ಬೆಂಗಳೂರು: ರಾಜ್ಯ ಸರ್ಕಾರದಿಂದ ಅಸುರಕ್ಷಿತ ಕಾಂತಿವರ್ಧಕ ಹಾಗೂ ಔಷಧಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಕಾಂತಿವರ್ಧಕಗಳನ್ನು ಬಳಸುವಂತವರಿಗೆ ಬಳಸದಂತೆ ಎಚ್ಚರಿಸಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ರಾಜ್ಯದಲ್ಲಿ ಅಸುರಕ್ಷಿತ ಕಾಂತಿವರ್ಧಕ ಹಾಗೂ ಔಷಧಿಗಳ ಪತ್ತೆಗಾಗಿ ಮೇ ತಿಂಗಳಿನಲ್ಲಿ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಈ ಸ್ಯಾಂಪಲ್ ಗಳಲ್ಲಿ 15 ವಸ್ತುಗಳು ಅಸುರಕ್ಷಿತ ಎಂಬುದಾಗಿ ವರದಿಯಿಂದ ದೃಢಪಟ್ಟಿದೆ ಎಂದಿದೆ.
ರಾಜ್ಯ ಸೇರಿ ಹೊರ ರಾಜ್ಯಗಳ ಕಾಂತಿ ವರ್ಧಕ ಹಾಗೂ ಔಷಧಿಗಳು ಪಟ್ಟಿಯಲ್ಲಿದ್ದು. ಆರೋಗ್ಯ ಇಲಾಖೆಯ ಪಟ್ಟಿಯ ಕಾಂತಿವರ್ಧಕ ಹಾಗೂ ಔಷಧಿಗಳನ್ನು ಬಳಸದಂತೆ, ಸಂಗ್ರಹಿಸದಂತೆ, ಮಾರಾಟ ಮಾಡದಂತೆ, ದಾಸ್ತಾನು ಮಾಡದಂತೆ ಖಡಕ್ ಎಚ್ಚರಿಕೆ ನೀಡಿದೆ.
ಅಂದಹಾಗೇ ಮೈಸೂರು ಕಂಪನಿಯ ಓ ಶಾಂತಿ ಗೋಲ್ಡ್ ಕುಂಕುಮ್ ಸಹ ಅಸುರಕ್ಷಿತವಾಗಿದೆ. ಕಂಪೌಂಡ್ ಸೋಡಿಯಂ ಲ್ಯಾಕ್ಟೆಟ್ ಇಜ್ ಜೆಕ್ಷನ್ ಐಪಿ ಕೂಡ ಅಸುರಕ್ಷಿತವಾದಂತ ಔಷಧಿಯಾಗಿದೆ. ಇದಲ್ಲದೇ ಐರನ್ ಸುಕ್ರೋಸ್ ಇನ್ ಜೆಕ್ಷನ್ ಯುಎಸ್ ಪಿ 100ಎಂಜಿ ಎನ್ನುವಂತದ್ದು ಬಳಕೆ ಮಾಡದಂತೆ ಸೂಚಿಸಿದೆ.