ಮಂಡ್ಯ: ಹೋರಾಟಗಾರರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದಂತ ಕಾಂಗ್ರೆಸ್ ಶಾಸಕ ಕದಲೂರು ಉದಯ್ ಯೂಟರ್ನ್ ಹೊಡೆದಿದ್ದಾರೆ. ನಾನು ಒಬ್ಬ ವ್ಯಕ್ತಿಗೆ ಬಗ್ಗೆ ಮಾತ್ರವೇ ಹೇಳಿಕೆ ನೀಡಿದ್ದೇನೆ. ಅದರ ಹೊರತಾಗಿ ಯಾವ ಸಂಘಟನೆ, ರೈತರ ವಿರುದ್ಧ ಮಾತನಾಡಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಇಂದು ಮಂಡ್ಯ ಜಿಲ್ಲೆಯ ಮದ್ಧೂರಿನಲ್ಲಿ ಸುದ್ದಿಗಾರರೊಂದಿಗೆ ಹೋರಾಟಗಾರರ ವಿರುದ್ದ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾತನಾಡಿದಂತ ಅವರು, ಯಾವ ಸಂಘಟನೆ, ರೈತರ ವಿರುದ್ಧ ನಾನು ಮಾತನಾಡಿಲ್ಲ. ಒಬ್ಬ ವ್ಯಕ್ತಿಗೆ ಸೀಮಿತವಾಗಿ ಮಾತ್ರ ನನ್ನ ಹೇಳಿಕೆ ಸೀಮಿತವಾಗಿದೆ ಎಂಬುದಾಗಿ ಸ್ಪಷ್ಟ ಪಡಿಸಿದರು.
ನನ್ನ ಹೇಳಿಕೆ ಬಗ್ಗೆ ತಪ್ಪು ಗ್ರಹಿಕೆ ಆಗಿದೆ. ಕೆಲವರು ಅದಕ್ಕೆ ಉಪ್ಪು,ಕಾರ ಹಾಕ್ತಿದ್ದಾರೆ. ಒಬ್ಬ ಪ್ರತ್ಯೇಕ ವ್ಯಕ್ತಿಗೆ ಸೀಮಿವಾಗಿ ಹೇಳಿರುವ ಹೇಳಿಕೆಯಾಗಿದೆ. ಯಾವುದೇ ಸಂಘಟನೆ, ರೈತರು, ಸಾರ್ವಜನಿಕರ ವಿರುದ್ದ ಹೇಳಿಕೆ ಕೊಟ್ಟಿಲ್ಲ. ನಾವು ಜನರ ಪರ ಕೆಲಸ ಮಾಡೋದಕ್ಕೆ ಬಂದಿರೋದು. ಇದರ ಮಧ್ಯೆ ಕೆಲವು ಕಳ್ಳರು, ಕಾಕರು ಇರ್ತಾರೆ. ನಾನು ಸುಳ್ಳು ಮಾತನಾಡಲ್ಲ. ನಾವು ಒಬ್ಬ ವ್ಯಕ್ತಿಗೆ ಮಾತನಾಡಿರೋ ಹೇಳಿದ್ದೇನೆ. ಆ ಹೇಳಿಕೆಗೆ ನಾನು ಬದ್ದನಿದ್ದೇನೆ. ನಾನು ಗೆಜ್ಜಲಗೆರೆಯವರ ವಿಚಾರವಾಗಿ ಮಾತನಾಡಿಲ್ಲ. ಹೋರಾಟ ಮಾಡುವುದು ಅವರವರ ಹಕ್ಕು ನಾವು ಪ್ರಶ್ನೆ ಮಾಡಲ್ಲ ಎಂದರು.
ನಗರಸಭೆ ವ್ಯಾಪ್ತಿಗೆ ಸೇರಿಸುವ ಬಗ್ಗೆ ಸಭೆ ಮಾಡೋಣ ಅಂತ ಹೇಳಿದ್ದೇನೆ. ಹೋರಾಟಗಾರರನ್ನ ಕೇಳಿದ್ರೆ ಮಾಧ್ಯಮದವರು ಮಿಸ್ಗೈಡ್ ಮಾಡಿದ್ದಾರೆ ಅಂತ ಹೇಳ್ತಾರೆ. ನಾವು ಗೆಜ್ಜಲಗೆರೆ ವಿಚಾರ ಮಾತನಾಡಿಲ್ಲ. ಮಾಧ್ಯಮದವರು ತಪ್ಪು ಮಾಹಿತಿ ಕೊಡ್ತಾರೆ ಗೊತ್ತಿಲ್ಲ. ನೂರಾರು ಕೆಲಸ ಮಾಡ್ತಿದ್ದೇನೆ ಮಾದ್ಯಮದಲ್ಲಿ ಸುದ್ದಿ ಬಂದಿಲ್ಲ. ಈ ವಿಚಾರ ತೆಗೆದುಕೊಂಡು ಯಾವನೋ ರೈತರ ವಿರುದ್ದ ಮಾತನಾಡಿದ್ದಾರೆ ಅಂತಾರೆ. ನಾನು ರೈತರ ವಿರುದ್ದ ಮಾತನಾಡಿದ್ದಿನಾ? ನಾನು ಯಾವ ಸಂಘಟನೆ ವಿರುದ್ದವಾಗಿ ಮಾತನಾಡಿಲ್ಲ. ಬಡವರ ಪರ ಕೆಲಸ ಮಾಡಲು ಇದ್ದೇನೆ. ಮಾಧ್ಯಮದಲ್ಲಿ ನನ್ನ ಬಿಂಬಿಸಿದ್ದಾರೆ ಅಷ್ಟೆ. ಗೆಜ್ಜಲಗೆರೆ ಸಭೆಯಲ್ಲಿ ನನ್ನ ವಿಷಯ ಚರ್ಚೆ ಮಾಡಿಲ್ಲ. ಊಹಾಪೋಹಗಳು ಸೃಷ್ಟಿಸಲಾಗಿದೆ. ಸೇವೆ ಮಾಡಲು ಉದ್ದೇಶ ಇಟ್ಟುಕೊಂಡು ಬಂದಿದ್ದೇವೆ ಎಂದು ಹೇಳಿದ್ದಾರೆ.
ವರದಿ: ಗಿರೀಶ್ ರಾಜ್, ಮಂಡ್ಯ