ಉತ್ತರಕನ್ನಡ : ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಕೇಂದ್ರ ಸರ್ಕಾರವು ಭಾರತದಲ್ಲಿರುವ ಪಾಕಿಸ್ತಾನ ಪ್ರಜೆಗಳಿಗೆ ದೇಶ ತೊರೆಯುವಂತೆ ಆದೇಶ ನೀಡಿದ್ದು, ಬಳಿಕ ಭಾರತದಲ್ಲಿನ ಪಾಕಿಸ್ತಾನ ಪ್ರಜೆಗಳು ದೇಶವನ್ನು ತೊರೆದಿದ್ದರು. ಇದೀಗ ಸರಕು ಸಾಗಾಟ ಮಾಡುವ ಹಡಗಿನಲ್ಲಿ ಪಾಕಿಸ್ತಾನದ ಪ್ರಜೆಯು ಒಬ್ಬ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಂದರಿಗೆ ಬಂದು ಇಳಿದಿದ್ದಾನೆ.
ಹೌದು ಕಾರವಾರಕ್ಕೆ ಹಡಗಿನಲ್ಲಿ ಪಾಕಿಸ್ತಾನ ಪ್ರಜೆ ಆಗಮಿಸಿದ್ದಾನೆ. ಪಾಕಿಸ್ತಾನ ಪ್ರಜೆಯ ಕಾಲಿಡಲು ಅಧಿಕಾರಿಗಳು ಬಿಟ್ಟಿಲ್ಲ. ಭಾರತದ ನೆಲಕ್ಕೆ ಕಾಲಿಡಲು ಅಧಿಕಾರಿಗಳು ಪಾಕಿಸ್ತಾನ ಪ್ರಜೆಗೆ ಬಿಡುತ್ತಿಲ್ಲ. ಹಡಗಿನ ಕ್ಯಾಪ್ಟನ್ ಮೂಲಕವೇ ಪಾಕಿಸ್ತಾನದ ಪ್ರಜೆಯ ಮೊಬೈಲ್ ಸೀಜ್ ಮಾಡಿದ್ದಾರೆ. ಸರಕು ಸಾಗಣೆ ಹಡಗಿನಲ್ಲಿ ಪಾಕಿಸ್ತಾನದ ಪ್ರಜೆ ಕಾರವಾರ ಬಂದರಿಗೆ ಆಗಮಿಸಿದ್ದಾನೆ. ಮೇ 12 ರಂದು ಇರಾಕ್ ನಿಂದ ಹಾಗು ಕಾರವಾರಕ್ಕೆ ಬಂದಿದೆ. ಬಿಟುಮಿನ್ ತುಂಬಿಕೊಂಡು ಸರಕಿನ ಹಡಗು ಕಾರವಾರ ಬಂದರಿಗೆ ಆಗಮಿಸಿತ್ತು.