Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಸುಗಮ ವ್ಯಾಪಾರ ಮತ್ತು ಜೀವನದಷ್ಟೇ ಸುಗಮ ನ್ಯಾಯವೂ ಅತ್ಯಗತ್ಯ’: ಪ್ರಧಾನಿ ನರೇಂದ್ರ ಮೋದಿ

09/11/2025 11:07 AM

BREAKING : ಮೈಸೂರಿನ ಪ್ರತಿಷ್ಠಿತ ಶಾಲೆಯಲ್ಲಿ ರ್‍ಯಾಗಿಂಗ್ : ಬಾಲಕನ ಮರ್ಮಾಂಗಕ್ಕೆ ಒದ್ದು ಮೂವರು ಬಾಲಕರಿಂದ ಹಲ್ಲೆ

09/11/2025 11:07 AM

SHOCKING : ರಾಜ್ಯದಲ್ಲಿ `ಹೃದಯಾಘಾತ’ಕ್ಕೆ ಮತ್ತೊಂದು ಬಲಿ : ಲಾರಿಯಲ್ಲೇ ಮೃತಪಟ್ಟ ಚಾಲಕ.!

09/11/2025 11:01 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದಲ್ಲಿ ಕೆರೆ ಪುನರುಜ್ಜಿವನ ಶುಲ್ಕ ವಿನಿಯೋಗಿಸುವ ಬಗ್ಗೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ.!
KARNATAKA

BIG NEWS : ರಾಜ್ಯದಲ್ಲಿ ಕೆರೆ ಪುನರುಜ್ಜಿವನ ಶುಲ್ಕ ವಿನಿಯೋಗಿಸುವ ಬಗ್ಗೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ.!

By kannadanewsnow5724/04/2025 6:30 AM

ಬೆಂಗಳೂರು : ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳು / ಯೋಜನಾ ಪ್ರಾಧಿಕಾರಗಳು/ ಪುರಸಭಾ ಯೋಜನಾ ಪ್ರಾಧಿಕಾರಗಳು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ ಕಲಂ 18 (1-A) ರಡಿಯಲ್ಲಿ ಪಾವತಿಸಿಕೊಳ್ಳುವ ಕೆರೆ ಪುನರುಜ್ಜಿವನ ಶುಲ್ಕವನ್ನು ವಿನಿಯೋಗಿಸುವ ಬಗ್ಗೆ ಮಾರ್ಗಸೂಚಿ ಹೊರಡಿಸಿದೆ.

ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳು/ ಯೋಜನಾ ಪ್ರಾಧಿಕಾರಗಳು/ ಪುರಸಭಾ ಯೋಜನಾ ಪ್ರಾಧಿಕಾರಗಳಲ್ಲಿ ಸಂಗ್ರಹಿಸಲಾಗುತ್ತಿರುವ ಕೆರೆ ಪುನರುಜೀವನ ಶುಲ್ಕವನ್ನು ವಿನಿಯೋಗಿಸಲು ಉಲ್ಲೇಖಿತ ಸುತ್ತೋಲೆಯಲ್ಲಿ ಮಾರ್ಗ ಸೂಚಿಗಳನ್ನು ಹೊರಡಿಸಲಾಗಿರುತ್ತದೆ.

ಸದರಿ ಸುತ್ತೋಲೆ ಅನುಸಾರ ಕೆರೆ ಪುನರುಜೀವನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸುತ್ತೋಲೆಯಲ್ಲಿನ ಮಾರ್ಗಸೂಚಿಗಳು ಸುಧೀರ್ಘ ಪ್ರಕ್ರಿಯೆಗಳನ್ನು ಒಳಗೊಂಡಿರುವುದರಿಂದ ವಿಳಂಬಕ್ಕೆ ಕಾರಣವಾಗುತ್ತಿರುವುದಾಗಿ ವಿವಿಧ ಪ್ರಾಧಿಕಾರಗಳಿಂದ ವರದಿಗಳನ್ನು ಸ್ವೀಕರಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಉಲ್ಲೇಖಿತ ಸುತ್ತೋಲೆಯಲ್ಲಿನ ವಿಳಂಬಕ್ಕೆ ಕಾರಣವಾಗುವ ಅಂಶಗಳನ್ನು ಸರಳೀಕರಣಗೊಳಿಸಿ ಮಾರ್ಪಡಿತ ಮಾರ್ಗಸೂಚಿಗಳನ್ನು ಹೊರಡಿಸುವುದು ಅವಶ್ಯಕವಾಗಿರುತ್ತದೆ.

