ದಾವಣಗೆರೆ : ದಾವಣಗೆರೆ: ನಿವೇಶನ ಖಾತೆ ವರ್ಗಾವಣೆಗೆ ಲಂಚ ಪಡೆಯುತ್ತಿದ್ದ ದಾವಣಗೆರೆ ಮಹಾನಗರ ಪಾಲಿಕೆ ವಲಯ ಕಚೇರಿ-2ರ ಪ್ರಥಮ ದರ್ಜೆ ಸಹಾಯಕ ಪಾಲನಾಯಕನನ್ನು ಶುಕ್ರವಾರ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಾವಣಗೆರೆಯ ಅವರಗೆರೆ ಬಳಿ ಇರುವ ವಾರ್ಡ್ ನಂ.30ರಲ್ಲಿರುವ ಬಾಡಾ ಕ್ರಾಸ್(ಮೋತಿ ನಗರ)ನ ಖಾಲಿ ನಿವೇಶನ ಡೋರ್ ನಂಬರ್ 358/21ರ 30×40 ಅಳತೆಯ ಸೈಟ್ ಅನ್ನು ಜಿ.ಯು ಬಸವರಾಜ್ ಎನ್ನುವವರು ತಮ್ಮ ತಂಗಿಯ ಹೆಸರಲ್ಲಿ ಖಾತೆ ವರ್ಗಾವಣೆ ಮಾಡಿಸಲು ಅರ್ಜಿ ಸಲ್ಲಿಸಿದ್ದರು.
ಆದರೆ FDA ಖಾತೆ ವರ್ಗಾವಣೆಗೆ ಬಸವರಾಜ್ ಬಳಿ 2,500 ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ.ಈ ಕುರಿತು ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಬಳಿಕ ಬಸವರಾಜು ಬಳಿ ಲಂಚ ಪಡೆಯುವಾಗಲೇ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಸಿಗಿಬಿದ್ದಿದಾನೆ.ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪೂರೆ ಅವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದೆ.