Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನೇಪಾಳದ Gen Z ಆಯ್ಕೆ ಮಾಡಿದ ಹಂಗಾಮಿ ಪ್ರಧಾನಿ ಸುಶೀಲಾ ಕರ್ಕಿ: ಭಾರತದೊಂದಿಗೆ ಇವರ ಸಂಬಂಧವೇನು?

11/09/2025 10:39 AM

‘ರಾಜ್ಯಪಾಲರು ಬಿಲ್‌ಗಳನ್ನು ತಡೆಹಿಡಿದರೆ, ಅದು ಸುಳ್ಳು ಎಚ್ಚರಿಕೆ ಹೇಗಾಗುತ್ತದೆ?’ : ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

11/09/2025 10:26 AM

BREAKING: ಬಿಹಾರದ ನಂತರ ಭಾರತದಾದ್ಯಂತ ಏಕಕಾಲದಲ್ಲಿ ‘ಮತದಾರರ ಪಟ್ಟಿ ಪರಿಷ್ಕರಣೆ’

11/09/2025 10:18 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING: ರಾಜ್ಯದಲ್ಲಿ ತಿಂಗಳಿಗೆ 40 ಸಾವಿರ ಜನರಿಗೆ `ನಾಯಿ ಕಡಿತ’ : ಆರೋಗ್ಯ ಇಲಾಖೆಯಿಂದ ಸ್ಪೋಟಕ ಮಾಹಿತಿ
KARNATAKA

SHOCKING: ರಾಜ್ಯದಲ್ಲಿ ತಿಂಗಳಿಗೆ 40 ಸಾವಿರ ಜನರಿಗೆ `ನಾಯಿ ಕಡಿತ’ : ಆರೋಗ್ಯ ಇಲಾಖೆಯಿಂದ ಸ್ಪೋಟಕ ಮಾಹಿತಿ

By kannadanewsnow5730/05/2025 9:46 AM

ಬೆಂಗಳೂರು : ರಾಜ್ಯದಲ್ಲಿ ಪ್ರತಿ ತಿಂಗಳು ಸುಮಾರು 40,000 ನಾಯಿ ಕಡಿತ ಪ್ರಕರಣಗಳು ವರದಿಯಾಗುತ್ತಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಮುಂದಿನ 3 ತಿಂಗಳವರೆಗೆ ಆಂಟಿ ರೇಬಿಸ್ ಲಸಿಕೆ ಮತ್ತು ರೇಬೀಸ್ ಇಮ್ಯುನೊಗ್ಲೋಬ್ಯುಲಿನ್ ಔಷಧಿಯ ಕೊರತೆಯಿಲ್ಲ ಎಂಬುದಾಗಿ ಸರ್ಕಾರ ಸ್ಪಷ್ಟ ಪಡಿಸಿದೆ.

ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯಿಂದ ಮಾಧ್ಯಮ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದಲ್ಲಿ ‘ರೇಬೀಸ್’ ಅನ್ನು ‘ಅಧಿಸೂಚಿತ ರೋಗ'(‘notifiable disease) ಎಂದು ಗುರುತಿಸಲಾಗಿದೆ. ರಾಜ್ಯದಲ್ಲಿ ಪ್ರತಿ ತಿಂಗಳು ಐಎಚ್‌ಐಪಿ (ಇಂಟಿಗ್ರೇಟೆಡ್ ಹೆಲ್ತ್‌ ಇನ್ಸಾರ್ಮೇಶನ್ ಪ್ಲಾಟಾರ್ಮ್) ನಲ್ಲಿ ಸುಮಾರು 40,000 ನಾಯಿ ಕಡಿತದ ಪ್ರಕರಣಗಳು ವರದಿಯಾಗುತ್ತದೆ, ಈ ಎಲ್ಲಾ ಪುಕರಣಗಳಿಗೆ ಮಾರ್ಗಸೂಚಿಗಳ ಪ್ರಕಾರ ಜೀವ ಉಳಿಸುವ ಆಂಟಿ ರೇಬಿಸ್ ಲಸಿಕೆ ಮತ್ತು ರೇಬೀಸ್ ಇಮ್ಯುನೊಗ್ಲೋಬ್ಯುಲಿನ್ ಒದಗಿಸುವುದು ಕಷ್ಟಸಾದ್ಯವಾಗಿರುತ್ತದೆ ಎಂದಿದೆ.