ಮಾರ್ಪಡಿತ ಮಾರ್ಗಸೂಚಿಗಳನ್ವಯ ಕೆರೆ ಪುನರುಜ್ಜಿವನ ಕಾಮಗಾರಿಗಳನ್ನು ನಗರಾಭಿವೃದ್ಧಿ ಪ್ರಾಧಿಕಾರಗಳು/ ಯೋಜನಾ ಪ್ರಾಧಿಕಾರಗಳು/ ಪುರಸಭಾ ಯೋಜನಾ ಪ್ರಾಧಿಕಾರಗಳಿಂದ ತ್ವರಿತವಾಗಿ ಹಾಗೂ ಸುಗಮವಾಗಿ ಕೈಗೆತ್ತಿಕೊಳ್ಳಲು ಅನುಕೂಲವಾಗುವಂತೆ ಹಾಗೂ ಕರಅಭಿವೃದ್ಧಿಗೆ ಸಂಬಂಧಪಟ್ಟಂತೆ ವಿವಿಧ ಇಲಾಖೆಗಳು/ಮಂಡಳಿಗಳು ನೀಡಬೇಕಾಗಿರುವ ನಿರಾಕ್ಷೇಪಣಾ ಪತ್ರಗಳನ್ನು ನಿಗಧಿತ ಕಾಲಮಿತಿಯಲ್ಲಿ ಒಂದೇ ಸೂರಿನಡಿ ಒದಗಿಸಿಕೊಡುವ ಉದ್ದೇಶದಿಂದ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈ ಕೆಳಕಂಡಂತೆ ಏಕ ಗವಾಕ್ಷಿ ಸಮಿತಿಯನ್ನು ರಚಿಸಲಾಗಿದೆ:

ಮೇಲ್ಕಂಡ ಏಕಗವಾಕ್ಷಿ ಸಮಿತಿಯ ಕರ್ತವ್ಯ ಹಾಗೂ ಜವಾಬ್ದಾರಿಗಳು ಈ ಕೆಳಕಂಡಂತಿರುತ್ತವೆ:

1. ನಗರಾಭಿವೃದ್ಧಿ ಪ್ರಾಧಿಕಾರಗಳು/ ಯೋಜನಾ ಪ್ರಾಧಿಕಾರಗಳು/ ಪುರಸಭಾ ಯೋಜನಾ ಪ್ರಾಧಿಕಾರಗಳ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಮಾತ್ರ ಆಯ್ಕೆ ಮಾಡತಕ್ಕದ್ದು.

2. ಕರೆಗಳನ್ನು ಆಯ್ಕೆ ಮಾಡುವಾಗ ಕುಡಿಯುವ ನೀರಿಗೆ ಬಳಸುವ ಉದ್ದೇಶಕ್ಕೆ ಆದ್ಯತೆ ನೀಡತಕ್ಕದ್ದು.

3. ಕೆರೆಯ ಮಾಲೀಕತ್ವ ಹೊಂದಿರುವ ಇಲಾಖೆ /ಮಂಡಳಿ /ಸ್ಥಳೀಯ ಸಂಸ್ಥೆಗಳು ಕಂದಾಯ ದಾಖಲೆಗಳನ್ನಯ ಕೆರೆಯ ವಿಸ್ತೀರ್ಣಕ್ಕೆ ಅನುಗುಣವಾಗಿ ಗಡಿಗಳನ್ನು ಗುರುತಿಸಿ, ಯಾವುದೇ ಒತ್ತುವರಿ ಆಗಿದ್ದಲ್ಲಿ, ತೆರವುಗೊಳಿಸಿ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಅಭಿವೃದ್ಧಿಗಾಗಿ ಹಸ್ತಾಂತರಿಸಲು ಕ್ರಮವಹಿಸತಕ್ಕದ್ದು.

4. ಕಲ್ಮಶ/ತ್ಯಾಜ್ಯದಿಂದ ಕಲುಷಿತಗೊಂಡ ಕೆರೆಗಳಿದ್ದಲ್ಲಿ ಸದರಿ ಕೆರೆಯ ಲಭ್ಯ ನೀರಿನ ಗರಿಷ್ಠ ಬಳಕೆಗೆ ಅನುಗುಣವಾಗಿ ಆದ್ಯತೆ ನೀಡುವುದು.

