ಬೆಂಗಳೂರು: ದೇವಸ್ಥಾನ, ದೇವರ ಕೆಲಸ ಮತ್ತು ದೇವರ ದುಡ್ಡುಲ್ಲಿ ಮೋಸ, ವಂಚನೆ ಇರಬಾರದು. ದೇವರ ದುಡ್ಡು ದೇವರಿಗೆ ಸಲ್ಲಬೇಕು. ಆದರೆ ದೇವರ ದುಡ್ಡನ್ನು ಕಳ್ಳತನ ಮಾಡಿ , ಭಕ್ತರ ಭಕ್ತಿಗೆ, ಭಾವನೆಗೆ ಅಪಚಾರ ಮಾಡುತ್ತಿರುವುದು ಸಾಕ್ಷಿ ಸಮೇತ ದೊರಕಿದ್ದಾಗ್ಯೂ ಸಹ ಕುರುಡರಂತೆ ವರ್ತಿಸುವುದು ಅಕ್ಷಮ್ಯ ಎಂಬುದಾಗಿ ಬೆಂಗಳೂರಿನ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಭಕ್ತರು ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರು ನಗರ ಬ್ಯಾಟರಾಯನಪುರ, ಶ್ರೀ ಗಾಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಆಥಿ೯ಕ ದುರುಪಯೋಗ ಮತ್ತು ಆಡಳಿತ ನಿವ೯ಹಣೆ ಅಸರ್ಮಪಕವಾಗಿ ನಡೆಯುತ್ತಿರುವುದಾಗಿ ಹಲವು ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ನಿಯಮಾನುಸಾರ ವಿಚಾರಣೆ ನಡೆಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿಯವರು ಸರಿಯಾದ ಮಾಹಿತಿಯನ್ನು ಒದಗಿಸುವಲ್ಲಿ ವಿಫಲರಾಗಿರುತ್ತಾರೆ. ಕಳೆದ 25 ವರ್ಷಗಳಿಂದ ಯಾವುದೇ ದಾಖಲೆ ನಿರ್ವಹಿಸಿರುವುದಿಲ್ಲ. ಆದಾಯವನ್ನೇ ತೋರಿಸದೇ ವೆಚ್ಚವನ್ನು ಮಾತ್ರ ತೋರಿಸುತ್ತಿದ್ದಾರೆ. ಟ್ರಸ್ಟಿಗಳ ಮಧ್ಯೆ ಹೊಂದಾಣಿಕೆ ಇಲ್ಲದೆ ಹಲವು ಗುಂಪುಗಳಾಗಿ ಮಾರ್ಪಟ್ಟಿದೆ.
ದೇವಸ್ಥಾನದ ಹುಂಡಿಯ ಹಣವನ್ನು ಲಪಾಟಯಿಸುತ್ತಿರುವ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರದಾಡಿದ್ದು, ಸರ್ಕಾರವು ಭಕ್ತರ ಹಿತ ಕಾಯುವಲ್ಲಿ ವಿಫಲವಾಗಿದೆಯೆಂಬ ಆಕ್ಷೇಪಣೆಗಳು ಸಹ ವ್ಯಕ್ತವಾಗಿದ್ದವು.
ಈ ಎಲ್ಲಾ ಕಾರಣಗಳಿಂದ ದೇವಾಲಯವನ್ನು ಕನಾ೯ಟಕ ಹಿಂದೂ ಧಾಮಿ೯ಕ ಸಂಸ್ಥೆಗಳು ಮತ್ತು ಧಮಾ೯ದಾಯ ದತ್ತಿಗಳ ಅಧಿನಿಯಮ 1997ರ ಕಲಂ 42 ಮತ್ತು 43 ರನ್ವಯ ಸಕಾ೯ರದ ದಿನಾಂಕ 08/07/2025 ಆದೇಶದಲ್ಲಿ ಘೋಷಿತ ಸಂಸ್ಥೆ ಎಂದು ಘೋಷಿಸಿ ಸಕಾ೯ರದ ವಶಕ್ಕೆ ಪಡೆಯಲು ಆದೇಶಿಸಲಾಗಿದೆ.
