ಮಂಡ್ಯ: ಆ ಬೈಕ್ ಅನ್ನು ಕದ್ದಿದ್ದಂತ ಕಳ್ಳನೊಬ್ಬ, ಅದರಲ್ಲೇ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದನು. ಆದರೇ ಮಾರ್ಗಮಧ್ಯದಲ್ಲಿ ಬೈಕ್ ಅಪಘಾತಗೊಂಡ ಕಾರಣ, ಕಳ್ಳ ಸಿಕ್ಕಿಬಿದ್ದಿದ್ದಾನೆ.
ಮಂಡ್ಯದ ಸತೀಶ್ ಬಾಬು ಎಂಬುವರ ಸ್ಕೂಟಿಯನ್ನು ಕದ್ದಂತ ಮಂಜುನಾಥ್ ಎಂಬಾತ, ಅದೇ ಬೈಕಿನಲ್ಲಿ ಬೆಂಗಳೂರಿಗೆ ಹೊರಟಿದ್ದಾನೆ. ಮಂಡ್ಯ ಗಡಿದಾಟುವ ಮುನ್ನವೇ ಗೆಜ್ಜಲಗೆರೆ ಬಳಿಯಲ್ಲಿ ಅಪಘಾತವಾಗಿದೆ.
ಬೈಕ್ ಅಪಘಾತದಲ್ಲಿ ಗಾಯಗೊಂಡಂತ ಮಂಜುನಾಥ್ ನನ್ನು ಪೊಲೀಸರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ಬಳಿಕ ಅಪಘಾತದ ಬಗ್ಗೆ ಮಾಹಿತಿ ಪಡೆಯುವ ವೇಳೆಯಲ್ಲಿ ಮಂಜುನಾಥ್ ತಾನು ಚಲಾಯಿಸಿಕೊಂಡು ಹೋಗುತ್ತಿದ್ದದ್ದು ಕದ್ದ ಬೈಕ್ ಎಂಬ ವಿಚಾರ ಬಾಯಿ ಬಿಟ್ಟಿದ್ದಾನೆ.
ಈ ಕುರಿತಂತೆ ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಮಂಡ್ಯದ ಕೆ ಆರ್ ಪೇಟೇ ತಾಲೂಕಿನ ಚೌಡೇನಹಳ್ಳಿಯ ಮಂಜುನಾಥ್ ವಿರುದ್ಧ ಬೈಕ್ ಕಳ್ಳತನ ಪ್ರಕರಣ ಕೂಡ ದಾಖಲಾಗಿದೆ.
ಪುಣೆ ಸೇತುವೆ ಕುಸಿತ ದುರಂತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಮಹಾರಾಷ್ಟ್ರ ಸರ್ಕಾರ
ಇದು ರಾಜ್ಯದಲ್ಲಿ ಶಿಕ್ಷಣಕ್ಕಾಗಿ ಶಾಲಾ ಮಕ್ಕಳು ಕೆಸರಲ್ಲಿ ನಡೆಯುವ ಮನಕಲಕುವ ಕಥೆ!