Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಾಳಿನ ಐತಿಹಾಸಿಕ ಚುನಾವಣೆಗೆ ಬಾಂಗ್ಲಾದೇಶ ಸಜ್ಜು: ಹಸೀನಾ ಪದಚ್ಯುತಿಯ ನಂತರ ಮೊದಲ ಮತದಾನ, ಸಂಘರ್ಷದ ಭೀತಿಯ ನಡುವೆ ಬಿಗಿ ಭದ್ರತೆ !

11/02/2026 11:34 AM
BREAKING NEWS

BREAKING : ಕೆನಡಾದ ಶಾಲೆ ಒಂದರಲ್ಲಿ ಸಾಮೂಹಿಕ ಗುಂಡಿನ ದಾಳಿ : 10 ಜನ ಬಲಿ, 27ಕ್ಕೂ ಹೆಚ್ಚು ಮದಿಗೆ ಗಾಯ!

11/02/2026 11:31 AM

ಹಾಸನ : ಅನುದಾನ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಲೋಕಾಗೆ ದೂರು ನೀಡಿದ ರೈತನ ಮೇಲೆ, ಗ್ರಾ.ಪಂ ಸದಸ್ಯನಿಂದ ಹಲ್ಲೆ!

11/02/2026 11:30 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೂತನ ಬಸ್ ನಿಲ್ದಾಣ, ವಸತಿ ಗೃಹ ಉದ್ಘಾಟಿಸಿದ ಸಚಿವ ರಾಮಲಿಂಗಾರೆಡ್ಡಿ
KARNATAKA

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೂತನ ಬಸ್ ನಿಲ್ದಾಣ, ವಸತಿ ಗೃಹ ಉದ್ಘಾಟಿಸಿದ ಸಚಿವ ರಾಮಲಿಂಗಾರೆಡ್ಡಿ

By kannadanewsnow0511/04/2025 7:11 PM

ವಿಜಯಪುರ : ಇಂದು ವಿಜಯಪುರದಲ್ಲಿ ಸಾರಿಗೆ ಸಚಿವರಾದಂತ ರಾಮಲಿಂಗಾರೆಡ್ಡಿ ಅವರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿ ಬರುವಂತಹ ಈ ಕೆಳಕಂಡ ನೂತನ ಬಸ್ ನಿಲ್ದಾಣ ಸಿಬ್ಬಂದಿಗಳ ವಸತಿ ಗೃಹ ಘಟಕಗಳಿಗೆ ಶಂಕು ಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು.

1) ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಬೇವೂರಿನಲ್ಲಿ 1 ಎಕರೆ ವಿಸ್ತೀರ್ಣದಲ್ಲಿ, ರೂ.450 ಲಕ್ಷಗಳ ವೆಚ್ಚದಲ್ಲಿ ಬಸ್ ನಿಲ್ದಾಣದ ಶಂಕು ಸ್ಥಾಪನೆ ಹಾಗೂ ಯಲಬುರ್ಗಾ ತಾಲ್ಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ 1 ಎಕರೆ ವಿಸ್ತೀರ್ಣದಲ್ಲಿ ರೂ.300 ಲಕ್ಷಗಳ ವೆಚ್ಚದಲ್ಲಿ ಬಸ್ ನಿಲ್ದಾಣದ ಶಂಕು ಸ್ಥಾಪನೆ.

2) ವಿಜಯಪುರ ಜಿಲ್ಲೆಯ ನಾಗಠಾಣದಲ್ಲಿ 10 ಗುಂಟೆ ವಿಸ್ತೀರ್ಣದಲ್ಲಿ ರೂ.150 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಬಸ್ ನಿಲ್ದಾಣದ ಉದ್ಘಾಟನೆ ಹಾಗೂ ದೇವರ ಹಿಪ್ಪರಗಿಯಲ್ಲಿ 1.16 ಎಕರೆ ಪ್ರದೇಶದಲ್ಲಿ ಅಂದಾಜು ರೂ.400 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಬಸ್ ನಿಲ್ದಾಣದ ಉದ್ಘಾಟನೆ
ಮತ್ತು ಸಿಂದಗಿ ಘಟಕದ ಪಕ್ಕದಲ್ಲಿ ಸಿಬ್ಬಂದಿಗಳಿಗಾಗಿ 3.8 ಎಕರೆ ಪ್ರದೇಶದಲ್ಲಿ ಅಂದಾಜು ರೂ.250 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಲಾದ ನೂತನ ವಸತಿ ಗೃಹಗಳ ಉದ್ಘಾಟನೆ.