5. ಆಯ್ಕೆ ಮಾಡಿದ ಕೆರೆಗೆ ಸಂಬಂಧಿಸಿದಂತೆ ವಿವಿಧ ಕಾಮಗಾರಿಗಳಾದ ತಡ ಬೇಲಿ ನಿರ್ಮಾಣ, ಕೆರೆ ಹೂಳು ತೆಗೆಯುವುದು ಮತ್ತು ಕೆರೆಯ ನೀರಿನ ಸಂಗ್ರಹಣೆ ಹೆಚ್ಚಿಸುವ ನಿಟ್ಟಿನಲ್ಲಿ ಅಂತರ್‌ ಜಲವನ್ನು ಮರು ಪೂರ್ಣಗೊಳಿಸುವುದು, ಕೆರೆ ಒತ್ತುವರಿ ತಡೆಯಲು ಅಗತ್ಯ ಗಿಡ ಮರಗಳನ್ನು ಕೆರೆಯ ಎಲ್ಲೆಯಲ್ಲಿ ಬೆಳಸುವುದು, ಕೆರೆ ನೀರಿನ ಶುದ್ದೀಕರಣ, ನೀರಿನ ಗುಣ ಮಟ್ಟವನ್ನು ಸುಧಾರಿಸುವುದು, ಕೊಳಚೆ ನೀರು ಕೆರೆಗೆ ಸೇರದಂತೆ ತಡೆಯುವ ಕಾಮಗಾರಿ, ವಾಯು ವಿಹಾರಕ್ಕೆ ಅಗತ್ಯವಿರುವ ಪಾದಚಾರಿ ಮಾರ್ಗ, ಪ್ರವಾಸೋದ್ಯಮ ಉತ್ತೇಜಿಸುವ ಕಾಮಗಾರಿಗಳು ಹಾಗೂ ಇನ್ನಿತರೆ ಕಾಮಗಾರಿಗಳನ್ನು ಕೈಗೊಳ್ಳಲು ಪ್ರಾಧಿಕಾರಗಳಿಗೆ ಮಾರ್ಗದರ್ಶನ ನೀಡತಕ್ಕದ್ದು.

6. ಸಮಿತಿಯು ಪ್ರಾಧಿಕಾರಗಳಿಗೆ ವಿಸ್ತ್ರತ ಯೋಜನಾ ವರದಿ (DPR) ತಯಾರಿಸಲು ಅಗತ್ಯ ಸಲಹೆ/ಸೂಚನೆಗಳನ್ನು ನೀಡುವುದು.

ಏಕಗವಾಕ್ಷಿ ಸಮಿತಿಯು ಆಯ್ಕೆ ಮಾಡುವ ಕೆರೆ ಹಾಗೂ ನೀಡಿರುವ ಸಲಹೆ/ಸೂಚನೆಗಳನ್ನು ಪರಿಗಣಿಸಿ, ಕೆರೆಯ ಪುನರುಜ್ಜಿವನ ಹಾಗೂ ಸಂರಕ್ಷಣೆಗಾಗಿ ವಿಸ್ತ್ರತ ಯೋಜನಾ ವರದಿ(DPR) ಯನ್ನು ಸಂಬಂಧಿಸಿದ ನಗರಾಭಿವೃದ್ಧಿ ಪ್ರಾಧಿಕಾರಗಳು, ಯೋಜನಾ ಪ್ರಾಧಿಕಾರಗಳು ಹಾಗೂ ಪುರಸಭೆ ಯೋಜನಾ ಪ್ರಾಧಿಕಾರಗಳು ಸಿದ್ಧಪಡಿಸಿ, ಅಗತ್ಯ ದಾಖಲಾತಿಗಳೊಡನೆ ಸರ್ಕಾರದ ಪೂರ್ವಾನುಮತಿಗಾಗಿ ಸಲ್ಲಿಸತಕ್ಕದ್ದು.

