Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ : ‘SIT’ ಮುಂದೆ ಹೊಸ ಸಾಕ್ಷಿದಾರ ಪ್ರತ್ಯಕ್ಷ, ಬಾಲಕಿ ಶವ ಹೂತಿದ್ದು, ನೋಡಿದ್ದಾಗಿ ಹೇಳಿಕೆ!

03/08/2025 6:07 AM

ಪ್ರಜ್ವಲ್ ರೇವಣ್ಣ ಕೇಸಲ್ಲಿ ತೀರ್ಪು ವಿಳಂಬಕ್ಕೆ ಶತಪ್ರಯತ್ನ ನಡೆದಿತ್ತು: ಎಸ್‌ಐಟಿ ಮುಖ್ಯಸ್ಥ ಬಿಕೆ ಸಿಂಗ್ ಸ್ಫೋಟಕ ಹೇಳಿಕೆ!

03/08/2025 5:57 AM

BIG NEWS : ರಸಗೊಬ್ಬರ ಮಾರಾಟ ವೇಳೆ ನಿಯಮ ಮೀರಿದರೆ ಕಠಿಣ ಕ್ರಮ : ರಾಜ್ಯ ಸರ್ಕಾರ ಎಚ್ಚರಿಕೆ

03/08/2025 5:47 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರಜ್ವಲ್ ರೇವಣ್ಣ ಕೇಸಲ್ಲಿ ತೀರ್ಪು ವಿಳಂಬಕ್ಕೆ ಶತಪ್ರಯತ್ನ ನಡೆದಿತ್ತು: ಎಸ್‌ಐಟಿ ಮುಖ್ಯಸ್ಥ ಬಿಕೆ ಸಿಂಗ್ ಸ್ಫೋಟಕ ಹೇಳಿಕೆ!
KARNATAKA

ಪ್ರಜ್ವಲ್ ರೇವಣ್ಣ ಕೇಸಲ್ಲಿ ತೀರ್ಪು ವಿಳಂಬಕ್ಕೆ ಶತಪ್ರಯತ್ನ ನಡೆದಿತ್ತು: ಎಸ್‌ಐಟಿ ಮುಖ್ಯಸ್ಥ ಬಿಕೆ ಸಿಂಗ್ ಸ್ಫೋಟಕ ಹೇಳಿಕೆ!

By kannadanewsnow0503/08/2025 5:57 AM

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ತೀರ್ಪು ವಿಳಂಬ ಮಾಡುವುದಕ್ಕೆ ಶತಪ್ರಯತ್ನ ನಡೆದಿತ್ತು ಎಂದು ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ತಿಳಿಸಿದರು.

ಅತ್ಯಾಚಾರ ಕೇಸಲ್ಲಿ ಅಪರಾಧಿ ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಪ್ರಮಾಣ ಪ್ರಕಟವಾದ ಹಿನ್ನೆಲೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಎಪ್ರಿಲ್ ತಿಂಗಳಲ್ಲಿ ಹಾಸನದಲ್ಲಿ ಪೆನ್‌ಡ್ರೈವ್ ವಿತರಣೆ ಮಾಡಿದ್ರು. ತನಿಖೆಗೆ ಸರ್ಕಾರ ಎಸ್‌ಐಟಿ ರಚಿಸಿತು. ಎಸ್‌ಐಟಿ ತಂಡದಲ್ಲಿ ಸೀಮಾ ಮತ್ತು ಸುಮನಾ ಡಿ.ಪನ್ನೇಕರ್ ಇದ್ದರು. ನಾಲ್ಕು ಜನ ಸಂತ್ರಸ್ತೆಯರು ದೂರು ಕೊಟ್ಟಿದ್ದರು. ಒಂದು ಹೊಳೇನರಸೀಪುರ ಕೇಸ್. ಸಿಐಡಿಯಲ್ಲಿ 3 ಕೇಸ್ ದಾಖಲಾಗಿತ್ತು. ಒಟ್ಟು ಆರು ಕೇಸ್. ಈ ಪೈಕಿ 5 ಕೇಸ್ ತನಿಖೆ ಮುಗಿದಿದೆ. ಐದು ಕೇಸ್‌ನಲ್ಲಿ ಒಂದು ಪ್ರಕರಣ ಜನವರಿಯಿಂದ ಟ್ರಯಲ್ ಆರಂಭವಾಗಿತ್ತು.

