Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : `ಒನ್ ಮ್ಯಾನ್, ಒನ್ ವೋಟ್’ ಸಂವಿಧಾನದ ಅಡಿಪಾಯ : ಬೆಂಗಳೂರಲ್ಲಿ ರಾಹುಲ್ ಗಾಂಧಿ ಭಾಷಣ | WATCH VIDEO

08/08/2025 12:44 PM

ನಾಟಿ ಔಷಧಿಗೆ ಬಲಿಯಾದವರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಿ : ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಆಗ್ರಹ

08/08/2025 12:42 PM

ಬಿಹಾರ ಚುನಾವಣೆ ಪರಿಷ್ಕರಣೆಗೆ ಪಕ್ಷಗಳು ಒಂದೇ ಒಂದು ಆಕ್ಷೇಪಣೆ ಸಲ್ಲಿಸಿಲ್ಲ: ಚುನಾವಣಾ ಆಯೋಗ

08/08/2025 12:42 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾಟಿ ಔಷಧಿಗೆ ಬಲಿಯಾದವರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಿ : ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಆಗ್ರಹ
KARNATAKA

ನಾಟಿ ಔಷಧಿಗೆ ಬಲಿಯಾದವರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಿ : ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಆಗ್ರಹ

By kannadanewsnow0508/08/2025 12:42 PM

ಕಲಬುರಗಿ : ಜಿಲ್ಲೆಯ ಸೇಡಂ ತಾಲೂಕಿನ ಇಮಡಾಪೂರ ಗ್ರಾಮದ ಸ್ವಯಂ ಘೋಷಿತ ಮುತ್ಯಾ ನೀಡಿದ ನಾಟಿ ಔಷಧ ಸೇವಿಸಿ ಸಾವನ್ನಪ್ಪಿದವರ ಕುಟುಂಬಕ್ಕೆ ಸರಕಾರ ತ್ವರಿತವಾಗಿ ಪರಿಹಾರ ನೀಡಬೇಕು ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಆಗ್ರಹಿಸಿದ್ದಾರೆ.

ಈ‌ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸೇಡಂ ತಾಲೂಕಿನ ಬುರಗಪಲ್ಲಿ ಗ್ರಾಮದ ನಿವಾಸಿ ಲಕ್ಷ್ಮಿ ನರಸಿಂಹಲು ಪಲ್ಲಾ (55), ಮದಕಲ್ ಗ್ರಾಮದ ನಾಗೇಶ ಗಡುಬು (31) ಶಹಾಬಾದನ ಡಕ್ಕಾ ತಂಡಾ ನಿವಾಸಿ ಗಣೇಶ ರಾಠೋಡ್ (30), ಚಿತ್ತಾಪುರ ತಾಲೂಕಿನ ಭೀಮನಳ್ಳಿ ತಾಂಡಾದ ಮನೋಹರ್ ಚಹ್ವಾಣ (35) ನಾಟಿ ಔಷಧಿ ಪಡೆದು ಸಾವಿನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇವರನ್ನು ಹೊರತುಪಡಿಸಿ ಹಿಂದೆಯೂ ಇದೇ ಇಮಡಾಪೂರದ ಸ್ವಯಂ ಘೋಷಿತ ಮುತ್ಯಾ ನೀಡಿದ ನಾಟಿ ಔಷಧಿ ಸೇವಿಸಿ ಸಾವಿನಪ್ಪಿರುವ ಬಗ್ಗೆ ಸಾರ್ವಜನಿಕರಿಂದ ತಿಳಿದು ಬಂದಿದೆ. ಈ ಬಗ್ಗೆ ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಈ ರೀತಿ ಔಷಧಿ ಸೇವಿಸಿ ಎಷ್ಟು ಜನ ಇಲ್ಲಿಯವರೆಗೆ ಮೃತಪಟ್ಟಿದ್ದಾರೆ ಎನ್ನುವುದು ಪೊಲೀಸರು ತನಿಖೆಯಿಂದ ಬಹಿರಂಗ ಪಡಿಬೇಕು ಎಂದು ಆಗ್ರಹಿಸಿದರು.