ರಾಜ್ಯದ ಎಲ್ಲಾ ಆರೋಗ್ಯ ಸಂಸ್ಥೆಗಳಿಗೆ ಎಲ್ಲಾ ಔಷಧಿಗಳು ಮತ್ತು ಬಳಕೆಯ ವಸ್ತುಗಳನ್ನು ಒದಗಿಸಲು ಕೆಎಸ್‌ಎಂಎಸ್‌ಎಲ್ ನೋಡಲ್ ಏಜೆನ್ಸಿಯಾಗಿದೆ. ಎಆರ್‌ವಿ ಮತ್ತು ರೇಬೀಸ್ ಇಮ್ಯುನೊಗ್ಲೋಬುಲಿನ್ ರಾಜ್ಯದಲ್ಲಿ (“Essential Drug List ) ನ ಪಟ್ಟಿಯಲ್ಲಿ ಇರುತ್ತವೆ ಎಂದು ಹೇಳಿದೆ.

ರಾಜ್ಯದ “ಔಷಧ’ ತಂತ್ರಾಂಶದ ಮಾಹಿತಿಯ ಪ್ರಕಾರ, ಪ್ರಸ್ತುತ ರಾಜ್ಯದಾದ್ಯಂತ ಆಸ್ಪತ್ರೆಗಳಲ್ಲಿ 1,45,684 vials ಎಆರ್‌ವಿ ಲಭ್ಯವಿದೆ (ವರದಿಗಳನ್ನು ಲಗತ್ತಿಸಲಾಗಿದೆ) ಮತ್ತು ಕೆಎಸ್‌ಎಂಎಸ್‌ಸಿಎಲ್ ಸಂಸ್ಥೆಯು ಮುಂದಿನ ಎರಡು ವಾರಗಳಲ್ಲಿ 89,389 vials ರೇಬೀಸ್ ಇಮ್ಯುನೊಗ್ಲೋಬ್ಯುಲಿನ್ ಪೂರೈಕೆಗಾಗಿ ಅಧಿಕೃತ ಆದೇಶವನ್ನು ಹೊರಡಿಸಿದೆ. ಆದ್ದರಿಂದ ಈ ಎರಡೂ ಔಷಧಿಗಳ ಪೂರೈಕೆಗೆ ರಾಜ್ಯದ ಆಸ್ಪತ್ರೆಗಳಲ್ಲಿ ಮುಂದಿನ 3 ತಿಂಗಳವರೆಗೆ ಯಾವುದೇ ಕೊರತ ಇರುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ.

ಆಂಟಿ ರೇಬಿಸ್ ಲಸಿಕೆ ಮತ್ತು ಇಮ್ಯುನೊಗ್ಲೋಬುಲಿನ್ ನ ಗರಿಷ್ಠ ಬಳಕೆ ಮತ್ತು ನಿರಂತರ ಪೂರೈಕೆಗಳ ಬಗ್ಗೆ ರಾಜ್ಯದ ಕಾರ್ಯಕ್ರಮ ವಿಭಾಗವು ಈಗಾಗಲೇ ಎಲ್ಲಾ ಜಿಲ್ಲೆಗಳಿಗೆ ನಿಯಮಿತವಾಗಿ ಜ್ಞಾಪನ ಪತ್ರಗಳನ್ನು ಹೊರಡಿಸಿದೆ. ಈ ಜೀವ ರಕ್ಷಕ ಲಸಿಕೆಗಳ ಸೂಕ್ತ ಬಳಕೆಗಾಗಿ ಹಾಗೂ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲು ಆಸ್ಪತ್ರೆಗಳು ಸ್ಥಳೀಯವಾಗಿಯೇ ಖರೀದಿಸಬಹುದಾಗಿದೆ. (ಸುತ್ತೋಲೆ ಲಗತ್ತಿಸಲಾಗಿದೆ) ಕರ್ನಾಟಕ ರಾಜ್ಯದಲ್ಲಿ ರೇಬಿಸ್‌ ನಿರೋಧಕ ಲಸಿಕೆ ಅಥವಾ ರೇಬೀಸ್ ಇಮ್ಯುನೊಗೊಬ್ಯುಲಿನ್ ಕೊರತೆಯಿರುವುದಿಲ್ಲ. ಹಾಗೂ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.

ಆದ್ದರಿಂದ ರಾಜ್ಯದಲ್ಲಿ ಎಆರ್‌ವಿ ಹಾಗೂ ರೇಬಿಸ್ ಇಮ್ಯುನೊಗ್ಲೋಬುಲಿನ್ ನ್ನು ಕೊರತೆ ಇಲ್ಲದಂತೆ ಹಾಗೂ ರಾಜ್ಯದ ಆಸ್ಪತ್ರೆಗಳಿಗೆ ಇವುಗಳ ಸರಬರಾಜು ನಿರಂತರವಾಗಿ ಇರುವಂತೆ ಇಲಾಖೆಯು ಸೂಕ್ತ ಕ್ರಮ ವಹಿಸಿದೆ ಎಂದಿದೆ.

