Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಮಾಜಿ ಸಚಿವ ಕೆ.ಎನ್ ರಾಜಣ್ಣ ಬಿಜೆಪಿಗೆ ಅರ್ಜಿ ಹಾಕಿದ್ದಾರೆ : ಶಾಸಕ HC ಬಾಲಕೃಷ್ಣ ಹೊಸ ಬಾಂಬ್!

02/09/2025 12:12 PM

BREAKING: ಪೊಲೀಸರ ಮೇಲೆ ಗುಂಡು ಹಾರಿಸಿ ಕಸ್ಟಡಿಯಿಂದ ಪರಾರಿಯಾದ ಎಎಪಿ ಶಾಸಕ ಹರ್ಮಿತ್ ಸಿಂಗ್!

02/09/2025 12:06 PM

BREAKING : ಕೊಲೆ ಆರೋಪಿ ಪವಿತ್ರಾಗೌಡಗೆ ಬಿಗ್ ಶಾಕ್ : ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್

02/09/2025 11:59 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದ ಉಪ ವಿಭಾಗೀಯ ಆಸ್ಪತ್ರೆಯ ಜನಾನುರಾಗಿ ‘ವೈದ್ಯ ಪರಪ್ಪ’ ನಿವೃತ್ತಿ: ಸನ್ಮಾನಿಸಿ ಬೀಳ್ಕೊಡುಗೆ
KARNATAKA

ಸಾಗರದ ಉಪ ವಿಭಾಗೀಯ ಆಸ್ಪತ್ರೆಯ ಜನಾನುರಾಗಿ ‘ವೈದ್ಯ ಪರಪ್ಪ’ ನಿವೃತ್ತಿ: ಸನ್ಮಾನಿಸಿ ಬೀಳ್ಕೊಡುಗೆ

By kannadanewsnow0902/07/2025 8:08 PM

ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಉಪ ವಿಭಾಗೀಯ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಪರಪ್ಪ.ಕೆ ಜನಾನುರಾಗಿಯಾಗಿದ್ದವರು. ಎಷ್ಟೇ ಹೊತ್ತಿನಲ್ಲಿ ರೋಗಿಗಳು ಕರೆ ಮಾಡಿ ಸೇವೆಗೆ ಕೋರಿದ್ರೆ ಸಾಕು, ಕ್ಷಣಾರ್ಧ ಚಿಕಿತ್ಸೆಗೆ ಹಾಜರ್. ಇಂತಹ ಸಹೃದಯಿ ವೈದ್ಯ ಡಾ.ಪರಪ್ಪ ಇಂದು ನಿವೃತ್ತರಾಗಿದ್ದಾರೆ. ಅವರಿಗೆ ಇಡೀ ತಾಲ್ಲೂಕಿನ ಜನತೆ, ಆರೋಗ್ಯ ಇಲಾಖೆಯ ನೌಕರರು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.

ಇಂದು ವಯೋನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ನೌಕರರ ಒಕ್ಕೂಟ, ಆರೋಗ್ಯ ರಕ್ಷಾ ಸಮಿತಿ ವತಿಯಿಂದ ನೀಡಲಾದ ಅಭಿನಂದನೆ ಸ್ವೀಕರಿಸಿ ಮಾತನಾಡಿದಂತ ಅವರು, ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ಸವಾಲಿನ ಕೆಲಸ. ಆಸ್ಪತ್ರೆಯೊಳಗಿನ ವೈದ್ಯಸಿಬ್ಬಂದಿಗಳ ಜೊತೆ ಜನಪ್ರತಿನಿಧಿಗಳು, ಸಾರ್ವಜನಿಕರ ಸಹಕಾರ ಉತ್ತಮ ಕೆಲಸ ಮಾಡಲು ಅತ್ಯಗತ್ಯ ಎಂದರು.