BIG NEWS: Government issues guidelines on spending lake restoration fees in the state!
Share. Facebook Twitter LinkedIn WhatsApp Email

Related Posts

BREAKING : ಮೈಸೂರಿನ ಪ್ರತಿಷ್ಠಿತ ಶಾಲೆಯಲ್ಲಿ ರ್‍ಯಾಗಿಂಗ್ : ಬಾಲಕನ ಮರ್ಮಾಂಗಕ್ಕೆ ಒದ್ದು ಮೂವರು ಬಾಲಕರಿಂದ ಹಲ್ಲೆ

09/11/2025 11:07 AM1 Min Read

SHOCKING : ರಾಜ್ಯದಲ್ಲಿ `ಹೃದಯಾಘಾತ’ಕ್ಕೆ ಮತ್ತೊಂದು ಬಲಿ : ಲಾರಿಯಲ್ಲೇ ಮೃತಪಟ್ಟ ಚಾಲಕ.!

09/11/2025 11:01 AM1 Min Read

BREAKING : ಹಾರೋಬೆಲೆ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ಎರಡು ಕಾಡಾನೆಗಳು ಸಾವು!

09/11/2025 10:57 AM1 Min Read
Recent News

‘ಸುಗಮ ವ್ಯಾಪಾರ ಮತ್ತು ಜೀವನದಷ್ಟೇ ಸುಗಮ ನ್ಯಾಯವೂ ಅತ್ಯಗತ್ಯ’: ಪ್ರಧಾನಿ ನರೇಂದ್ರ ಮೋದಿ

09/11/2025 11:07 AM

BREAKING : ಮೈಸೂರಿನ ಪ್ರತಿಷ್ಠಿತ ಶಾಲೆಯಲ್ಲಿ ರ್‍ಯಾಗಿಂಗ್ : ಬಾಲಕನ ಮರ್ಮಾಂಗಕ್ಕೆ ಒದ್ದು ಮೂವರು ಬಾಲಕರಿಂದ ಹಲ್ಲೆ

09/11/2025 11:07 AM

SHOCKING : ರಾಜ್ಯದಲ್ಲಿ `ಹೃದಯಾಘಾತ’ಕ್ಕೆ ಮತ್ತೊಂದು ಬಲಿ : ಲಾರಿಯಲ್ಲೇ ಮೃತಪಟ್ಟ ಚಾಲಕ.!

09/11/2025 11:01 AM

BREAKING : ಹಾರೋಬೆಲೆ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ಎರಡು ಕಾಡಾನೆಗಳು ಸಾವು!

09/11/2025 10:57 AM
State News
KARNATAKA

BREAKING : ಮೈಸೂರಿನ ಪ್ರತಿಷ್ಠಿತ ಶಾಲೆಯಲ್ಲಿ ರ್‍ಯಾಗಿಂಗ್ : ಬಾಲಕನ ಮರ್ಮಾಂಗಕ್ಕೆ ಒದ್ದು ಮೂವರು ಬಾಲಕರಿಂದ ಹಲ್ಲೆ

By kannadanewsnow0509/11/2025 11:07 AM KARNATAKA 1 Min Read

ಮೈಸೂರು : ಮೈಸೂರಿನ ಶಾಲೆಯಲ್ಲಿ ಬಾಲಕರಿಂದ ರ್‍ಯಾಗಿಂಗ್ ನಡೆಸಿರುವ ಘಟನೆ ವರದಿಯಾಗಿದ್ದು, 13 ವರ್ಷದ ಬಾಲಕನ ಮೇಲೆ ಮೂವರಿಂದ ಹಾಲೆ…

SHOCKING : ರಾಜ್ಯದಲ್ಲಿ `ಹೃದಯಾಘಾತ’ಕ್ಕೆ ಮತ್ತೊಂದು ಬಲಿ : ಲಾರಿಯಲ್ಲೇ ಮೃತಪಟ್ಟ ಚಾಲಕ.!

09/11/2025 11:01 AM

BREAKING : ಹಾರೋಬೆಲೆ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ಎರಡು ಕಾಡಾನೆಗಳು ಸಾವು!

09/11/2025 10:57 AM

ಮಹಿಳಾ ಉದ್ಯೋಗಿ ದತ್ತು ಪುತ್ರನಿಗೆ, ಅನುಕಂಪದ ಆಧಾರದ ಮೇಲೆ ಉದ್ಯೋಗ ಕಲ್ಪಿಸಿ : ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

09/11/2025 10:50 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.