ಸರಕಾರ ಜನರಲ್ಲಿ ಜಾಗೃತಿ ಮೂಡಿಸಿ

ಈ ರೀತಿ ಅವೈಜ್ಞಾನಿಕವಾಗಿ ನಾಟಿ ಔಷಧಿ ನೀಡುವವರ ಬಗ್ಗೆ ಸರಕಾರ ಮತ್ತು ಆರೋಗ್ಯ ಇಲಾಖೆ ಪರಿಶೀಲನೆ ನಡೆಸಿ, ಈ ರೀತಿಯ ಯಾವುದೇ ರೀತಿಯ ಸಂಶೋಧನೆಗೆ ಒಳಪಡದ ಔಷಧಿ ನೀಡುತ್ತಿರುವವ ಮೇಲೆ ಕ್ರಮ ಕೈಗೊಳ್ಳಬೇಕು. ಮತ್ತು ಈ ರೀತಿಯ ಔಷಧಿ ತೆಗೆದುಕೊಳ್ಳದಂತೆ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಸರಕಾರ ಮಾಡಬೇಕು ಎಂದು ಹೇಳಿದರು.

ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಿ

ಯಾವುದೇ ರೀತಿಯ ಅಧ್ಯಯನ ಇಲ್ಲದ ಸ್ವಯಂ ಘೋಷಿತ ಮುತ್ಯಾ ನೀಡಿದ ನಾಟಿ ಔಷಧಿ ಸೇವಿಸಿ ಮೃತಪಟ್ಟವರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಸರಕಾರ ನೀಡಬೇಕು. ಈ ನಿಟ್ಟಿನಲ್ಲಿ ಸೇಡಂ ಮತಕ್ಷೇತ್ರದ ಶಾಸಕ ಹಾಗೂ ಸಚಿವರಾದ ಶರಣಪ್ರಕಾಶ್ ಪಾಟೀಲ್ ಅವರು ವಿಶೇಷ ಕಾಳಜಿ ವಹಿಸಿ ಸಿಎಂ ಪರಿಹಾರ ನಿಧಿಯಿಂದ ಪರಿಹಾರ ಒದಗಿಸುವ ಕೆಲಸ ತ್ವರಿತವಾಗಿ ಮಾಡಬೇಕು.

ನಿಷ್ಪಕ್ಷಪಾತ ತನಿಖೆ ನಡೆಸಿ

ಯಾವುದೇ ರೀತಿಯ ನಾಟಿ ವೈದ್ಯ ಪದ್ದತಿಯ ಬಗ್ಗೆ ಜ್ಞಾನವಿಲ್ಲದೆ ಜನರ ಜೀವದ ಜೊತೆಗೆ ಚಲ್ಲಾಟವಾಡಿದ ಸ್ವಯಂ ಘೋಷಿತ ಮುತ್ಯಾ ಮತ್ತು ಅವನ ಹಿಂದೆ ಇರುವವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಇವರ ಹಿಂದೆ ಯಾರೇ ಇದ್ದರು ಯಾವ ಒತ್ತಡಕ್ಕೂ ಒಳಗಾಗದೆ ನಿಖರವಾಗಿ ತನಿಖೆ ನಡೆಸಿ ಕಾನೂನು ರೀತಿಯಲ್ಲಿ ಶಿಕ್ಷೆ ಕೊಡಿಸುವ ಕೆಲಸ ಪ್ರಾಮಾಣಿಕವಾಗಿ ಪೊಲೀಸರು ಮಾಡಬೇಕು ಎಂದು ತೇಲ್ಕೂರ ಆಗ್ರಹಿಸಿದ್ದಾರೆ.