ಮೂರು ತಿಂಗಳಲ್ಲಿ 26 ವಿಟ್ನೆಸ್ ಹಾಗೂ ದಾಖಲೆಗಳನ್ನ ಹಾಜರುಪಡಿಸಲಾಯ್ತು. ಆರೋಪಿ ಪ್ರಜ್ವಲ್ ರೇವಣ್ಣ ಮೇಲೆ ತೀರ್ಪು ಪ್ರಕಟವಾಗಿದೆ. ದೋಷಿ ಎಂದು ಕೋರ್ಟ್ ಹೇಳಿದೆ. ನಾವು ಚಾರ್ಜ್ಶೀಟ್ ಮಾಡಿದ ಸೆಕ್ಷನ್‌ನಲ್ಲಿ ಅವರಿಗೆ ನಿನ್ನೆ ದೋಷಿ ಎಂದು ಹೇಳಿದೆ. ಎರಡು ಸೆಕ್ಷನ್‌ಗಳಡಿ 10 ಲಕ್ಷ ದಂಡ ವಿಧಿಸಲಾಗಿದೆ. ಐಟಿ ಕಾಯ್ದೆ ವಿಡಿಯೋ ಮತ್ತು ಪೋಟೊ ತೆಗೆದಿರುವುದು ಕೂಡ ಸಾಬೀತು ಆಗಿದೆ. 11.25 ಲಕ್ಷ ಹಣವನ್ನು ಸಂತ್ರಸ್ತೆಗೆ ನೀಡುವಂತೆ ಕೋರ್ಟ್ ಸೂಚಿಸಿದೆ. ಒಂದು ವರ್ಷ ನಾಲ್ಕು ತಿಂಗಳಲ್ಲಿ ತೀರ್ಪು ಬಂದಿದೆ ಎಂದು ವಿವರಿಸಿದರು.

ಜಡ್ಜ್ಮೆಂಟ್ ವಿಳಂಬ ಮಾಡುವುದಕ್ಕೆ ಶತಪ್ರಯತ್ನ ಮಾಡಿದ್ರು. ಆದರು ಕೂಡ ಜಡ್ಜ್ಮೆಂಟ್ ತಡ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಸಂತ್ರಸ್ತೆ ಸಮಾಜದ ಕೆಳಸಮುದಾಯದ ಮಹಿಳೆಯಾಗಿದ್ದಾರೆ. ತೀರ್ಪು ವಿಳಂಬ ಮಾಡುವುದಕ್ಕೆ ಆರೋಪಿ ಪರ ವಕೀಲರು ಸೇರಿ ಹಲವರು ಪ್ರಯತ್ನಪಟ್ಟಿದ್ದರು ಎಂದು ಎದುರಾದ ಸವಾಲುಗಳ ಬಗ್ಗೆ ಸಿಂಗ್ ಮಾಹಿತಿ ಹಂಚಿಕೊಂಡರು. ಘಟನೆ ಆದ ನಾಲ್ಕು ವರ್ಷದ ಬಳಿಕ ನಮಗೆ ಕೇಸ್ ಕೊಡಲಾಗಿತ್ತು. ಸಾಕ್ಷಿಗಳನ್ನ ನೀಡಿ, ಸರಿಯಾಗಿ ಕೆಲಸ ಮಾಡಿದ್ದಕ್ಕೆ ಶಿಕ್ಷೆ ಕೊಡಿಸಲು ಸಾಧ್ಯವಾಯಿತು. ಅಪರಾಧಿಗೆ ಹೈಕೋರ್ಟ್, ಸುಪ್ರೀಂ ಕೋರ್ಟ್‌ನಲ್ಲಿ ಚಾಲೆಂಜ್ ಮಾಡುವ ಅವಕಾಶ ಇದೆ ಎಂದರು.

ಮುಂದಿನ ಎರಡು ವಾರದಲ್ಲಿ ಪೆನ್‌ಡ್ರೈವ್ ಹಂಚಿಕೆ ಮಾಡಿದ ಪ್ರಕರಣದ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗುತ್ತೆ. ಅದರಲ್ಲಿ ಯಾರೆಲ್ಲ ಆರೋಪಿಗಳಿದ್ದಾರೆ ಅನ್ನೋದು ನಿಮಗೆ ತಿಳಿಯುತ್ತೆ ಎಂದರು. ಪೊಲಿಟಕಲ್ ಒತ್ತಡ ಯಾವುದೂ ನಮಗೆ ಇರಲಿಲ್ಲ. ಸರ್ಕಾರದ ಕೆಲಸವನ್ನ ಪ್ರಾಮಾಣಿಕವಾಗಿ ಮಾಡಿದ್ದೇವೆ. ಸರ್ಕಾರದ ಅಧಿಕಾರಿಗಳಾಗಿ ನಮ್ಮ ಕೆಲಸ ಮಾಡಿದ್ದೇವೆ. ನಮ್ಮ ಚಾರ್ಜ್‌ಶೀಟ್‌, ಕೋರ್ಟ್ ಎತ್ತಿ ಹಿಡಿದಿದೆ. ಹಾಗಾಗಿ, ನಮಗೆ ಹೆಮ್ಮೆ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

Share. Facebook Twitter LinkedIn WhatsApp Email

Related Posts

BREAKING : ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ : ‘SIT’ ಮುಂದೆ ಹೊಸ ಸಾಕ್ಷಿದಾರ ಪ್ರತ್ಯಕ್ಷ, ಬಾಲಕಿ ಶವ ಹೂತಿದ್ದು, ನೋಡಿದ್ದಾಗಿ ಹೇಳಿಕೆ!