SHOCKING: 40000 people in the state suffer from 'dog bites' per month: Explosive information from the Health Department
Share. Facebook Twitter LinkedIn WhatsApp Email

Related Posts

ಜೈಲಲ್ಲಿ ಹಾಸಿಗೆ ದಿಂಬಿನಲ್ಲಿ ನಟ ದರ್ಶನ್ ‘ನೆಮ್ಮದಿ’ ನಿದ್ರೆ : ಮಾನಸಿಕವಾಗಿ ಕುಗ್ಗಿದ ದಾಸನಿಗೆ ವೈದ್ಯರಿಂದ ಕೌನ್ಸೆಲಿಂಗ್

11/09/2025 10:17 AM1 Min Read

BREAKING : ಶಿವಮೊಗ್ಗದಲ್ಲಿ ಓಮಿನಿ-ಬೈಕ್ ಮಧ್ಯ ಭೀಕರ ಅಪಘಾತ : ಹಸೆಮಣೆ ಏರಬೇಕಿದ್ದ ಜೋಡಿ, ಸ್ಥಳದಲ್ಲೇ ದುರ್ಮರಣ!

11/09/2025 10:08 AM1 Min Read

`ಯುವನಿಧಿ ಪ್ಲಸ್’ ಕಾರ್ಯಕ್ರಮದಡಿ ಕೌಶಲ್ಯ ತರಬೇತಿಗೆ ನೋಂದಣಿ ಕಡ್ಡಾಯ

11/09/2025 10:07 AM1 Min Read
Recent News

ನೇಪಾಳದ Gen Z ಆಯ್ಕೆ ಮಾಡಿದ ಹಂಗಾಮಿ ಪ್ರಧಾನಿ ಸುಶೀಲಾ ಕರ್ಕಿ: ಭಾರತದೊಂದಿಗೆ ಇವರ ಸಂಬಂಧವೇನು?

11/09/2025 10:39 AM

‘ರಾಜ್ಯಪಾಲರು ಬಿಲ್‌ಗಳನ್ನು ತಡೆಹಿಡಿದರೆ, ಅದು ಸುಳ್ಳು ಎಚ್ಚರಿಕೆ ಹೇಗಾಗುತ್ತದೆ?’ : ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

11/09/2025 10:26 AM

BREAKING: ಬಿಹಾರದ ನಂತರ ಭಾರತದಾದ್ಯಂತ ಏಕಕಾಲದಲ್ಲಿ ‘ಮತದಾರರ ಪಟ್ಟಿ ಪರಿಷ್ಕರಣೆ’

11/09/2025 10:18 AM

ಜೈಲಲ್ಲಿ ಹಾಸಿಗೆ ದಿಂಬಿನಲ್ಲಿ ನಟ ದರ್ಶನ್ ‘ನೆಮ್ಮದಿ’ ನಿದ್ರೆ : ಮಾನಸಿಕವಾಗಿ ಕುಗ್ಗಿದ ದಾಸನಿಗೆ ವೈದ್ಯರಿಂದ ಕೌನ್ಸೆಲಿಂಗ್

11/09/2025 10:17 AM
State News
KARNATAKA

ಜೈಲಲ್ಲಿ ಹಾಸಿಗೆ ದಿಂಬಿನಲ್ಲಿ ನಟ ದರ್ಶನ್ ‘ನೆಮ್ಮದಿ’ ನಿದ್ರೆ : ಮಾನಸಿಕವಾಗಿ ಕುಗ್ಗಿದ ದಾಸನಿಗೆ ವೈದ್ಯರಿಂದ ಕೌನ್ಸೆಲಿಂಗ್

By kannadanewsnow0511/09/2025 10:17 AM KARNATAKA 1 Min Read

ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತ್ತೀಚಿಗೆ ನ್ಯಾಯಾಲಯವು ನಟ ದರ್ಶನ್ ಅವರನ್ನು ಬಳ್ಳಾರಿ ಜಿಲ್ಲೆಗೆ…

BREAKING : ಶಿವಮೊಗ್ಗದಲ್ಲಿ ಓಮಿನಿ-ಬೈಕ್ ಮಧ್ಯ ಭೀಕರ ಅಪಘಾತ : ಹಸೆಮಣೆ ಏರಬೇಕಿದ್ದ ಜೋಡಿ, ಸ್ಥಳದಲ್ಲೇ ದುರ್ಮರಣ!

11/09/2025 10:08 AM

`ಯುವನಿಧಿ ಪ್ಲಸ್’ ಕಾರ್ಯಕ್ರಮದಡಿ ಕೌಶಲ್ಯ ತರಬೇತಿಗೆ ನೋಂದಣಿ ಕಡ್ಡಾಯ

11/09/2025 10:07 AM

BREAKING : ವರದಕ್ಷಿಣೆ ಕಿರುಕುಳ ಆರೋಪ : ನಿರ್ದೇಶಕ ಎಸ್.ನಾರಾಯಣ & ಕುಟುಂಬದ ವಿರುದ್ಧ ‘FIR’ ದಾಖಲು!

11/09/2025 10:02 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.