ಬೆಂಗಳೂರು : ಸಚಿವ ಪ್ರಿಯಾಂಕ್ ಖರ್ಗೆ ಅವರ ಅಮೆರಿಕ ಪ್ರವಾಸಕ್ಕೆ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಪ್ರವಾಸದ ನಿರ್ಬಂಧ ತೆರವು ಮಾಡಿ ಕೇಂದ್ರ ಸರ್ಕಾರ ಮರು ಅದೇಶ ಹೊರಡಿಸಿದೆ. ಈ ವಿಚಾರವಾಗಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಈ ಮೊದಲು ನನ್ನನ್ನು ಅಮೆರಿಕಕ್ಕೆ ಹೋಗದಂತೆ ತಡೆದುದ್ದಕ್ಕೆ ಕಾರಣ ಕೊಡಬೇಕು ಇಲ್ಲವಾದರೆ ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟ್ರೈನ್ ಹೋದ ಮೇಲೆ ತಾತ್ಕಾಲಿಕ ಟಿಕೆಟ್ ಇಶ್ಯೂ ಮಾಡಿದ್ದಾರೆ. ಅನುಮತಿ ಕೊಟ್ಟಂತೆ ಆಗಬೇಕು ತಡೆದಂತೆಯೂ ಆಗಬೇಕು. ಇದು ಕರ್ನಾಟಕಕ್ಕೆ ಮಾಡಿರುವ ಅವಮಾನ. ಕರ್ನಾಟಕ ರಾಜ್ಯಕ್ಕೆ ಬಂಡವಾಳ ಹೂಡಿಕೆ ಆಕರ್ಷಿಸಲು ಹೋಗುತ್ತಿದ್ದೆ. ರಾಜಕ್ಕೆ ಬಂಡವಾಳ ತರುವುದನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ.
ನನ್ನನ್ನು ಮೊದಲು ತಡೆದಿದ್ದು ಯಾಕೆ ಅದಕ್ಕೆ ಕಾರಣ ಕೊಡಲಿ. ಈಗಾಗಲೇ ಕಾರಣ ಕೇಳಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಅಮೆರಿಕಕ್ಕೆ ಹೋಗದಂತೆ ತಡೆದಿದ್ದರ ಬಗ್ಗೆ ಸ್ಪಷ್ಟವಾದ ಕಾರಣ ಬೇಕು. ಸರಿಯಾದ ಕಾರಣ ಕೊಡದಿದ್ದರೆ ಕಾನೂನು ಹೋರಾಟ ಮಾಡುತ್ತೇನೆ ಎಂದು ಬೆಂಗಳೂರಿನಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ ರಿಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.