3) ಸಿಂದಗಿ ಬಸ್ ನಿಲ್ದಾಣಕ್ಕೆ ಪೂಜ್ಯ ಶ್ರೀ ಚನ್ನವೀರ ಸ್ವಾಮಿಜಿ ಬಸ್ ನಿಲ್ದಾಣ ಎಂದು ನಾಮಕರಣ.

4) ರಾಯಚೂರು ಜಿಲ್ಲೆಯ ಸಿರವಾರದಲ್ಲಿ 1 ಎಕರೆ ಪ್ರದೇಶದಲ್ಲಿ ಅಂದಾಜು ರೂ.250 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಿದ ನೂತನ ಬಸ್ ನಿಲ್ದಾಣದ ಉದ್ಘಾಟನೆ

5) ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲ್ಲೂಕಿನ ಮಾದ್ವಾರದಲ್ಲಿ 1.03 ಗುಂಟೆ ವಿಸ್ತೀರ್ಣದಲ್ಲಿ ರೂ.50 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಿದ ನೂತನ ಬಸ್ ನಿಲ್ದಾಣದ ಉದ್ಘಾಟನೆ

ಹಾಗೂ ಇದೇ ಸಂದರ್ಭದಲ್ಲಿಇಂಡಿ ತಾಲೂಕಿನ ಬಬಲಾದ ಗ್ರಾಮದ ಒಡಲ ಧನಿ ಸ್ವಹಸಹಾಯ ಸಂಘದ ಶ್ರೀಮತಿ ಭುವನೇಶ್ವರಿ ಕಾಂಬಳೆ ಇವರ ಮಾರ್ಗದರ್ಶನದಲ್ಲಿ ಮಹಿಳಾ ಸ್ವಸಹಾಯ ಸಂಘವು ಸಾವಯವ ಶೇಂಗಾ ಹೋಳಿಗೆ, ರೊಟ್ಟಿ ಇತ್ಯಾದಿ ಗ್ರಾಮೀಣ ಆಹಾರ ಪದಾರ್ಥಗಳು ಮಾರಾಟ ಮಾಡುವ ಯೋಜನೆಗೆ ಸ್ಥಳೀಯವಾಗಿ ಹಿನ್ನಡೆಯಾಗಿದ್ದ ಸಮಯದಲ್ಲಿ, ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಗಿ ಕಣಜ, ಸಾವಯವ ಸಂತೆ ಇತ್ಯಾದಿ ಗುಂಪುಗಳಲ್ಲಿ ತಮ್ಮ ಸಾವಯವ ಶೇಂಗಾ ಹೋಳಿಗೆ ಇತ್ಯಾದಿಗಳನ್ನು ಮಾರಾಟ ಮಾಡಲು ಪ್ರಯತ್ನಿಸಿ,ಇದರಿಂದ ಬೆಂಗಳೂರಿನಲ್ಲಿ ಅತಿಹೆಚ್ಚಿನ ಬೇಡಿಕೆ ಬಂದು ಲಕ್ಷ ಲಕ್ಷ ರೂಪಾಯಿಗಳ ಆದಾಯಗಳಿಸಿರುತ್ತಾರೆ.

ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಸಮಾರಂಭಕ್ಕೆ ಆಗಮಿಸಿದ ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಿಗೆ ಒಡಲ ಧ್ವನಿ ಸಂಘದ ಮಹಿಳೆಯರು ಸನ್ಮಾನ ಮಾಡಿ ಶೇಂಗಾ ಹೋಳಿಗಳನ್ನು ನೀಡಿ ಗೌರವಿಸಿರುತ್ತಾರೆ ಮತ್ತು ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಆಗುತ್ತಿರುವ ಉಪಯೋಗದ ಕುರಿತು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ವಲಸೆ ಹೋಗದೆ ಉದ್ಯೋಗ ಮಾಡುತ್ತಿರುವ ಕುರಿತ ಮಾಹಿತಿಯನ್ನು ಹಂಚಿಕೊಂಡಿರುತ್ತಾರೆ. ಮಹಿಳೆಯರ ಸನ್ಮಾನವನ್ನು ಸ್ವೀಕರಿಸಿದ ಮಾನ್ಯ ಸಚಿವರು ಸರ್ಕಾರವು ಜಾರಿಗೆ ತಂದ ಶಕ್ತಿ ಯೋಜನೆಯ ಉಪಯೋಗ ಪಡೆಯುತ್ತಿರುವ ಈ ಮಹಿಳೆಯರ ಕಾರ್ಯವನ್ನು ಪ್ರಶಂಶಿಸಿರುತ್ತಾರೆ.

ಈ ಸಂದರ್ಭದಲ್ಲಿ ರಾಯರೆಡ್ಡಿ ಸನ್ಮಾನ್ಯ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಮಾನ್ಯ ಶಾಸಕರು ಯಲಬುರ್ಗಾ ಕ್ಷೇತ್ರ, ರಾಜಶೇಖರ ಬಸವರಾಜ ಹಿಟ್ನಾಳ್ ಮಾನ್ಯ ಸಂಸದರು ಕೊಪ್ಪಳ ಲೋಕಸಭಾ ಕ್ಷೇತ್ರ,‌ ರಾಧಾಕೃಷ್ಣ ದೊಡ್ಡಮನಿ ಮಾನ್ಯ ಸಂಸದರು,ಕಲ್ಬುರ್ಗಿ ಕ್ಷೇತ್ರ ವಿಠ್ಠಲ ಕಟಕದೊಂಡ ಮಾನ್ಯ ಶಾಸಕರು ನಾಗಠಾಣ ಕ್ಷೇತ್ರ, ಭೀಮನಗೌಡ ಪಾಟೀಲ ಮಾನ್ಯ ಶಾಸಕರು ದೇವರಹಿಪ್ಪರಗಿ ಕ್ಷೇತ್ರ, ಅಶೋಕ ಮನಗೂಳಿ, ಮಾನ್ಯ ಶಾಸಕರು ಸಿಂದಗಿ ಕ್ಷೇತ್ರ, ಜಿ ಹಂಪಯ್ಯ ನಾಯಕ ಮಾನ್ಯ ಶಾಸಕರು ಮಾನ್ವಿ ಕ್ಷೇತ್ರ, ಶರಣಗೌಡ ಕಂದಕೂರ ಮಾನ್ಯ ಶಾಸಕರು, ಗುರಮಠಕಲ್ ಕ್ಷೇತ್ರ, ಹಾಗೂ ರಾಚಪ್ಪ,ಕ ಆ ಸೇ, ವ್ಯವಸ್ಥಾಪಕ ನಿರ್ದೇಶಕರು, ಕಕರಸಾ ನಿಗಮ ರವರು ಉಪಸ್ಥಿತರಿದ್ದರು.

Share. Facebook Twitter LinkedIn WhatsApp Email

Related Posts

ಹಾಸನ : ಅನುದಾನ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಲೋಕಾಗೆ ದೂರು ನೀಡಿದ ರೈತನ ಮೇಲೆ, ಗ್ರಾ.ಪಂ ಸದಸ್ಯನಿಂದ ಹಲ್ಲೆ!

11/02/2026 11:30 AM1 Min Read

BREAKING :’ಮ್ಯಾಟ್ರಿಮೋನಿಯಲ್ಲಿ’ 9 ಯುವತಿಯರನ್ನು ಮದುವೆಯಾಗಿ ಲಕ್ಷಾಂತರ ರೂ. ವಂಚನೆ : ಇಬ್ಬರು ಅರೆಸ್ಟ್!