ಸಕಾ೯ರದ ಆದೇಶದನ್ವಯ ದಿನಾಂಕ 11/07/2025 ರಂದು ದೇವಾಲಯವನ್ನು ಇಲಾಖಾ ಅಧಿಕಾರಿಗಳು ಅಚ೯ಕರು, ಸಾವ೯ಜನಿಕರ ಸಮಕ್ಷಮ ಮಹಜರ್ ನಡೆಸಿ ಸಕಾ೯ರದ ವಶಕ್ಕೆ ಪಡೆಯಲಾಗಿದೆ. ರದ್ಧತಿಯು 5 ವರ್ಷಗಳವರೆಗೆ ತಾತ್ಕಾಲಿಕ ಪ್ರಕ್ರಿಯೆಯಾಗಿದ್ದು, ನಂತರದಲ್ಲಿ ತೀರ್ಮಾನಿಸಲಾಗುವುದು ಎಂದಿದೆ.
ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಹಲವು ವಿಡಿಯೋಗಳಲ್ಲಿ ಹಣ ಕದಿಯುತ್ತಿರುವುದು ಯಾರು ಎಂದು ಗೊತ್ತಾಗಿದ್ದರೂ, ವಂಚಿಸಿರುವವರ ಮೇಲೆ ಒಂದೇ ಒಂದು ದೂರು ಸಹ ಯಾವುದೇ ಪೊಲೀಸ್ ಠಾಣೆಯಲ್ಲಿ ದಾಖಲಿಸಿಲ್ಲ ಯಾಕೆ? ಅಥವಾ ಯಾವುದೇ ಆಂತರಿಕ ವಿಚಾರಣಾ ಸಮಿತಿಯನ್ನು ರಚಿಸಿ ಪರಿಶೀಲಿಸುವ ಗೊಡವೆಗೆ ಹೋಗಿಲ್ಲ ಯಾಕೆ ? ಅಂತಹವರಿಗೆ ಪ್ರತಿಭಟನೆ ಮಾಡುವ ಯಾವ ನೈತಿಕ ಹಕ್ಕಿದೆ.? ದೇವರ ದುಡ್ಡನ್ನು ನುಂಗಿ ಪ್ರತಿಭಟಿಸುವವರಿಗೆ ಪಾಪ ಪ್ರಜ್ಞೆ ಕಾಡಬಾರದೇ?
ಭಯ, ಭಕ್ತಿ, ಭಾವನೆ ಎಲ್ಲವನ್ನೂ ಹರಾಜಿಗಿಟ್ಟಿರುವ ಇವರ ಮೇಲಿನ ಕ್ರಮ ಇವರಿಗೆ ಅಪಥ್ಯವೇ? ಎಂದು ಭಕ್ತ ಸಮುದಾಯ ಪ್ರಶ್ನಿಸುತ್ತಿದೆ.
ಅಕ್ರಮ, ಅವ್ಯವಹಾರ, ಅವ್ಯವಸ್ಥೆ, ಹಣ ದುರುಪಯೋಗವನ್ನು ಕಂಡರೂ ಕಾಣದಂತೆ, ವೈಯಕ್ತಿಕ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ಭಕ್ತರ ಹಿತಾಸಕ್ತಿಯನ್ನು ಬಲಿಕೊಡಲು ಸಾಧ್ಯವಿಲ್ಲ. ಯಾವುದೇ ಬಾಹ್ಯ ಒತ್ತಡಕ್ಕೆ ಒಳಗಾಗದೆ ತೆಗೆದುಕೊಂಡಿರುವ ಕ್ರಮವನ್ನು ಭಕ್ತ ಸಮುದಾಯ ಬೆಂಬಲಿಸಿದೆ.
BREAKING: KIADBಗೆ 1,777 ಎಕರೆ ಜಮೀನು ನೀಡಲು ಒಪ್ಪಿಗೆ: ಸಿಎಂ ಸಿದ್ಧರಾಮಯ್ಯಗೆ ರೈತ ಹೋರಾಟ ಸಮಿತಿ ಪತ್ರ
ನೀವು SSLC ಪರೀಕ್ಷೆಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಪಡೆದಿದ್ದೀರಾ? ಈಗಲೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