ಬೆಂಗಳೂರು : ವಸತಿ ಯೋಜನೆಯ ಅಡಿಯಲ್ಲಿ ಮನೆಗಳ ಹಂಚಿಕೆಯಲ್ಲಿ ಲಂಚ ಪಡೆದಿರುವ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ರಾಜ್ಯ ಕಾಂಗ್ರೆಸ್ ಪಕ್ಷದಲ್ಲೇ ಹಲವು ಶಾಸಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ಇದರ ಬೆನ್ನಲ್ಲೆ ಇದೀಗ ರಾಜು ಕಾಗೆ ಆಡಳಿತ ವ್ಯವಸ್ಥೆಯಿಂದ ನನಗೆ ನೋವಾಗಿದ್ದು, ಎರಡು ದಿನದಲ್ಲೇ ರಾಜೀನಾಮೆ ಕೊಟ್ಟರು ಕೊಡಬಹುದು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಇದೀಗ ಮತ್ತೊರ್ವ ಶಾಸಕ ಬೇಳೂರು ಗೋಪಾಲಕೃಷ್ಣ ಸಚಿವ ಜಮೀರ್ ಅಹ್ಮದ್ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಒಳ್ಳೆಯದು ಎಂದು ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಮೀರ್ ರಾಜಿನಾಮೆ ಕೊಡೋದು ಒಳ್ಳೆಯದು. ಹಗರಣ ಆಗಿಲ್ಲ ಅಂದರೆ ಮತ್ತೆ ಸ್ಥಾನ ಪಡೆಯಲಿ ಈ ಹಿಂದೆ ಬೇರೆ ಬೇರೆ ಹಗರಣದಲ್ಲಿ ರಾಜೀನಾಮೆ ಕೊಟ್ಟಿದ್ದಾರೆ ತನಿಖೆ ಆದಮೇಲೆ ಮತ್ತೆ ಸ್ಥಾನ ಪಡೆದರೆ ಒಳ್ಳೆಯದು.ಈ ಕುರಿತು ತನಿಖೆ ಮಾಡಿ ಆರೋಪ ಬಂದಿರುವ ಸಚಿವ ಜಮೀರ್ ಅಹ್ಮದ್ ಖಾನ್ ರಾಜೀನಾಮೆ ಕೊಡೋದು ಒಳ್ಳೆಯದು ತನಿಖೆ ಎದುರಿಸಿದ ಬಳಿಕ ಮತ್ತೆ ಹೊರಗಡೆ ಬಂದು ಮತ್ತೆ ಸಚಿವ ಸ್ಥಾನ ಪಡೆದುಕೊಳ್ಳಲಿ ಎಂದು ತಿಳಿಸಿದರು.