03/08/2025 6:07 AM1 Min Read

BIG NEWS : ರಸಗೊಬ್ಬರ ಮಾರಾಟ ವೇಳೆ ನಿಯಮ ಮೀರಿದರೆ ಕಠಿಣ ಕ್ರಮ : ರಾಜ್ಯ ಸರ್ಕಾರ ಎಚ್ಚರಿಕೆ

03/08/2025 5:47 AM1 Min Read

BREAKING : ಮುಖ್ಯ ಶಿಕ್ಷಕನನ್ನು ಎತ್ತಗಂಡಿ ಮಾಡಿಸಲು ಶಾಲೆಯ ಕುಡಿಯುವ ನೀರಿನ ಟ್ಯಾಂಕ್ ಗೆ ವಿಷ : ಮೂವರು ಅರೆಸ್ಟ್!

03/08/2025 5:42 AM2 Mins Read
Recent News

BREAKING : ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ : ‘SIT’ ಮುಂದೆ ಹೊಸ ಸಾಕ್ಷಿದಾರ ಪ್ರತ್ಯಕ್ಷ, ಬಾಲಕಿ ಶವ ಹೂತಿದ್ದು, ನೋಡಿದ್ದಾಗಿ ಹೇಳಿಕೆ!

03/08/2025 6:07 AM

ಪ್ರಜ್ವಲ್ ರೇವಣ್ಣ ಕೇಸಲ್ಲಿ ತೀರ್ಪು ವಿಳಂಬಕ್ಕೆ ಶತಪ್ರಯತ್ನ ನಡೆದಿತ್ತು: ಎಸ್‌ಐಟಿ ಮುಖ್ಯಸ್ಥ ಬಿಕೆ ಸಿಂಗ್ ಸ್ಫೋಟಕ ಹೇಳಿಕೆ!

03/08/2025 5:57 AM

BIG NEWS : ರಸಗೊಬ್ಬರ ಮಾರಾಟ ವೇಳೆ ನಿಯಮ ಮೀರಿದರೆ ಕಠಿಣ ಕ್ರಮ : ರಾಜ್ಯ ಸರ್ಕಾರ ಎಚ್ಚರಿಕೆ

03/08/2025 5:47 AM

BREAKING : ಮುಖ್ಯ ಶಿಕ್ಷಕನನ್ನು ಎತ್ತಗಂಡಿ ಮಾಡಿಸಲು ಶಾಲೆಯ ಕುಡಿಯುವ ನೀರಿನ ಟ್ಯಾಂಕ್ ಗೆ ವಿಷ : ಮೂವರು ಅರೆಸ್ಟ್!

03/08/2025 5:42 AM
State News
KARNATAKA

BREAKING : ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ : ‘SIT’ ಮುಂದೆ ಹೊಸ ಸಾಕ್ಷಿದಾರ ಪ್ರತ್ಯಕ್ಷ, ಬಾಲಕಿ ಶವ ಹೂತಿದ್ದು, ನೋಡಿದ್ದಾಗಿ ಹೇಳಿಕೆ!

By kannadanewsnow0503/08/2025 6:07 AM KARNATAKA 1 Min Read

ದಕ್ಷಿಣಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಅಪರಿಚಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮತ್ತೊಂದು ಸಿಕ್ಕಿದ್ದು, ಈಗಾಗಲೇ…

ಪ್ರಜ್ವಲ್ ರೇವಣ್ಣ ಕೇಸಲ್ಲಿ ತೀರ್ಪು ವಿಳಂಬಕ್ಕೆ ಶತಪ್ರಯತ್ನ ನಡೆದಿತ್ತು: ಎಸ್‌ಐಟಿ ಮುಖ್ಯಸ್ಥ ಬಿಕೆ ಸಿಂಗ್ ಸ್ಫೋಟಕ ಹೇಳಿಕೆ!

03/08/2025 5:57 AM

BIG NEWS : ರಸಗೊಬ್ಬರ ಮಾರಾಟ ವೇಳೆ ನಿಯಮ ಮೀರಿದರೆ ಕಠಿಣ ಕ್ರಮ : ರಾಜ್ಯ ಸರ್ಕಾರ ಎಚ್ಚರಿಕೆ

03/08/2025 5:47 AM

BREAKING : ಮುಖ್ಯ ಶಿಕ್ಷಕನನ್ನು ಎತ್ತಗಂಡಿ ಮಾಡಿಸಲು ಶಾಲೆಯ ಕುಡಿಯುವ ನೀರಿನ ಟ್ಯಾಂಕ್ ಗೆ ವಿಷ : ಮೂವರು ಅರೆಸ್ಟ್!

03/08/2025 5:42 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.