅದೇ ಜಾಗಕ್ಕೆ ಮಾರ್ಕ್ ಮಾಡದೆ ಶೋಧ ಕಾರ್ಯಕ್ಕೆ ಮುಂದಾಗಿದೆ.