11/02/2026 11:20 AM1 Min Read

ಈ ರಹಸ್ಯ ತಿಳಿದರೆ `ಮಧುಮೇಹ’ವನ್ನು ಸುಲಭವಾಗಿ ನಿಯಂತ್ರಿಸಬಹುದು : ಔಷಧಿ ಇಲ್ಲದೆ ಹೀಗೆ ಕಡಿಮೆ ಮಾಡಿಕೊಳ್ಳಿ..!

11/02/2026 11:16 AM2 Mins Read
Recent News

ನಾಳಿನ ಐತಿಹಾಸಿಕ ಚುನಾವಣೆಗೆ ಬಾಂಗ್ಲಾದೇಶ ಸಜ್ಜು: ಹಸೀನಾ ಪದಚ್ಯುತಿಯ ನಂತರ ಮೊದಲ ಮತದಾನ, ಸಂಘರ್ಷದ ಭೀತಿಯ ನಡುವೆ ಬಿಗಿ ಭದ್ರತೆ !

11/02/2026 11:34 AM
BREAKING NEWS

BREAKING : ಕೆನಡಾದ ಶಾಲೆ ಒಂದರಲ್ಲಿ ಸಾಮೂಹಿಕ ಗುಂಡಿನ ದಾಳಿ : 10 ಜನ ಬಲಿ, 27ಕ್ಕೂ ಹೆಚ್ಚು ಮದಿಗೆ ಗಾಯ!

11/02/2026 11:31 AM

ಹಾಸನ : ಅನುದಾನ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಲೋಕಾಗೆ ದೂರು ನೀಡಿದ ರೈತನ ಮೇಲೆ, ಗ್ರಾ.ಪಂ ಸದಸ್ಯನಿಂದ ಹಲ್ಲೆ!

11/02/2026 11:30 AM

BREAKING :’ಮ್ಯಾಟ್ರಿಮೋನಿಯಲ್ಲಿ’ 9 ಯುವತಿಯರನ್ನು ಮದುವೆಯಾಗಿ ಲಕ್ಷಾಂತರ ರೂ. ವಂಚನೆ : ಇಬ್ಬರು ಅರೆಸ್ಟ್!

11/02/2026 11:20 AM
State News
KARNATAKA

ಹಾಸನ : ಅನುದಾನ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಲೋಕಾಗೆ ದೂರು ನೀಡಿದ ರೈತನ ಮೇಲೆ, ಗ್ರಾ.ಪಂ ಸದಸ್ಯನಿಂದ ಹಲ್ಲೆ!

By kannadanewsnow0511/02/2026 11:30 AM KARNATAKA 1 Min Read

ಹಾಸನ : ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಕ್ಕೆ ರೈತನ ಮೇಲೆ ಹಲ್ಲೆ ನಡೆಸಲಾಗಿದೆ ಅನುದಾನ ದುರ್ಬಳಕೆ ಆರೋಪ ಮಾಡಿದ್ದ ರೈತ ರವಿ…

BREAKING :’ಮ್ಯಾಟ್ರಿಮೋನಿಯಲ್ಲಿ’ 9 ಯುವತಿಯರನ್ನು ಮದುವೆಯಾಗಿ ಲಕ್ಷಾಂತರ ರೂ. ವಂಚನೆ : ಇಬ್ಬರು ಅರೆಸ್ಟ್!

11/02/2026 11:20 AM

ಈ ರಹಸ್ಯ ತಿಳಿದರೆ `ಮಧುಮೇಹ’ವನ್ನು ಸುಲಭವಾಗಿ ನಿಯಂತ್ರಿಸಬಹುದು : ಔಷಧಿ ಇಲ್ಲದೆ ಹೀಗೆ ಕಡಿಮೆ ಮಾಡಿಕೊಳ್ಳಿ..!

11/02/2026 11:16 AM

ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : ` HRMS-2’ ಸಮಸ್ಯೆ ಪರಿಹಾರಕ್ಕೆ ಸರ್ಕಾರದಿಂದ ಮಹತ್ವದ ಆದೇಶ

11/02/2026 10:52 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.