ನವದೆಹಲಿ: ತಿರುವನಂತಪುರದಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ತಾಂತ್ರಿಕ ದೋಷದಿಂದಾಗಿ ಭಾನುವಾರ ಸಂಜೆ ಚೆನ್ನೈಗೆ ತಿರುಗಿಸಲಾಯಿತು.
ಈ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಕೆ.ಸಿ. ವೇಣುಗೋಪಾಲ್ ಅವರು ತಾವು ಮತ್ತು ಇತರ ಕೆಲ ಸಂಸದರು ಮತ್ತು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವಿಮಾನವು ದುರಂತಕ್ಕೆ ಹತ್ತಿರವಾಗಿತ್ತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ವೇಣುಗೋಪಾಲ್, ತಿರುವನಂತಪುರದಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಎಐ 2455 – ನಾನು ಸೇರಿದಂತೆ ಕೆಲ ಸಂಸದರು ಮತ್ತು ನೂರಾರು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು.
ಆದ್ರೆ ಇಂದು ದುರಂತಕ್ಕೆ ಹತ್ತಿರವಾಗಿದೆ. ವಿಳಂಬದ ನಿರ್ಗಮನವಾಗಿ ಶುರುವಾದದ್ದು ಭಯಾನಕ ಪ್ರಯಾಣವಾಗಿಯೂ ಬದಲಾಯಿತು. ಫ್ಲೈಟ್ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ, ನಾವು ಪ್ರಕ್ಷುಬ್ಧತೆಗೆ ಒಳಗಾದೆವು. ಸುಮಾರು ಒಂದು ಗಂಟೆಯ ನಂತರ, ಕ್ಯಾಪ್ಟನ್ ವಿಮಾನದ ಸಿಗ್ನಲ್ ದೋಷವನ್ನು ಘೋಷಿಸಿದರು ಮತ್ತು ಚೆನ್ನೈಗೆ ತಿರುಗಿಸಿದರು ಎಂದು ಬರೆದುಕೊಂಡಿದ್ದಾರೆ.
ಸುಮಾರು ಎರಡು ಗಂಟೆಗಳ ಕಾಲ, ನಾವು ಇಳಿಯಲು ಅನುಮತಿಗಾಗಿ ಕಾಯುತ್ತಾ ಏರ್ಪೋರ್ಟ್ ಸುತ್ತುತ್ತಿದ್ದೆವು, ನಮಗೆ ಬಹುತೇಕ ಹೃದಯಾಘಾತದವಾದಂತಹ ಅನುಭವ ಉಂಟಾಯಿತು. ಇದಕ್ಕೆ ಕಾರಣ ಮತ್ತೊಂದು ವಿಮಾನವು ಅದೇ ರನ್ವೇಯಲ್ಲಿತ್ತು ಎಂದು ವರದಿಯಾಗಿದೆ. ಆ ಕ್ಷಣದಲ್ಲಿ, ಕ್ಯಾಪ್ಟನ್ ಅವರ ತ್ವರಿತ ನಿರ್ಧಾರವು ವಿಮಾನದಲ್ಲಿದ್ದ ಪ್ರತಿಯೊಬ್ಬರ ಜೀವ ಉಳಿಸಿತು. ಎರಡನೇ ಪ್ರಯತ್ನದಲ್ಲಿ ವಿಮಾನ ಸುರಕ್ಷಿತವಾಗಿ ಇಳಿಯಿತು,” ಎಂದು ಅವರು ಪೋಸ್ಟ್ನಲ್ಲಿ ವಿವರಿಸಿದ್ದಾರೆ.
Air India flight AI 2455 from Trivandrum to Delhi – carrying myself, several MPs, and hundreds of passengers – came frighteningly close to tragedy today.
What began as a delayed departure turned into a harrowing journey. Shortly after take-off, we were hit by unprecedented…
— K C Venugopal (@kcvenugopalmp) August 10, 2025