Share. Facebook Twitter LinkedIn WhatsApp Email

Related Posts

BREAKING : `ಒನ್ ಮ್ಯಾನ್, ಒನ್ ವೋಟ್’ ಸಂವಿಧಾನದ ಅಡಿಪಾಯ : ಬೆಂಗಳೂರಲ್ಲಿ ರಾಹುಲ್ ಗಾಂಧಿ ಭಾಷಣ | WATCH VIDEO

08/08/2025 12:44 PM1 Min Read

BREAKING : ‘ಧರ್ಮಸ್ಥಳ ಕೇಸ್’ : ‘ಗನ್ ಮ್ಯಾನ್ ಭದ್ರತೆ’ ನೀಡುವಂತೆ ದೂರುದಾರ `SIT’ ಗೆ ಮನವಿ.!

08/08/2025 12:18 PM1 Min Read

BREAKING : ಸಿಎಂ ಸಿದ್ದರಾಮಯ್ಯ ಕ್ಷೇತ್ರ ವರುಣದಲ್ಲೂ ನಕಲಿ ವೋಟರ್ ಐಡಿ ಪತ್ತೆ : ಬಿಜೆಪಿ ಹೊಸ ಬಾಂಬ್!

08/08/2025 12:15 PM1 Min Read
Recent News

BREAKING : `ಒನ್ ಮ್ಯಾನ್, ಒನ್ ವೋಟ್’ ಸಂವಿಧಾನದ ಅಡಿಪಾಯ : ಬೆಂಗಳೂರಲ್ಲಿ ರಾಹುಲ್ ಗಾಂಧಿ ಭಾಷಣ | WATCH VIDEO

08/08/2025 12:44 PM

ನಾಟಿ ಔಷಧಿಗೆ ಬಲಿಯಾದವರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಿ : ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಆಗ್ರಹ

08/08/2025 12:42 PM

ಬಿಹಾರ ಚುನಾವಣೆ ಪರಿಷ್ಕರಣೆಗೆ ಪಕ್ಷಗಳು ಒಂದೇ ಒಂದು ಆಕ್ಷೇಪಣೆ ಸಲ್ಲಿಸಿಲ್ಲ: ಚುನಾವಣಾ ಆಯೋಗ

08/08/2025 12:42 PM

ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಆಹಾರವನ್ನು ಹೇಗೆ ಜೀರ್ಣಿಸಿಕೊಳ್ಳುತ್ತಾರೆ ?: ವಿವರಿಸಿದ ಶುಭಾಂಶು ಶುಕ್ಲಾ

08/08/2025 12:19 PM
State News
KARNATAKA

BREAKING : `ಒನ್ ಮ್ಯಾನ್, ಒನ್ ವೋಟ್’ ಸಂವಿಧಾನದ ಅಡಿಪಾಯ : ಬೆಂಗಳೂರಲ್ಲಿ ರಾಹುಲ್ ಗಾಂಧಿ ಭಾಷಣ | WATCH VIDEO

By kannadanewsnow5708/08/2025 12:44 PM KARNATAKA 1 Min Read

ಬೆಂಗಳೂರು : ಕಳೆದ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ರಾಹುಲ್ ಗಾಂಧಿ ತೀವ್ರ ಆರೋಪ ಮಾಡಿದ್ದಾರೆ. ಈ ಸಂಬಂಧ…

ನಾಟಿ ಔಷಧಿಗೆ ಬಲಿಯಾದವರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಿ : ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಆಗ್ರಹ

08/08/2025 12:42 PM

BREAKING : ‘ಧರ್ಮಸ್ಥಳ ಕೇಸ್’ : ‘ಗನ್ ಮ್ಯಾನ್ ಭದ್ರತೆ’ ನೀಡುವಂತೆ ದೂರುದಾರ `SIT’ ಗೆ ಮನವಿ.!

08/08/2025 12:18 PM

BREAKING : ಸಿಎಂ ಸಿದ್ದರಾಮಯ್ಯ ಕ್ಷೇತ್ರ ವರುಣದಲ್ಲೂ ನಕಲಿ ವೋಟರ್ ಐಡಿ ಪತ್ತೆ : ಬಿಜೆಪಿ ಹೊಸ ಬಾಂಬ್!

08/08/2025 12:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.