ಹಣದ ಹಿಂದೆ ಹೋದರೆ ನೆಮ್ಮದಿ ಸಿಗುವುದಿಲ್ಲ. ನಾವು ಸರ್ಕಾರಿ ಸೇವಕರಾಗಿ ಸೇರಿದ ನಂತರ ಒಂದಷ್ಟು ಸಾಮಾಜಿಕ ಸೇವೆಯನ್ನು ಮೈಗೂಡಿಸಿಕೊಳ್ಳಬೇಕು. ಅದರಲ್ಲೂ ಸರ್ಕಾರಿ ಆಸ್ಪತ್ರೆಯ ವೈದ್ಯರಾದವರ ಮೇಲೆ ಅತಿಹೆಚ್ಚು ಹೊಣೆ ಇರುತ್ತದೆ. ರೋಗಿಗಳಿಗೆ ಉತ್ತಮ ಸೇವೆ ನೀಡುವ ಮೂಲಕ ನಾವು ಒಳ್ಳೆಯ ಹೆಸರು ಪಡೆಯಬಹುದು. ನನ್ನ ಅವಧಿಯಲ್ಲಿ ಸಿವಿಲ್ ಸರ್ಜನ್ ಆಗಿ ಉತ್ತಮ ಕೆಲಸ ಮಾಡಿದ ತೃಪ್ತಿ ಇದೆ ಎಂದು ತಿಳಿಸಿದರು.

ಡಾ. ವಿಕ್ರಮ್ ಮಾತನಾಡಿ, ನಾನು ಉಪವಿಭಾಗೀಯ ಆಸ್ಪತ್ರೆಗೆ ಬಂದಾಗ ಉತ್ತಮ ಕರ್ತವ್ಯ ನಿರ್ವಹಣೆ ಕುರಿತು ನನಗೆ ಸಮರ್ಥ ಮಾರ್ಗದರ್ಶನ ನೀಡಿದವರು ಡಾ. ಪರಪ್ಪನವರು. ಅವರ ಸೇವೆ ಅನುಕರಣೀಯವಾದದ್ದು. ವೈದ್ಯರಾಗಿ ಆಸ್ಪತ್ರೆ ಆಡಳಿತಾಧಿಕಾರಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ. ವಯೋನಿವೃತ್ತಿ ಹೊಂದಿದರೂ ಆಸ್ಪತ್ರೆ ಜೊತೆಗಿನ ಬಾಂಧವ್ಯ ಕಳೆದುಕೊಳ್ಳಬಾರದು ಎಂದರು.

ಸಾಗರ ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಮಾತನಾಡಿ, ಸಾರ್ವಜನಿಕ ವಲಯದಲ್ಲಿ ಡಾ. ಪರಪ್ಪ ಬಗ್ಗೆ ಉತ್ತಮ ಹೆಸರು ಇದೆ. ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡಿ ಉತ್ತಮ ಹೆಸರು ಪಡೆಯುವುದು ಸವಾಲಿನ ಕೆಲಸ. ಉತ್ತಮ ಸೇವೆ ಮಾಡಿದರೆ ಜನರು ಗುರುತಿಸಿ ಗೌರವಿಸುತ್ತಾರೆ ಎನ್ನುವುದಕ್ಕೆ ಪರಪ್ಪ ಅವರು ಉತ್ತಮ ಉದಾಹರಣೆಯಾಗಿದೆ ಅವರು ನಿವೃತ್ತರಾಗಿದ್ದು ಸಾಗರ ಆಸ್ಪತ್ರೆಗೆ ದೊಡ್ಡನಷ್ಟವಾಗಿದೆ. ಕೊರೋನಾ ಸಂದರ್ಭದಿಂದ ಹಿಡಿದು ಈತನಕ ಡಾ. ಪರಪ್ಪ ಸೇರಿ ನಮ್ಮ ಸರ್ಕಾರಿ ಆಸ್ಪತ್ರೆ ವೈದ್ಯರು ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿದ್ದಾರೆ ಎಂದು ಡಾ.ಪರಪ್ಪ ಅವರನ್ನು ಕೊಂಡಾಡಿದರು.

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ನಟರಾಜ್, ವೈದ್ಯೆ ಡಾ. ಪ್ರತಿಮಾ, ಡಾ. ನಾಗೇಂದ್ರಪ್ಪ, ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬಿವೈ ರಾಘವೇಂದ್ರ, ವಿಜಯೇಂದ್ರ ವಿರುದ್ಧ ಶಾಸಕ ಗೋಪಾಲಕೃಷ್ಣ ಬೇಳೂರು ಹಿಗ್ಗಾಮುಗ್ಗಾ ವಾಗ್ಧಾಳಿ

BIG NEWS: ‘KPTCL’ಗೆ ಷರತ್ತು, ಸೂಚನೆಯಲ್ಲಿ ಇರುವ ಸ್ಪಷ್ಟತೆ ಆದೇಶದಲ್ಲಿಲ್ಲ: ಈ ವರ್ಷವೂ ‘JE ವರ್ಗಾವಣೆ’ ಗೊಂದಲ | JE Transfer

Share. Facebook Twitter LinkedIn WhatsApp Email

Related Posts

BIG NEWS : ಮಾಜಿ ಸಚಿವ ಕೆ.ಎನ್ ರಾಜಣ್ಣ ಬಿಜೆಪಿಗೆ ಅರ್ಜಿ ಹಾಕಿದ್ದಾರೆ : ಶಾಸಕ HC ಬಾಲಕೃಷ್ಣ ಹೊಸ ಬಾಂಬ್!

02/09/2025 12:12 PM1 Min Read

BREAKING : ಕೊಲೆ ಆರೋಪಿ ಪವಿತ್ರಾಗೌಡಗೆ ಬಿಗ್ ಶಾಕ್ : ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್

02/09/2025 11:59 AM1 Min Read

BREAKING : ಭೋವಿ ನಿಗಮದಲ್ಲಿ ಭ್ರಷ್ಟಾಚಾರ ಆರೋಪ : ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಗೆ ಸಿಎಂ ಸಿದ್ದರಾಮಯ್ಯ ಸೂಚನೆ

02/09/2025 11:21 AM1 Min Read
Recent News

BIG NEWS : ಮಾಜಿ ಸಚಿವ ಕೆ.ಎನ್ ರಾಜಣ್ಣ ಬಿಜೆಪಿಗೆ ಅರ್ಜಿ ಹಾಕಿದ್ದಾರೆ : ಶಾಸಕ HC ಬಾಲಕೃಷ್ಣ ಹೊಸ ಬಾಂಬ್!

02/09/2025 12:12 PM

BREAKING: ಪೊಲೀಸರ ಮೇಲೆ ಗುಂಡು ಹಾರಿಸಿ ಕಸ್ಟಡಿಯಿಂದ ಪರಾರಿಯಾದ ಎಎಪಿ ಶಾಸಕ ಹರ್ಮಿತ್ ಸಿಂಗ್!

02/09/2025 12:06 PM

BREAKING : ಕೊಲೆ ಆರೋಪಿ ಪವಿತ್ರಾಗೌಡಗೆ ಬಿಗ್ ಶಾಕ್ : ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್

02/09/2025 11:59 AM

ಆರ್ಥಿಕ ಸ್ವಾರ್ಥದಿಂದ ಎದುರಾಗುವ ಸವಾಲುಗಳ ಹೊರತಾಗಿಯೂ ಶೇ.7.8ರಷ್ಟು ಬೆಳವಣಿಗೆ: ಪ್ರಧಾನಿ ಮೋದಿ

02/09/2025 11:48 AM
State News
KARNATAKA

BIG NEWS : ಮಾಜಿ ಸಚಿವ ಕೆ.ಎನ್ ರಾಜಣ್ಣ ಬಿಜೆಪಿಗೆ ಅರ್ಜಿ ಹಾಕಿದ್ದಾರೆ : ಶಾಸಕ HC ಬಾಲಕೃಷ್ಣ ಹೊಸ ಬಾಂಬ್!

By kannadanewsnow0502/09/2025 12:12 PM KARNATAKA 1 Min Read

ರಾಮನಗರ : ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೆ.ಎನ್ ರಾಜಣ್ಣ ಬಿಜೆಪಿಗೆ ಅರ್ಜಿ ಹಾಕಿದ್ದಾರೆ ಎಂದು…

BREAKING : ಕೊಲೆ ಆರೋಪಿ ಪವಿತ್ರಾಗೌಡಗೆ ಬಿಗ್ ಶಾಕ್ : ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್

02/09/2025 11:59 AM

BREAKING : ಭೋವಿ ನಿಗಮದಲ್ಲಿ ಭ್ರಷ್ಟಾಚಾರ ಆರೋಪ : ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಗೆ ಸಿಎಂ ಸಿದ್ದರಾಮಯ್ಯ ಸೂಚನೆ

02/09/2025 11:21 AM

BREAKING : ಬೆಂಗಳೂರಲ್ಲಿ ಮಣ್ಣು ಕುಸಿತ ದುರಂತ ಪ್ರಕರಣ : ಮತ್ತೊರ್ವ ಕಾರ್ಮಿಕ ಸಾವು ಮೃತರ ಸಂಖ್ಯೆ 2ಕ್ಕೆ ಏರಿಕೆ

02/09/2025 11:08 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.